Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!

Posted on May 12, 2023May 12, 2023 By Kannada Trend News No Comments on ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!

ಕೆಲವರಿಗೆ ಎಷ್ಟೇ ದುಡಿದರು ಕೂಡ ಹಣ ಕೈಯಲ್ಲೇ ನಿಲ್ಲುವುದಿಲ್ಲ, ಇನ್ನು ಕೆಲವರಿಗೆ ಅವರು ಬೇರೆಯವರಿಗೆ ಕೊಟ್ಟಿದ್ದ ಹಣ ವಾಪಸ್ಸು ಬರುವುದಿಲ್ಲ, ಕೆಲವರು ಚೀಟಿ ಹಾಕಿ, ಅವಧಿ ಮುಗಿದಿದ್ದರೂ ಹಣ ಸಿಗದೆ ಈ ರೀತಿ ಹಣ ಎಲ್ಲಾದರೂ ಸಿಕ್ಕಿಹಾಕಿಕೊಂಡಿದ್ದರೆ ಅಥವಾ ನೀವು ದುಡಿದ ಹಣ ಉಳಿಯುತ್ತಿಲ್ಲ ಎಂದರೆ ಉಪ್ಪಿನಿಂದ ನೀವು ಉಪಾಯ ಮಾಡಿಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಉಪ್ಪಿಗೆ ಇಷ್ಟೊಂದು ಶಕ್ತಿ ಇದೆ ಯಾಕೆಂದರೆ ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ದೇವಿ ಅವತಾರ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಯು ಸಮುದ್ರದಲ್ಲಿ ಹುಟ್ಟಿದ್ದು ಎಂದು ಪುರಾಣಗಳು ಹೇಳುತ್ತವೆ. ಉಪ್ಪು ಕೂಡ ಸಮುದ್ರದಲ್ಲಿ ತಯಾರಾಗುವ ಕಾರಣ ಉಪ್ಪಿನಲ್ಲಿ ಲಕ್ಷ್ಮೀದೇವಿಯ ಅಂಶ ಇದೆ ಇಂದು ನಮ್ಮ ಜನ ಉಪ್ಫನ್ನು ಲಕ್ಷ್ಮಿ ಸ್ವರೂಪವಾಗಿ ಕಾಣುತ್ತಾರೆ.

ಈ ರೀತಿ ಉಪಾಯ ಮಾಡುವುದರಿಂದ ನಿಮ್ಮ ಮನೆಯ ಆರ್ಥಿಕ ಸಂಕಷ್ಟವನ್ನು ಪರಿಹಾರ ಮಾಡಿಕೊಳ್ಳಬಹುದು. ಅದೇನೇಂದರೆ ಒಂದು ಗಾಜಿನ ಅಥವಾ ಪಿಂಗಾಣಿಯ ಬಟ್ಟಲಿನಲ್ಲಿ ತುಂಬಾ ನೀರನ್ನು ತುಂಬಿ ಅದಕ್ಕೆ ನಿಮ್ಮ ಕೈಯಲ್ಲಿ ಆದಷ್ಟು ಒಂದು ಹಿಡಿ ಕಲ್ಲು ಉಪ್ಪನ್ನು ಹಾಕಿ. ಈ ಉಪ್ಪನ್ನು ಹಾಕಿದ ನಂತರ ಮನೆಯ ಮೂಲೆ ಮೂಲೆಗಳಿಗೂ ಕೂಡ ಇದನ್ನು ಹಿಡಿದುಕೊಂಡು ಓಡಾಡಿ ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ಕೂಡ ಆ ಬಟ್ಟಲು ಸೆಳೆಯುತ್ತದೆ.

ನಂತರ ಇದನ್ನು ಒಂದು ನಿರ್ಜನ ಸ್ಥಳದಲ್ಲಿ ಮನೆ ಯಾವುದಾದರು ಮೂಲೆಯಲ್ಲಿ ಇಡಿ. ಮನೆಯ ಬಾಲ್ಕನಿ ಅಥವಾ ಅಡಿಗೆ ಮನೆ ಮೂಲೆ ಅಥವಾ ಸ್ಟೋರ್ ರೂಮ್ ಈ ರೀತಿ ಎಲ್ಲಿ ಬೇಕಾದರೂ ಇಡಬಹುದು. ನಂತರ ಮರುದಿನ ಅದನ್ನು ನಿಮ್ಮ ಅಡುಗೆಮನೆ ಸಿಂಕಿನಲ್ಲಿ ಹಾಕಿ ಕರಗಿಸಿಬಿಡಿ ಅಥವಾ ಹೊರಗಡೆ ಮೋರಿಯಲ್ಲಿ ಬೇಕಾದರೂ ಹಾಕಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಆ ಉಪ್ಪು ನೀರು ಹಿಡಿದಿಟ್ಟುಕೊಂಡಿರುತ್ತದೆ ಮತ್ತು ಮರುದಿನ ಹೊರಹಾಕಿದಾಗ ಅದೆಲ್ಲಾ ಹೊರ ಹೋಗುತ್ತದೆ.

ಆನಂತರ ನಿಮ್ಮ ಆರ್ಥಿಕತೆ ಎಷ್ಟು ಚೇತರಿಕೆ ಆಗುತ್ತದೆ ಎಂದು ನೀವೇ ಕಾಣುತ್ತೀರಿ. ಇನ್ನೂ ಒಂದು ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಮನೆಗೆ ಹಣ ಬರುವಾಗ ಮಾಡಬೇಕು. ಹೇಗೆಂದರೆ ನಿಮ್ಮ ಮನೆಗೆ ಯಾವುದಾದರು ಒಂದು ರೂಪದಲ್ಲಿ ಹಣ ಬಂದಾಗ ಅಥವಾ ನಿಮಗೆ ಸಂಬಳ ಬಂದ ದಿನವೇ ಇರಬಹುದು ಈ ಉಪಾಯ ಮಾಡಿ. ಒಂದು ಬಟ್ಟಲಿನಲ್ಲಿ ಯಾವಾಗಲೂ ಮನೆಯ ದೇವರ ಕೋಣೆಯಲ್ಲಿ ಉಪ್ಪನ್ನು ತುಂಬಿ ಇಡಿ, ಅದರ ಮೇಲೆ ಏಳು ಲವಂಗವನ್ನು ಹಾಕಿ.

ಇದನ್ನು ಪ್ರತಿ ಅಮಾವಾಸ್ಯೆಗೆ ಬದಲಾಯಿಸಬಹುದು ಅಲ್ಲಿ ತನಕ ಅಲ್ಲೇ ಇರಲಿ. ಪ್ರತಿದಿನ ಕೂಡ ಪೂಜೆ ಮಾಡುವಾಗ ಇದಕ್ಕೂ ಪೂಜೆ ಮಾಡಿ. ಇದರಲ್ಲಿ ಲಕ್ಷ್ಮಿ ಅಂಶ ತುಂಬಿರುತ್ತದೆ. ಇದರಿಂದ ಹಣ ಆಕರ್ಷಣೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ನೀವು ನಿಮ್ಮ ಸಂಬಳದ ಹಣವನ್ನು ಬೀರುವಿನಲ್ಲಿ ಅಥವಾ ಪರ್ಸಿನಲ್ಲಿ ಇಡುವ ಮುನ್ನ ದೇವರ ಕೋಣೆಯಲ್ಲಿರುವ ಆ ಉಪ್ಪಿನ ಮೇಲೆ ಇಡಿ.

ಒಂದು ದಿನ ಆದ ಬಳಿಕ ಅದನ್ನು ತೆಗೆದುಕೊಂಡು ಬೀರುವಿನಲ್ಲಿ ಅಥವಾ ಪರ್ಸ್ ನಲ್ಲಿ ಹಾಕಿಕೊಂಡರೆ ಅದಕ್ಕೆ ಹಣದ ಆಕರ್ಷಣೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಈ ರೀತಿ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರ ಆಗಿ ನಿಮ್ಮ ಮನೆಯಲ್ಲಿ ಪರಿಸ್ಥಿತಿಯ ಬದಲಾಗಿರುತ್ತದೆ. ಎರಡು ಉಪಯುಕ್ತ ಉಪಾಯಗಳನ್ನು ನಿಮ್ಮ ಕುಟುಂಬದವರು ಸ್ನೇಹಿತರ ಜೊತೆಗೂ ಕೂಡ ತಪ್ಪದೇ ಹಂಚಿಕೊಳ್ಳಿ.

Devotional
WhatsApp Group Join Now
Telegram Group Join Now

Post navigation

Previous Post: 500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ
Next Post: ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore