Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

Posted on August 18, 2022 By Kannada Trend News No Comments on ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

ನಟಿ ಮೇಘನಾ ರಾಜ್ ಕನ್ನಡ ನಾಡು ಕಂಡಂತಹ ಅದ್ಭುತ ಕಲಾವಿದೆ ಮೊದಲ ಬಾರಿಗೆ ಮಲಯಾಳಂನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಲೂಸ್ ಮಾದ ಯೋಗೀಶ್ ಅವರ ಜೊತೆ ಪುಂಡ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹುಲಿ ಸಿನಿಮಾ ಅಂತಾನೆ ಹೇಳಬಹುದು. ಸಹಜ ಸೌಂದರ್ಯಕ್ಕೆ ಇವರು ಹೆಸರುವಾಸಿಯಾದವರು ಮಲಯಾಳಂನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ‌. ಕನ್ನಡದಲ್ಲಿ ರಾಜಾಹುಲಿ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರು ಚಿರಂಜೀವಿ ಸರ್ಜಾ ಅವರ ಅಭಿನಯದ ಆಟಗಾರ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಾರೆ.

ಲಕ್ಷ್ಮಣ, ಭುಜಂಗ, ನೂರೊಂದು ನೆನಪು, ಅಲ್ಲಮ, ಕುರುಕ್ಷೇತ್ರ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಈ ರೀತಿ ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿರುವಂತಹ ಮೇಘನಾ ರಾಜ್ ಅವರು ಬಹು ಬೇಡಿಕೆಯ ನಟಿ. ಇನ್ನು ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಆದರೆ ವಿಧಿ ಆಟ ಎಂಬುವುದೇ ಬೇರೆ ಇತ್ತು ಮೇಘನಾ ರಾಜ್ ಅವರು ಕೇವಲ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಬಿಟ್ಟು ಹೋದರು‌. ಈ ನೋವನ್ನು ಮೇಘನಾ ರಾಜ್ ಅವರಿಂದ ಸಹಿಸುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಆದರೆ ತಮ್ಮ ಮಗ ರಾಯಾನ್ ರಾಜ್ ಸರ್ಜಾಗಾಗಿ ಇದೀಗ ಎಲ್ಲಾ ನೋವನ್ನು ಮರೆತು ಹೊಸ ಜೀವನ ಕಟ್ಟಿಕೊಳ್ಳುವಂತಹ ಪರಿಸ್ಥಿತಿ ಏರ್ಪಟ್ಟಿದೆ.

ಮದುವೆಯಾದ ನಂತರ ಮಗುವಾದ ನಂತರ ಮೇಘನಾ ರಾಜ್ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಿರುವುದು ತೀರ ಕಡಿಮೆ ಆದರೆ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಮೇಘನಾ ರಾಜ್ ಅವರು ಮತ್ತೆ ಮಹತ್ವದ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ. ಹೌದು, ತಮ್ಮ ಮಗನ ಭವಿಷ್ಯಕ್ಕಾಗಿ ಮೇಘನಾ ರಾಜ್ ಅವರು ಇದೀಗ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಅದೇನಂದರೆ ಮೇಘನಾ ರಾಜ್ ಅವರು ಇದೀಗ ಹೊಸ ಪ್ರೊಡಕ್ಷನ್ ಅನ್ನು ತೆರೆಯಬೇಕು ಅಂತ ಅಂದುಕೊಂಡಿದ್ದರೆ. ಈ ಒಂದು ಪ್ರೊಡಕ್ಷನ್ ಮುಖಾಂತರ ಸಿನಿಮಾದ ಸಂಬಂಧ ಪಟ್ಟಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತಹ ನಿರ್ಧಾರ ಮಾಡಿದ್ದಾರೆ.

ಈ ಒಂದು ಪ್ರೊಡಕ್ಷನ್ ಹೌಸ್ ಕೆಲಸಕ್ಕೆ ಮೇಘನಾ ರಾಜ್ ಅವರ ತಂದೆ ಆದಂತಹ ಸುಂದರ್ ರಾಜ್ ಅವರು ಬೆಂಬಲ ನೀಡಿದ್ದಾರೆ ಅಷ್ಟೇ ಅಲ್ಲದೆ ಚಿರಂಜೀವಿ ಸರ್ಜಾ ಅವರ ತಮ್ಮ ಆದಂತಹ ಧ್ರುವ ಸರ್ಜಾ ಅವರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಅತ್ತಿಗೆಗೆ ಹೊಸದೊಂದು ಬದುಕು ಕಟ್ಟಿಕೊಡುವುದಕ್ಕಾಗಿ ಧ್ರುವ ಸರ್ಜಾ ಅವರು ಕೂಡ ಎಲ್ಲಾ ರೀತಿಯಾದಂತಹ ಸಹಾಯವನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಮೇಘನಾ ರಾಜ್ ಅವರು ಪ್ರೊಡಕ್ಷನ್ ಹೌಸ್ ಕೆಲಸದಲ್ಲಿ ಬಿಜಿಯಾಗಿದ್ದಾರೆ ಅಂದುಕೊಂಡಂತೆ ಎಲ್ಲವೂ ಆದರೆ ಇದೇ ವರ್ಷದ ಕೊನೆಯಲ್ಲಿ ಈ ಒಂದು ಪ್ರೊಡಕ್ಷನ್ ನಿರ್ಮಾಣವಾಗುತ್ತದೆ. ಈ ಒಂದು ಪ್ರೊಡಕ್ಷನ್ ನಲ್ಲಿ ಪ್ರತಿಭೆ ಇರುವಂತಹ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮೇಘನಾ ರಾಜ್ ಅವರು ಇದೀಗ ತಮ್ಮ ಎಲ್ಲ ನೋವನ್ನು ಮರೆತು ಹೊಸ ಆರಂಭ ಮಾಡಿದ್ದಾರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಅವರಿಗೆ ಶುಭವಾಗಲಿ ಈ ಒಂದು ಕೆಲಸದಿಂದ ಅವರ ಜೀವನದ ದಿಕ್ಕು ಬದಲಾಗಲಿ ಎಂದು ಶುಭ ಹಾರೈಸಿದ್ದಾರೆ. ನಿಮ್ಮ ಪ್ರಕಾರ ಮೇಘನಾ ರಾಜ್ ಅವರು ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Meghana chiru, Meghana raj
WhatsApp Group Join Now
Telegram Group Join Now

Post navigation

Previous Post: ಅಪ್ಪು ಜೊತೆ ರಾಧಿಕಾ ಕುಮಾರಸ್ವಾಮಿ ಕೊನೆಯ ಬಾರಿ ಮಾಡಿದ ಈ ಡಾನ್ಸ್ ನೋಡಿ ಎಷ್ಟು ಮುದ್ದಾಗಿದೆ.
Next Post: ಅನುಶ್ರೀಯನ್ನು ಭೇಟಿಯಾದ ಕಾಫಿನಾಡು ಚಂದು, ಅನುಶ್ರೀಗಾಗಿ ಹೊಸದೊಂದು ಹಾಡನ್ನು ಹಾಡಿದ್ದಾರೆ ಈ ಹಾಡು ಒಮ್ಮೆ ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ ಪಕ್ಕಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore