Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪ್ರತಿದಿನ ಸಾಯಂಕಾಲ ಮಾಯವಾಗುವ ಶಿವನ ದೇವಾಲಯ ಇದು, ನಿಮ್ಮ ಕಣ್ಣ ಮುಂದೆಯೇ ಈ ಚಮತ್ಕಾರ ನಡೆಯುತ್ತದೆ.! ಈ ದೇಗುಲ ಎಲ್ಲಿದೆ ಗೊತ್ತಾ.?

Posted on May 11, 2023May 11, 2023 By Kannada Trend News No Comments on ಪ್ರತಿದಿನ ಸಾಯಂಕಾಲ ಮಾಯವಾಗುವ ಶಿವನ ದೇವಾಲಯ ಇದು, ನಿಮ್ಮ ಕಣ್ಣ ಮುಂದೆಯೇ ಈ ಚಮತ್ಕಾರ ನಡೆಯುತ್ತದೆ.! ಈ ದೇಗುಲ ಎಲ್ಲಿದೆ ಗೊತ್ತಾ.?

ನಮ್ಮ ದೇಶದಲ್ಲಿ ಹಿಂದಿನ ರಾಜ ಮಹಾರಾಜರ ಕಾಲದಿಂದ ಹಿಡಿದು ಋಷಿಮುನಿಗಳು ಇದ್ದ ಸಮಯದಿಂದ ಈಗಿನ ಕಲಿಗಾಲದಲ್ಲೂ ಸಾಕಷ್ಟು ಶಿವ ದೇವಾಲಯಗಳು ನಿರ್ಮಾಣ ಆಗಿವೆ. ಆದರೆ ಈಗಿನ ದೇವಾಲಯಗಳಿಂದ ಈ ಹಿಂದೆ ನಿರ್ಮಿಸಲಾಗಿರುವ ದೇವಾಲಯಗಳು ಬಹಳ ವಿಶೇಷತೆ ಹೊಂದಿವೆ. ಅವುಗಳಲ್ಲಿ ಕೆಲವೊಂದು ಸಾಕ್ಷಾತ್ ದೇವತೆಗಳೇ ನಿರ್ಮಾಣ ಮಾಡಿದ್ದಾರೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖ ಆಗಿದೆ. ಇದೇ ರೀತಿ ಶಿವನ ಪುತ್ರ ಸ್ಕಂದನಿಂದ ನಿರ್ಮಾಣವಾದ ದೇವಾಲಯ ಒಂದು ಗುಜರಾತಿನಲ್ಲಿ ಇದೆ.

ಈ ದೇವಾಲಯವು ತನ್ನ ವಿಶೇಷತೆಯಿಂದ ಪ್ರತಿ ದಿನ ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ಸೆಳೆಯುತ್ತಿದೆ. ಅಲ್ಲದೆ ವಾರಾಂತ್ಯದಲ್ಲಿ ಈ ದೇವಾಲಯವನ್ನು ಕಾಣಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಇಷ್ಟು ಸಂಖ್ಯೆಯಲ್ಲಿ ಜನರನ್ನು ದೇವಾಲಯ ಸೆಳೆಯಲು ಅಲ್ಲೊಂದು ವಿಸ್ಮಯ ಸೃಷ್ಟಿಯಾಗುವುದು ಕಾರಣವಾಗಿದೆ ಇದು ಗಿನ್ನೀಸ್ ವರ್ಡ್ ಬುಕ್ ಅಲ್ಲಿ ಕೂಡ ರೆಕಾರ್ಡ್ ಆಗಿದೆ.

ಅದೇನೆಂದರೆ ಈ ದೇವಾಲಯ ಪ್ರತಿದಿನ ಸಂಜೆ 5:00 ಗಂಟೆಗೆ ಮುಳುಗಲು ಆರಂಭ ಆಗುತ್ತದೆ ಇದ್ದಕ್ಕಿದ್ದಂತೆ ನೋಡುಗರ ಕಣ್ಣೆದುರಿಗೆ ಈ ದೇವಾಲಯ ಪೂರ್ತಿಯಾಗಿ ನೀರಿನಲ್ಲಿ ಮುಳುಗಿ ಮಾಯವಾಗಿ ಬಿಡುತ್ತದೆ. ಮತ್ತು ಮರುದಿನ ಮುಂಜಾನೆ ಎಂದಿನಂತೆ ದೇವಾಲಯ ತೆರೆದಿರುತ್ತದೆ. ಆಗ ಭಕ್ತಾದಿಗಳು ಇಲ್ಲಿರುವ ಶಿವಲಿಂಗವನ್ನು ದರ್ಶನ ಮಾಡಬಹುದು ಹಾಗೂ ದೇವಾಲಯವನ್ನು ಪ್ರವೇಶಿಸಿ ಪೂಜೆ ಮಾಡಬಹುದು.

ಈ ದೇವಾಲಯ ಈ ರೀತಿ ನಿರ್ಮಾಣ ಆಗಿರುವುದಕ್ಕೆ ಕಾರಣ ಏನು ಎಂದು ಕೇಳುವುದಾದರೆ ಶ್ರೀ ಮಹಾ ಶಿವ ಪುರಾಣ ರುದ್ರ ಸಹಿತ ಭಾಗ ಎರಡರಲ್ಲಿ ಉಲ್ಲೇಖವಾಗಿರುವ ಕಥೆ ಈ ರೀತಿ ಹೇಳುತ್ತದೆ. ತಾರಕಾಸುರ ಎನ್ನುವ ರಾಕ್ಷಸನು ಶಿವನ ಕುರಿತು ತಪಸ್ಸನ್ನು ಆಚರಿಸಿ ತನಗೆ ಸಾವು ಬರಲೇಬಾರದೆಂದು ಕೇಳಿಕೊಳ್ಳುತ್ತಾರೆ. ಶಿವನು ಇದು ಸೃಷ್ಟಿಗೆ ವಿರುದ್ಧ ಮತ್ತೇನನ್ನಾದರೂ ಕೇಳುವಂತೆ ಆದೇಶಿಸಿದಾಗ ಸಾವು ಬರುವುದಾದರೆ ಶಿವನ ಪುತ್ರನಿಂದಲೇ ಬರಬೇಕು ಅದು ಆರು ವರ್ಷದ ಮಗುವಿಗೆ ಮಾತ್ರ ನನ್ನನ್ನು ಸಾಯಿಸಲು ಆಗಬೇಕು ಎಂದು ಕೇಳಿಕೊಳ್ಳುತ್ತಾರೆ.

ಆಗ ಶಿವನು ಸ್ಕಂದನಿಗೆ ಜನ್ಮ ನೀಡುತ್ತಾರೆ ಸ್ಕಂದ ಆರು ವರ್ಷದವನಿರುವಾಗ ಭೂಮಿಯ ಮೇಲೆ ರಾಕ್ಷಸತ್ವ ತೋರಿ ಜನರಿಗೆ ಹಿಂಸೆ ಕೊಡುತ್ತಿದ್ದ ತಾರಕಾಸುರನನ್ನು ವಧೆ ಮಾಡುತ್ತಾರೆ, ನಂತರ ಸ್ಕಂದನಿಗೂ ಪಶ್ಚಾತಾಪ ಉಂಟಾಗುತ್ತದೆ. ಆಗ ಮಹಾವಿಷ್ಣು ಇಂತಹದೊಂದು ಸಲಹೆಯನ್ನು ನೀಡುತ್ತಾರೆ. ನಿನ್ನ ತಂದೆಯ ಹೆಸರಿನಲ್ಲಿ ಶಿವಾಲಯ ನಿರ್ಮಿಸಿ ಪ್ರತಿದಿನವೂ ಕೂಡ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ನಿನ್ನ ಪಾಪ ಕಡಿಮೆ ಆಗುತ್ತದೆ ಎನ್ನುತ್ತಾರೆ.

ಅವರ ಅಣತಿ ಮೇರೆಗೆ ಗುಜರಾತಿನ ಬುರುಚ್ ಜಿಲ್ಲೆಯಿಂದ 2 ಕಿಲೋಮೀಟರ್ ದೂರದಲ್ಲಿರುವ ಜಂಬೂತರ ಎನ್ನುವ ಸಮುದ್ರ ತಟದ ಮೇಲೆ ಸ್ಕಂದನು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಸ್ಥಾನವನ್ನು ಶ್ರೀ ಸ್ತಂಬೇಶ್ವರ ಮಹಾದೇವ ದೇವಸ್ಥಾನ ಎನ್ನುತ್ತಾರೆ. ಜನವರಿಯಿಂದ ಏಪ್ರಿಲ್ ತನಕ ಮಧ್ಯಾಹ್ನ 3 ಗಂಟೆಗೆ ದೇವಾಲಯ ಮುಳುಗಲು ಆರಂಭ ಆಗುತ್ತದೆ. ಉಳಿದ ತಿಂಗಳಲ್ಲಿ ಸಂಜೆ 5 ಗಂಟೆ ಆಗುತ್ತಿದ್ದಂತೆ ಸಮುದ್ರದ ನೀರಿನ ಪ್ರಮಾಣ ಹೆಚ್ಚಾಗಿ ಮುಳುಗುತ್ತಾ ಹೋಗುತ್ತದೆ.

ಆಗ ದೇವಸ್ಥಾನದ ಸಿಬ್ಬಂದಿ ಒಂದು ಸೈರನ್ ಮೊಳಗಿಸುತ್ತಾರೆ. ಕೂಡಲೇ ಒಳಗಿದ್ದ ಭಕ್ತರೆಲ್ಲರೂ ಆಚೆ ಬರಬೇಕು. ಸಂಪೂರ್ಣವಾಗಿ ದೇವಾಲಯವೇ ಜಲಾವೃತ ಆಗಿಬಿಡುತ್ತದೆ. ನಾವು ಬೆಳಗ್ಗೆಯಿಂದ ನೋಡಿದ ದೇವಸ್ಥಾನ ಇಲ್ಲೇ ಇತ್ತಾ ಎಂದು ಅನುಮಾನ ಆಗುವಂತೆ ಇದ್ದಿದ್ದೆಲ್ಲಾ ಮಾಯವಾಗಿ ಬಿಡುತ್ತದೆ. ಸ್ಕಂದನೇ ಇಲ್ಲಿ ಸಮುದ್ರವಾಗಿ ಬದಲಾಗಿದ್ದಾರೆ ಎನ್ನುವ ನಂಬಿಕೆಗಳು ಇವೆ. ಯಾಕೆಂದರೆ ಇಲ್ಲಿರುವ ಸಮುದ್ರ ನೀರಿನ ಉಪ್ಪಿನಾಂಶ 18%ಇದೆ. ಬೇರೆ ಸಮುದ್ರಗಳಲ್ಲಿ 40% ಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನಾಂಶ ಇದೆ. ಈ ದೈವ ಪವಾಡವನ್ನು ಭೇದಿಸಲು ವಿಜ್ಞಾನಿಗಳಿಗೂ ಕೂಡ ಸಾಧ್ಯವಾಗಿಲ್ಲ.

Devotional
WhatsApp Group Join Now
Telegram Group Join Now

Post navigation

Previous Post: ವಾಸಸ್ಥಳ ದೃಢೀಕರಣ ಒರೀಜಿನಲ್ ಪತ್ರವನ್ನು ಕೇವಲ 5 ನಿಮಿಷದಲ್ಲಿ ಪಡೆಯುವ ವಿಧಾನ.
Next Post: ಮಹಿಳೆಯರು ತಾಳಿಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಗಂಡನ ಆಯಸ್ಸು, ಶ್ರೇಯಸ್ಸು ಇದರಲ್ಲಿಯೇ ನಿರ್ಧಾರವಾಗುವುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore