Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

Posted on May 30, 2024 By Kannada Trend News No Comments on ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

 

ಮನುಷ್ಯ ಎಂದ ಮೇಲೆ ಆತನಿಗೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜವೇ. ಮನುಷ್ಯ ಸಹಜವಾದ ನೂರಾರು ಬಗೆಯ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಲ್ಲೇ ಇರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಇದೆ. ಕೆಲವರಿಗೆ ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರದ ಈ ಕಾರಣಕ್ಕಾಗಿ ಮನೆಯ ಶಾಂತಿ ಹಾಳಾಗಿರುವ ಸಮಸ್ಯೆ ಇದ್ದರೆ.

ಇನ್ನು ಕೆಲವರಿಗೆ ಮಕ್ಕಳಿರುವುದಿಲ್ಲ ಅಥವಾ ಮಕ್ಕಳು ಒಳ್ಳೆಯ ಬುದ್ಧಿ ಕಲಿಯುತ್ತಿರುವುದಿಲ್ಲ ಹೇಳಿದ ಮಾತು ಕೇಳದಿರುವುದು, ವಿದ್ಯಾಭ್ಯಾಸ ಮುಗಿಸಿ ವರ್ಷಗಳಾದರೂ ಕೆಲಸ ಸಿಗದಿರುವುದು, ಕಂಕಣ ಭಾಗ್ಯ ಇಲ್ಲದೆ ಇರುವುದು, ಆರೋಗ್ಯ ಸರಿ ಇಲ್ಲದಿರುವುದು, ಹಣಕಾಸಿನ ತೊಂದರೆ, ಸಾಲದ ಸುಳಿಯಲ್ಲಿ ಸಿಲುಕಿ ನರಳುವುದು ಹೀಗೆ ಯಾರನ್ನು ಬಿಡದಂತೆ ಸಮಸ್ಯೆಗಳು ಒಂದಲ್ಲ ಒಂದು ರೀತಿಯಾಗಿ ಕಾಡುತ್ತಾ ಇರುತ್ತವೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

ಕೆಲವರು ಇವುಗಳನ್ನು ಬಹಳ ಧೈರ್ಯದಿಂದ ತೆಗೆದುಕೊಂಡು ಮುನ್ನುಗ್ಗುತ್ತಾರೆ ಮತ್ತು ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ನೀನು ನಡೆಸಿದಂತೆ ಎಂದು ಎಲ್ಲವನ್ನು ಅವನೆದುರು ವರದಿ ಒಪ್ಪಿಸಿ ಅವನ ಅಣತಿ ಎನ್ನುವಂತೆ ಬದುಕು ಮಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಇಷ್ಟು ಧೈರ್ಯವೂ ಇರುವುದಿಲ್ಲ ಆಕಾಶವೇ ತಲೆ ಮೇಲೆ ಬಿದ್ದಂತಾಗಿ ಬದುಕುವ ಉತ್ಸಾಹವನ್ನು ಕಳೆದುಕೊಂಡು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುತ್ತಾರೆ.

ನಿಮ್ಮ ಜೀವನದಲ್ಲಿ ಇದೇ ರೀತಿ ಯಾವುದೋ ಒಂದು ಸಮಸ್ಯೆ ಬಂದು ನಿಮ್ಮ ಬದುಕನ್ನು ಅರ್ಥಹೀನವಾಗಿ ಮಾಡುತ್ತಿದೆ ನಿಮ್ಮಲ್ಲಿ ಚೈತನ್ಯವನ್ನೇ ಕಳೆದಿದೆ ಎನ್ನುವದಾದರೆ ಮತ್ತೆ ನೀವು ಭಗವಂತನ ಆಶೀರ್ವಾದದಿಂದ ಚೇತರಿಸಿಕೊಳ್ಳಲು ಭಗವಂತನ ಮೊರೆ ಹೋಗಲೇಬೇಕು. ಹಿಂದಿನ ಕಾಲದಲ್ಲಿ ಯಜ್ಞ-ಯಾಗ ಮಂತ್ರ-ಪೂಜೆಗಳ ಮೂಲಕವಾಗಿ ಭಗವಂತನನ್ನು ಒಲಿಸಿಕೊಳ್ಳಲಾಗುತ್ತಿತ್ತು.

ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

ಆದರೆ ಈಗಿನ ಕಾಲದಲ್ಲಿ ನಿಷ್ಕಲ್ಮಶವಾದ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಸಾಕು ಅಷ್ಟೂ ಭಾಗ್ಯವು ಒದಗಿ ಬರುತ್ತದೆ, ಭಗವಂತನೇ ಕೈಹಿಡಿದು ನಡೆಸುತ್ತಾನೆ. ಈ ಕಲಿಗಾಲದಲ್ಲಿ ಅತಿ ಹೆಚ್ಚು ಜನರು ಪೂಜಿಸುವಂತಹ ಶ್ರೀ ರಾಮನು ಒಬ್ಬ ಆದರ್ಶ ಪುರುಷನಾಗಿ ನಮ್ಮೆಲ್ಲರಿಗೂ ಉದಾಹರಣೆಯಾಗಿದ್ದಾನೆ.

ನಿಮಗೂ ಕೂಡ ನಿಮ್ಮ ಮಕ್ಕಳು ಶ್ರೀ ರಾಮನಂತೆ ಆದರ್ಶ ಗುಣಗಳನ್ನು ಬೆಳಸಿಕೊಳ್ಳಬೇಕು, ಪತಿಯು ಶ್ರೀರಾಮನಂತೆ ಪ್ರಾಮಾಣಿಕನಾಗಿರಬೇಕು ಅಥವಾ ರಾಮನಂತಹ ಆಡಳಿತ ವ್ಯವಸ್ಥೆ ನಿಮ್ಮ ಕುಟುಂಬದೊಳಗೆ ಬಂದು ಕುಟುಂಬದಲ್ಲಿ ನೆಮ್ಮದಿ ಇರಬೇಕು ಎಂದರೆ ಪ್ರತಿನಿತ್ಯ ಶ್ರೀ ರಾಮನ ಕನಿಷ್ಠ ಈ ಮೂರು ಮಂತ್ರಗಳಲ್ಲಿ ಒಂದನ್ನಾದರೂ ಹೇಳುತ್ತಾ ರಾಮನ ನಾಮ ಸ್ಮರಣೆ ಮಾಡಬೇಕು. ಈ ಮಂತ್ರಗಳನ್ನು ಹೇಳಿ ಶ್ರೀ ಸೀತಾ ಮಾತೆ ಸಮೇತ ಶ್ರೀ ರಾಮ ಹಾಗೂ ಆಂಜನೇಯನನ್ನು ನೆನೆಸಿಕೊಳ್ಳಿ ನಂತರ ಬದುಕಿನಲ್ಲಿ ಆಗುವ ಆಶ್ಚರ್ಯಗಳನ್ನು ನೀವೇ ನೋಡಿ.

ಈ ಸುದ್ದಿ ಓದಿ:- ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

1. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ಭೇದಸೇ
ರಘು ನಾಥಾಯ, ನಾಥಾಯ ಸೀತಾಯ ಪತಯೇ ನಮಃ

2. ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ
ಸಹಕ್ರ ನಾಮ ತತ್ಯುಲಂ, ರಾಮ ನಾಮ ವರಾನನೇ.

3. ಆಪಧಾಮಪ ಹತ್ತಾರಂ ಸರ್ವಸಂಪಂಧಂ
ಲೊಕೋಭಿ ರಾಮಂ ಶ್ರೀರಾಮಂಕುಯ್ಯೋ ಕುಯ್ಯೋ ನಮಾಃಮ್ಯಹಂ

ಇವು ಶ್ರೀ ರಾಮರಕ್ಷಾ ಹಾಗೂ ವಿಷ್ಣು ಸಹಸ್ರನಾಮದಲ್ಲಿ ಬರುವಂತಹ ಸಾಲುಗಳಾಗಿವೆ. ಇವುಗಳಿಗೆ ಎಷ್ಟು ಶಕ್ತಿ ಇದೆ ಎನ್ನುವುದು ಇವುಗಳನ್ನು ಪಟನೆ ಮಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಆದರೆ ಪೂರ್ಣವಾದ ನಂಬಿಕೆಯಿಂದ ಶ್ರೀ ರಾಮನ ಮೇಲೆ ಭರವಸೆ ಇಟ್ಟು ಇವುಗಳನ್ನು ಪಠಿಸಿ ನೋಡಿ ನಂತರ ನೀವೇ ನಿಮ್ಮ ಸ್ನೇಹಿತರಿಗೂ ಕೂಡ ಈ ಪರಿಹಾರದ ಬಗ್ಗೆ ತಿಳಿಸುತ್ತೀರಿ.

Useful Information
WhatsApp Group Join Now
Telegram Group Join Now

Post navigation

Previous Post: ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!
Next Post: ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore