Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಮ್ಮನ ಹಾದಿಯಲ್ಲಿ ಸಾಗಲು ರಾಘಣ್ಣನ ನಿರ್ಧಾರ, ಹಾಗಾದ್ರೆ ಅವರ ಮುಂದಿನ ಕೆಲಸಗಳೇನು ಗೊತ್ತಾ.?

Posted on July 8, 2022 By Kannada Trend News No Comments on ತಮ್ಮನ ಹಾದಿಯಲ್ಲಿ ಸಾಗಲು ರಾಘಣ್ಣನ ನಿರ್ಧಾರ, ಹಾಗಾದ್ರೆ ಅವರ ಮುಂದಿನ ಕೆಲಸಗಳೇನು ಗೊತ್ತಾ.?

ಅಪ್ಪು ಅವರು ಅಗಲಿದ ಬಳಿಕ ನಟನೆಗಿಂತ ಅವರು ಮಾಡುತ್ತಿದ್ದ ಸಮಾಜ ಸೇವೆಯಿಂದಲೇ ಎಲ್ಲರ ಮನಸ್ಸಿನಲ್ಲಿ ದೇವರ ಸ್ಥಾನ ಪಡೆದರು. ಇದುವರೆಗೆ ಯಾವ ಒಬ್ಬ ಸೆಲೆಬ್ರಿಟಿ ಕೂಡ ಮಾಡದಷ್ಟು ಸಮಾಜ ಸೇವೆಯನ್ನು ಅಪ್ಪು ಅವರು ಕರ್ನಾಟಕದ ಜನತೆಗಾಗಿ ಮಾಡಿದ್ದಾರೆ. ಗೋ ಶಾಲೆಗಳಿಗೆ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಶಕ್ತಿಧಾಮಗಳಿಗೆ ಹಣವನ್ನು ಕಾಣಿಕೆಯಾಗಿ ಕೊಡುವುದು. ಮನೆಯ ಬಳಿ ಸಹಾಯಕ್ಕೆಂದು ಹುಡುಕಿಕೊಂಡು ಬಂದವರಿಗೆ ಕನಿಷ್ಠ 50 ಸಾವಿರಕ್ಕಿಂತ ಕಡಿಮೆ ಇಲ್ಲದಷ್ಟು ಹಣಕ್ಕೆ ಚೆಕ್ ಕೊಟ್ಟು ಕಳಿಸುವುದು. ಹಾಗೂ ಕರ್ನಾಟಕದ ರೈತರ ಪರವಾಗಿ ನಂದಿನ ಹಾಲಿನ ಉತ್ಪನ್ನಗಳ ಜಾಹೀರಾತುಗಳನ್ನು ಉಚಿತವಾಗಿ ಮಾಡಿಕೊಡುವುದು. ಜಾಹೀರಾತುಗಳು ಹಾಗೂ ಇತರ ಸಿನಿಮಾಗಳಿಗೆ ಹಾಡುಗಳನ್ನು ಹಾಡಿ ಪಡೆದ ಸಂಭಾವನೆಯನ್ನು ಸಂಪೂರ್ಣವಾಗಿ ಸಮಾಜ ಸೇವೆಗಾಗಿ ಉಪಯೋಗಿಸುವುದು ಮತ್ತು ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಬಡ ಪ್ರತಿಭೆಗಳಿಗೆ ಹಣದ ಸಹಾಯವಾಗುವಂತೆ ನೆರವಾಗುವುದು.

ಇಂತಹ ನೂರಾರು ಹೆಸರುಗಳನ್ನು ಯಾರಿಗೂ ಹೇಳದಂತೆ ಮಾಡಿಕೊಂಡು ಬಂದಿದ್ದರು ಪುನೀತ್ ರಾಜಕುಮಾರ್ ಅವರು. ರಾಜ್ ವಂಶದ ಕುಟುಂಬಸ್ಥರೇ ಹಾಗೆ ಮೊದಲಿನಿಂದಲೂ ರಾಜಣ್ಣನ ಕುಟುಂಬ ಸಮಾಜಸೇವೆಗಾಗಿ ತುಡಿಯುತ್ತಲೇ ಇದೆ. ಅಣ್ಣಾವ್ರು ಕೂಡ ಅವರಿಂದ ಆದಷ್ಟು ಹಸಿದವರಿಗೆ ಅನ್ನ ಹಾಕುವ ಕೆಲಸವನ್ನು ಮಾಡಿದ್ದಾರೆ ಮತ್ತು ಪಾರ್ವತಮ್ಮ ರಾಜಕುಮಾರ್ ಅವರು ಕೂಡ ವಜ್ರೇಶ್ವರಿ ಹಾಗೂ ಪೂರ್ಣಿಮಾ ಎಂಟರ್ಪ್ರೈಸಸ್ ನಿರ್ಮಿಸುವ ಮೂಲಕ ಸಾವಿರಾರು ಕನ್ನಡದ ಕಲಾವಿದರಿಗೆ ಅನ್ನಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಪಾಯದ ಮೇಲೆ ಈಗ ಮನೆಯ ಇತರ ಕುಟುಂಬಸ್ಥರು ಕೂಡ ನಡೆಯುತ್ತಿದ್ದಾರೆ ಎನ್ನಬಹುದು. ಅಪ್ಪು ಅವರ ಅಗಲಿಕೆಯ ಬಳಿಕ ಕುಟುಂಬಸ್ಥರು ಇದೀಗ ತಮ್ಮ ತಮ್ಮ ಜವಾಬ್ದಾರಿಗಳಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಾಘಣ್ಣ ಅವರು ಈ ಸಮಯದಲ್ಲಿ ಹೊಸದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.

ರಾಜ್ ಕುಮಾರ್ ಅವರಂತೆ ಅವರ ಮೂರು ಜನ ಮಕ್ಕಳು ಕೂಡ ಕನ್ನಡ ಚಲನಚಿತ್ರ ರಂಗದಲ್ಲಿ ನಟನೆ ಮತ್ತು ನಿರ್ಮಾಣ ಕೆಲಸಗಳಲ್ಲಿ ಭಾಗಿಯಾಗಿದ್ದರು. ಶಿವರಾಜ್ ಕುಮಾರ್ ಅವರು ಇದೀಗ ಸಿನಿಮಾಗಳಲ್ಲಿ ಮತ್ತೆ ನಟಿಸಲು ತೊಡಗಿಕೊಂಡಿದ್ದಾರೆ ಅವರ ಮಗಳು ನಿವೇದಿತಾ ವೆಬ್ ಸೀರೀಸ್ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ನಿರ್ಮಿಸಿದ್ದ ಪಿ ಆರ್ ಕೆ ಪ್ರೊಡಕ್ಷನ್ ಕೆಲಸಗಳನ್ನು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ನೋಡಿಕೊಳ್ಳುತ್ತಿದ್ದು ಅಪ್ಪು ಅವರ ಆಸೆಯಂತೆ ಹೊಸ ಪ್ರತಿಭೆಗಳಿಗೆ ಕನ್ನಡದ ಸೀರಿಯಲ್ ಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದಾರೆ. ಇದೀಗ ರಾಘಣ್ಣ ಕೂಡ ಅದೇ ಹಾದಿಯಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದು ಕನ್ನಡದಲ್ಲಿ ಹೊಸದೊಂದು ಧಾರಾವಾಹಿಯನ್ನು ಮಂಗಳ ರಾಘವೇಂದ್ರ ರಾಜ್ ಕುಮಾರ್ ಅವರ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ತಮ್ಮನಂತೆ ರಾಘಣ್ಣ ಕೂಡ ಕನ್ನಡದಲ್ಲಿ ಹೊಸ ಪ್ರತಿಭೆಗಳಿಗೆ ಕಿರುತೆರೆಯ ಧಾರಾವಾಹಿಗಳಲ್ಲಿ ಅವಕಾಶ ಮಾಡಿಕೊಡುವ ಆಸೆ ಇಟ್ಟುಕೊಂಡಿದ್ದಾರೆ.

ಅವರ ಮೊದಲ ಪ್ರಯತ್ನವನ್ನು ಸಿರಿ ಕನ್ನಡ ಚಾನೆಲ್ ನಲ್ಲಿ ವಿಜಯದಶಮಿ ಎನ್ನುವ ಧಾರಾವಾಹಿ ಮೂಲಕ ಮಾಡುತ್ತಿದ್ದಾರೆ. ರಾಧಾಕಲ್ಯಾಣ ಧಾರವಾಹಿಯ ಕೃತಿಕ ಅವರು ಕೂಡ ಈ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದು ಇವರು ಮತ್ತು ಕೆಲವೊಂದಿಷ್ಟು ಹಿರಿಯ ಕಲಾವಿದರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾತ್ರಗಳಿಗೂ ಕೂಡ ಹೊಸಬರಿಗೆ ಅವಕಾಶ ನೀಡಿದ್ದಾರಂತೆ. ಈಗಾಗಲೇ ಟ್ರೈಲರ್ ಲಾಂಚ್ ಆಗಿದ್ದು ರಿಷಬ್ ಶೆಟ್ಟಿ ಪ್ರಿಯಾಂಕಾ ಉಪೇಂದ್ರ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಅಭಿಷೇಕ್ ಅಂಬರೀಶ್ ಅವರು ಈ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಮಾತನಾಡಿ ಟ್ರೈಲರ್ ಒಂದು ಕಮರ್ಷಿಯಲ್ ಸಿನಿಮಾದಷ್ಟು ರಿಚ್ ಆಗಿದೆ ನನಗೆ ಕಥೆ ಬಗ್ಗೆ ತುಂಬಾ ಆಸಕ್ತಿ ಆಗುತ್ತಿದೆ ಎಂದು ಮಾತನಾಡಿ ಇವರ ಹೊಸ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ರಾಘಣ್ಣ ಅವರ ಈ ಕಾರ್ಯ ಇಷ್ಟ ಆದರೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

Serial Loka Tags:Appu, Raganna
WhatsApp Group Join Now
Telegram Group Join Now

Post navigation

Previous Post: ಹೊಸಪೇಟೆ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.
Next Post: ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore