ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಂತೋಷವನ್ನು ಹೊಂದಿರಬೇಕು ಆಗ ಮಾತ್ರ ಅವರು ತಮ್ಮ ಜೀವನ ದಲ್ಲಿ ಯಾವುದೇ ರೀತಿಯ ಕಷ್ಟ ಬಂದರೂ ಅದನ್ನು ನಿಭಾಯಿಸಿಕೊಂಡು ಅಂದರೆ ಅವೆಲ್ಲವನ್ನು ದಾಟಿ ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಹಾಗೇನಾದರೂ ಆ ವ್ಯಕ್ತಿ ಯಾವುದೇ ವಿಷಯದಲ್ಲಿಯೂ ಯಾವುದರಲ್ಲಿಯೂ ಸಂತೋಷವನ್ನು ಹೊಂದಿಲ್ಲ ಎಂದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಹಾಗೂ ಯಾವುದರಲ್ಲಿಯೂ ಕೂಡ ಮುಂದೆ ಬರಲು ಸಾಧ್ಯವಾಗುವುದಿಲ್ಲ ಅವನು ಜೀವನವೇ ಸಾಕಾಯಿತು ಎನ್ನುವಂತಹ ಪರಿಸ್ಥಿತಿಗೆ ಹೋಗಿರುತ್ತಾನೆ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಎಷ್ಟೇ ಕಷ್ಟ ಇದ್ದರೂ ಅವೆಲ್ಲವನ್ನು ಸಹ ಪಕ್ಕಕ್ಕಿಟ್ಟು ಸಂತೋಷವಾಗಿ ಇರುವುದನ್ನು ಕಲಿಯಲೇ ಬೇಕಾಗಿರುತ್ತದೆ. ಅದು ಕೇವಲ ಅವರಿಗೆ ಸಂತೋಷವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ ಅವರು ಯಾವುದೇ ರೀತಿಯ ಆರೋಗ್ಯದಲ್ಲಿಯೂ ತೊಂದರೆ ಯನ್ನು ಅನುಭವಿಸಬಾರದು ಎಂದರೆ ಆ ವ್ಯಕ್ತಿ ಜೀವನದಲ್ಲಿ ಸಂತೋಷ ವಾಗಿ ಇರಬೇಕಾಗುತ್ತದೆ.
ಹೌದು ಮನುಷ್ಯ ಯಾವುದೇ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡುತ್ತಿರುತ್ತಾನೋ ಆ ಚಿಂತೆ ಅವನ ಸಂತೋಷವನ್ನು ಹಾಳುಮಾಡುತ್ತದೆ ಆದ್ದರಿಂದ ಚಿಂತೆಯನ್ನು ಮರೆಮಾಚುವುದಕ್ಕೆ ಅವನು ಸಂತೋಷವಾಗಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ಈಗ ನಾವು ಹೇಳುವ ಕೆಲವು ಸೂತ್ರಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಆ ಸೂತ್ರಗಳು ಯಾವುದು ಎನ್ನುವುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಗಂಡ ಇಲ್ಲದೆ ಸ್ತ್ರೀ ಬದುಕಿ ತೋರಿಸುತ್ತಾಳೆ. ಕಾರಣ ಸ್ತ್ರೀ ಗೆ ಆತ್ಮ ವಿಶ್ವಾಸ ಹೆಚ್ಚು ಇರುತ್ತದೆ.
* ಆದರೆ ಸ್ತ್ರೀ ಇಲ್ಲದೆ ಗಂಡ ಬದುಕಲಾರ ಯಾಕೆಂದರೆ ಅವರ ಎಲ್ಲ ಸುಖ ದುಃಖಗಳನ್ನು ಹೇಳಿಕೊಳ್ಳಲು ಸ್ತ್ರೀ ನೆರಳಾಗಿ ಬೇಕೇ ಬೇಕು.
* ಒಂಟಿಯಾಗಿ ಇರುವಾಗ ಯೋಚನೆಗಳು ಒಳ್ಳೆಯದಲ್ಲ.
* ತಾಳ್ಮೆ ನಿನಗಿದ್ದರೆ ಜಯ ನಿನ್ನದೇ, ವಿನಯ ನಿನದಾಗಿದ್ದರೆ ವಿಜಯ ನಿನ್ನದೇ.
* ಸುಳು ಮಾತುಗಳನ್ನು ಕೇಳಬೇಡಿ ಹೇಳಬೇಡಿ ಅವು ನಿಮ್ಮ ಜೀವನ ವನ್ನು ನಾಶ ಮಾಡುತ್ತದೆ.
* ವಿಜಯವನ್ನು ಸಾಧಿಸುವ ದಾರಿಯಲ್ಲಿ ಎಷ್ಟೋ ಕಲ್ಲು ಮುಳ್ಳುಗಳು ಎದುರಾಗುತ್ತವೆ ಆ ಸಮಯದಲ್ಲಿ ಬೆಟ್ಟದಂತಹ ಆತ್ಮವಿಶ್ವಾಸವನ್ನು ತಂದುಕೊಳ್ಳಬೇಕು. ಎದುರಾಗಿ ನಿಲ್ಲಬೇಕು. ಆವಾಗಲೇ ಆ ಮುಳ್ಳು ಕಲ್ಲುಗಳನ್ನು ದಾಟಿ ವಿಜಯವನ್ನು ಸಾಧಿಸಬಹುದು.
* ಕೋಪ ಹೆಚ್ಚಿದರೆ ಆಲೋಚನೆ ಕಮ್ಮಿಯಾಗುತ್ತದೆ. ಆಲೋಚನೆ ಕಮ್ಮಿ ಆದರೆ ಅಂಧಕಾರವೇ ಮಿಗಿಲುತ್ತದೆ. ಆದ್ದರಿಂದ ಹಿರಿಯರು ತನ್ನ ಕೋಪವೇ ತನ್ನ ಶತ್ರು ಎಂದಿದ್ದಾರೆ.
* ಎಲ್ಲರಿಗೂ ಯಾವಾಗಲೂ ಲಭ್ಯವಾಗಿ ಇರಬೇಡಿ ಇಲ್ಲದಿದ್ದರೆ ಎಲ್ಲರಿಗೂ ನಾವು ಕೀಳಾಗಿ ಕಾಣುತ್ತೇವೆ. ಎಷ್ಟುವರೆಗೆ ಇರಬೇಕು ಅಷ್ಟುವರೆಗೆ ಇರಿ. ಅರ್ಹತೆ ಇಲ್ಲದವರಿಗೆ ಅತಿಯಾಗಿ ಲಭ್ಯವಿದ್ದರೆ ನಮ್ಮ ಆತ್ಮಾಭಿಮಾನಕ್ಕೆ ಹಾನಿಕಾರ.
* ಒಂದು ನಿಮಿಷದಲ್ಲಿ ಜೀವನಏನು ಬದಲಾಗುವುದಿಲ್ಲ. ಆದರೆ ಆ ಒಂದು ನಿಮಿಷದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಜೀವನವನ್ನು ಬದಲಾಯಿಸುತ್ತದೆ.
* ನಿಮ್ಮನ್ನು ಭಾರ ಎಂದು ತಿಳಿಯುವ ಬಂಧಗಳಿಂದ ಬಲವಂತವಾಗಿ ಜೀವಿಸಬೇಡಿ. ಅವರಿಂದ ದೂರ ಹೋಗಿ ಒಂಟಿಯಾಗಿ ಬದುಕುವುದು ಎಷ್ಟೋ ಮೇಲು.
* ನಿನ್ನ ಬಲವೇನು ಯಾರಿಗೂ ಗೊತ್ತಿಲ್ಲದಿದ್ದರೂನೂ ಬದುಕಬಹುದು. ಆದರೆ ನಿನ್ನ ಬಲಹೀನ ಮಾತ್ರ ಯಾರಿಗೂ ಗೊತ್ತಾಗಲು ಬಿಡಬೇಡಿ. ಅವರು ಬದುಕಲು ಕೊಡುವುದಿಲ್ಲ.
* ಪ್ರೀತಿಯಾಗಿ ಮಾತನಾಡಿದರೆ ಗೊತ್ತಿಲ್ಲದವರು ಕೂಡ ನಮ್ಮವರು ಆಗುತ್ತಾರೆ. ಕಠಿಣವಾಗಿ ಮಾತನಾಡಿದರೆ ನಮ್ಮವರು ಕೂಡ ಪಾರಾಯಿ ಆಗುತ್ತಾರೆ ಆದ್ದರಿಂದ ಎಲ್ಲರ ಜೊತೆ ಪ್ರೀತಿಯಾಗಿ ನಡೆದುಕೊಳ್ಳೋಣ.
* ನಿಮ್ಮ ಜೀವನವನ್ನು ಬದಲಾಯಿಸಬಹುದು. ಕೇವಲ ನಿಮ್ಮ ಕನ್ನಡಿ ಮುಂದೆ ಇರುವ ವ್ಯಕ್ತಿ ಮಾತ್ರ ಬೇರೆ ಯಾರು ನಿಮ್ಮ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ.