Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?

Posted on August 22, 2022 By Kannada Trend News No Comments on ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?

ರಶ್ಮಿಕ ಮಂದಣ್ಣ ಕನ್ನಡದ ಕೊಡಗಿನ ಚೆಲುವೆ ಆದ ಈಕೆ ಈಗ ನ್ಯಾಷನಲ್ ಕ್ರಶ್ ಆಗಿ ದೇಶದಲ್ಲೇ ಫೇಮಸ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ ಪುಷ್ಪ ಸಿನಿಮಾದ ನಂತರ ಈಕೆಗೆ ಇದ್ದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬಾಲಿವುಡ್ ಅಲ್ಲು ಬೆಳಕು ಕಾಣಲು ಹೊರಟಿದ್ದಾರೆ ರಶ್ಮಿಕಾ. ರಶ್ಮಿಕ ಮಂದಣ್ಣ ಇದುವರೆಗೆ ಅವರು ಬಂದಿರುವ ಹಾದಿಯನ್ನು ಗಮನಿಸಿದರೆ ಅದು ಅವರ ಪಾಲಿನ ಅದೃಷ್ಟದಿಂದಲೇ ಎಂದು ನೋಡುಗರಿಗೆ ಅನಿಸುತ್ತದೆ. ಆದರೆ ರಶ್ಮಿಕಾ ಮಂದಣ್ಣ ಅವರ ಪ್ರಕಾರ ಅವರು ಇಷ್ಟೊಂದು ಸಾಧನೆ ಮಾಡಿರುವುದು ಅವರ ಸ್ವಂತ ಪ್ರಯತ್ನದಿಂದ ಎಂದು ಹೇಳುತ್ತಿದ್ದಾರೆ. ಯಾಕೆಂದರೆ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಂಡ ಆ ಸಾನ್ವಿ ಇಂದ ಹಿಡಿದು ಪುಷ್ಪಾ ಸಿನಿಮಾದ ಶ್ರೀ ವಲ್ಲಿಯ ಈ ಪಾತ್ರದವರೆಗೆ ಅವರಿಗೆ ಬಂದಿರುವ ಅವಕಾಶಗಳು ಅದೃಷ್ಟ ಎನಿಸುತ್ತದೆ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಸಿಂಪಲ್ ರಕ್ಷಿತ್ ಶೆಟ್ಟಿ ಹೀಗೆ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ಇವರು ಎಲ್ಲೂ ಕೂಡ ಅವಕಾಶಗಳಿಗಾಗಿ ಒದ್ದಾಡಲಿಲ್ಲ. ಕಿರಿಕ್ ಪಾರ್ಟಿ ಸಿನಿಮಾದ ನಂತರವೇ ಈಕೆಗೆ ಸಾಲು ಸಾಲು ಅವಕಾಶಗಳು ಬರತೊಡಗಿದ್ದವು .ಆದರೆ ಇಂತಹ ಒಂದು ಪ್ರತಿಭೆಯನ್ನು ಗುರುತಿಸಿ ಪಳಗಿಸಿ ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಮಾಡಿ ಕೊಟ್ಟಿದ್ದು ಕಿರಿಕ್ ಪಾರ್ಟಿ ತಂಡದ ದೊಡ್ಡತನ ಎನ್ನಬಹುದು. ಅಲ್ಲಿಯವರೆಗೆ ಅವರಿಗೆ ಸಿಕ್ಕ ಅವಕಾಶಗಳು ಅದೃಷ್ಟ ಎಂದರೆ ನಂತರ ಅವರ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಅವರು ಹಾಕಿದ ಶ್ರಮವನ್ನು ನಿಜಕ್ಕೂ ಅದು ಅವರ ಪ್ರಯತ್ನ ಎಂದು ನಂಬಲೇಬೇಕು.

ಕನ್ನಡದಲ್ಲಿ ಒಂದು ಸಿನಿಮಾದ ನಂತರವೇ ಬೇರೆ ಭಾಷೆಗಳಲ್ಲಿ ಸಾಲು ಸಾಲು ಆಫರ್ ಗಳು ರಶ್ಮಿಕಾ ಮಂದಣ್ಣ ಅವರನ್ನು ಅರಸಿ ಬಂದವು. ನಂತರ ತೆಲುಗಿನಲ್ಲಿ ಈಕೆ ಸ್ಟಾರ್ ಹಿರೋಯಿನ್ ಎಂದೇ ಹೇಳಬಹುದು ಮಹೇಶ್ ಬಾಬು, ಅಲ್ಲು ಅರ್ಜುನ್ ಹೀಗೆ ಅಲ್ಲೂ ಕೂಡ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಕಾಲಿವುಡ್ ಅಲ್ಲೂ ಕೂಡ ಕಮಲ್ ಮಾಡಿದ್ದಾರೆ. ದಳಪತಿ ವಿಜಯ್, ಪಾರ್ಥಿಪನ್ ಹೀಗೆ ಅಲ್ಲೂ ಕೂಡ ಸ್ಟಾರ್ ನಟರೊಂದಿಗೆ ಹಿರೋಯಿನ್ ಆಗಿರುವ ಇವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎನ್ನುವವರೆಗೂ ಹೆಸರು ಗಳಿಸಿಕೊಂಡು ಬಿಟ್ಟಿದ್ದಾರೆ. ಈಗ ಸೀತಾರಾಮಂ ಸಿನಿಮಾ ಮೂಲಕ ಮಾಲಿವುಡ್ ಅಲ್ಲೂ ಕೂಡ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಸದ್ಯದಲ್ಲೇ ಅವರು ಬಾಲಿವುಡ್ ಸಿನಿಮಾಗಳನ್ನು ಮಾಡುವುದು ಯಾವುದೇ ಅನುಮಾನವಿಲ್ಲ ಹಾಗೆ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾದಲ್ಲಿ ಇವರು ಅಭಿನಯಿಸಲಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಇದೆ.

ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಮಿಂಚುತ್ತಿರುವ ರಶ್ಮಿಕ ಮಂದಣ್ಣ ಅವರನ್ನು ಮತ್ತೆ ಕನ್ನಡದ ಸಿನಿಮಾಗಳಲ್ಲಿ ನೋಡುತ್ತೇವೆ ಎನ್ನುವ ಅನುಮಾನ ಮೂಡಿದೆ. ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ರಶ್ಮಿಕಾ ಮಂದಣ್ಣ ಅವರನ್ನು ನಿಮ್ಮ ಮುಂದಿನ ಕನ್ನಡ ಸಿನಿಮಾವನ್ನು ಯಾವಾಗ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ಯಾವುದೇ ಉತ್ತರವನ್ನು ಕೊಡದೆ ಸುಮ್ಮನೆ ಮುಗುಳ್ನಕ್ಕು ಸೈಲೆಂಟ್ ಆಗಿಬಿಟ್ಟಿದ್ದಾರೆ. ಇದನ್ನು ಗಮನಿಸಿದರೆ ಅವರಿಗೆ ಕನ್ನಡದಲ್ಲಿ ಬೇಡಿಕೆ ಕಡಿಮೆ ಆಗಿದೆಯೇ ಅಥವಾ ಕನ್ನಡದ ಸಿನಿಮಾಗಳನ್ನು ಅವರೇ ಒಪ್ಪಿಕೊಳ್ಳುತ್ತಿಲ್ಲವೇ ಎನ್ನುವ ಅಭಿಮಾನಿಗಳು ಕೂಡ ವ್ಯಕ್ತವಾಗುತ್ತಿವೆ. ಸಾಮಾನ್ಯವಾಗಿ ಎಲ್ಲರಿಗೂ ಕೂಡ ಭಾಷಾಭಿಮಾನ ಎಂಬುದು ಇರುತ್ತದೆ ಅಷ್ಟೇ ಅಲ್ಲದೆ ತಾನು ಮೊದಲು ನಟನೆ ಮಾಡಿದ್ದು ಕನ್ನಡ ಸಿನಿಮಾದಲ್ಲಿ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದಲೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಎಂಬ ನಿಯತ್ತು ಮತ್ತು ಋಣ ಎಂಬುದು ಇರುತ್ತದೆ.

ಈ ಕಾರಣಕ್ಕಾಗಿಯೂ ಸಂದರ್ಶನಗಾರರು ಕೇಳಿದಂತಹ ಪ್ರಶ್ನೆಗೆ ಅವಕಾಶ ಸಿಕ್ಕರೆ ಮತ್ತೆ ನಟಿಸುತ್ತೇನೆ ಎಂಬ ಉತ್ತರವನ್ನು ನೀಡಬಹುದಿತ್ತು. ಆದರೆ ರಶ್ಮಿಕಾ ಮಂದಣ್ಣ ಅವರು ಮಾತ್ರ ದುರಹಂಕಾರ ತೋರಿಸಿದ್ದಾರೆ ಈ ಕಾರಣಕ್ಕಾಗಿ ಅವರು ಏನು ಮಾತನಾಡದೆ ಸುಮ್ಮನೆ ಮುಗುಳ್ನಕ್ಕಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವುದು ಬೇಡ ನಮ್ಮಲ್ಲಿ ಬಹುತೇಕ ಹೀರೋಯಿನ್ಗಳು ಇದ್ದಾರೆ ಅವರೇ ಸಾಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ರಶ್ಮಿಕಾ ಮಂದಣ್ಣ ಅವರು ಮುಂದಿನ ದಿನದಲ್ಲಿ ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕಾ ಅಥವಾ ಇಲ್ಲ ಎಂಬುದನ್ನು ನಮಗೆ ಕಾಮೆಂಟ್ ಮಾಡಿ.

Entertainment Tags:National crush, Rashmika, Rashmika Mandanna
WhatsApp Group Join Now
Telegram Group Join Now

Post navigation

Previous Post: ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮತ್ತೊಂದು ವಿಡಿಯೋ ವೈರಲ್, ಈ ಡ್ಯಾನ್ಸ್ ನೋಡಿ ಫಿದಾ ಆಗುವುದರಲ್ಲಿ ಎರಡು ಮಾತಿಲ್ಲ.
Next Post: ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore