Home Useful Information ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

0
ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

 

ಮಹಾದೇವನನ್ನು ಮೃತ್ಯುಂಜಯ ಎಂದು ಕೂಡ ಕರೆಯುತ್ತಾರೆ ಪ್ರಪಂಚವನ್ನೇ ಮುಳುಗಿಸುತ್ತಿದ್ದ ವಿಷಯವನ್ನು ಕುಡಿದು ನೀಲಕಂಠನಾದ ಈ ಸರ್ವೇಶ್ವರನನ್ನು ಲಯಕರ್ತ ಎಂದು ಕೂಡ ಕರೆಯುತ್ತಾರೆ. ಪರಮೇಶ್ವರನ ಕೃಪ ಕಟಾಕ್ಷದಿಂದಲೇ ಮುಕ್ತಿ ಸಿಗುವುದು. ಈಶ್ವರನನ್ನು ವೈದ್ಯನಾಥೇಶ್ವರ ಎಂದು ಕೂಡ ಕರೆಯುತ್ತಾರೆ.

ಇದೆಲ್ಲದರ ಅರ್ಥ ಆಯಸ್ಸು ಆರೋಗ್ಯ ಅಥವಾ ಅಂತ್ಯ ಎಲ್ಲವೂ ಶಿವನಿಚ್ಚೆ ಎನ್ನುವುದೇ ಆಗಿದೆ. ಮಹಾದೇವನ ಮಹಾ ಮೃತ್ಯುಂಜಯ ಮಂತ್ರದ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಅಪಮೃ’ತ್ಯು ಭ’ಯಕ್ಕಾಗಿ ಇದನ್ನು ಪಠಣೆ ಮಾಡಲು ಹೇಳಲಾಗುತ್ತದೆ ಎಂದೇ ಹೆಚ್ಚಿನವರು ಭಾವಿಸಿದ್ದಾರೆ ಅದೇ ರೀತಿಯಾಗಿ ಮೃತ್ಯುವಿನ ಮಹತ್ವ ಅದರ ಸರಿಯಾದ ಜ್ಞಾನವನ್ನು ತಿಳಿಯಲು ಕೂಡ ಈ ಮೃತ್ಯುಂಜಯ ಮಂತ್ರವನ್ನು ಅರ್ಥೈಸಿಕೊಂಡು ಪಠಿಸಬೇಕು.

ಈ ಸುದ್ದಿ ಓದಿ:- ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

ಮೃತ್ಯುಂಜಯ ಮಂತ್ರ ಹೇಳುವುದು ಏನೆಂದರೆ ಮೃತ್ಯುವನ್ನು ಎದುರಿಸುವ ಧೈರ್ಯ ಕೊಡು ಹೇಗೆ ಸೌತೆಕಾಯಿ ಅದರ ತೊಟ್ಟಿನಿಂದ ಬೇರ್ಪಡುತ್ತದೆ ಅದೇ ರೀತಿ ಸೂಕ್ಷ್ಮವಾಗಿ ನನಗೂ ಈ ಭವಬಂಧನದಿಂದ ಪಾರು ಮಾಡು ಎಂದು ಪರಿಪರಿಯಾಗಿ ಕೇಳಿಕೊಳ್ಳುವುದಾಗಿದೆ. ಹಾಗಾಗಿ ಬದುಕುವ ಆಸೆಗಿಂತ ವೈರಾಗ್ಯದ ಮಹತ್ವ ಇದರಿಂದ ತಿಳಿಯುತ್ತದೆ ಅಂದರೆ ತಪ್ಪಾಗಲಾರದು.

ಈ ವಿಚಾರ ಮುಂದುವರೆದು ಒಂದು ವೇಳೆ ನಿಜವಾಗಿಯೂ ಅಪ ಮೃ’ತ್ಯುಭ’ಯ ಇದ್ದರೆ ಅಥವಾ ಅನಾರೋಗ್ಯ ಕಾಡುತ್ತಿದ್ದರೆ ಯಾವ ರೀತಿಯಾದ ಮಂತ್ರ ಹೇಳಿ ಭಗವಂತನಿಂದ ರಕ್ಷಣೆ ಕೇಳಬೇಕು ಎಂದರೆ ಅದಕ್ಕೂ ಕೂಡ ಈಶ್ವರನ ಒಂದು ಶಕ್ತಿಶಾಲಿ ಮಂತ್ರವಿದೆ.

ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಇದ್ದರೆ ಈ ಮಂತ್ರವನ್ನು ಪಠಿಸಿ, ವಿಭೂತಿ ಹಚ್ಚಿದರೆ ಸಾಕು ಖಂಡಿತವಾಗಿ ಅವರು ಚೇತರಿಕೆ ಆಗುತ್ತಾರೆ ಮತ್ತು ಮನೆಯಲ್ಲಿ ಸದಾ ಈ ಮಂತ್ರವನ್ನು ಜೋರಾಗಿ ಹಾಕಿ ಕೇಳಿದರು ಸಾಕು ಇದರ ಶಬ್ದ ಸೃಷ್ಠಿಸುವ ತರಂಗದಲ್ಲಿ ನಮ್ಮನ್ನು ಆರೋಗ್ಯಗೊಳಿಸುವ ಚೈತನ್ಯ ಇರುತ್ತದೆ. ಹಾಗಾಗಿ ಪ್ರತಿನಿತ್ಯ ಕುಟುಂಬದ ಎಲ್ಲ ಸದಸ್ಯರ ಆರೋಗ್ಯಕ್ಕಾಗಿ ಈ ಶ್ಲೋಕವನ್ನು ಪಠಿಸಿ ಅಥವಾ ಕೇಳಿ.

ಈ ಸುದ್ದಿ ಓದಿ:- ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

ಅಪಮೃತ್ಯು ಪರಿಹಾರ ಮಹಾ ಮೃತ್ಯುಂಜಯ ಸ್ತ್ರೋತ್ರ…

ಧ್ಯಾಯೇ ಮೃತ್ಯುಂಜಯಂ ಸಾಂಬಂ ನೀಲಕಂಠಂ
ಚತುರ್ಭುಜಂ ಚಂದ್ರಕೋಟಿ ಪ್ರತಿಕಾಶಂ
ಪೂರ್ಣಚಂದ್ರ ನಿಭಾನನಂ ಬಿಂಬಾಧರಂ ವಿಶಾಲಾಕ್ಷಂ
ಚಂದ್ರ ಅಲಂಕೃತ ಮಸ್ತಕಂ
ಅಕ್ಷಮಾಲಂ ಭರದರಂ ವರದಂ ಚಃ
ಅಭಯಪ್ರದಂ ಮಹಾಕುಂಡಲ ಭೂಷಣಂ
ಹಾರ ಅಲಂಕೃತ ರಕ್ಷಸಂ
ಭಸ್ಮೋಧೂಳಿತ ಸರ್ವಾಂಗಂ
ಬಾಲನೇತ್ರ ವಿರಾಜಿತಂ
ವ್ಯಾಘ್ರಜನ್ಮಂ ಪರೀಧಾನಂ
ವ್ಯಾಲ ಯಜ್ಞಂ ಪವೀತನಂ
ಪಾರ್ವತ್ಯ ಸಹಿತಂ ದೇವಂ
ಸರ್ವ ಅಭಿಷ್ಠ ವರದಪ್ರದಂ
ಓಂ ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಚಂದ್ರಶೇಖರಾಯಃ
ಜಟಾಮುಕುಠ ಧಾರಣಾಯಃ
ಅಮೃತ ಕಳಶ ಹಸ್ತಾಯಃ
ಅಮೃತೇಶ್ವರಾಯಃ
ಸರ್ವಾತ್ಮ ರಕ್ಷಕಾಯಃ
ಮಹಾ ಮೃತ್ಯುಂಜಯಾಯಃ
ಸರ್ವರೋಗ ಅರಿಷ್ಠ ನಿವಾರಾಯಃ
ಆಯುರ್ ಅಭಿವ್ಯಕ್ತಿ ಕುರುಃ ಕುರುಃ
ಆತ್ಮನಂ ರಕ್ಷಃ ರಕ್ಷಃ
ಮಹಾ ಮೃತ್ಯುಂಜೇಶ್ವರಾಯಃ ನಮೋ ನಮಃ
ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಪಾರ್ವತಿ ಮನೋಹರಾಯಃ
ಅಮೃತ ಸ್ವರೂಪಾಯಃ
ಕಾಲಂತಕಾಯಃ
ಕರುಣಾಕರಾಯಃ
ಗಂಗಾಧರಾಯಃ‌
ಮಹಾ ಮೃತ್ಯುಂಜಯಾಯಃ
ಸರ್ವರೋಗ ಅರಿಷ್ಟ ನಿವಾರಾಯಯಾಯಃ
ಸರ್ವ ದುಷ್ಟ ಗ್ರಹ ಉಪದ್ರವ ನಿವಾರೇ ನಿವಾರಾಯಃ
ಆತ್ಮನಂ ರಕ್ಷಃ ರಕ್ಷಃ
ಆಯುರ್ ಅಭಿವೃದ್ಧಿಂ ಕುರು ಕುರು
ಮಹಾ ಮೃತ್ಯುಂಜೇಶ್ವರಾಯ ನಮೋ ನಮಃ
ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಜಟಾ ಮುಕುಟಧಾರಣಾಯಃ
ಚಂದ್ರಶೇಖರಾಯಃ
ಶ್ರೀ ಮಹಾವಿಷ್ಣುವಲ್ಲಭಾಯಃ
ಪಾರ್ವತಿ ಮನೋಹರಾಯಃ
ಪಂಚಾಕ್ಷರ ಪರಿಪೂರ್ಣಾಯಃ
ಪರಮೇಶ್ವರಾಯಃ
ಭಕ್ತಾತ್ಮ ಪರಿಪಾಲನಾಯಃ
ಪರಮಾನಂದಾಯಃ
ಪರಬ್ರಹ್ಮ ಪರಾಪರಾಯಃ
ಸರ್ವಾಗ್ರಹಾಂಧಯಃ
ಸ್ಥಂಭಯಃ ಸ್ಥಂಭಯಃ
ಸರ್ವರೋಗ ಅರಿಷ್ಟ ನಿವಾರಯಃ ನಿವಾರಯಃ
ದೀರ್ಘಾಯುಶ್ವಾಂ ಕುರುಃ ಕುರುಃ
ಶ್ರೀ ಮಹಾಮೃತ್ಯುಂಜೇಶ್ವರಯಾಃ ನಮೋ ನಮಃ
ಮಹಾ ಮೃತ್ಯುಂಜಯ ಮೂರ್ತಯೇ
ಆರೋಗ್ಯ ದೃಢಗಾತ್ರ
ಧೀರ್ಘಾಯುಷ್ಯಂ ಕುರುಃ ಕುರುಃ
ಧಾರಪುತ್ರ ಪೌತ್ರ ಸ್ಪಾಂಧವಃ
ಜನನ ರಕ್ಷಾಃ ರಕ್ಷಾಃ
ಧನಧಾನ್ಯ ಕನಕ ಭೂಷಣ
ವಸ್ತು ವಾಹನ ಕೃಷಿಂ
ಗೃಹ ಗ್ರಾಮಾಧಿಂ ರಕ್ಷಃ ರಕ್ಷಃ
ಸರ್ವತ್ರ ಕ್ರಿಯಾನೂಕೂಲ ಜಯಕರಂ ಕುರುಃ ಕುರುಃ
ಆಯುರ್ ಅಭಿವೃದ್ಧಿ ಕುರುಃ ಕುರುಃ
ಶ್ರೀ ಮಹಾ ಮೃತ್ಯುಂಜೇಶ್ವರಾಯ ನಮೋ ನಮಃ
ಓಂ ಮೃತ್ಯುಂಜಯಾಯ ವಿದ್ಮಹೇ
ಭೀಮ ರುದ್ರಾಯಾ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್.

LEAVE A REPLY

Please enter your comment!
Please enter your name here