Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

Posted on March 31, 2024 By Kannada Trend News No Comments on ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

 

ಸ್ವಂತ ಮನೆ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಯಾಕೆಂದರೆ ನಾವು ನಮ್ಮ ಮನೆಯಲ್ಲಿ ಬದುಕುತ್ತಿದ್ದೇವೆ ಎಂದರೆ ಆಗ ಮನಸನ್ನಲ್ಲಿ ಬರುವ ಧೈರ್ಯವೇ ಬೇರೆ, ಇಲ್ಲವಾದಲ್ಲಿ ನಮ್ಮ ದಿನನಿತ್ಯದ ಖರ್ಚು ಹೆಚ್ಚಾಗುತ್ತದೆ ದುಡಿದ ಹಣದಲ್ಲಿ ಬಾಡಿಗೆಗಾಗಿ ಹೆಚ್ಚು ಹಣ ನೀಡಬೇಕು ಮತ್ತು ಹೀಗೆ ಒಂದು ರೀತಿಯ ಅಭದ್ರತೆ ಅವರನ್ನು ಕಾಡುತ್ತಿರುತ್ತದೆ.

ಅದು ನಮ್ಮ ಮನೆ ಅಲ್ಲದೇ ಇರುವುದರಿಂದ ನಮಗೆ ಇಷ್ಟ ಬಂದ ಹಾಗೆ ಇರಲು ಆಗುವುದಿಲ್ಲ, ಬಾಡಿಗೆ ಕೊಟ್ಟಿದ ಮಾಲೀಕರು ಯಾವ ಸಮಯದಲ್ಲಿ ಆದರೂ ಹೇಳಿ ಖಾಲಿ ಮಾಡಿಸಬಹುದಾದ ಸಾಧ್ಯತೆ ಇರುವುದರಿಂದ ಒಂದು ರೀತಿ ಟೆನ್ಶನ್ ನಲ್ಲಿಯೇ ಬದುಕುತ್ತಿರುತ್ತೇವೆ ಎನ್ನಬಹುದು.

ಈ ಎಲ್ಲ ಕಾರಣಗಳಿಂದ ಬದುಕಿನಲ್ಲಿ ಒಂದು ಹಂತಕ್ಕೆ ಬರುತ್ತಿದ್ದಂತೆ ಪ್ರತಿಯೊಬ್ಬರ ಟಾರ್ಗೆಟ್ ಸ್ವಂತ ಮನೆ ಹೊಂದುವುದು ಆಗಿರುತ್ತದೆ. ಈಗ ಸರ್ಕಾರ ಕೂಡ ಪ್ರತಿ ಕುಟುಂಬವು ತನ್ನ ಸಂತಸೂರಿನಲ್ಲಿ ವಾಸಿಸುವಂತೆ ಆಗಲಿ ಎಂಬ ಕಾರಣಕ್ಕಾಗಿ ಹಲವಾರು ಯೋಜನೆಗಳ ನೆರವು ನೀಡುತ್ತಿದೆ.

ನಮಗೆ ಇಷ್ಟೆಲ್ಲ ಅನುಕೂಲತೆ ಇದ್ದರೂ ನಮ್ಮ ಯೋಗದಲ್ಲಿ ಗುರುಬಲ ಇಲ್ಲದೆ ಇದ್ದರೆ ಈ ರೀತಿ ಯಾವುದೇ ಕಾರ್ಯವೂ ಕೈಗೂಡುವುದಿಲ್ಲ ಮನಸಲ್ಲಿ ಎಷ್ಟೇ ಆಸೆ ಇದ್ದರೂ ಬದುಕಿನಲ್ಲಿ ಮನೆ ಎನ್ನುವ ಯೋಚನೆ ಬಹಳ ದೂರದಲ್ಲಿರುತ್ತದೆ ಮತ್ತು ಕೆಲವೊಮ್ಮೆ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಮನೆ ಕಟ್ಟಲು ಹಣ ಹೊಂದಾಣಿಕೆ ಆಗಿದ್ದರು ಅಥವಾ ಎಲ್ಲ ಸಿದ್ಧತೆ ಆಗಿದ್ದರು ಆರಂಭಿಸಲು ಆಗುವುದಿಲ್ಲ ಅಥವಾ ಒಂದಷ್ಟು ದಿನ ಕೆಲಸ ನಡೆದು ನಿಂತು ಹೋಗಿರುತ್ತದೆ.

ಒಟ್ಟಾರೆಯಾಗಿ ನಮ್ಮ ಸ್ವಂತ ಮನೆ ಕನಸು ಕನಸಾಗಿಯೇ ಉಳಿದು ಹೋಗಿರುತ್ತದೆ. ಇಂತಹ ಸಮಯದಲ್ಲಿ ನಾವು ಹೇಳುವ ಒಂದು ಸುಲಭ ಉಪಾಯ ಮಾಡುವುದರಿಂದ ನಿಮ್ಮ ಎಲ್ಲ ರೀತಿಯ ತೊಂದರೆಗಳು ನಿವಾರಣೆಯಾಗಿ ಸ್ವಂತ ಮನೆ ಕನಸು ನನಸಾಗುತ್ತದೆ.

ನೀವು ಶ್ರದ್ಧಾ ಭಕ್ತಿಯಿಂದ ಪ್ರತಿ ಗುರುವಾರ ನಾವು ಹೇಳುವಂತೆ ಸರಳ ಆಚರಣೆ ಮಾಡಿದರೆ ಸಾಕು ನಿಮ್ಮ ದೋಷಗಳು ನಿವಾರಣೆಯಾಗಿ ಗುರುಬಲದಿಂದ ಸ್ವಂತ ಮನೆ ಕನಸು ನೆರವೇರುತ್ತದೆ. ಎಲ್ಲಾ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆದು ನೀವು ಕೂಡ ನಿಮ್ಮ ಇಷ್ಟದ ಪ್ರಕಾರ ನಿಮ್ಮ ಪರಿವಾರದೊಂದಿಗೆ ನೀವು ಕಟ್ಟಿಸಿದ ಮನೆಯಲ್ಲಿ ವಾಸಿಸುವ ಯೋಗ ಬರುತ್ತದೆ.

ಇದನ್ನು ಗುರುವಾರದಂದು ಮಾತ್ರ ಮಾಡಬೇಕು. ಗುರುವಿನ ಬಲ ವೃದ್ಧಿಸುವುದಕ್ಕಾಗಿ ಮಾಡುತ್ತಿರುವುದರಿಂದ ಗುರುವಾರ ಸೂಕ್ತ ದಿನ. ಜೊತೆಗೆ ಗುರು ರಾಘವೇಂದ್ರ, ಸಾಯಿಬಾಬಾ, ದತ್ತಾತ್ರೇಯರು ಈ ರೀತಿ ಗುರು ಸ್ವರೂಪದಲ್ಲಿರುವವರ ಸನ್ನಿಧಾನದಲ್ಲಿ ಈ ಆಚರಣೆ ಮಾಡುವುದು ಇನ್ನೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಗುರುವಾರದಂದು ಸ್ನಾನ ಮಾಡಿ ಮಡಿಯುಟ್ಟು ದೇವರ ಕೋಣೆಯಲ್ಲಿ ದೀಪ ಹಚ್ಚಿ ನಿಮ್ಮ ಮನೆಯಲ್ಲಿ ಸಾಯಿಬಾಬಾ ಫೋಟೋ ಇದ್ದರೆ ಸಾಯಿಬಾಬಾ ಫೋಟೋ ಮುಂದೆ ಕುಳಿತು ಈ ಆಚರಣೆ ಮಾಡಿ ಇಲ್ಲವಾದರೆ ಹತ್ತಿರದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಹೋಗಿ ಈ ಆಚರಣೆ ಮಾಡಿ.

ಶುದ್ಧ ಗಂಗಾಜಲದೊಂದಿಗೆ ಸ್ವಲ್ಪ ಅರಿಶಿನವನ್ನು ಚೆನ್ನಾಗಿ ಮಿಕ್ಸ್ ಮಾಡಿ ಐದು ಉಂಡೆಗಳಾಗಿ ಮಾಡಿಕೊಳ್ಳಿ ಎರಡು ಎಲೆ ಅಡಿಕೆ ಮೇಲೆ ಈ ಉಂಡೆಗಳನ್ನು ಇಟ್ಟು ಅದರ ಮೇಲೆ 11 ರೂಪಾಯಿ ಇಟ್ಟು ಹಸಿರು ಬಣ್ಣದ ವಸ್ತ್ರದಲ್ಲಿ ಇದನ್ನು ಕಟ್ಟಿ ನಂತರ ನೀವು ಸ್ವಂತ ಮನೆ ಕನಸು ನನಸಾಗಬೇಕು ಎನ್ನುವ ಸಂಕಲ್ಪವನ್ನು ಈ ಗಂಟನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಹೇಳಿಕೊಳ್ಳಬೇಕು‌.

ಮತ್ತು ಇದಾದ ಬಳಿಕ ಧೂಪ ದೀಪ ನೈವೇದ್ಯ ಅರ್ಪಿಸಿ ಸಾಯಿಬಾಬಾ ಶತನಾಮಾವಳಿ ಸ್ತೋತ್ರ ಪಟಿಸಿ ಓಂ ಸಿದ್ದಿ ಸಂಕಲ್ಪಾಯ ನಮಃ ಮಂತ್ರವನ್ನು ಕೂಡ ನಿಮ್ಮ ಶಕ್ತಿಯನುಸಾರ ಮನಸ್ಸಿನಲ್ಲಿ ಪಠಿಸಬೇಕು. ಹೀಗೆ ಮಾಡುವುದರಿಂದ ಗುರು ಬಲದೊರೆತು ಸಮಸ್ಯೆ ಪರಿಹಾರವಾಗುತ್ತದೆ ಅನಿರೀಕ್ಷಿತ ಧನ ಲಾಭದಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ತೀರುತ್ತವೆ.

Useful Information
WhatsApp Group Join Now
Telegram Group Join Now

Post navigation

Previous Post: ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!
Next Post: ತೂತಾದ ಬಟ್ಟೆಯನ್ನು ಕೇವಲ ಒಂದು ನಿಮಿಷದಲ್ಲಿ ಒಂದು ಚೂರು ವ್ಯತ್ಯಾಸ ಗೊತ್ತಾಗದಂತೆ ರಿಪೇರಿ ಮಾಡಬಹುದು ಹೇಗೆ ಅಂತ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore