Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಮಗುವಿನ ನಾಮಕರಣ ಕಾರ್ಯಕ್ರಮ, ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ.?

Posted on January 9, 2023 By Kannada Trend News No Comments on ಬಿಗ್ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಮಗುವಿನ ನಾಮಕರಣ ಕಾರ್ಯಕ್ರಮ, ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ.?

 

ಸಮೀರ್ ಆಚಾರ್ಯ ಅವರು ಖ್ಯಾತ ಜ್ಯೋತಿಷಿ. ಇವರು ಉದಯ ಟಿವಿ ಹಾಗೂ ಕಲರ್ಸ್ ಕನ್ನಡ ವಾಹಿನಿ ಮತ್ತು ಸುವರ್ಣ ಟಿವಿ ಮುಂತಾದ ವಾಹಿನಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ. ಇವರು ಈ ಕಾರ್ಯಕ್ರಮಗಳಿಗೆ ಬರುವ ಮುನ್ನವೇ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿದ್ದರು. ಬಿಗ್ ಬಾಸ್ ಆ ಸೀಸನ್ ಅಲ್ಲಿ ನಿವೇದಿತ ಗೌಡ, ಚಂದನ್ ಶೆಟ್ಟಿ ಹಾಗೂ ದಿವಾಕರ್ ಮತ್ತು ಸಮೀರ್ ಆಚಾರ್ಯ ಅವರು ಬಹಳ ಆತ್ಮೀಯರಾಗಿದ್ದರು.

ಈ ನಾಲ್ಕು ಜನರಂತೆ ಒಂದು ಗುಂಪು ಎಂದೆ ಮನೆಯ ಇತರ ಸದಸ್ಯರು ಮಾತನಾಡಿಕೊಳ್ಳುತ್ತಿದ್ದರು. ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಕೂಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಕಾಮನ್ ಪೀಪಲ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಇವರು ಈಗ ಕರ್ನಾಟಕದ ಒಬ್ಬ ಸೆಲೆಬ್ರಿಟಿ. ಇದಾದ ಬಳಿಕ ಅವರು ಅದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾದ ರಾಜರಾಣಿ ಸೀಸನ್ ಒಂದರಲ್ಲಿ ಕೂಡ ಕಂಟೆಸ್ಟೆಂಟ್ಗಳಾಗಿ ಭಾಗಿಯಾಗಿದ್ದರು.

ರಾಜ ರಾಣಿ ವೇದಿಕೆಯಲ್ಲಿ ಸಮೀರಾಚಾರ್ಯ ಹಾಗೂ ಶ್ರಾವಣಿ ದಂಪತಿಗಳ ಜೋಡಿಯನ್ನು ನೋಡುವುದೇ ಕಣ್ಣಿಗೆ ಆನಂದ. ಬಹಳ ಸಂಸ್ಕಾರವಂತ ಕುಟುಂಬದಿಂದ ಬಂದಿದ್ದ ಈ ದಂಪತಿಗಳು ಆಡುವ ಪ್ರತಿ ಮಾತು ನಡೆಯುತ್ತಿದ್ದ ನಡೆ-ನುಡಿ ಕರ್ನಾಟಕದ ಎಲ್ಲಾ ಜನರಿಗೂ ಇಷ್ಟವಾಗಿ ಎಲ್ಲರೂ ಇವರನ್ನು ಮೆಚ್ಚಿಕೊಂಡಿದ್ದರು. ಅದೇ ಸಮಯದಲ್ಲಿ ಒಂದು ಎಪಿಸೋಡ್ ಅಲ್ಲಿ ಇಬ್ಬರು ಸಹ ಮನದಲ್ಲಿರುವ ನೋವುಗಳನ್ನು ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಅಲ್ಲಿ ತಮಗೆ ಮಗು ಆಗದಿರುವ ಸಮಸ್ಯೆ ಬಗ್ಗೆ ದುಃಖ ತೋಡಿಕೊಂಡಿದ್ದರು ದಂಪತಿಗಳು. ಯಾಕೆಂದರೆ ಈಗಾಗಲೇ ಒಂದು ಮಗುವನ್ನು ಅವರು ಅದು ಕಣ್ಣು ಬಿಡುವ ಮುಂದೆ ಹೊಟ್ಟೆಯಲ್ಲಿಯೇ ಕಳೆದುಕೊಂಡಿದ್ದರು. ಅದಾದ ಬಳಿಕ ಎಷ್ಟು ವರ್ಷ ಆದರೂ ಕೂಡ ಮತ್ತೆ ಮಗು ಆಗಲಿಲ್ಲವಲ್ಲ ಎನ್ನುವ ವೇದನೆಯಲ್ಲಿ ಇದ್ದರು.

ಆ ಎಪಿಸೋಡ್ ನೋಡಿ ಅನೇಕ ಮಂದಿ ಕಣ್ಣೀರು ಇಟ್ಟಿದ್ದರು, ಇತರರು ಭಾವನಾತ್ಮಕವಾಗಿ ಕಣ್ತುಂಬಿಕೊಳ್ಳುವಂತೆ ಮಾಡಿದ್ದ ಈ ಎಪಿಸೋಡ್ ನೋಡಿ ದೇವರಿಗೂ ಮನಸು ಕರಗಿರಬೇಕು. ಈಗ ಅವರಿಬ್ಬರು ತಂದೆ ತಾಯಿ ಆಗಿರುವ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 13ರಂದು ಶ್ರಾವಣಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಮತ್ತು ಮಗುವನ್ನು ಸಹ ಕಲರ್ಸ್ ಕನ್ನಡದ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಗೆ ಕರೆತಂದು ಇದು ಎಲ್ಲವೂ ಅಂದು ನಮಗಾಗಿ ದೇವರಲ್ಲಿ ಕೇಳಿಕೊಂಡ ಎಲ್ಲರ ಆಶೀರ್ವಾದ ಎಂದು ಹೇಳಿ ಮಗುವಿಗೆ “ಸರ್ವಾರ್ಥ” ಎಂದು ಅರ್ಥಪೂರ್ಣವಾಗಿ ಹೆಸರು ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸರ್ವಾರ್ಥ ಅವರ ನಾಮಕರಣದ ವಿಡಿಯೋಗಳು ಹರಿದಾಡುತ್ತಿದ್ದು ಎಲ್ಲರೂ ಮಗುವಿನ ಹೆಸರು ಸ್ಪೆಷಲು ಹಾಗೂ ಸುಂದರವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶ್ರಾವಣಿ ಅವರು ಸಹ ಸಮೀರ್ ಅವರ ಕೈ ಹಿಡಿಯುವುದು ಮುಂಚೆ ನಿರೂಪಕಿ ಆಗಿ ಕೆಲಸ ಮಾಡಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಎನ್ನುವ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ದೇವರ ಆಶೀರ್ವಾದದಿಂದ ಇವರ ಕೋರಿಕೆ ನೆರವೇರಿದೆ ಇನ್ನು ಮುಂದೆಯೂ ಜೀವನಪೂರ್ತಿ ಇವರ ಕುಟುಂಬದವರೆಲ್ಲರೂ ಸಂತೋಷದಿಂದ ಇರಲಿ ಎಂದು ಹಾರೈಸೋಣ. ಸಮೀರ್ ಆಚಾರ್ಯ ದಂಪತಿ ಮಗುವಿನ ನಾಮಕರಣ ಶಸ್ತ್ರದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

https://youtu.be/-i5oOJIMLVw

Entertainment Tags:Shravani Sameer Acharya
WhatsApp Group Join Now
Telegram Group Join Now

Post navigation

Previous Post: ದರ್ಶನ್ ವಿರುದ್ಧ ಪಿತೂರಿ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಮುಖ್ಯಮಂತ್ರಿ ಚಂದ್ರ.
Next Post: ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore