Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

Posted on April 25, 2024 By Kannada Trend News No Comments on ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

 

ನಮಗೆ ಕಷ್ಟಗಳು ಬಂದಾಗ ಕಷ್ಟಗಳನ್ನು ನಿವಾರಿಸಲು ದೇವಸ್ಥಾನಕ್ಕೆ ತೆರಳಿ ದೇವರಿಗೆ ಹರಕೆಗಳನ್ನು ಹೊರುತ್ತೇವೆ ಅಥವಾ ಮನೆ ದೇವರಿಗೆ ಹರಕೆಯನ್ನು ಹೊರುತ್ತೇವೆ, ಕಷ್ಟಗಳು ತೀರಿದ ನಂತರ ಹರಕೆಯನ್ನು ತೀರಿಸದೇ ಮರೆತುಬಿಡುತ್ತೇವೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಾವು ಮಾಡುವ ಕೆಲಸಗಳಿಗೆ ಅಡಚಣೆ ಉಂಟಾಗುತ್ತದೆ.

* ನಿಮ್ಮ ಮನೆ ದೇವರಿಗೆ ಹರಿಕೆಯನ್ನು ಹೊತ್ತಲ್ಲಿ ಮೊದಲು ನಿಮ್ಮ ಮನೆದೇವರಿಗೆ ಹರಿಕೆಯನ್ನು ತೀರಿಸಿ.
* ನೀವು ದೇವರಲ್ಲಿ ಹರಿಕೆ ಹೊರುವ ಮುನ್ನ ನಿಮಗೆ ಹರಿಕೆ ತೀರಿಸಲು ಸಾಧ್ಯ ಆಗುವುದಾದರೆ ಮಾತ್ರ ಅಂತಹವುದನ್ನು ಹರಿಕೆಯನ್ನು ಮಾಡಿಕೊಳ್ಳಿ.
* ನೀವು ದೇವರಲ್ಲಿ ಹರಿಕೆಯನ್ನು ಹೊತ್ತ ನಂತರ ಅದನ್ನು ಒಂದು ಪುಸ್ತಕದಲ್ಲಿ ಬರೆದು ದೇವರ ಮನೆಯಲ್ಲಿ ಇಡಿ.

ಈ ಸುದ್ದಿ ಓದಿ:-ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ನೀವು ಯಾರಿಗಾದರೂ ಅನಾರೋಗ್ಯದ ಸಮಸ್ಯೆಗೆ ಹರಿಕೆಯನ್ನು ಹೊತ್ತಿದ್ದರೆ, ನೀವು ಹರಿಕೆಯನ್ನು ತೀರಿಸದೆ ಹೋದರೆ ಅವರಿಗೆ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುವುದು.
* ನೀವು ಯಾವುದಾದರೂ ದೇವರುಗಳಿಗೆ ಮುಡುಪನ್ನು ಕಟ್ಟಿ ಮರೆತಿದ್ದೀ ರವಾದರೆ ಹರಿಯುವ ನೀರಿನಲ್ಲಿ ಅಥವಾ ಬಾವಿಯಲ್ಲಿ ಅದನ್ನು ಬಿಟ್ಟು ಈ ಮುಡುಪು ಕಟ್ಟಿರುವ ದೇವರಿಗೆ ಸೇರಲಿ ಎಂದು ಕೈ ಮುಗಿದು ಪ್ರಾರ್ಥನೆಯನ್ನು ಸಲ್ಲಿಸಿ.

* ನೀವು ಕೆಲಸ ಸಿಗಲಿ ಎಂದು ಹರಿಕೆ ಹೊತ್ತಿದ್ದರೆ ಕೆಲಸ ಸಿಕ್ಕ ನಂತರ ಹರಿಕೆ ತೀರಿಸದೆ ಹೋದರೆ ಕೆಲಸದಲ್ಲಿ ಕಿರಿಕಿರಿ ಸಂಬಳ ಸರಿಯಾಗಿ ಕೊಡದಿರುವುದು, ಕೆಲಸದ ಸ್ಥಳದಲ್ಲಿ ಯಜಮಾನನ ಕಿರುಕುಳ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
* ನೀವು ಮನೆ ಕಟ್ಟಲು ಏನಾದರೂ ಹರಿಕೆಯನ್ನು ಹೊತ್ತಿದ್ದರೆ ಅದನ್ನು ತೀರಿಸದಿದ್ದರೆ ಮನೆಯು ಪೂರ್ಣವಾಗದೆ ಅಡಚಣೆಯುಂಟಾಗುವುದು. ನೀವು ಮನೆಯನ್ನು ಕಟ್ಟಿದ ನಂತರವೂ ಸಹ ಮನೆಯಿಂದ ಏನಾದರೂ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:-ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

* ಒಂದು ವೇಳೆ ನಮ್ಮ ಹಿರಿಯರು ಹೊತ್ತ ಹರಿಕೆಯನ್ನು ಅವರ ಮಕ್ಕಳು ಅಥವಾ ಮೊಮ್ಮೊಕ್ಕಳು ತೀರಿಸಬಹುದಾಗಿರುತ್ತದೆ. ಇದರಿಂದ ನಮ್ಮ ಹಿರಿಯರಿಗೂ ದೋಷಗಳು ಹೊರಟುಹೋಗಿ ನಮಗೂ ಸಹ ದೈವ ಶಾಪದಿಂದ ಮುಕ್ತಿ ದೊರೆಯುತ್ತದೆ.
* ನೀವು ಮುಡುಪನ್ನು ಯಾವ ದೇವರಿಗೆ ಕಟ್ಟಿರುತ್ತೀರಿ ಎಂದು ಕೆಲವು ದಿನಗಳ ನಂತರ ಮರೆತು ಹೋಗುತ್ತೀರಿ ಹೀಗೆ ಆಗದಿರಲು ಒಂದು ಡಬ್ಬಿಯಲ್ಲಿ ಅದನ್ನು ಇಟ್ಟು ಒಂದು ಸಣ್ಣ ಚೀಟಿಯಲ್ಲಿ ಯಾವ ದೇವರಿಗೆ ಏತಕ್ಕಾಗಿ ಮುಡುಪನ್ನು ಕಟ್ಟಿರುತ್ತೀರ ಎಂದು ವಿವರವಾಗಿ ಬರೆದು ಡಬ್ಬಿಯಲ್ಲಿ ಇಡಿ.

* ಕಷ್ಟಗಳು ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ತಂದೆ, ತಾಯಿ ಅಥವಾ ಅಜ್ಜ ಅಜ್ಜಿಯರೇನಾದರು ಹರಿಕೆ ಹೊತ್ತಿದ್ದರೆ ಅವರು ಇಲ್ಲದಿದ್ದರೆ,ನೀವು ಹೀಗೆ ಮಾಡಿ ಮನೆಯನ್ನು ಸ್ವಚ್ಚಗೊಳಿಸಿ ಸಾಯಂಕಾಲ ಗೋಧೂಳಿ ಸಮಯ ದಲ್ಲಿ ದೇವರಲ್ಲಿ ನಮ್ಮ ತಂದೆ ತಾಯಂದಿರು ಯಾವದೇವರಿಗೆ ಹರಿಕೆ ಯನ್ನು ಹೊತ್ತಿದ್ದಾರೋ ಅವರು ಮರೆತಿರುತ್ತಾರೆ ಆದ್ದರಿಂದ ಅವರನ್ನು ಕ್ಷಮಿಸಿ ನಮಗೆ ಕಷ್ಟಗಳು ಎದುರಾಗದಂತೆ ನಮ್ಮನ್ನು ಕಾಪಾಡಿ ಎಂದು ಪ್ರಾರ್ಥಿಸಿದಲ್ಲಿ ಅದರ ದೋಷ ನಿವಾರಣೆಯಾಗುತ್ತದೆ.

ಈ ಸುದ್ದಿ ಓದಿ:-ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ನಿಮ್ಮ ಕಷ್ಟದ ಸಂದರ್ಭದಲ್ಲೂ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಆ ಪರಿಹಾರ ಮಾಡುವುದರ ಮೂಲಕ ನಿಮ್ಮ ಕಷ್ಟದ ಪರಿಸ್ಥಿತಿಗಳನ್ನು ದೂರ ಮಾಡಿ ಕೊಳ್ಳುವುದು ಒಳ್ಳೆಯದು ಇಲ್ಲವಾದರೆ ಮೇಲೆ ಹೇಳಿದಂತೆ ಇನ್ನೂ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಉತ್ತಮವಾದ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು.

 

Useful Information
WhatsApp Group Join Now
Telegram Group Join Now

Post navigation

Previous Post: ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!
Next Post: ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore