Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

Posted on November 30, 2022 By Kannada Trend News No Comments on ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

 

 

ಸ್ಯಾಂಡಲ್ ವುಡ್ ಅಲ್ಲಿ ಬಾಯ್ಕಾಟ್ ಮಾತು ಕೇಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದ ರಶ್ಮಿಕ.

ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಸಾನ್ವಿ ಪಾತ್ರದಲ್ಲಿ ನಟಿಸಿದಾಗ ಇಡೀ ಕರ್ನಾಟಕದ ನಮ್ಮ ಮನೆಯ ಸಾನ್ವಿ ಎಂದು ಹೇಳುವಷ್ಟು ಪ್ರೀತಿ ಪಾತ್ರರಾಗಿದ್ದರು. ಆದರೆ ಯಾವಾಗ ಪರಭಾಷೆಗಳಲ್ಲಿ ಅಭಿನಯಿಸುವ ಅವಕಾಶಗಳು ಹೆಚ್ಚಾಗಿ ಬಂತು, ಇವರು ಕನ್ನಡ ಹಾಗೂ ಕರ್ನಾಟಕಕ್ಕೆ ನಾನು ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳಲು ಶುರು ಮಾಡಿದರು.

ಒಂದರ ಮೇಲೆ ಒಂದರಂತೆ ಸಾಲು ಸಾಲು ಈ ರೀತಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಅವಮಾನ ಮಾಡುವ ರೀತಿ ವರ್ತಿಸಿದ ರಶ್ಮಿಕ ಮಂದಣ್ಣ ಅವರ ಮೇಲೆ ಕನ್ನಡಿಗರು ಕೆಂಡ ಕಾರಿದರು. ಅಲ್ಲದೆ ರಕ್ಷಿತ್ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ಇವರು ರಕ್ಷಿತ್ ಮನಸನ್ನು ಮಾತ್ರ ಅಲ್ಲದೆ ಇಡೀ ಕರ್ನಾಟಕದ ಕೋಟಿ ಕೋಟಿ ಜನರ ಹೃದಯ ಒಡೆದರು.

ಇದಕ್ಕೆ ತಕ್ಕ ಹಾಗೆ ಕನ್ನಡಿಗರು ಸಹ ಈಕೆಯನ್ನು ಸಾಕಷ್ಟು ಟ್ರೋಲ್ ಮಾಡಿ ಕೋಪ ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು. ಇಷ್ಟಾದರೂ ಇನ್ನು ಸಹ ಈಕೆಯ ತರಲೆ ಮತ್ತು ಚೇಷ್ಟೆಗಳು ನಿಂತಿಲ್ಲ ಇತ್ತೀಚೆಗಷ್ಟೇ ರಶ್ಮಿಕ ಮಂದಣ್ಣ ಹಿಂದಿಯ ಇಂಟರ್ವ್ಯೂ ಒಂದರಲ್ಲಿ ತನ್ನ ಆಕ್ಟಿಂಗ್ ಕೆರಿಯರ್ ಹೆಂಗೆ ಶುರುವಾಯಿತು ಎಂದು ಹೇಳಿಕೊಳ್ಳುವಾಗ ತನಗೆ ಅವಕಾಶ ಕೊಟ್ಟು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣಕರ್ತರಾದ ಮೊದಲ.

ಸಿನಿಮಾ ಮತ್ತು ಮೊದಲ ನಿರ್ದೇಶಕ ಹಾಗೂ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಕೊಳ್ಳಲು ಇಷ್ಟಪಡದೆ ಕೋಟ್ ಚಿಹ್ನೆ ಮಾಡಿ ತೋರಿಸಿ ಎಡವಟ್ಟು ಮಾಡಿದರು. ಇದಕ್ಕೆ ತಕ್ಕ ಹಾಗೆ ಅವಕಾಶ ಸಿಕ್ಕಾಗ ರಿಷಬ್ ಶೆಟ್ಟಿ ಕೂಡ ಅದೇ ಬಾಲಿವುಡ್ ಇಂಟರ್ವ್ಯೂ ಅಲ್ಲಿ ಅವರು ಮಾಡಿದ್ದ ಚಿಹ್ನೆಯನ್ನು ತೋರಿಸಿ ಇಂತಹ ನಟಿಯರು ನನಗೆ ಇಷ್ಟ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದರು.

ರಶ್ಮಿಕ ಈ ವರ್ತನೆಯಿಂದ ಕನ್ನಡಿಗರ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಈ ಹಿಂದೆ ಮಾಧ್ಯಮದವರು ಕಾಂತರಾ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನಿಸಿದಾಗಲೂ ಕೂಡ ಕನ್ನಡದ ಸಿನಿಮಾವೊಂದು ವಿಶ್ವದಾದ್ಯಂತ ಇಷ್ಟು ಹೆಸರು ಮಾಡುತ್ತಿದೆ ಅದರ ಬಗ್ಗೆ ಕುತೂಹಲಕ್ಕಾದರು ನೋಡಬೇಕು ತಿಳಿದುಕೊಳ್ಳಬೇಕು ಎನ್ನುವ ಜವಾಬ್ದಾರಿಯನ್ನು ತೋರದೆ ಇನ್ನು ಇಲ್ಲ ಎಂದು ಸನ್ನೆ ಮಾಡಿ ಹೋದ ರಶ್ಮಿಕ ಅವರ ನಡತೆ ಕೂಡ ಬೇಸರ ತರಿಸಿದೆ.

ಇದೆಲ್ಲವನ್ನು ಇಷ್ಟು ದಿನ ಸಹಿಸಿಕೊಂಡಿದ್ದ ಕನ್ನಡಿಗರು ಈಗ ತಿರುಗಿ ಬಿದ್ದಿದ್ದು ರಶ್ಮಿಕ ಮಂದಣ್ಣ ಅವರನ್ನು ಕನ್ನಡ ಸಿನಿಮಾದಿಂದ ಬ್ಯಾನ್ ಮಾಡಬೇಕು ಎಂದು ಬಾರಿ ಅಭಿಯಾನ ಮಾಡುತ್ತಿದ್ದಾರೆ. ಈಗ ರಶ್ಮಿಕ ಮಂದಣ್ಣ ಪರಿಸ್ಥಿತಿ ಹೇಗಾಗಿದೆ ಎಂದರೆ ಮುಂಬೈನ ಏರ್ಪೋರ್ಟ್ ಒಂದರಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಲೆಗೆ ಕ್ಯಾಪ್ ಹಾಕಿಕೊಂಡು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ.

ಹಿಂದೆಲ್ಲ ತುಂಡು ಉಡುಗೆ ತೊಟ್ಟು ಗ್ಲಾಮರ್ ಆಗಿ ಸಾರ್ವಜನಿಕ ಸ್ಥಳ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ಅವರು ಈ ರೀತಿ ಈಗ ಕಾಣಿಸಿಕೊಂಡಿರುವುದು ನೋಡಿದರೆ ಬಾಯ್ಕಾಟ್ ಬಿಸಿ ಅವರಿಗೆ ತಟ್ಟಿರುವ ರೀತಿ ಇದೆ ಎಂದು ಕನ್ನಡಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ನ್ಯಾಷನಲ್ ಕ್ರಶ್ ಆಗಿ ಮೆರೆದಿದ್ದ ರಶ್ಮಿಕ ಮಂದಣ್ಣ ಅವರ ಅದೃಷ್ಟ ದಿನೇ ದಿನೇ ಕಡಿಮೆ ಆಗುತ್ತಿದ್ದು ಈ ವರ್ಷ ಮಾಡಿದ ಸಾಲು ಸಾಲು ಸಿನಿಮಾಗಳು ಫ್ಲಾಫ್ ಆಗಿ ಹಳ್ಳ ಹಿಡಿದಿವೆ. ಮುಂದೆ ರಶ್ಮಿಕಾ ಪರಿಸ್ಥಿತಿ ಏನಾಗಲಿದೆ ಎಂದು ಕನ್ನಡಿಗರು ಕುತೂಹಲದಿಂದ ನೋಡುತ್ತಿದ್ದಾರೆ.

Entertainment Tags:Rashmika, Rashmika Mandanna
WhatsApp Group Join Now
Telegram Group Join Now

Post navigation

Previous Post: ಡಾಲಿ ಅಭಿನಯದ “ಟಗರು ಪಲ್ಯ” ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆ ಆಗಿರುವ ಪ್ರೇಮ್ ಮಗಳು ಅಮೃತ ಇಟ್ಟ ದುಬಾರಿ ಸಂಭಾವನೆ ಎಷ್ಟು ಗೊತ್ತ.?
Next Post: ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ನಟಿ ವೈಷ್ಣವಿ ಗೌಡ ಈ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore