Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯುಗಾದಿ ಹಬ್ಬ ಮುಗಿದ ನಂತರ ಈ ಎರಡು ರಾಶಿಯವರಿಗೆ ಕಷ್ಟಕಾಲ ಶುರು, ಯಾವ ರಾಶಿ ಪರಿಹಾರ ಏನು ನೋಡಿ.!

Posted on April 9, 2024 By Kannada Trend News No Comments on ಯುಗಾದಿ ಹಬ್ಬ ಮುಗಿದ ನಂತರ ಈ ಎರಡು ರಾಶಿಯವರಿಗೆ ಕಷ್ಟಕಾಲ ಶುರು, ಯಾವ ರಾಶಿ ಪರಿಹಾರ ಏನು ನೋಡಿ.!

 

ಯುಗಾದಿ ಹಬ್ಬ ನಮ್ಮ ಹಿಂದುಗಳ ಪಾಲಿಗೆ ನೂತನ ವರ್ಷವಾಗಿದೆ ಹಾಗಾಗಿ ದ್ವಾದಶ ರಾಶಿಗಳ ವರ್ಷ ಫಲಗಳನ್ನು ಪಂಚಾಂಗ ನೋಡಿ ಲೆಕ್ಕ ಹಾಕಲಾಗುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ಗ್ರಹಗಳ ಸಂಚಾರದಲ್ಲೂ ಕೂಡ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ ಮತ್ತು ಮುಂದೆ ನಡೆಯಬಹುದಾದ ಗ್ರಹಗತಿಗಳ ಸ್ಥಾನಪಲ್ಲಟವನ್ನು ಅಧಾರವಾಗಿಟ್ಟುಕೊಂಡು ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ.

ಈ ರೀತಿಯಾಗಿ ನೀವು ಕೂಡ 2024ರ ವರ್ಷ ಭವಿಷ್ಯ ನೋಡುತ್ತಿದ್ದರೆ ನಿಮಗೆ ಒಂದು ಶಾ’ಕಿಂ’ಗ್ ಸಂಗತಿ ಕಾದಿದೆ. ಅದೇನೆಂದರೆ ಈ ವರ್ಷದಲ್ಲಿ ಎರಡು ರಾಶಿಯವರಿಗೆ ಮಾತ್ರ 108 ಬಗೆಯ ಕಷ್ಟಗಳು ಎದುರಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಈ ವರ್ಷ ಏಪ್ರಿಲ್ 09, 2024 ರಂದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ ಇದು ಕಳೆದ 21 ದಿನಗಳ ಬಳಿಕ ಮೇ 1ರಂದು ಗುರು ಗ್ರಹವು ವೃಷಭ ರಾಶಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದ ಕೆಲವು ರಾಶಿಗಳಿಗೆ ಅತ್ಯಂತ ಶುಭ ಫಲಗಳು ಸಿಗುತ್ತಿದ್ದು, ಇನ್ನು ಕೆಲವು ರಾಶಿಯವರಿಗೆ ಅಸಮಾಧಾನ ಪ್ರತಿಫಲ ದೊರೆಯುತ್ತದೆ.

ಈ ಸುದ್ದಿ ಓದಿ:- ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

ತುಲಾ ರಾಶಿ:- ತುಲಾ ರಾಶಿಗೆ ಗುರು ಗ್ರಹವು ಅಷ್ಟಮ ಸ್ಥಾನದಲ್ಲಿದ್ದಾರೆ ಇದು ಅಷ್ಟೊಂದು ಶುಭಫಲಗಳನ್ನು ಉಂಟುಮಾಡುವುದಿಲ್ಲ. ಇದರಿಂದ ಕುಟುಂಬದಲ್ಲಿ ಕಿ’ರಿ’ಕಿ’ರಿ, ಮಾನಸಿಕ ರೋಗ, ಸಂತೋಷ ಇಲ್ಲದೆ ಇರುವುದು ಇಂತಹ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತೀರಿ. ಹಣಕಾಸಿನ ವಿಷಯದಲ್ಲಿ ಕೂಡ ನೀವು ಬಹಳ ಎಚ್ಚರಿಕೆಯಿಂದ ಇರಬೇಕು.

ಸಂಬಂಧಿಕರಿಂದಲೇ ಅಥವಾ ಬಹಳ ಪರಿಚಯಸ್ತರಿಂದಲೇ ಮೋ’ಸ ಹೋಗಿ ನಿಷ್ಠೂರ ಕೂಡ ಆಗುವುದರ ಜೊತೆಗೆ ಆರ್ಥಿಕ ನಷ್ಟ ಎದುರಿಸಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಬಹಳ ತಾಳ್ಮೆಯಿಂದ ಇರುವ ತುಲಾ ರಾಶಿಯವರ ತಾಳ್ಮೆ ಪರೀಕ್ಷೆ ಕೂಡ ನಡೆಯುತ್ತದೆ ಎಂದು ಹೇಳಬಹುದು.

ಆದರೆ ನಂತರ ಆರನೇ ಮನೆಯಲ್ಲಿ ರಾಹು ಇರುವುದರಿಂದ ನಂತರದ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಗಳ ಹೊಡೆತ ತಪ್ಪಿದರೂ ಈ ವರ್ಷದಲ್ಲಿ ತುಲಾ ರಾಶಿಯವರು ಸುಖಕ್ಕಿಂತ ಕಷ್ಟಗಳನ್ನು ಹೆಚ್ಚು ನೋಡುತ್ತಾರೆ.

ಈ ಸುದ್ದಿ ಓದಿ:-ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಅಷ್ಟಮ ಗುರುವಿನ ಪ್ರಭಾವ ಕಡಿಮೆ ಮಾಡಿಕೊಳ್ಳಲು ಗುರುವಾರದ ದಿನ ಹಳದಿ ಬಟ್ಟೆಯಲ್ಲಿ ಕಡಲೆಕಾಳು ದಾನ ಮಾಡಿ, ಮೂರು ಗುರುವಾರದ ದಿನ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ ಮತ್ತು ದೇವಸ್ಥಾನಗಳಿಗೆ ತುಪ್ಪ ಹಾಗೂ ಆಲೂಗಡ್ಡೆಯನ್ನು ದಾನ ಕೊಡಿ. ಗುರುವೇದ ಮಂತ್ರ ಜಪ ಮಾಡಿ ಗುರುವಿನ ಅನುಗ್ರಹವಾಗುತ್ತದೆ.

ಧನಸ್ಸು ರಾಶಿ:- ಗುರುವಿನ ಸ್ಥಾನಪಲ್ಲಟ ನಂತರ ಧನಸ್ಸು ರಾಶಿಯವರು ಕೂಡ ಬಹಳ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಯಾಕೆಂದರೆ ಧನಸ್ಸು ರಾಶಿಗೆ 6ನೇ ಮನೆಯಲ್ಲಿ ಗುರುವಿನ ಸಂಚಾರವಾಗುತ್ತಿರುವುದು ಅಷ್ಟೇನೂ ಶುಭಫಲಗಳನ್ನು ನೀಡುವುದಿಲ್ಲ.

6ನೇ ಮನೆಯಲ್ಲೂ ರೋಗ ಋಣ ಹಾಗೂ ಶತ್ರು ಸ್ಥಾನ ಎನ್ನುತ್ತಾರೆ ಇದರಿಂದ ಅನಾರೋಗ್ಯ ಹಾಗೂ ಸಾಲ ಭಾದೆ ಹೆಚ್ಚಾಗುತ್ತದೆ. ಅದರಿಂದ ಆರೋಗ್ಯದ ಬಗ್ಗೆ ಧನಸ್ಸು ರಾಶಿಯವರು ಆದಷ್ಟು ಕಾಳಜಿ ಮಾಡಬೇಕು ಮತ್ತು ಶತ್ರುಗಳಿಂದ ಹಾಗೂ ಹಿತ ಶತ್ರುಗಳಿಂದ ದೂರವಿದ್ದು ಯಾವುದೇ ವಿಚಾರದಲ್ಲಿ ಕೂಡ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

ಈ ಸುದ್ದಿ ಓದಿ:-ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ನೀವು ಸಹ ಗುರುವಿನ ಅನುಗ್ರಹಕ್ಕಾಗಿ ಈ ಮೇಲೆ ತಿಳಿಸಿದ ಪರಿಹಾರಗಳನ್ನು ಪಾಲಿಸಿ ಪ್ರತಿ ಗುರುವಾರ ಹತ್ತಿರದಲ್ಲಿರುವ ಯಾವುದೇ ಸಾಯಿಬಾಬಾ ಗುರು ರಾಘವೇಂದ್ರ ಮುಂತಾದ ಗುರು ಸ್ಥಾನದಲ್ಲಿರುವವರ ಸನ್ನಿಧಾನಗಳಿಗೆ ಭೇಟಿ ನೀಡಿ ಎಲ್ಲವೂ ಶುಭವಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!
Next Post: ಬಕೆಟ್ ಗೆ ಕಟ್ಟಿದ ಉಪ್ಪಿನ ಕಲೆಗಳನ್ನು ಈ ರೀತಿಯಾಗಿ ಸುಲಭವಾಗಿ ಕ್ಲೀನ್ ಮಾಡುವ ವಿಧಾನ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore