Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?

Posted on June 3, 2023 By Kannada Trend News No Comments on ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?

 

ರಾಜ್ಯದ ರೈತರಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದ್ದ ಕಾರಣ ಕಳೆದ ಏಪ್ರಿಲ್ ತಿಂಗಳಿಂದ ಸರ್ಕಾರ ಪ್ರತಿ ಲೀಟರ್ ಗೆ ರೂ.3 ಸಹಾಯಧನವನ್ನು ನೀಡುವುದಕ್ಕೆ ಒಪ್ಪಿಕೊಂಡಿತ್ತು, ಅದರಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಸಹಾಯಧನವನ್ನು ಕೂಡ ನೀಡಿತ್ತು. ಏಪ್ರಿಲ್ ಮತ್ತು ಮೇ ತಿಂಗಳು ಬೇಸಿಗೆ ಆದ ಕಾರಣ ಈ ಎರಡು ತಿಂಗಳಿನಲ್ಲಿ ಪಶುಗಳಿಗೆ ತಕ್ಕ ಮೇವು ಸಿಗುತ್ತಿರಲಿಲ್ಲ, ಹಸಿರು ಮೇವು ಇರದ ಕಾರಣ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕುಂಠಿತವಾಗಿತ್ತು.

ಇದರೊಂದಿಗೆ ಹವಮಾನ ವೈಪರೀತ್ಯದಿಂದ ಹಸುಗಳ ಆರೋಗ್ಯವು ಹದಗೆಟ್ಟು ಹಾಲಿನ ಉತ್ಪಾದನೆಯು ತೀರ ಇಳಿಕೆ ಆಗಿತ್ತು. ಈ ಸಮಯದಲ್ಲಿ ಇದನ್ನೇ ಅವಲಂಬಿಸಿಕೊಂಡಿದ್ದ ರೈತರ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ಸದುದ್ದೇಶದಿಂದ ಸರ್ಕಾರ ಈ ರೀತಿ ಪ್ರತಿ ಲೀಟರ್ಗೆ ರೂ.3ಯನ್ನು ಹೆಚ್ಚಳ ಮಾಡಿತ್ತು.

ಬೆಂಗಳೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ಏಪ್ರಿಲ್ ತಿಂಗಳಲ್ಲಿ ಇದು ಅನೌನ್ಸ್ ಆಗಿತ್ತು ನಂತರ ಏಪ್ರಿಲ್ 1ರಿಂದ ಮೇ31ರವರೆಗೆ ಎಲ್ಲಾ ಹಾಲು ಉತ್ಪಾದಕರು ಕೂಡ ಈ ಹೆಚ್ಚುವರಿ ಹಣದ ಸಹಾಯವನ್ನು ಪಡೆದಿದ್ದರು. ಆದರೆ ಈಗ ಅರ್ಧದಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ಈ ಪ್ರೋತ್ಸಾಹ ಧನವನ್ನು 1.50ರೂ. ಪ್ರತಿ ಲೀಟರ್ ಗೆ ಕಡಿತಗೊಳಿಸಿದೆ.

ಈಗ ಎಲ್ಲೆಡೆ ಮಳೆ ಆಗಿದ್ದು ಹಸಿರು ಮೇವು ಸಹಾ ಲಭ್ಯವಾಗಿದೆ ಜೊತೆಗೆ ಹಾಲಿನ ಉತ್ಪಾದನೆಯು ಕೂಡ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಆಗುತ್ತಿದೆ. ಸಹಾಯಧನವನ್ನು ಘೋಷಿಸುವ ಮುಂಚೆ ಹಾಗೂ ಆ ವೇಳೆಯಲ್ಲಿ13.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು ಆದರೆ ಈಗ 16 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ನಿರೀಕ್ಷೆಯನ್ನು ಮೀರಿ 2.50 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ.

ಈ ಕಾರಣದಿಂದಾಗಿಯೇ ಪ್ರೋತ್ಸಾಹಧನವನ್ನು ಕಡಿತ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮಂಡಳಿ ತಿಳಿಸಿದೆ. ಜೂನ್ 1ನೇ ತಾರೀಖಿನಿಂದ ಪರೀಷ್ಕೃತ ದರ ಅನ್ವಯಿಸಲಿದೆ. ಆದರೆ ಇದು ಬಮೂಲ್ ಎಂದರೆ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಊಟಕ್ಕೆ ಸೇರುವ ಜಿಲ್ಲೆಗಳ ರೈತರಿಗೆ ಅನ್ವಯವಾಗಲಿದೆ.

ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಒಳಪಡುತ್ತದೆ. ಈಗ ಈ ಜಿಲ್ಲೆಗಳಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ಪ್ರತಿನಿತ್ಯ ಹಾಲನ್ನು ಡೈರಿಗೆ ಹಾಕುವ ರೈತರಿಗೆ ಪ್ರತಿ ಲೀಟರ್ಗೆ 34.25 ರೂಪಾಯಿ ಸಿಗುತ್ತದೆ.

ಈ ರೀತಿ ಸರ್ಕಾರ ಹಾಲು ಉತ್ಪಾದನೆ ಮಾಡುವ ರೈತರ ಬೆಂಬಲಕ್ಕೆ ನಿಂತಿದ್ದು, ಅವರಿಗೆ ಅವಶ್ಯಕತೆ ಇರುವಾಗ ಸಹಾಯವನ್ನು ಮಾಡುತ್ತದೆ. ಸರ್ಕಾರ ಎರಡು ತಿಂಗಳು ನೀಡಿದ್ದ ಪ್ರೋತ್ಸಾಹ ಧನವನ್ನು ಈಗ ಕಡಿತ ಮಾಡಿದ್ದರು ಕೂಡ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉತ್ತಮವಾದ ಅನುಕೂಲತೆಯನ್ನು ಮಾಡಿ ಕೊಡಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕಳೆದ ಒಂದು ದಶಕದಿಂದ ಹಲವಾರು ಬಾರಿ ಈ ರೀತಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿ ಅನುಕೂಲ ಮಾಡಿರುವ ಉದಾಹರಣೆಗಳಿವೆ.

ಮುಂದೆಯೂ ಕೂಡ ಇದು ಹೀಗೆ ಮುಂದುವರೆಯುವ ಸಾಧ್ಯತೆ ಇದೆ. ಇಂತಹ ಉಪಯುಕ್ತ ಮಾಹಿತಿಯು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ರೈತರಿಗಷ್ಟೇ ಅಲ್ಲದೆ ರಾಜ್ಯದ ಎಲ್ಲಾ ರೈತರಿಗೂ ಕೂಡ ಅವಶ್ಯಕ ಮಾಹಿತಿ ಆಗಿದೆ. ಆದ್ದರಿಂದ ಈ ಮಾಹಿತಿಯನ್ನು ನಿಮ್ಮ ಕುಟುಂಬ ಹಾಗು ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ಕರ್ನಾಟಕದ ಎಲ್ಲ ರೈತರಿಗೂ ಈ ಮಾಹಿತಿ ತಲುಪುವಂತೆ ಮಾಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Public Vishya
WhatsApp Group Join Now
Telegram Group Join Now

Post navigation

Previous Post: ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್, ಲೇಬರ್ ಕಾರ್ಡ್ ಹೊಂದಿರುವವರ ನೋಡಲೇಬೇಕಾದ ಸುದ್ದಿ ಇದು
Next Post: ಕೃಷಿ ಚಟುವಟಿಕೆಗೆ ಖರೀದಿ ಮಾಡಿದ ಯಂತ್ರೋಪಕರಣಗಳ ಸಾಲ ಮನ್ನ ಯೋಜನೆಗೆ ಮುಂದಾದ ಸರ್ಕಾರ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore