Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!

Posted on January 8, 2024 By Kannada Trend News No Comments on ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!

 

ಯೋಗ ಮುದ್ರೆಗಳ ಪ್ರಕಾರ ಕೆಲವೊಂದು ಮುದ್ರೆಗಳು ನಮ್ಮ ಜೀವನದ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದೇ ಹೇಳಬಹುದು. ಹೌದು ಕೆಲವೊಂದು ಮುದ್ರೆಗಳನ್ನು ನಾವು ಪ್ರತಿನಿತ್ಯ ಮಾಡುವುದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ನಮ್ಮ ಆರೋಗ್ಯವನ್ನು ಸಹ ಅಭಿವೃದ್ಧಿ ಮಾಡಿಕೊಳ್ಳಬಹುದು.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮುದ್ರೆ ಯನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಅಧಿಕವಾದಂತಹ ಲಾಭವನ್ನು ಅಂದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಸಹ ಹೊಂದಬಹುದು ಹಾಗಾದರೆ ಆ ಒಂದು ಮುದ್ರೆ ಯಾವುದು? ಅದನ್ನು ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕುಬೇರ ಮುದ್ರೆ ಎಂದರೇನು ಹಾಗೂ ಇದನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಕುಬೇರ ಎಂದರೆ ಏನು ಎಂದು ನೋಡುವುದಾದರೆ ಉತ್ತರ ದಿಕ್ಕಿನಿಂದ ಈ ಕುಬೇರ ಬರುತ್ತಾನೆ ಅಂದರೆ ತಮ್ಮ ಹೆಗಲಿನ ಮೇಲೆ ಹಣಕಾಸಿನ ದೊಡ್ಡ ಚೀಲವನ್ನೇ ಹೊತ್ತು ತರುತ್ತಾನೆ ನಮ್ಮ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ತರುತ್ತಾನೆ ಎಂದು ಕುಬೇರನಿಗೆ ಹೇಳುತ್ತಾರೆ.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ತಿಳಿದಿರುವವರು ತಮ್ಮ ಮನೆಗಳಲ್ಲಿ ಹಣಕಾಸನ್ನು ಹೊತ್ತಿರುವಂತಹ ಕುಬೇರನ ವಿಗ್ರಹವನ್ನು ತಂದಿಟ್ಟುಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಕುಬೇರ ಮುದ್ರೆ ಎಂದರೇನು? ಇದನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಎನ್ನುವುದನ್ನು ಈ ದಿನ ತಿಳಿಯೋಣ.

ಕುಬೇರ ಮುದ್ರೆಯು ಹಸ್ತ ಮುದ್ರೆಯಾಗಿದ್ದು ಅದು ಶನಿ, ಗುರು ಮತ್ತು ಮಂಗಳನ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ಆಸೆಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಮುದ್ರೆಯು ಮುಖ್ಯವಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಮೃದ್ಧಿ ಮತ್ತು ಸಮೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ.

ಹಾಗಾದರೆ ಈ ದಿನ ಕುಬೇರ ಮುದ್ರೆಯನ್ನು ಹೇಗೆ ಮಾಡುವುದು ಹಾಗೂ ಯಾವ ಬೆರಳುಗಳ ಸಹಾಯದಿಂದ ಉಪ ಯೋಗಿಸಿ ಈ ಕುಬೇರ ಮುದ್ರೆಯನ್ನು ಮಾಡಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳ ಬಳಕೆಯು ಕುಬೇರ ಮುದ್ರೆಯನ್ನು ರೂಪಿಸುತ್ತದೆ. ಕೆಳಗೆ ತಿಳಿಸಲಾದ ಗ್ರಹಗಳ ಗುಣಗಳ ಸಹಾಯದಿಂದ ಸಾಧಕನಿಗೆ ಶಕ್ತಿಯ ಉಲ್ಬಣವನ್ನು  ಹೆಚ್ಚಿಸುತ್ತದೆ.

* ಹೆಬ್ಬೆರಳು :- ಈ ಬೆರಳು ಮಂಗಳ ಗ್ರಹದ ಗುಣಲಕ್ಷಣಗಳನ್ನು ಹೊಂದಿದೆ, ಇದು ಅಗ್ನಿ ಅಂಶದ ಸ್ಥಳವಾಗಿದೆ. ಇದು ಈ ಬೆರಳಿನ ಸಹಾಯದಿಂದ ನಿಮಗೆ ದೈಹಿಕ ಶಕ್ತಿ, ನಾಯಕತ್ವದ ಸಾಮರ್ಥ್ಯ, ಆತ್ಮ ವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ.

* ತೋರುಬೆರಳು :- ಈ ಬೆರಳು ಗುರು ಗ್ರಹದ ಲಕ್ಷಣಗಳನ್ನು ಹೊಂದಿದೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಗಾಳಿಯ ಅಂಶವಾಗಿದೆ. ಶಿಕ್ಷಣ, ಬುದ್ಧಿವಂತಿಕೆ, ಆಜ್ಞೆ, ಆಧ್ಯಾತ್ಮಿಕತೆ ಅದರ ಪ್ರಯೋಜನಕಾರಿ ಗುಣಲಕ್ಷಣಗಳು.

* ಮಧ್ಯದ ಬೆರಳು :- ಈ ಬೆರಳು ಶನಿ ಗ್ರಹದ ಗುಣಲಕ್ಷಣಗಳನ್ನು ಹೊಂದಿದೆ. ಇದು ವ್ಯಕ್ತಿಯನ್ನು ಕರ್ಮ ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ವಿನಮ್ರತೆಯನ್ನು ಪ್ರೋತ್ಸಾಹಿಸುತ್ತದೆ.

ಈ ಮೇಲೆ ಹೇಳಿದಂತೆ ಈ ಒಂದು ಮುದ್ರೆಯನ್ನು ಈ ವಿಧಾನ ಅನುಸರಿಸು ವುದರ ಮೂಲಕ ಮಾಡುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳನ್ನು ಸಹ ಸಿದ್ಧಿಸಿಕೊಳ್ಳಬಹುದು ಹಾಗೂ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲ ಇದ್ದರೂ ಸಹ ಅವೆಲ್ಲವೂ ದೂರವಾಗುತ್ತದೆ. ಪ್ರತಿನಿತ್ಯ ನೀವು ಈ ಒಂದು ಅಭ್ಯಾಸವನ್ನು ಮಾಡುವುದು ತುಂಬಾ ಒಳ್ಳೆಯದು.

Useful Information

Post navigation

Previous Post: ಈ ಮುಳ್ಳು ತಿಂದರೆ ಸರ್ವ ರೋಗಗಳು ಮಂಗಮಾಯ.!
Next Post: ಗಜಕರ್ಣ, ಕಜ್ಜಿ, ತುರಿಕೆ, ಏಳು ದಿನದಲ್ಲಿ ಮಾಯಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore