ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಕನ್ನಡದ ಒಂದು ಜನಪ್ರಿಯ ಗಾದೆ ಮಾತು. ಉಪ್ಪು ಈ ರೀತಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನೆಯ ಆರ್ಥಿಕ ಸಮಸ್ಯೆಯನ್ನು ಕೂಡ ಬಗೆಹರಿಸುತ್ತದೆ ಎಂದರೆ ನೀವು ನಂಬಲೇಬೇಕು. ನಮ್ಮ ಶಾಸ್ತ್ರಿಗಳಲ್ಲಿ ಹೇಳಿರುವ ಪ್ರಕಾರ ಮತ್ತು ನಾವು ಇದುವರೆಗೆ ಹಿರಿಯರಿಂದ ಕೇಳಿಕೊಂಡು ಬಂದ ಆಚರಿಸಿದ ಆಚರಣೆಗಳ ಪ್ರಕಾರ ಉಪ್ಪನ್ನು ಬಹಳ ಪೂಜನ್ಯೀಯ ಸ್ಥಾನವಲ್ಲಿ ಕಾಣುತ್ತೇವೆ.
ಸಾಕ್ಷಾತ್ ಮಹಾಲಕ್ಷ್ಮಿ ರೂಪವೇ ಉಪ್ಪು ಎಂದು ನಾವು ನಂಬುತ್ತೇವೆ. ಹಿರಿಯರು ಯಾವಾಗಲೂ ಮನೆಯಲ್ಲಿ ಉಪ್ಪು ಖಾಲಿ ಆಗಬಾರದು ಎಂದು ಹೇಳುವುದನ್ನು ಕೇಳಿದ್ದೇವೆ ಹಾಗೆಯೇ ಸಂಜೆಯ ಸಮಯ ಹೊತ್ತು ಮುಳುಗಿದ ಮೇಲೆ ಉಪ್ಪನ್ನು ಯಾರಿಗೂ ಕೊಡಬಾರದು ಮತ್ತು ಉಪ್ಪನ್ನು ಎಂದಿಗೂ ಸಾಲ ಕೊಡಬಾರದು, ತರಬಾರದು ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ.
ಯಾಕೆಂದರೆ ಉಪ್ಪಿಗೆ ಅಂತಹ ಒಂದು ಪ್ರಭಾವಶಾಲಿಯಾದ ಶಕ್ತಿ ಇದೆ. ಮನೆಯ ನೆಗೆಟಿವ್ ಎನರ್ಜಿಗಳನ್ನು ಕೂಡ ಹಿಡಿದಿಟ್ಟುಕೊಂಡು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಮಾಡುವ ಶಕ್ತಿ ಈ ಉಪ್ಪಿಗೆ ಇದೆ. ಮನೆಗೆ ಯಾವುದೇ ರೀತಿ ಹಣಕಾಸಿನ ತೊಡಕು ಬಂದಾಗ ಉಪ್ಪಿನ ಮೂಲಕ ಅದನ್ನು ಬಗೆಹರಿಸಬಹುದು ಎಂದರೆ ಅದು ಆಶ್ಚರ್ಯ ಆಗಬಹುದು. ಆದರೆ ಈಗ ನಾವು ಹೇಳುವ ಈ ಕ್ರಮವನ್ನು ಅನುಸರಿಸಿ ನೋಡಿ ಆಶ್ಚರ್ಯಕರ ರೀತಿಯಲ್ಲಿ ನಿಮಗೆ ಪರಿಹಾರ ಖಂಡಿತವಾಗಿಯೂ ಸಿಗುತ್ತದೆ.
ಅದೇನೆಂದರೆ ಮನೆಯಲ್ಲಿ ಉಪ್ಪನ್ನು ಹಾಕಿ ಇಡಲು ಒಂದು ಡಬ್ಬವನ್ನು ಇಟ್ಟಿರುತ್ತೇವೆ. ಈ ರೀತಿ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವ ಬದಲು ಜಾಡಿಗಳಲ್ಲಿ ಇಟ್ಟರೆ ಒಳ್ಳೆಯದು. ಅನೇಕ ಮನೆಗಳಲ್ಲಿ ಇಂದಿಗೂ ಸಹ ಜಾಡಿಗಳಲ್ಲೇ ಉಪ್ಪನ್ನು ತುಂಬಿ ಇಡುವ ರೂಢಿ ಇದೆ. ಈ ರೀತಿ ಉಪ್ಪನ್ನು ತುಂಬಿ ಇಡುವ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿದರೆ ನಿಮಗಿರುವ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತದೆ, ಆದರೆ ಅದಕ್ಕೆ ಕೆಲ ನಿಯಮ ಇದೆ.
ಮೊದಲಿಗೆ ನೀವು ಒಂದು ಹಳದಿ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಹಳದಿ ಬಟ್ಟೆ ಇಲ್ಲವಾದಲ್ಲಿ ಒಂದು ಬಿಳಿ ಕಾಟನ್ ಬಟ್ಟೆ ಒದ್ದೆ ಮಾಡಿ ಸಂಪೂರ್ಣವಾಗಿ ಅದು ಹಳದಿ ಆಗುವ ತನಕ ನೀರು ಮತ್ತು ಅರಿಶಿನ ಪುಡಿ ಸಹಾಯದಿಂದ ಹಳದಿ ಮಾಡಿ ಅದನ್ನು ಒಣಗಿಸಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಒಂಬತ್ತು ಬಟ್ಟಲು ಅಡಿಕೆಯನ್ನು ಹಾಕಬೇಕು. ಬಟ್ಟಲು ಅಡಿಕೆ ಎಂದರೆ ಭಾಗವಾಗಿರದ ವೃತ್ತಾಕಾರದ ಪೂರ್ತಿ ಅಡಿಕೆ. ಅಡಿಕೆಯು ಅಮ್ಮನವರ ಸ್ವರೂಪ ಎಂದು ನಂಬಲಾಗುತ್ತದೆ,
ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಜೊತೆ ಅಮ್ಮನವರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ನಂತರ ಆ ಅರಿಶಿಣ ಬಟ್ಟೆಗೆ ಅಡಿಕೆ ಜೊತೆ ನಿಮಗೆ ಅನುಕೂಲವಾದಷ್ಟು ಒಂದು ಚೂರು ಬಂಗಾರ ಅಥವಾ ಬೆಳ್ಳಿಯನ್ನು ಹಾಕಿ ಹಾಗೆಯೇ ಒಂದು ಕೊಂಬು ಅರಿಶಿನವನ್ನು ಹಾಕಿ ಗಟ್ಟಿಯಾಗಿ ಕಟ್ಟಿ.
ಈ ರೀತಿ ಬಟ್ಟೆಯಿಂದ ಕಟ್ಟಿದ ಈ ಪೊಟ್ಟಣ್ಣವನ್ನು ಶುಕ್ರವಾರದ ಬೆಳ್ಳಂಬೆಳಗ್ಗೆ ಮನೆಯೆಲ್ಲಾ ಶುದ್ಧ ಮಾಡಿ, ಮಡಿ ಉಟ್ಟುಕೊಂಡು ಪೂಜೆ ಮಾಡಿದ ಬಳಿಕ ಲಕ್ಷ್ಮೀದೇವಿಯನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಂಡು ನಿಮಗಿರುವ ಹಣಕಾಸಿನ ಸಮಸ್ಯೆಯನ್ನು ಹೇಳಿಕೊಂಡು ಉಪ್ಪಿನ ಜಾಡಿನ ಕೆಳಗೆ ಹಾಕಿ ಅದರ ಮೇಲೆ ಪೂರ್ತಿ ಉಪ್ಪನ್ನು ತುಂಬಿ. ಈ ರೀತಿ ಮಾಡಿದ ಕೆಲವೇ ದಿನಗಳಲ್ಲಿ ನೀವು ಮಾಡಿರುವ ಬ್ಯಾಂಕ್ ಲೋನ್ ಬೇಗ ತೀರಿಸಲು ಸಾಧ್ಯವಾಗುತ್ತದೆ ಅಥವಾ ನೀವು ಅಡವಿಟ್ಟಿರುವ ಚಿನ್ನ ಬಿಡಿಸಿಕೊಂಡು ಮನೆಗೆ ತರಲು ಅನುಕೂಲವಾಗುತ್ತದೆ ಅಥವಾ ಅನಿರೀಕ್ಷಿತವಾಗಿ ನಿಮ್ಮ ಕುಟುಂಬಕ್ಕೆ ಧನಾಗಮನ ಆಗುತ್ತದೆ.