Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

Posted on May 27, 2022 By Kannada Trend News No Comments on ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

ನಟ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದೇ ಬೇಡ ಪುನೀತ್ ರಾಜಕುಮಾರ್ ಅವರು ಮಾತ್ರವಲ್ಲದೆ ಅಣ್ಣಾವ್ರ ಮಕ್ಕಳಾದ ಎಲ್ಲರೂ ಸಹ ತಮ್ಮ ಸನ್ನಡತೆಯಿಂದ ಕನ್ನಡದ ಮನೆಮಾತಾಗಿರುವ ವರು. ಸಿನಿಮಾರಂಗದ ವಿಷಯವೇ ಆಗಲಿ, ವೈಯಕ್ತಿಕ ವಿಷಯವೇ ಆಗಲಿ ಯಾರಿಂದಲೂ ಕೂಡ ಇದುವರೆಗೆ ಒಂದು ನೆಗೆಟಿವ್ ಕಮೆಂಟ್ ಮಾಡಿಸಿ ಕೊಂಡವರಲ್ಲ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಪುನೀತ್ ಅವರ ವ್ಯಕ್ತಿತ್ವ ಎನ್ನುವುದು ಇಡೀ ಪ್ರಪಂಚಕ್ಕೆ ಇನ್ನು ಸ್ಪಷ್ಟವಾಯಿತು. ಪುನೀತ್ ರಾಜ್ ಕುಮಾರ್ ಯಾವಾಗಲೂ ಹೇಳುತ್ತಿದ್ದ ಹಾಗೆ ನಮ್ಮಿಂದ ಒಳ್ಳೆಯದಾದರೆ ಮಾಡಬೇಕು ಆದರೆ ಕೆಟ್ಟದ್ದನ್ನು ಮಾತ್ರ ಯಾರಿಗೂ ಮಾಡಬಾರದು ಎನ್ನುವ ಮಾತಿನಂತೆ ಪುನೀತ್ ರಾಜ್ ಕುಮಾರ್ ಅವರು ಸಾವಿರಾರು ಜನರ ಪಾಲಿಗೆ ಅನ್ನದಾತರಾಗಿ ವಿದ್ಯಾವಂತರಾಗಿ, ಬದುಕಲು ದಾರಿ ಮಾಡಿ ಕೊಟ್ಟವರು.

ಇಂದು ಪುನೀತ್ ಅವರ ಅಭಿಮಾನಿಗಳು ಸಹ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪುನೀತ್ ರಾಜ್ ಕುಮಾರ್ ಅವರು ನೇತ್ರದಾನವನ್ನು ಮಾಡಿದ ನಂತರ ಅವರ ಅಭಿಮಾನಿಗಳು ಕೂಡ ಹಿಂದೆಂದೂ ಮಾಡದಷ್ಟು ದಾಖಲೆ ಮಟ್ಟದಲ್ಲಿ ನೇತ್ರದಾನ ಮಾಡಲು ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡಿದ್ದಾರೆ. ಇವರಿಗೆಲ್ಲ ಮಾದರಿ ಮತ್ತು ಇವರ ಈ ಕೆಲಸಕ್ಕೆ ಸ್ಪೂರ್ತಿ ಪುನೀತ್ ರಾಜ್ ಕುಮಾರ್ ಅವರೇ. ಇಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಮಾಡುತ್ತಿದ್ದ ಸಮಾಜಸೇವೆಯ ಬಗ್ಗೆ ತಿಳಿದ ಬಳಿಕ ಹಲವು ಜನ ಸೆಲೆಬ್ರಿಟಿಗಳು ತಾವು ಕೂಡ ಈಗ ಪುನೀತ್ ಅಗಲಿರುವ ಕಾರಣ ಅವರು ಮಾಡುತ್ತಿದ್ದ ಕರ್ತವ್ಯವನ್ನು ತಾವು ವಹಿಸಿಕೊಳ್ಳುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಹೀಗೆ ಪುನೀತ್ ಅವರು ತೆರೆಮೇಲೆ ಮತ್ತು ತೆರೆ ಹಿಂದೆಯೂ ಕೂಡ ದೇವರ ಮಗನಂತೆ ಬದುಕಿ ಆದರ್ಶ ಜೀವನ ನಡೆಸಿದವರು.

ಆದರೆ ಪುನೀತ್ ಅಗಲಿಕೆಯ ನಂತರ ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಅವರು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಲವು ಮಾತುಗಳನ್ನಾಡುತ್ತಾ ಪುನೀತ್ ರಾಜಕುಮಾರ್ ಮದುವೆಗೆ ಮುಂಚೆ ಹೀಗಿರಲಿಲ್ಲ ಮದುವೆಯಾದ ಮೇಲೆ ಅವರು ತುಂಬಾ ಬದಲಾದರೂ ಎಂದು ಹೇಳಿಕೊಂಡಿದ್ದಾರೆ. ಪುನೀತ್ ಬಗ್ಗೆ ಪ್ರೇಮ ಅವರು ಈ ರೀತಿ ಮಾತನಾಡಲು ಕಾರಣ ಏನೆಂದರೆ ಅವರೇ ಹೇಳುವ ಪ್ರಕಾರ ಪುನೀತ್ ರಾಜಕುಮಾರ್ ಅವರು ಬಾಲನಟನಾಗಿ ಸಿನಿಮಾರಂಗದಲ್ಲಿ ಚಿಕ್ಕವಯಸ್ಸಿನಲ್ಲೇ ಯಶಸ್ಸು ಕಂಡವರು. ನಟನೆಯಲ್ಲಿ ಬ್ರೇಕ್ ತೆಗೆದುಕೊಂಡು ಬಿಜಿನೆಸ್ ಮಾಡುವ ಪ್ರಯತ್ನ ಮಾಡಿದ ಪುನೀತ್ ರಾಜಕುಮಾರ್ ಅವರು ಗ್ರಾನೈಟ್ ಬಿಜಿನೆಸ್ ಒಂದನ್ನು ಶುರುಮಾಡುತ್ತಾರೆ ಆದರೆ ಆ ಸಮಯದಲ್ಲಿ ಅವರ ಬಗ್ಗೆ ಕೆಲವು ಜನರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ನೆಗೆಟಿವ್ ಆಗಿ ರೂಮರ್ ಗಳನ್ನು ಹಬ್ಬಿಸುತ್ತಿರುತ್ತಾರೆ. ಈ ವಿಷಯ ಅಣ್ಣಾವ್ರ ಕಿವಿಗೆ ತಲುಪಿದ ನಂತರ ಅಣ್ಣಾವ್ರು ಪುನೀತ್ ರಾಜಕುಮಾರ್ ಅವರಿಗೆ ಆ ಬಿಸಿನೆಸ್ ನಿಲ್ಲಿಸುವಂತೆ ಹೇಳುತ್ತಾರೆ.

ಇದಾದ ಬಳಿಕ ಸಿನಿಮಾದಲ್ಲೂ ಕೂಡ ಬ್ರೇಕ್ ತೆಗೆದುಕೊಂಡಿದ್ದರು ಅವರಿಗೆ ಒಪ್ಪಿಗೆಯಾಗುವ ಕಥೆ ಬರುವ ತನಕ ತಾಯಿ ಪಾರ್ವತಮ್ಮ ಅವರಿಗೆ ಪ್ರೊಡಕ್ಷನ್ ವಿಭಾಗದಲ್ಲಿ ಸಹಾಯ ಮಾಡುವ ಸಲುವಾಗಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಪ್ರೊಡಕ್ಷನ್ಸ್ ಕೆಲಸವನ್ನು ನೋಡಿಕೊಳ್ಳುತ್ತಿರುತ್ತಾರೆ. ಅದೇ ಸಮಯಲ್ಲಿ ಸೆಟ್ಟೇರಿದ ಸಿನಿಮಾ ಓಂ. ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅವರ ಅಭಿನಯದ ಉಪೇಂದ್ರ ಅವರ ನಿರ್ದೇಶನದ ಓಂ ಸಿನಿಮಾದ ಸೆಟ್ಟಿಗೆ ಪುನೀತ್ ರಾಜಕುಮಾರ್ ಅವರು ಬರುತ್ತಿದ್ದರಂತೆ. ಆ ಸಮಯದಲ್ಲಿ ಅಲ್ಲಿದ್ದ ಎಲ್ಲಾ ಕಲಾವಿದರೊಂದಿಗೆ ಮಾತನಾಡುತ್ತ ಕಾಲಕಳೆಯುತ್ತಿದ್ದ ಪುನೀತ್ ರಾಜಕುಮಾರ್ ಅವರು ಎಲ್ಲರ ಜೊತೆ ಬೇಗ ಫ್ರೆಂಡ್ ಆಗಿ ಬಿಡುತ್ತಿದ್ದರಂತೆ. ಮತ್ತು ಸ್ವಲ್ಪ ಸಲಿಗೆ ಬೆಳೆದ ನಂತರ ಎಲ್ಲರನ್ನು ಹೋಗೋಲೋ ಬಾರೋಲೋ ಹೋಗೆ ಬಾರೆ ಎಂದು ಮಾತನಾಡಿಸುತ್ತಿದ್ದಂತೆ. ಆದರೆ ಮದುವೆಯಾಗುತ್ತಿದ್ದ ಹಾಗೆ ಅವರು ತುಂಬಾ ಬದಲಾದರು ನೋಡ ನೋಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ತುಂಬಾ ಬದಲಾಗಿಹೋಯಿತು ಎಂದು ಪ್ರೇಮ ಅವರು ಹೇಳಿಕೊಂಡಿದ್ದಾರೆ.

ಬಹುಶಃ ಪುನೀತ್ ರಾಜಕುಮಾರ್ ಅವರು ಆ ಸಮಯದಲ್ಲಿ ಚಿಕ್ಕವರಾಗಿದ್ದ ಕಾರಣ ಆ ರೀತಿ ನಡೆದುಕೊಳ್ಳುತ್ತಿದ್ದರು ಅನಿಸುತ್ತದೆ ಆದರೆ ಬೆಳೆಯುತ್ತಿದ್ದ ಹಾಗೆ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವದಲ್ಲಿ ತುಂಬಾ ದೊಡ್ಡ ಬದಲಾವಣೆಯೇ ನಡೆದು ಹೋಯಿತು. ಜೊತೆಗೆ ಅಶ್ವಿನಿ ಅವರ ಕೈಹಿಡಿದ ಮೇಲೆ ಪುನೀತ್ ರಾಜಕುಮಾರ್ ಅವರು ಮತ್ತಷ್ಟು ಬದಲಾದರೂ ಎನ್ನುವ ಮಾತುಗಳು ಕೂಡ ಹಲವೆಡೆಯಿಂದ ಕೇಳಿಬರುತ್ತಿವೆ. ಪುನೀತ್ ಅವರು ಆರಿಸಿಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಮತ್ತು ಬೆಳೆಯುತ್ತ ಅವರ ಮಾತುಗಳಲ್ಲಿ ಬದಲಾದ ಪ್ರಬುದ್ಧತೆ ಹಾಗೂ ನಂತರ ಅವರು ಎಲ್ಲರ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಇವೆಲ್ಲವನ್ನು ಗಮನಿಸಿದರೆ ಖಂಡಿತವಾಗಿಯೂ ಪುನೀತ್ ಅವರು ಸಾಕಷ್ಟು ಬದಲಾದರೂ ಎನಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

Cinema Updates Tags:Appu, Prema, Puneeth
WhatsApp Group Join Now
Telegram Group Join Now

Post navigation

Previous Post: ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.
Next Post: ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore