Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

Posted on October 1, 2023 By Kannada Trend News No Comments on ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

 

* ಬೇಗ ಮಲಗಿ ಬೇಗ ಎದ್ದು ಹಲ್ಲು ಬಾಯಿ ಸ್ವಚ್ಛವಾಗಿ ತೊಳೆದು ಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ.
* ಚಹಾ ಕಾಫಿ ಬೀಡಿ ಸಿಗರೇಟು ತಂಬಾಕು ಸೇವಿಸದೇ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ ಮಣ್ಣು ಅಥವಾ ಬೂದಿಯಿಂದ ಕೈತೊಳೆದು ಕೊಳ್ಳಿ.
* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ.

* ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು ಕಾಫಿ ಟೀ ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.
* ತಮ್ಮ ಶಕ್ತಿಗನುಗುಣವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಗಳನ್ನು ರೂಡಿಯಲ್ಲಿಡಿ.
* ದಿನಾಲೂ ಕೈ ಕಾಲು ಮುಖ ತೊಳೆದುಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ಎರಚಿಕೊಳ್ಳಬೇಕು.
* ಬಾಯಿಯಲ್ಲಿ ನೀರನ್ನು ಬಹಳ ಸಲ ಮುಕ್ಕಳಿಸಬೇಕು.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

* ಶರೀರ ಸ್ವಚ್ಛತೆ ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿಯಲ್ಲಿ ಸ್ನಾನ ಮಾಡಬೇಕು ವರಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಉತ್ತಮ.
* ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆಯನ್ನು ಚೆನ್ನಾಗಿ ಹಸ್ತದಿಂದ ತಿಕ್ಕಬೇಕು.
* ಮಾದಕ ಪೇಯ ತಂಬಾಕು, ಬೀಡಿ, ಸಿಗರೇಟು, ಚಹ ಮುಂತಾದವು ಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿದೆ.

* ಸಾತ್ವಿಕ ಸಸ್ಯಆಹಾರವೇ ಸರ್ವ ಶ್ರೇಷ್ಟವಾದದ್ದು ಆಹಾರದಂತೆ ವಿಚಾರ ವಿಚಾರಣೆ ಸಾದ್ಯ.
* ಸೊಪ್ಪು ಪಲ್ಯ ಹಸಿ ತರಕಾರಿ ನೆನೆಸಿದ ಬೇಳೆಕಾಳು ಹಣ್ಣು ಹಂಪಲು ಮುಂತಾದವುಗಳು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರವಾಗಿರುತ್ತದೆ.
* ಆಹಾರವನ್ನೂ ಚೆನ್ನಾಗಿ ನೀರಾಗುವಂತೆ ನುರಿಸಿ ಅಗಿದು ನುಂಗಬೇಕು
* ಊಟವಾದ ಕೂಡಲೇ ಮಲಗಬಾರದು ಕನಿಷ್ಠ ಅರ್ಧ ಒಂದು ತಾಸಿನ ನಂತರ ನೀರು ಕುಡಿದು ಮಲಗಬೇಕು.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

* ಮೂಗಿನಿಂದಲೆ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಹುದು.
* ಸೂರ್ಯ ನಮಸ್ಕಾರ ಮತ್ತು ಯೋಗಾಸನಗಳನ್ನು ಮನರಂಜನೆ ಮತ್ತು ಪ್ರದರ್ಶನಕ್ಕಾಗಿ ಶಕ್ತಿ ಮೀರಿ ಮಾಡಬೇಡಿ.
* ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡದೆ ಆಹಾರ ಸೇವಿಸುವು ದಿಲ್ಲ ಎಂಬ ಪ್ರತಿಜ್ಞೆ ಮಾಡಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ.
* ಬಾಯಾರಿಕೆಯನ್ನು ಶುದ್ಧ ನೀರಿನಿಂದಲೇ ನಿವಾರಿಸಿಕೊಳ್ಳಬೇಕು ಚಹಾ ಕಾಫಿ ಸೋಡಾ ಮುಂತಾದವುಗಳಿಂದ ನಿವಾರಿಸಿಕೊಳ್ಳಬಾರದು.

* ಮೇಲಿಂದ ಮೇಲೆ ಜುಲಬು ಎನಿಮಾ ತೆಗೆದುಕೊಳ್ಳಬಾರದು.
* ಮಲ ಮೂತ್ರಗಳನ್ನು ಹೆಚ್ಚು ವೇಳೆ ತಡೆಯಬಾರದು ಅದರಿಂದಲೇ ಮಲಬದ್ಧತೆ ಮೂಲವ್ಯಾಧಿ ಹೊಟ್ಟೆಯ ತೊಂದರೆ ಹೆಚ್ಚಾಗುವ ಸಂಭವ ಹೆಚ್ಚು.
* ರಾತ್ರಿ ಬೇಗ ಮಲಗಿ ಬೇಗ ಏಳಿ, ಹಗಲು ನಿದ್ದೆ ಒಳ್ಳೆಯದಲ್ಲ.
* ವಯಸ್ಸು ಏರುತ್ತಾ ಬಂದಂತೆ ಶರೀರದ ತೈಮಸ್ ಗ್ರಂಥಿಗಳು ಶಿಥಿಲವಾಗತೊಡಗುತ್ತವೆ ಸೂರ್ಯ ನಮಸ್ಕಾರ ಯೋಗಾಸನಗಳಿಂದ ಆ ಗ್ರಂಥಿಗಳಿಂದ ಚುರುಕುಗೊಳಿಸಬಹುದು ಬೇಡಿಕೆಗಳು ಕಡಿಮೆಯಾದ ಷ್ಟು ಸುಖ ಹೆಚ್ಚು.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

* ಸುಖ ಮತ್ತು ನಿದ್ದೆಯನ್ನು ಚೆನ್ನಾಗಿ ಹಂಚಿಕೊಂಡರೆ ಅವು ಹೆಚ್ಚಾಗಿ ವೃದ್ಧಿಯಾಗುವವು.
* ಮಾಡಿದ್ದನ್ನು ಮರೆ, ಪಡೆದುದ್ದನು ನೆನೆ, ನಗು ಮುಖವೇ ನೋವಿನ ಮದ್ದು.
* ಲಾಭ ನಷ್ಟದ ಭಾವನೆ ಬಿಟ್ಟು ಸರಳ ಶುದ್ಧ ಭಾವನೆಯಿಂದ ಕಾರ್ಯ ಮಾಡು ಯಶಸ್ಸು ಖಂಡಿತ.
* ಒಳ್ಳೆಯ ಉಸಿರಾಟ ಇಚ್ಛಾ ಪ್ರವೃತ್ತಿ ವ್ಯಾಯಾಮ ಆರೋಗ್ಯಕ್ಕೆ ಬುನಾದಿ.

* ಅರೋಗ್ಯ ಮತ್ತು ಆಯುಷ್ಯವಿಲ್ಲದಿದ್ದರೆ ಆರ್ಥಿಕವಾಗಿ ಶ್ರೀಮಂತನಾಗಿ ದ್ದರು ವ್ಯರ್ಥ
* ಇರುವಷ್ಟು ಕಾಲ ಆರೋಗ್ಯವಂತರಾಗಿದ್ದು ಹೆತ್ತವರಿಗೆ ಹೊರೆಯಾಗದೆ ಬದುಕುವುದೇ ನಮ್ಮ ಗುರಿಯಾಗಿರಲಿ.
* ಚೆನ್ನಾಗಿ ಬದುಕಿ ಬದುಕಿಸಿರಿ ಅದೇ ಯೋಗದ ಹಿನ್ನಲೆ.
* ತನುವಿನ ಅಲಸ್ಯತನ ಮನದ ಚಂಚಲತೆ ಪ್ರಾಣದಾಸೆಯನ್ನು ನಿಯಂತ್ರಿಸುವುದೇ ಸೂರ್ಯ ನಮಸ್ಕಾರ, ಯೋಗದ ಗುರಿಯಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

* ಮುಗುಳುನಗೆಯೊಂದಿಗೆ ಶಾರೀರಿಕ ಚಟುವಟಿಕೆಯನ್ನು ಪ್ರಸನ್ನತೆ ಯಿಂದ ಬರಿ ಹೊಟ್ಟೆಯಿಂದ ಸೂರ್ಯ ನಮಸ್ಕಾರ ಪ್ರಾರಂಭಿಸಿ.
* ಊಟ ಬಲ್ಲವನಿಗೆ ರೋಗವಿಲ್ಲ ನಿದ್ರೆ ಬಲ್ಲವನಿಗೆ ದಣಿವು ಇಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ, ದುಡಿಯುವವನಿಗೆ ಬಡತನವಿಲ್ಲ. ಕೋಪವೇ ತಾಪದ ಮೂಲ, ಸ್ನೇಹ ಸಂಜೀವಿನಿ.
* ದೇಹ ಮನಸ್ಸುಗಳಿಗೆ ತಕ್ಕ ಒಳ್ಳೆಯ ಕೆಲಸ ಕೊಟ್ಟು ಆಯಾಸ ಪಡೆದರೆ ಮಾತ್ರವೇ ಒಳ್ಳೆಯ ನಿದ್ರೆ ಮತ್ತು ಹಸಿವು ಚೆನ್ನಾಗಿರುತ್ತದೆ ಇಂದಿನ ಕೆಲ ಜನರಿಗೆ ಇದು ದುರ್ಲಭ.

Useful Information
WhatsApp Group Join Now
Telegram Group Join Now

Post navigation

Previous Post: ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
Next Post: ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore