Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಗಿಂತ ದೊಡ್ಡ ಸ್ಟಾರ್ ನಾ ಕರ್ಕೊಂಡ್ ಬಂದು ನನ್ನ ಸಿನಿಮಾ ಪ್ರಮೋಷನ್ ಮಾಡಿಸ್ತೀನಿ ಅಂತ ಚಾಲೆಂಜ್ ಮಾಡಿದ್ದ ಪ್ರಥಮ್ ಕೊನೆಗೆ ಕರ್ಕೊ ಬಂದಿದ್ದು ಯಾರನ್ನ ಗೊತ್ತಾ.?

Posted on February 2, 2023February 2, 2023 By Kannada Trend News No Comments on ದರ್ಶನ್ ಗಿಂತ ದೊಡ್ಡ ಸ್ಟಾರ್ ನಾ ಕರ್ಕೊಂಡ್ ಬಂದು ನನ್ನ ಸಿನಿಮಾ ಪ್ರಮೋಷನ್ ಮಾಡಿಸ್ತೀನಿ ಅಂತ ಚಾಲೆಂಜ್ ಮಾಡಿದ್ದ ಪ್ರಥಮ್ ಕೊನೆಗೆ ಕರ್ಕೊ ಬಂದಿದ್ದು ಯಾರನ್ನ ಗೊತ್ತಾ.?

ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರು ತಮಾಷೆ ಮಾತುಗಳಿಂದ ಹಾಗೂ ತಮಾಷೆಯಂತೆ ಮಾಡುವ ಟಾಂಗ್ ಗಳಿಂದ ಫುಲ್ ಫೇಮಸ್ ಆಗಿದ್ದಾರೆ. ಈ ಬಾರಿ ಮತ್ತೊಂದು ರೀತಿಯಲ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದೇ ಹೇಳಬಹುದು. ಅವರು ಇದ್ದಕ್ಕಿದ್ದಂತೆ ಪೋಸ್ಟ್ ಒಂದನ್ನು ಹಾಕಿದ್ದರು. ನನ್ನ ಸಿನಿಮಾ ನಟ ಭಯಂಕರ (Nata bhayankara) ರಿಲೀಸ್ ಆಗುತ್ತಿದೆ, ಇದರ ಪೋಸ್ಟರ್ ಲಾಂಚ್ ಗೆ ದರ್ಶನ್ ಅವರಿಗಿಂತ ಬಿಗ್ ಸ್ಟಾರ್ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರು.

ಆ ಪೋಸ್ಟ್ ವೈರಲಾಗುತ್ತಿದ್ದಂತೆ ಡಿ ಬಾಸ್ (DBoss) ಅಭಿಮಾನಿಗಳು ಪ್ರಥಮ್ ಅವರನ್ನು ನಮ್ಮ ಬಾಸ್ ಹೆಸರು ಹೇಳಿ ಪ್ರಚಾರ ಪಡೆಯುತ್ತಿದ್ದೆಯಾ ಎಂದು ತರಾಟೆಗೆ ತೆಗೆದುಕೊಂಡಿದ್ದರು, ಇಬ್ಬರು ಆತ್ಮೀಯರು ಇಬ್ಬರ ಮಧ್ಯೆ ಈ ರೀತಿ ಬೇಡ ಎಂದು ಕೆಲವರು ಹೇಳಿದ್ದರೆ ಅದು ಹೇಗೆ ಮಾಡುತ್ತೀಯ ಎಂದು ಸಹ ಕೆಲವರು ಚಾಲೆಂಜ್ ಹಾಕಿದ್ದರಂತೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಥಮ್ ಅವರು ಅಷ್ಟೆಲ್ಲಾ ವಿರೋಧದ ನಡುವೆಯೂ ಆ ಕೆಲಸ ಮಾಡಿ ಬಿಟ್ಟರು.

ಅಷ್ಟಕ್ಕೂ ಪ್ರಥಮ್ ಅವರು ತಮ್ಮ ನಟಭಯಕರ ಪೋಸ್ಟರ್ ಲಾಂಚ್ ಗೆ ಕಳೆದುಕೊಂಡು ಬಂದಿದ್ದ ದರ್ಶನ್ ಗಿಂತ ದೊಡ್ಡ ಸ್ಟಾರ್ ಯಾರು ಗೊತ್ತ ? ಪ್ರಥಮ್ ಅವರು ಇಷ್ಟೆಲ್ಲ ಕ್ಯೂರಿಯಾಸಿಟಿ ಹುಟ್ಟು ಹಾಕಿ ದರ್ಶನ್ ಅವರಿಗಿಂತ ಬಿಗ್ ಸ್ಟಾರ್ ಎಂದು ಹೇಳಿ ದರ್ಶನ್ ಅವರ ತಾಯಿ ಮೀನ ತೂಗುದೀಪ್ ( Meena Thoogudeep) ಅವರಿಂದ ತಮ್ಮ ಸಿನಿಮಾ ಪೋಸ್ಟರ್ ಲಾಂಚ್ ಮಾಡಿಸಿದ್ದಾರೆ. ಇದಕ್ಕೆ ಅವರು ಕೊಡುವ ಸಮಾಜಾಯಿಷಿ ಏನು ಎಂದರೆ ದರ್ಶನ್ ಅವರ ಬದಲು ಬೇರೆ ಯಾರಾದರೂ ಸ್ಟಾರ್ ಕರೆದುಕೊಂಡು ಬಂದಿದ್ದರೆ ಆಗ ಅದು ವಿವಾದ ಆಗುತ್ತಿತ್ತು.

ಆದರೆ ನಾನು ದರ್ಶನ್ ಅವರಿಗೆ ರೆಸ್ಪೆಕ್ಟ್ ಕೊಟ್ಟಿದ್ದೇನೆ ಹಾಗೂ ನಾನು ಎಷ್ಟು ಅವರನ್ನು ಪ್ರೀತಿ ಮಾಡುತ್ತೇನೆ ಎಂದು ಎಲ್ಲರಿಗೂ ಗೊತ್ತು. ಸ್ವಲ್ಪ ವಿಭಿನ್ನವಾಗಿ ಮಾಡೋಣ ಎಂದು ಈ ರೀತಿ ಮಾಡಿದೆ. ದರ್ಶನ್ ಅವರ ತಾಯಿ ನನ್ನ ಮೂರನೇ ಮಗನಂತೆ ಪ್ರಥಮ್, ಅವನ ಸಿನಿಮಾಗೆ ಶುಭವಾಗಲಿ ಎಂದು ಹರಿಸಿದ್ದಾರೆ. ದರ್ಶನ್ ಅವರಿಗೆ ಅವರ ತಾಯಿ ದರ್ಶನ್ ಗಿಂತ ಬಿಗ್ ಸ್ಟಾರ್ ತಾನೇ ಅದ್ರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಅದನ್ನು ನೇರವಾಗಿ ಹೇಳಬಹುದು ಈ ರೀತಿ ಯಾಕೆ ಮಾಡಿದ್ದೀರಾ ಎಂದು ಇವರನ್ನು ಯೂಟ್ಯೂಬ್ ಸಂದರ್ಶನದಲ್ಲಿ ಕೇಳಿದ್ದಾರೆ.

ಅದಕ್ಕೆ ಯಾವಾಗಲೂ ದರ್ಶನ್ ಅವರಿಂದಲೇ ಮಾಡಿಸಬೇಕು ಎಂದರೆ ಆಗುವುದಿಲ್ಲ. ದರ್ಶನ್ ಅವರನ್ನು ದೇವರಂತ ಮನುಷ್ಯ (Devarantha Manushya) ಸಿನಿಮಾ ಆಡಿಯೋ ಲಾಂಚ್ (Audio launch) ಮಾಡಬೇಕು ಎಂದು ಕೇಳಿಕೊಂಡಿದ್ದೆವು. ಅವರು ಯಜಮಾನ ಹಾಗೂ ಒಡೆಯ ಶೂಟಿಂಗ್ ಅಲ್ಲಿ ಇದ್ದರೂ ಕೂಡ ಬಂದು ಆ ಕಾರ್ಯಕ್ರಮ ನಡೆಸಿ ಕೊಟ್ಟಿದ್ದರು. ಎಂ ಎಲ್ ಎ (MLA) ಸಿನಿಮಾಗೆ ದೇವೇಗೌಡ (Devegowda) ಅವರಿಂದ ಕ್ಲಾಪ್ (Clap) ಮಾಡಿಸಿದ್ದು ಆಯ್ತು, ಮುಂದೆ ಬೇರೆ ಸಿನಿಮಾಗೆ ಸಿದ್ದರಾಮಯ್ಯ (Siddaramai) ಅವರನ್ನು ಕರೆ ತರಬೇಕು ಹೀಗೆ ಸಿದ್ದರಾಮಯ್ಯ ಸಿಗಲಿಲ್ಲ ಅಂದರೆ ಹೈಕಮಾಂಡ್ ಬಳಿ ಹೋಗ ಬೇಕಾಗುತ್ತದೆ.

ಹಾಗಾಗಿ ದರ್ಶನ್ ಅವರು ಕೈಗೆ ಸಿಗದ ಕಾರಣ ಅವರ ತಾಯಿಯಿಂದ ಲಾಂಚ್ ಮಾಡಿಸಿದ್ದೇವೆ ಅಷ್ಟೇ ಇದರಲ್ಲಿ ಯಾರಿಗೂ ಬೇಸರ ಮಾಡುವ ವಿಷಯ ಇಲ್ಲ ಎಂದಿದ್ದಾರೆ. ಆದರೆ ಅವರು ಪೋಸ್ಟ್ ಹಾಕಿದ್ದ ಸಮಯದಲ್ಲಿ ಅದರ ತೀವ್ರತೆ ಎಷ್ಟಿತ್ತು ಎಂದರೆ ದರ್ಶನ್ ಅಭಿಮಾನಿಗಳು ಪ್ರಥಮ್ ಅವರು ಸಿಕ್ಕರೆ, ಹೊಡೆದು ಬಿಡುತ್ತೇವೆ ಎಂದು ಹೇಳಿದರು ಅದರ ಬಗ್ಗೆ ಕೂಡ ಪ್ರಥಮ್ ಅವರು ಮಾತನಾಡಿದ್ದು ಅಂದುಕೊಂಡಷ್ಟು ಸುಲಭ ಅಲ್ಲ ಪೋಸ್ಟ್ ಹಾಕಿದಷ್ಟು ಸುಲಭವೂ ಅಲ್ಲ ಯಾರನ್ನಾದರೂ ಮುಟ್ಟುವುದು ಎಂದು ಹೇಳಿದ್ದಾರೆ.

Cinema Updates Tags:Darshan, Meena Thoogudeepa, Nata Bayankara Movie, Olle Hudga Pratham, Pratham
WhatsApp Group Join Now
Telegram Group Join Now

Post navigation

Previous Post: ರೀಲ್ಸ್ ಮಾಡುವ ಹುಚ್ಚಿನಲ್ಲಿ ಒಳ ಉಡುಪು ಧರಿಸದೆ ಬಾಳೆಕಾಯಿ ಧರಿಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಯುವತಿ. ಡ್ಯಾನ್ಸ್ ಮಾಡುತ್ತಿರುವಾಗಲೇ ಜಾರಿದ ಬಾಳೇಕಾಯಿ….
Next Post: ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore