Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…

Posted on June 16, 2023 By Kannada Trend News No Comments on ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…

 

ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮೌಲ್ಯವೇ ಹೊರಟು ಹೋಗಿದೆ ಎನ್ನುವ ರೀತಿ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಸಿಗುತ್ತಿವೆ. ಹೆತ್ತ ಮಕ್ಕಳು ಹಾಗೂ ಪೋಷಕರ ನಡುವೆ ಅಂತದ್ದೊಂದು ಭಾವನಾತ್ಮಕ ಸಂಬಂಧ ಕಳೆದು ಹೋಗಿ ಒಬ್ಬರಿಗೊಬ್ಬರು ಶತ್ರುಗಳ ರೀತಿ ವರ್ತಿಸಿರುವ ಉದಾಹರಣೆಗಳನ್ನು ಕಂಡಿದ್ದೇವೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಎಲ್ಲರೂ ಇಂದು ಈ ತಂದೆ ಮಗಳ ಸಂಬಂಧದ ಬಗ್ಗೆ ಮಾತನಾಡುವ ರೀತಿ ಮಾಡಿದೆ.

ಬೆಂಗಳೂರಿನಲ್ಲಿ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್ ತಮ್ಮಿಂದ ಮಗಳಿಗೆ ಕ್ಯಾನ್ಸರ್ ಬಂದಿದೆ ಅವಳು ಆರೋಗ್ಯವಾಗಿರಬೇಕು ಎಂದರೆ ತಾವು ಸಾ’ಯಬೇಕು ಎಂದುಕೊಂಡು ನೇ’ಣಿ’ಗೆ ಶರಣಾಗಿ ಹೋಗಿದ್ದಾರೆ. ಈ ಘಟನೆಯ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಧಾರವಾಡ ಜಿಲ್ಲೆಯ ಚೆನ್ನಗಿರಿ ಮೂಲದ ಕುಮಾರ್ ಎನ್ನುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬೆಂಗಳೂರಿನ ಡೈರಿ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈಗ ಹೆಡ್ ಕಾನ್ಸೇಬಲ್ ಆಗಿ ಕೂಡ ಬಡ್ತಿ ಪಡೆದಿದ್ದ ಇವರು ಡೈರಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ ಅಲ್ಲಿಯೇ ಕುಟುಂಬದ ಜೊತೆ ವಾಸ್ತವ್ಯ ಹೂಡಿದ್ದರು. ಹಲವು ದಿನಗಳಿಂದ ಇವರನ್ನು ಕ್ಯಾನ್ಸರ್ ಎನ್ನುವ ಮಾ’ರ’ಣಾಂ’ತಿ’ಕ ಕಾಯಿಲೆ ಕಾಡುತ್ತಿತ್ತು. ಇದರ ಚಿಕಿತ್ಸೆಗಾಗಿ ಹಲವು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯ ನಡುವೆ ಕರ್ತವ್ಯವನ್ನು ಕೂಡ ಪಾಲಿಸುತ್ತಿದ್ದ ಇವರಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿ ಮಾನಸಿಕವಾಗಿ ಕುಗ್ಗಿಸಿತ್ತು.

ಆದರೂ ಕೂಡ ಕುಟುಂಬಕ್ಕಾಗಿ ಚೇತರಿಸಿಕೊಂಡು ಬದುಕಬೇಕು ಎನ್ನುವ ಆಸೆ ಹೊಂದಿದ್ದ ಇವರಿಗೆ ಮತ್ತೊಂದು ರೀತಿಯ ಶಾ’ಕ್ ಎದುರಾಯಿತು. ಅದೇನೆಂದರೆ, ಇವರ ಮಗಳಿಗೂ ಕೂಡ ಕ್ಯಾನ್ಸರ್ ಇರುವುದು ಪತ್ತೆ ಆಯಿತು. ಇವರ ಮಗಳಿಗೆ ಕ್ಯಾನ್ಸರ್ ಸ್ಟಾರ್ಟಿಂಗ್ ಸ್ಟೇಜ್ ಅಲ್ಲಿ ಇತ್ತು ಅದಕ್ಕೂ ಕೂಡ ಚಿಕಿತ್ಸೆ ಕೊಡಿಸುತ್ತಿದ್ದರು. ಮಗಳು ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿಸುತ್ತಿದ್ದರು.

ಆದರೆ ಮೊದಲೇ ಕ್ಯಾನ್ಸರ್ ಕಾಯಿಲೆಯಿಂದ ಹೈರಣಾಗಿ ಹೋಗಿದ್ದ ಇವರು ತಮ್ಮಿಂದಲೇ ತಮ್ಮ ಮಗಳಿಗೆ ಕ್ಯಾನ್ಸರ್ ಬಂದಿದೆ ಎಂದು ತಪ್ಪು ಭಾವಿಸಿದ್ದಾರೆ. ಕ್ಯಾನ್ಸರ್ ಎನ್ನುವುದು ಒಬ್ಬರಿಗಿಂದ ಒಬ್ಬರಿಗೆ ಹರಡುವ ಕಾಯಿಲೆ ಅಲ್ಲ ಆದರೆ ಇದು ಹೆರಿಡಿಟಿ ಕಾಯಿಲೆ ಆಗಿದೆ. ಅಂದರೆ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅವರ ಮುಂದಿನ ಪೀಳಿಗೆಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಆದರೂ ಕೂಡ ಕುಮಾರ್ ಅವರ ಮಕ್ಕಳಿಗೆ ಚಾಟಿಂಗ್ ಸ್ಟೇಜ್ ಇದ್ದ ಕಾರಣ ಚಿಕಿತ್ಸೆ ತೆಗೆದುಕೊಂಡು ಇದರಿಂದ ಹೊರ ಬರಬಹುದಿತ್ತು. ಆದರೆ ಅವರ ಮನದಲ್ಲಿ ಮೂಡಿದ ಒಂದು ತಪ್ಪು ಕಲ್ಪನೆ ಇಂದು ಅವರು ಇಹಲೋಕವನ್ನು ಬಿಟ್ಟು, ಮುದ್ದು ಮಗಳನ್ನು ಬಿಟ್ಟು ಹೋಗುವಂತೆ ಮಾಡಿದೆ. ನನ್ನಿಂದಲೇ ನನ್ನ ಮಗಳಿಗೆ ಕ್ಯಾನ್ಸರ್ ಬಂದಿದೆ ಈಗ ನನ್ನ ಮಗಳು ಗುಣವಾಗುತ್ತಿದ್ದಾಳೆ ಅವಳು ಚೆನ್ನಾಗಿರಬೇಕು ಎಂದರೆ ಕ್ಯಾನ್ಸರ್ ಇಂದ ಬಳಲುತ್ತಿರುವ ನಾನು ಅವಳ ಎದುರಿಗೆ ಇರಬಾರದು ಆದ್ದರಿಂದ ಎಲ್ಲರೂ ಬಿಟ್ಟು ಹೋಗುತ್ತಿದ್ದೇನೆ ಎಂದು ನೇಣಿಗೆ ಶರಣಾಗಿ ಕುಟುಂಬದಿಂದ ಶಾಶ್ವತವಾಗಿ ದೂರವಾಗಿದ್ದಾರೆ ಕುಮಾರ್ ಅವರು.

ಪ್ರತಿನಿತ್ಯ ಕೂಡ ಸಂಬಂಧಗಳ ಬಗ್ಗೆ ಹಳಸಿದ ಸುದ್ದಿಯನ್ನು ಕೇಳಿ ಬೇಸರಿಸಿಕೊಂಡಿದ್ದ ಜನತೆ ಈ ತಂದೆ ಮಗಳ ಬಾಂಧವ್ಯ ನೋಡಿ ಕಣ್ಣೀರಿಟ್ಟಿದ್ದಾರೆ. ಸಾ.ವಿನಲ್ಲೂ ಕೂಡ ಸಾರ್ಥಕತೆ ಮೆರೆಯಲು ಬಯಸಿದ್ದ ಇವರು ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದು ಮೊದಲೇ ಸೂಚಿಸಿದ್ದ ಕಾರಣ ಕುಟುಂಬ ಇವರ ಕಣ್ಣುಗಳನ್ನು ದಾನ ಮಾಡಿದೆ. ಆದರೆ ಒಂದು ತಪ್ಪು ಆಲೋಚನೆಯಿಂದ ಬಾರದ ಲೋಕಕ್ಕೆ ಕುಮಾರ್ ಅವರು ಹೊರಟು ಬಿಟ್ಟಿದ್ದಾರೆ.

Public Vishya
WhatsApp Group Join Now
Telegram Group Join Now

Post navigation

Previous Post: ಒಂದು ಶಿವಲಿಂಗದಲ್ಲಿ 350 ಮುಖಗಳು. ಈ ಅದ್ಭುತ ದೇವಲಾಯದ ಬಗ್ಗೆ ನೀವು ತಿಳಿಯಲೇಬೇಕು.!
Next Post: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore