Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನೋಡೋಕೆ ನಾನು ಇಷ್ಟು ಸುಂದರವಾಗಿ ಇದ್ದರೂ ಕೂಡ ಯಾವ ಹುಡುಗರು ನನ್ನ ಬಳಿ ಬಂದು ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

Posted on September 11, 2022 By Kannada Trend News No Comments on ನೋಡೋಕೆ ನಾನು ಇಷ್ಟು ಸುಂದರವಾಗಿ ಇದ್ದರೂ ಕೂಡ ಯಾವ ಹುಡುಗರು ನನ್ನ ಬಳಿ ಬಂದು ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆ ಬಿಕೋ ಎನಿಸುತ್ತಿದೆ ಇನ್ನು ಒಂದು ವಾರ ಅಷ್ಟೇ ಮನೆ ಒಳಗಿನ ಎಲ್ಲಾ ಸದಸ್ಯರು ಕೂಡ ಹೊರಗಿರುತ್ತಾರೆ. ಈ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಇದು ಕೊನೆಯ ವಾರ ಎನ್ನುವುದನ್ನು ಹೇಳಿದ್ದಾರೆ. ಹೀಗಿದ್ದಾಗ ಮನೆಯಲ್ಲಿ ಸದಸ್ಯರು ಕಡಿಮೆಯಾಗುತ್ತಿದ್ದಂತೆ ಅಥವಾ ಆಟ ಮುಗಿಯುತ್ತಿದ್ದಂತೆ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಬಾಂಧವ್ಯ ಹೆಚ್ಚಾಗುತ್ತಿತ್ತು ಅದ್ಯಾಕೋ ಈ ಬಾರಿ ಪಂದ್ಯ ಮುಗಿಯುವ ವೇಳೆ ಆದರೂ ಕೂಡ ಮನೆ ಮಂದಿಯಲ್ಲಿ ಆ ಆಪ್ತತೆ ಇನ್ನು ಮೂಡಿಲ್ಲ.

ಮನೆಗೆ ಬಂದ ಮೊದಲ ದಿನ ಹೇಗಿದ್ದರೂ ಇನ್ನೂ ಸಹ ಹಾಗೆ ವರ್ತಿಸುತ್ತಿದ್ದಾರೆ ಈ ಬಗ್ಗೆ ಆಗಾಗ ಬಿಗ್ ಬಾಸ್ ಮನೆಯೊಳಗೆ ಕೆಲವರು ಕಣ್ಣೀರಿಟ್ಟು ಗೋಳಾಡಿರುವುದು ಇದೆ. ನೆನ್ನೆ ಸೋಮಣ್ಣ ಇಂದು ಜಯಶ್ರೀ ಆ ಸಾಲಿನಲ್ಲಿದ್ದಾರೆ. ಜಯಶ್ರೀ ಆರಾಧ್ಯ ಅವರು ಯಾವಾಗಲೂ ಜೋರು ಧ್ವನಿಯಲ್ಲಿ ಮಾತನಾಡುತ್ತಾ ಎಲ್ಲದಕ್ಕೂ ಕೊಂಕುಮಾಡುತ್ತಾ ಸಹಸ್ಪರ್ಧಿಗಳ ಜೊತೆ ಜಗಳ ಆಡುತ್ತಾ ದಿನಪೂರ್ತಿ ಆಕ್ಟಿವ್ ಆಗಿ ಇರುತ್ತಿದ್ದರು. ಚೈತ್ರ ಹಳ್ಳಿಕೇರಿ ಅವರೊಂದಿಗೆ ಜಯಶ್ರೀ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು ಇಬ್ಬರು ಸಹ ಅಕ್ಕ-ತಂಗಿಯರ ರೀತಿ ಜೊತೆಗೂಡಿ ಒಳ್ಳೆ ಆಟ ಆಡುತ್ತಿದ್ದರು.

ಆದರೆ ಕಳೆದ ವಾರ ಚೈತ್ರಹಳ್ಳಿ ಕೇರಿ ಅವರು ಎಲಿಮಿನೇಟ್ ಆದ ದಿನದಿಂದ ಜಯಶ್ರೀ ಕುಸಿದು ಹೋಗಿದ್ದಾರೆ ಎಂದು ಹೇಳಬಹುದು. ಅವರು ಮನೆಯಿಂದ ಹೊರ ಹೋಗುತ್ತಿದ್ದಂತೆ ಇದನ್ನು ಹೇಳಿಕೊಂಡು ಬಾತ್ರೂಮ್ ನಲ್ಲಿ ಜೋರಾಗಿ ಅಳುತ್ತಿದ್ದ ಜಯಶ್ರೀ ಅವರು ಚೈತ್ರ ಅವರ ಇಲ್ಲದೆ ನನಗೆ ಇರಲು ಆಗುತ್ತಿಲ್ಲ ನನಗೆ ತುಂಬಾ ಒಂಟಿತನ ಕಾಡುತ್ತದೆ ನನ್ನನ್ನು ಹೊರಗೆ ಕಳುಹಿಸಿ ಬಿಡಿ ಎಂದು ಕಣ್ಣೀರು ಇಟ್ಟಿದ್ದರು. ಆ ಸಮಯದಲ್ಲಿ ಮನೆ ಮಂದಿಯೆಲ್ಲಾ ಸಾಂತ್ವನ ನೀಡಿದ್ದರು. ಸೋನು ಗೌಡ ಕೂಡ ಸಮಾಧಾನ ಮಾಡಿ ನನಗೆ ಇಷ್ಟ ಆದವರು ಕೂಡ ಆಚೆ ಹೋಗಿದ್ದಾರೆ.

ಅವರು ಹೋದಾಗ ನನಗೂ ಹಾಗೆ ಅನಿಸಿತು ಈಗ ನಿನಗೆ ಬೇಕಾದವರು ಕೂಡ ಇಲ್ಲ ಇಬ್ಬರ ಒಂಟಿಯಾಗಿದ್ದೇವೆ ನಾನು ನಿನ್ನ ಜೊತೆ ಇರುತ್ತೇನೆ ಎಂದು ಸಮಾಧಾನ ಮಾಡಿದ್ದರು. ಗುರೂಜಿ ಕೂಡ ಜಯಶ್ರೀ ಅವರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದರು ಈಗ ಮತ್ತೊಮ್ಮೆ ನಿನ್ನೇ ಜಯಶ್ರೀ ಅವರು ಅದೇ ಮಾತುಗಳನ್ನು ಆಡಿದ್ದಾರೆ. ಸೋನು ಗೌಡ ಹಾಗೂ ಗುರೂಜಿ ಒಟ್ಟಿಗೆ ಕುಳಿತು ತಿಂಡಿ ತಿನ್ನುತ್ತಿದ್ದರು, ಅಲ್ಲಿಗೆ ಬಂದ ಜಯಶ್ರೀ ಗುರುಜಿ ಅವರ ಜೊತೆಯಲ್ಲಿ ನಾನು ಎಷ್ಟು ಚೆನ್ನಾಗಿದ್ದರೂ ಕೂಡ ಈ ಮನೆಯಲ್ಲಿ ಹುಡುಗರು ನನ್ನನ್ನು ನೋಡೋದೆ ಇಲ್ಲವಲ್ಲ ಗುರೂಜಿ ಎಂದಿದ್ದಾರೆ.

ಅದಕ್ಕೆ ಗುರೂಜಿ ಕಾಲು ಎಳೆದು ಆಯ್ತು ಬಿಡು ಹೊರಗಡೆ ಹೋದ ಮೇಲೆ ನಮ್ಮ ಆಫೀಸ್ ಹುಡುಗರನ್ನು ಕಳುಹಿಸಿಕೊಡುತ್ತೇನೆ ಎಂದಿದ್ದಾರೆ. ಆಗಲ್ಲ ಗುರೂಜಿ ಇಲ್ಲಿ ಬಿಗ್ ಬಾಸ್ ಮನೆ ಒಳಗಡೆ ಕೇಳಿದ್ದು ಹೊರಗಡೆ ನನಗೆ ಬೇಡ ಎಂದಾಗ ಸೋನು ಏನು ಎಂದು ಕೇಳುತ್ತಾರೆ. ಸೋನುಗೆ ಎಲ್ಲವನ್ನು ಗುರೂಜಿ ವಿವರಿಸಿದ ನಂತರ ಸೋನು ಕೂಡ ಜಯಶ್ರೀಗೆ ಬುದ್ಧಿ ಹೇಳುತ್ತಾರೆ. ಗುರುಜಿಗಿಂತ ಬೇಕಾ ನಿನಗೆ ಬೆಸ್ಟ್ ಫ್ರೆಂಡ್ ಆಗಿದ್ದಾರಲ್ಲ ಎನ್ನುತ್ತಾರೆ ಸೋನು. ಅದಕ್ಕೆ ಜಯಶ್ರೀ ಅವರು ಗುರೂಜಿ ದೊಡ್ಡವರು ನಾನು ಯುವಕರನ್ನು ಕೇಳಿದ್ದು ಎನ್ನುತ್ತಾರೆ.

ಆಗ ಸೋನು ಅವರೂನು ಯಾರಿಗಿಂತ ಕಮ್ಮಿ ಇಲ್ಲ ಎಲ್ಲಾ ರೀತಿಯು ಚೆನ್ನಾಗಿ ಮಾತನಾಡುತ್ತಾರೆ ಕಾಮಿಡಿ ಮಾಡುತ್ತಾರೆ ಎಂದು ಹೇಳುತ್ತಾಳೆ ಹೀಗೆ ಮಾತು ಮುಂದುವರಿಯುತ್ತಾ ಹೋಗುತ್ತದೆ. ಆದರೂ ಕೂಡ ಜಯಶ್ರೀ ಅವರಿಗೆ ಸಮಾಧಾನ ಆಗುವುದಿಲ್ಲ. ಜಯಶ್ರೀ ಮನಸಿನಲ್ಲಿ ಒಂಟಿತನ ಇರುವುದು ಹಾಗೂ ಈ ಮನೆ ಹುಡುಗರು ನನ್ನೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಎನ್ನುವ ಬೇಸರ ಇರುವುದು ಸತ್ಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಬಾರಿ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿ ಗೆಲ್ಲಬೇಕು ಎಂಬುದು ನಿಮ್ಮ ಇಚ್ಛೆ.?

Entertainment Tags:Big Boss OTT, Jayashree Aradhya
WhatsApp Group Join Now
Telegram Group Join Now

Post navigation

Previous Post: ಸೈಮಾ ಅವಾರ್ಡ್ಸ್ ಗೆ ಆಯ್ಕೆಯಾದ ಡಿ ಬಾಸ್ ರಾಬರ್ಟ್ ಸಿನಿಮಾ, ನಾಮಿನೇಟ್ ಆದ 5 ಸಿನಿಮಾದ ಪೈಕಿ ದರ್ಶನ್ ಸಿನಿಮಾ ಮೊದಲ ಸ್ಥಾನ ಪಡೆದಿದೆ.
Next Post: ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore