Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

Posted on January 22, 2023 By Kannada Trend News No Comments on ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭದ್ರ ಬುನಾದಿ ಹಾಕಿಕೊಟ್ಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ಇಂದು ನಮ್ಮ ಇಂಡಸ್ಟ್ರಿ ಬಗ್ಗೆ ಇಂಟರ್ನ್ಯಾಷನಲ್ ಮಟ್ಟದಲ್ಲಿ ಮಾತುಕತೆ ಆಗುತ್ತಿದೆ ಎಂದರೆ ಅದಕ್ಕೆ ಆರಂಭಿಕ ದಿನಗಳಲ್ಲಿ ಹೆಗಲುಕೊಟ್ಟು ಸಾಥ್ ನೀಡಿದ್ದೆ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಕುಟುಂಬ. ಇದೀಗ ಮೂರು ತಲೆಮಾರಿನ ಅವರ ಕುಟುಂಬದ ಕಲಾವಿದರು ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಡಾಕ್ಟರ್ ರಾಜ್ ಕುಮಾರ್ ಅವರ ತಂದೆಯು ಸಹ ಕಲಾವಿದರಾಗಿದ್ದು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ರಾಜಕುಮಾರ್ ಅವರ ಸಹ ನಾಟಕಗಳಿಂದ ಸಿನಿಮಾ ರಂಗಕ್ಕೆ ಬಂದು ಅಪೂರ್ವ ಸಾಧನೆಯನ್ನು ಮಾಡಿದರು. ರಾಜಕುಮಾರ್ ಅವರ ಮಕ್ಕಳುಗಳಲ್ಲಿ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಅವರು ಸಹ ಸೂಪರ್ ಸ್ಟಾರ್ಗಳಾಗಿ ಕನ್ನಡ ಚಿತ್ರರಂಗವನ್ನು ಆಳಿದರು.

ಪುನೀತ್ ಅವರು ಪವರ್ ಸ್ಟಾರ್ ಆದರೆ ಶಿವಣ್ಣ ಅವರು 60ರ ಹರೆಯದಲ್ಲೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ. ಇನ್ನು ರಾಜ್ ಕುಮಾರ್ ಅವರ ಮೊಮ್ಮಕ್ಕಳ ವಿಷಯದಲ್ಲಿ ಹೇಳುವುದಾದರೆ ಶಿವಣ್ಣ ಅವರ ಪುತ್ರಿ ನಿವೇದಿತ ಈಗಾಗಲೇ ಅಪ್ಪನೊಂದಿಗೆ ಬಾಲನಟಿಯಾಗಿ ಅಭಿನಯಿಸಿ ಈಗ ವೆಬ್ ಸೀರೀಸ್ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಘಣ್ಣನ ಮಕ್ಕಳಾದ ಯುವರಾಜ್ ಕುಮಾರ್ ಹಾಗೂ ವಿನಯ್ ರಾಜಕುಮಾರ್ ಅವರಲ್ಲಿ ವಿನಯ್ ರಾಜಕುಮಾರ್ ಅವರು ರನ್ ಆಂಟೋನಿ, ಸಿದ್ದಾರ್ಥ ಮುಂತಾದ ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳನ್ನು ಕೊಟ್ಟು ಕನ್ನಡದಲ್ಲಿ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ.

ಯುವರಾಜ್ ಕುಮಾರ್ ಸಹ ಅದ್ದೂರಿಯಾಗಿ ಒಂದೊಳ್ಳೆ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಮಕ್ಕಳು ತೀರ ಚಿಕ್ಕವರಾಗಿರುವುದರಿಂದ ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ ಇನ್ನು ಮಗಳು ಪೂರ್ಣಿಮ ಹಾಗೂ ರಾಮಕುಮಾರ್ ಮಕ್ಕಳಾದ ಪುತ್ರಿ ಧನ್ಯ ರಾಮ್ ಕುಮಾರ್ ಹಾಗೂ ಪುತ್ರ ಧೀರನ್ ರಾಮ್ ಕುಮಾರ್ ಅವರು ಸಹ ನಾಯಕಿ ಆಗಿ ನಾಯಕ ಆಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.

ಇದೀಗ ಮತ್ತೊಬ್ಬ ಪುತ್ರಿ ಯಾದ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಅವರ ಪುತ್ರನ ಆಗಮನದ ಬಗ್ಗೆ ಎಲ್ಲೆಡೆ ನಿರೀಕ್ಷೆ ಇತ್ತು. ಮೊದಲ ಬಾರಿಗೆ A2 ಎನ್ನುವ ಯೂಟ್ಯೂಬ್ ಚಾನೆಲ್ ಗೆ ಇಂಟರ್ವ್ಯೂ ಕೊಡುವ ಮೂಲಕ ಷಣ್ಮುಖ ಗೋವಿಂದ ರಾಜ್ ಅವರು ತಾವು ಸಹ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿದೆ. ತಮ್ಮ ಕುಟುಂಬದವರಿಗೆ ಇರುವ ಲೇಡಿಲಕ್ ನಂಬಿಕೆ ಬಗ್ಗೆ ಮಾತನಾಡಿದ ಷಣ್ಮುಖ ಗೋವಿಂದ ಅವರು ನಮ್ಮ ಮಾಮಂದಿರು ಹಾಗೂ ಕುಟುಂಬದಲ್ಲಿ ಅನೇಕರು ಮದುವೆಯಾದ ಬಳಿಕ ಸ್ಟಾರ್ ಗಳಾಗಿದ್ದಾರೆ. ನನಗೂ ಆ ನಂಬಿಕೆ ಇದೆ. ನನಗೆ ಆಸೆ ಇತ್ತು ಕನಸಿತ್ತು ಈಗ ನಿರ್ದೇಶಕರ ಭರವಸೆಯಿಂದ ಪ್ರಯತ್ನ ಪಟ್ಟಿದ್ದೇನೆ ಎಂದು ತಮ್ಮ ಮೊದಲ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಲನಚಿತ್ರದ ನಿರ್ದೇಶಕ ಆರ್ ಅಶೋಕ್ ಹಾಗೂ ನಿರ್ಮಾಪಕರಾದ ಮಾದೇಶ ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮುಂದಿನ ಚಿತ್ರದಲ್ಲಿ ಷಣ್ಮುಗ ಗೋವಿಂದ ರಾಜ್ ಅವರೇ ಹೀರೋ ಆಗಿದ್ದಾರೆ. ಡೈರೆಕ್ಟರ್ ಅವರು ಈ ಕಥೆಗೆ ಷಣ್ಮುಖ ಅವರೇ ಹೋಲುತ್ತಾರೆ ಎನ್ನುವ ಕಾರಣದಿಂದ ಅವರನ್ನು ಒಪ್ಪಿಸಿದ್ದಾರಂತೆ ಮತ್ತು ಎಲ್ಲರೂ ಷಣ್ಮುಖ ಅವರನ್ನು ರಾಘಣ್ಣನ ರೀತಿ ಕಾಣುತ್ತೀರ ಎಂದು ಹೇಳುತ್ತಾರಂತೆ.

ಚಿತ್ರರಂಗ ಎಲ್ಲರಿಗೂ ಕೈಬಿಸಿ ಕಾಯುತ್ತದೆ, ಆದರೆ ಟ್ಯಾಲೆಂಟ್ ಇದ್ದವರಷ್ಟೇ ಕೊನೆವರೆಗೂ ಇದನ್ನು ಆಳುತ್ತಾರೆ ಈಗ ಷಣ್ಮುಖ ಗೋವಿಂದ ಅವರ ಅದೃಷ್ಟ ಹೇಗಿದೆ ಎನ್ನುವ ಪರೀಕ್ಷೆ ನಡೆಯುತ್ತಿದೆ ಅವರಿಗೆ ಶುಭವಾಗಲಿ ಎಂದು ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Entertainment Tags:Dr Rajkumar, Shanmuka Govinda Raj
WhatsApp Group Join Now
Telegram Group Join Now

Post navigation

Previous Post: ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.
Next Post: ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore