ದೇವರು ಎನ್ನುವುದು ಒಂದು ಅಚಲವಾದ ನಂಬಿಕೆ. ಆ ಶಕ್ತಿಯ ಮೇಲೆ ನಂಬಿಕೆ ಇಟ್ಟು ಅದಕ್ಕೆ ಸಾಕ್ಷಿಯಾಗಿ ಬದುಕು ಸಾಗಿಸಿದರೆ ನಾವು ಸರಿ ದಾರಿಯಲ್ಲಿ ಸಾಗುತ್ತೇವೆ, ಬದುಕು ಸುಗಮವಾಗುತ್ತದೆ ಎನ್ನುವುದೇ ಬದುಕಿನ ಆಚರಣೆ. ಇದುವರೆಗೂ ಕೂಡ ದೇವರನ್ನು ಯಾರು ನೋಡದೆ ಇದ್ದರೂ ದೇವರು ಇದ್ದಾನೆ ಎನ್ನುವ ಅನುಭವ ಅನೇಕರಿಗೆ ಆಗಿದೆ. ಜೀವನದ ಕಡು ಕಷ್ಟದ ಸಮಯದಲ್ಲಿ ಯಾವುದಾದರೂ ಒಂದು ರೂಪದಲ್ಲಿ ದೇವರು ಎನ್ನುವ ಶಕ್ತಿಯು ನಮ್ಮನ್ನು ಕೈ ಹಿಡಿದು ಕಾಪಾಡಿರುತ್ತಾರೆ.
ಪ್ರತ್ಯಕ್ಷವಾಗಿ ದೇವರು ಹೀಗೆ ಇದ್ದಾರೆ ಎನ್ನುವುದನ್ನು ಕಾಣಲು ಆಗದೇ ಇದ್ದರೂ ಅವರ ಇರುವಿಕೆಯ ಅನುಭವ ಹಾಗೆಯೇ ಆಗುತ್ತದೆ. ಎಲ್ಲಾ ಸಮಯದಲ್ಲೂ ಕೂಡ ನಮ್ಮ ಕಷ್ಟವನ್ನು ದೇವರು ಪರಿಹರಿಸುವುದಿಲ್ಲ ಕೆಲವು ಸಮಯದಲ್ಲಿ ದೇವರನ್ನು ಎಷ್ಟೇ ಬೇಡಿದರು ಎಷ್ಟೇ ಪೂಜೆ ಮಾಡಿದರು ಕೂಡ ಕಷ್ಟಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ.
ಈ ರೀತಿ ಅನುಭವ ನಮ್ಮ ಸ್ನೇಹಿತರಲ್ಲಿ ಹಾಗೂ ಕುಟುಂಬದವರಲ್ಲಿ ಯಾರಿಗಾದರೂ ಆಗಿರುವುದನ್ನು ಅಥವಾ ನಮಗೆ ಆಗಿರುವುದನ್ನು ಗಮನಿಸಬಹುದು. ಹಾಗೆಲ್ಲಾ ದೇವರು ಇದ್ದಾರಾ ಎನ್ನುವ ಅಪನಂಬಿಕೆ ಹುಟ್ಟುತ್ತದೆ. ಆದರೆ ಈ ರೀತಿ ಅಂದುಕೊಳ್ಳುವುದು ತಪ್ಪು. ದೇವರ ಮೇಲೆ ನಂಬಿಕೆ ಇಟ್ಟು ನಮ್ಮ ಕೆಲಸಗಳನ್ನು ನಾವು ಮಾಡುತ್ತ ಇರಬೇಕು, ಏನೇ ಆದರೂ ದೇವರು ಇದ್ದಾರೆ ಎಂದೇ ನಂಬಬೇಕು.
ದೇವರು ಎಂದರೆ ಸತ್ಯ, ಪ್ರಾಮಾಣಿಕತೆ ಹಾಗೂ ನ್ಯಾಯ ಎಂದು ನಂಬಿಕೆ ಇಟ್ಟು ಉದ್ದೇಶವಿಲ್ಲದೆ ಯಾವುದನ್ನು ಜರುಗುವುದಿಲ್ಲ ಆಗುವುದೆಲ್ಲಾ ಒಳ್ಳೆಯದೇ ಅದು ದೈವ ನಿರ್ಣಯವೇ ಆಗಿರುತ್ತದೆ ಎನ್ನುವುದನ್ನು ನಂಬಬೇಕು. ಹಾಗೆಯೇ ಪ್ರತಿದಿನವೂ ಕೂಡ ನಾವು ಎಚ್ಚರಿಕೆಯಿಂದ ಇರುವುದಕ್ಕೆ ಭಯ ಭಕ್ತಿಯಿಂದ ಬದುಕು ನಡೆಸುವುದಕ್ಕೆ ದೇವರ ಪೂಜೆಯನ್ನು ಮಾಡುತ್ತಾ ಇರಬೇಕು.
ದೇವರ ಪೂಜೆಯನ್ನು ಪ್ರತಿದಿನ ಮಾಡುವರು ಪ್ರತಿದಿನ ದೇವರ ಕೋಣೆಯನ್ನು ಸ್ವಚ್ಛ ಮಾಡುತ್ತಾರೆ. ಪ್ರತಿದಿನ ದೇವರ ಫೋಟೋ ಅಥವಾ ಕಳಶವನ್ನು ಶುಚಿಗೊಳಿಸಿ ಮತ್ತೆ ಇಡುತ್ತಿದ್ದರೆ ಅಂತಹ ತಪ್ಪನ್ನು ಮಾಡಬಾರದು. ಯಾಕೆಂದರೆ ದೇವರ ಮನೆಯಲ್ಲಿರುವ ಫೋಟೋ ಅಥವಾ ದೀಪ ಅಥವಾ ಇನ್ಯಾವುದೇ ವಸ್ತುಗಳಿಗಾಗಿದ್ದರು ಕೂಡ ಅವಳಿಗಳಿಗೆ ಒಂದು ದೈವಾಂಶ ಸಂಭೂತ ಶಕ್ತಿ ಇರುತ್ತದೆ.
ಪದೇ ಪದೇ ಅವುಗಳನ್ನು ತೊಳೆಯುವುದು ಬದಲಾಯಿಸುವುದು ಇವುಗಳನ್ನು ಮಾಡುವುದರಿಂದ ಆ ಸಕಾರಾತ್ಮಕ ಶಕ್ತಿಯು ಅಥವಾ ಅದಕ್ಕೆ ತುಂಬಿರುವ ದೈವಾಂಶ ಶಕ್ತಿಯು ನಶಿಸಿ ಹೋಗುತ್ತದೆ. ಹಾಗಾಗಿ ಪ್ರತಿದಿನ ಒಣಗಿದ ಹೂವುಗಳನ್ನು ಬದಲಾಯಿಸಿ ದೇವರಿಗೆ ದೀಪ ಹಚ್ಚಬೇಕು ವಾರದಲ್ಲಿ ಎರಡು ದಿನ ದೀಪವನ್ನು ಶುಚಿಗೊಳಿಸಿದರೆ ಸಾಕು ಮತ್ತು ಪದೇ ಪದೇ ಕಳಶವನ್ನು ಬದಲಾಯಿಸುವ ತಪ್ಪನ್ನು ಮಾಡಲೇಬಾರದು.
ಮುಖ್ಯವಾಗಿ ನಮ್ಮ ಯಾವುದೇ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗಬೇಕು ಎಂದರೆ ಗಣಪತಿಯ ಆರಾಧನೆಯನ್ನು ನಾವು ಮಾಡುತ್ತೇವೆ. ಪ್ರತಿದಿನ ಪೂಜೆ ಮಾಡುವ ಮುನ್ನ ಗಣಪತಿಯನ್ನು ನೆನೆದು ಗಣಪತಿ ಸ್ತೋತ್ರ ಹೇಳಿ ನಂತರ ಕುಲದೇವತೆಯನ್ನು ಪ್ರಾರ್ಥಿಸಬೇಕು. ಯಾವುದೇ ಕಾರಣಕ್ಕೂ ಗಣಪತಿ ಮತ್ತು ನಮ್ಮ ಮನೆ ದೇವರನ್ನು ಪೂಜಿಸುವುದನ್ನು ನಿಲ್ಲಿಸಲೇಬಾರದು.
ಪ್ರತಿದಿನ ಕೂಡ ದೇವರನ್ನು ನೆನೆದು ದೇವರನ್ನು ಪೂಜಿಸಿ ದಿನವನ್ನು ಆರಂಭಿಸುವುದರಿಂದ ಕೆಟ್ಟದ್ದು ಒಳಿತು ಎಲ್ಲದರ ಮೇಲು ಕೂಡ ಆತನ ನಿಯಂತ್ರಣ ಇರುತ್ತದೆ ಎನ್ನುವ ಭಾವ ಬರುತ್ತದೆ. ಹಾಗೆ ಅದೇ ನಮಗೆ ಎಲ್ಲಾ ಶಕ್ತಿಯನ್ನು ತುಂಬಿ ಕಷ್ಟಗಳನ್ನು ನಿವಾರಿಸಿಕೊಳ್ಳುವುದಕ್ಕೆ ಮಾರ್ಗವನ್ನು ಕೂಡ ತಿಳಿಸುತ್ತದೆ. ಹಾಗಾಗಿ ಹೆಚ್ಚು ಪೂಜೆ ಮಾಡುತ್ತಿದ್ದರು ಕಷ್ಟ ಬಂದರೆ, ಪೂಜೆ ಮಾಡುವುದಕ್ಕೆ ಬಂದಿದೆ ಎಂದು ತಪ್ಪು ತಿಳಿದುಕೊಳ್ಳಬಾರದು ಇದು ದೇವರ ಪರೀಕ್ಷೆ ಎಂದುಕೊಂಡು ಬದುಕಬೇಕು.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*