Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇಂದು ಜೇಷ್ಠ ಹುಣ್ಣಿಮೆ, ಈ ದಿನ ಈ ರೀತಿ ಪೂಜೆ ಮಾಡಿ ವ್ರತ ಮಾಡಿದ್ರೆ ವಿಶೇಷ ವಸ್ತುಗಳನ್ನು ದಾನ ನೀಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಿ ಗಂಡನ ಆಯಸ್ಸು ಹೆಚ್ಚುತ್ತೆ.!

Posted on June 4, 2023 By Kannada Trend News No Comments on ಇಂದು ಜೇಷ್ಠ ಹುಣ್ಣಿಮೆ, ಈ ದಿನ ಈ ರೀತಿ ಪೂಜೆ ಮಾಡಿ ವ್ರತ ಮಾಡಿದ್ರೆ ವಿಶೇಷ ವಸ್ತುಗಳನ್ನು ದಾನ ನೀಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಿ ಗಂಡನ ಆಯಸ್ಸು ಹೆಚ್ಚುತ್ತೆ.!

 

ಪಂಚಾಂಗದ ಪ್ರಕಾರ ಕೆಲವು ವಿಶೇಷ ದಿನಗಳು ಇವೆ. ಈ ದಿನಗಳಂದು ವಿಶೇಷ ರೀತಿಯಲ್ಲಿ ನಮ್ಮ ಇಷ್ಟ ದೇವರು ಅಥವಾ ಕುಲ ದೇವರನ್ನು ಪೂಜಿಸಿದರೆ ಮತ್ತು ಈ ವಿಶೇಷ ದಿನಗಳಂದು ಕೆಲವು ವಿಶೇಷ ವ್ರತ ಮಾಡಿದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ನಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗುವ ಬಗ್ಗೆ ಹಿರಿಯರು ಹೇಳಿ ಹೋಗಿದ್ದಾರೆ.

ಅಂತಹದ್ದೇ ಒಂದು ದಿನ ಜೇಷ್ಠ ಹುಣ್ಣಿಮೆ. ಈ ಹುಣ್ಣಿಮೆಯ ದಿನದಂದು ವಟಸಾವಿತ್ರಿ ವ್ರತ ಮಾಡಿದರೆ ಜೊತೆಗೆ ಮನೆಯಲ್ಲಿ ದುರ್ಗಾದೇವಿ ಹಾಗೂ ಚಾಮುಂಡೇಶ್ವರಿಯನ್ನು ಆರಾಧನೆ ಮಾಡಿದರೆ ಮತ್ತು ಕೆಲವು ವಸ್ತುಗಳನ್ನು ದಾನ ಮಾಡಿದರೆ ಎಲ್ಲಾ ರೀತಿಯ ದಟ್ಟ ದರಿದ್ರಗಳು ದೂರ ಆಗಿ ಗಂಡನ ಆಯಸ್ಸು ಕೂಡ ಹೆಚ್ಚುತ್ತದೆ.

ಹುಣ್ಣಿಮೆಯ ದಿನ ಮನೆಯಲ್ಲಿರುವ ಚಾಮುಂಡೇಶ್ವರಿ ಅಥವಾ ದುರ್ಗಾದೇವಿ ಫೋಟೋ ಇಟ್ಟು ಅದಕ್ಕೆ ತರಕಾರಿ ಅಲಂಕಾರ ಮಾಡಿ ಶಾಕಂಬರಿ ಅವತಾರವನ್ನಾಗಿ ಕಂಡು ಪೂಜಿಸಬೇಕು. ಒಂದು ವೇಳೆ ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಫೋಟೋ ಇಲ್ಲದೆ ಇದ್ದಲ್ಲಿ ಒಂದು ಕಳಶ ಇಟ್ಟು ಅದಕ್ಕೆ ತರಕಾರಿ ಅಲಂಕಾರ ಮಾಡಿ ಅದನ್ನೇ ಶಾಕಂಬರಿ ದೇವಿ ಎಂದುಕೊಂಡು ಪೂಜಿಸಬಹುದು.

ಹುಣ್ಣಿಮೆ ದಿನದಂದು ಈ ರೀತಿ ಶಾಕಾಂಬರಿ ದೇವಿಯನ್ನು ಪೂಜೆ ಮಾಡಿದರೆ ಮನೆಯಲ್ಲಿ ಆರೋಗ್ಯ, ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನ ಸಮಸ್ಯೆ, ಸಂತಾನ ಸಮಸ್ಯೆ ಈ ರೀತಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಪರಿಹಾರ ಆಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.

ಅದೇ ರೀತಿಯಾಗಿ ಹುಣ್ಣಿಮೆಯ ದಿನದಂದು ವಟ ಸಾವಿತ್ರಿ ವ್ರತವನ್ನು ಮಾಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಸತ್ಯವಾನ್ ಸಾವಿತ್ರಿಯೂ ವಟ ಎಂದರೆ ಆಲದ ಮರದ ಕೆಳಗೆ ಕುಳಿತು ಯಮನನ್ನು ಬೇಡಿ ಯಮನ ಜೊತೆ ಹೋರಾಡಿ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದು ದೀರ್ಘಸುಮಂಗಲಿ ಆದರು ಅದೇ ರೀತಿ ಸುಮಂಗಲಿಯರು ಹಾಗೂ ಕನ್ಯೆಯರು ತನ್ನ ಗಂಡನ ಆಯಸ್ಸಿಗಾಗಿ ಹಾಗೂ ಆತನ ಏಳಿಗೆಗಾಗಿ ಈ ವ್ರತವನ್ನು ಮಾಡಬಹುದು.

ಈ ವ್ರತ ಆಚರಿಸುವವರು ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಪೂಜೆ ಮಾಡಿ ಮನೆ ಹತ್ತಿರದಲ್ಲಿರುವ ಯಾವುದಾದರೂ ಆಲದ ಮರಕ್ಕೆ ಪೂಜೆ ಸಲ್ಲಿಸಲು ಹೋಗಬೇಕು. ಮನೆಯಿಂದಲೇ ಪೂಜಾ ಸಾಮಗ್ರಿ, ಶುದ್ಧ ನೀರು ಮುಖ್ಯವಾಗಿ ಅರಿಶಿನ ಕುಂಕುಮ ಹಚ್ಚಿದ ದಾರವನ್ನು ಕೂಡ ತಪ್ಪದೆ ತೆಗೆದುಕೊಂಡು ಹೋಗಬೇಕು.

ಆಲದ ಮರಕ್ಕೆ ಹೂವು ನೀರು ಇಟ್ಟು ಅರಿಶಿಣ ಕುಂಕುಮ ಹಚ್ಚಿ ಅರ್ಧ ಹೋಳಿನ ಕೊಬ್ಬರಿಯಲ್ಲಿ ತುಪ್ಪ ಅಥವಾ ದೀಪದ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಹಚ್ಚಿಟ್ಟು ತೆಗೆದುಕೊಂಡು ಹೋಗಿದ್ದ ಹಳದಿ ಹಾಗೂ ಕೆಂಪು ದಾರದಿಂದ ಮರವನ್ನು ಸುತ್ತುತ್ತಾ 108 ಪ್ರದಕ್ಷಿಣೆ ಹಾಕಬೇಕು. ಒಂದು ವೇಳೆ 108 ಬಾರಿ ಪ್ರದಕ್ಷಿಣೆ ಹಾಕಲು ಸಾಧ್ಯವಾಗದವರು ಒಂದು, ಮೂರು, ಐದು, ಒಂಬತ್ತು ಈ ರೀತಿ ಅವರ ಶಕ್ತಿಯನ್ನು ಸಾಮರ್ಥ್ಯಾನುಸಾರವಾಗಿ ಪ್ರದಕ್ಷಿಣೆ ಹಾಕಬಹುದು.

ಈ ಪೂಜೆಯನ್ನು ಆಲದ ಮರದ ಬಳಿ ಮಾಡುವುದರಿಂದ ಗಂಡನಿಗೆ ಶ್ರೇಯಸ್ಸು ಎನ್ನುವುದನ್ನು ಪದ್ಮ ಪುರಾಣದಲ್ಲಿ ತಿಳಿಸಲಾಗಿದೆ. ಅದೇ ರೀತಿ ಈ ಜೇಷ್ಠ ಹುಣ್ಣಿಮೆ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಕೂಡ ವಿಶೇಷವಾದ ಫಲಗಳು ಉಂಟಾಗುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Devotional
WhatsApp Group Join Now
Telegram Group Join Now

Post navigation

Previous Post: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ, ಯಾವೆಲ್ಲಾ ದಾಖಲೆಗಳು ಬೇಕು.? ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
Next Post: RPF ಕಾನ್ಸ್ಟೇಬಲ್ ನೇಮಕಾತಿ 2023: 9000 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore