Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

Posted on July 18, 2022 By Kannada Trend News No Comments on ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು ತಂದೆಗೆ ತಕ್ಕ ಮಕ್ಕಳಾಗಿ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಇಂದು ದೊಡ್ಮನೆಗೆ ಅದರದ್ದೇ ಆದ ವಿಶೇಷತೆಗಳಿದ್ದು ದೊಡ್ಮನೆಯ ಒಂದು ಕಂಬ ಮುರಿದು ಬಿದ್ದದ್ದು ಎಲ್ಲರಿಗೂ ದುಃ.ಖದ ಸಂಗತಿಯೇ ಸರಿ. ಆದರೆ ಅಪ್ಪುವಿನ ಕೊರತೆಯನ್ನು ನೀಗಿಸಲು ದೊಡ್ಮನೆಯ ಮತ್ತೊಂದು ಕುಡಿ ಸದ್ದಿಲ್ಲದೇ ಅದಾಗಲೇ ಹೆಜ್ಜೆ ಇಟ್ಟಾಗಿದೆ.

ಸಾಮಾನ್ಯವಾಗಿ ಚಿತ್ರ ತೆರೆಕಂಡ ನಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವುದು ಎಷ್ಟು ಕಷ್ಟವೆಂದು ಚಿತ್ರ ಮಾಡಿ ಅನುಭವಿಸಿದವರನ್ನು ಕೇಳಿದರೆ ತಿಳಿಯುತ್ತದೆ. ಆದರೆ ಇಲ್ಲೊಬ್ಬ ಒಂದೂ ಚಿತ್ರ ಬಿಡುಗಡೆಯಾಗದೆ ಅಭಿಮಾನಿಗಳನ್ನು ಗಿಟ್ಟಿಸಿಕೊಂಡು ಅಭಿಮಾನಿ ಬಳಗವನ್ನೇ ರಚಿಸಿದ್ದಾರೆ. ಹೌದು ದೊಡ್ಮನೆಯ ರಾಘಣ್ಣ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಅವರು ನಿಮಗೆಲ್ಲ ಗೊತ್ತೇ ಇದ್ದಾರೆ ಅಲ್ಲವೇ? ಇವರ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ ಬಿಡುಗಡೆಯಾಗಿ ಕನ್ನಡದಲ್ಲಷ್ಟೇ ಅಲ್ಲದೆ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್ ಅಪ್ಪು ಅವರು ಇದ್ದಾಗಲೇ ಬಿಡುಗಡೆ ಆಗಿತ್ತು 5 ನಿಮಿಷದ ಒಂದು ದೃಶ್ಯದಲ್ಲಿ ಯುವ ಅವರು ನಟನೆಯ ಎಲ್ಲಾ ಡೈಲಾಗ್ ಗಳನ್ನು ನಿರರ್ಗಳವಾಗಿ ಹೇಳುವುದಲ್ಲದೆ ತನಗೆ ಒದಗಿರುವ ಪಾತ್ರಕ್ಕೆ ತಕ್ಕ ಘನತೆಯನ್ನು ನೀಡಿದ್ದಾರೆ ಎನ್ನುವುದು ಈ ದೃಶ್ಯದಿಂದ ತಿಳಿಯುತ್ತದೆ.

ಕೇವಲ ಈ ದೃಶ್ಯದಿಂದಲೇ ಇವರಿಗೆ ಅಭಿಮಾನಿ ಬಳಗವೇ ಹರಿದು ಬಂದಿದೆ ಅಲ್ಲದೆ ಯುವ ರಣಧೀರ ಕಂಠೀರವ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಇವರ ನಟನೆಯನ್ನು ನೋಡಿ ಶಿವಣ್ಣ ಅವರು ನಮ್ಮ ತಂದೆಯ ಮಕ್ಕಳಾಗಿ ನಮಗೆ ತಂದೆಯಂತೆ ನಟನೆಯನ್ನು ಕಲಿಯಲು ಆಗಲಿಲ್ಲ ಆದರೆ ಮೊಮ್ಮಗನಾಗಿ ಯುವ ನಮ್ಮ ತಂದೆಗೆ ಘನತೆಯನ್ನು ತಂದಿದ್ದಾನೆ ಎಂದು ಹೇಳಿಕೊಂಡಿದ್ದರು. ಹೌದು ಅಣ್ಣಾವ್ರು ಹೇಗೆ ಇತಿಹಾಸ ಪ್ರಸಿದ್ದ ಚಿತ್ರಗಳಲ್ಲಿ ತಮ್ಮ ನಟನೆಯ ಚಾತುರ್ಯದಿಂದ ಮೋಡಿ ಮಾಡುತ್ತಿದ್ದರೋ ಅದೇ ರೀತಿ ಯುವ ರಣಧೀರ ಕಂಠೀರವ ಚಿತ್ರವು ಸಹ ಇತಿಹಾಸದ ಕಥೆಯಂತಿದ್ದು ಅದರಲ್ಲಿ ಯುವರಾಜ್ ಕುಮಾರ್ ತಮ್ಮ ಅತ್ಯುತ್ತಮ ನಟನ ಕೌಶಲ್ಯವನ್ನು ಮೆರೆದಿದ್ದಾರೆ. ಒಮ್ಮೆ ಶಿವಣ್ಣ ಅವರನ್ನು ಮಾಧ್ಯಮದವರು ಯುವರಾಜ್ ಕುಮಾರ್ ಅವರಿಗೆ ನೀವು ಯಾವ ರೀತಿ ಸಪೋರ್ಟ್ ಮಾಡುವಿರಿ ಎಂದು ಕೇಳಿದಾಗ ಉತ್ತರವಾಗಿ ಶಿವಣ್ಣ ನಾನು ಯಾವುದೇ ಸಲಹೆ ನೀಡುವುದಿಲ್ಲ ಎಂದು ಹೇಳುತ್ತಾರೆ.

ನಂತರ ಆಶ್ಚರ್ಯದಿಂದ ಯಾಕೆ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ಸೋಜಿಗವೆ ಸರಿ. ಪ್ರತಿಯೊಬ್ಬರಿಗೂ ಸ್ವಬುದ್ದಿ, ಸ್ವಕೌಶಲ ಇದ್ದೇ ಇರುತ್ತದೆ ನಾವು ಎಷ್ಟೇ ಸಲಹೆ ನೀಡಿದರೂ ಅವರ ಬುದ್ದಿಗೆ ತಕ್ಕಂತೆ ಮಾಡುತ್ತಿರುತ್ತಾರೆ ಅಲ್ಲವೇ? ಹಾಗೆಯೇ ಪ್ರತಿಯೊಬ್ಬರು ಕೂಡ ಶ್ರಮದಿಂದ ಮೇಲೆ ಬರಬೇಕು ಯುವರಾಜ್ ಕುಮಾರ್ ಕೂಡ ಹಾಗೆಯೇ ತನ್ನ ಟ್ಯಾಲೆಂಟ್ ಹಾಗೂ ಬುದ್ಧಿವಂತಿಕೆಯಿಂದ ಮೇಲೆ ಬರಲಿ ನಮ್ಮ ಸಹಕಾರದಿಂದಲ್ಲ ಎಂದು ಅರ್ಥಪೂರ್ಣವಾಗಿ ಉತ್ತರಿಸುತ್ತಾರೆ. ಅಲ್ಲದೇ ಯುವರಾಜ್ ಕುಮಾರ್ ಅವರ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಶಿವಣ್ಣ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Entertainment Tags:Shivanna, Shivarajkumar, Yuva, Yuvarajkumar
WhatsApp Group Join Now
Telegram Group Join Now

Post navigation

Previous Post: ಅರ್ಧಂಬರ್ಧ ಬಟ್ಟೆ ತೊಟ್ಟು ಜೋಶ್ ನಲ್ಲಿ ಅಭಿಮಾನಿಗಳ ನಡುವೆ ಕುಳಿತುಕೊಂಡು ಮುಜುಗರಕ್ಕೆ ಒಳಗಾದ ವೈರಲ್ ವಿಡಿಯೋ ನೋಡಿ, ಈಕೆಯ ಅವತಾರ ನೋಡಿ ನಿನಗೆ ಬೇಕಿತ್ತಾ ಮಗಳೇ ಎಂದ ನೆಟ್ಟಿಗರು.
Next Post: ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore