Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರೈತರಿಗೆ ಗುಡ್ ನ್ಯೂಸ್.!

Posted on April 18, 2024 By Kannada Trend News No Comments on ರೈತರಿಗೆ ಗುಡ್ ನ್ಯೂಸ್.!

 

ರೈತರಿಗೆ ರೈತ ಕುಟುಂಬದವರಿಗೆ ಗುಡ್ ನ್ಯೂಸ್ ಬಂದಿದ್ದು ವಿವಿಧ ಯೋಜನೆಗಳ ಅಡಿಯಲ್ಲಿ ಎಲ್ಲಾ ರೈತರಿಗೆ ತೆಂಗು ಸಸಿ ನಾಟಿ ನಿರ್ವಹಣೆಗೆ ಸಹಾಯಧನ. ಕೃಷಿ ಹೊಂಡ ನಿರ್ಮಾಣ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರು ಪೂರ್ಣ ಮಾಡುವುದಕ್ಕೆ ಹಣ ಸಹಾಯಧನ ಸೇರಿದಂತೆ, ಈರುಳ್ಳಿ ಶೇಖರಣ ಘಟಕ ನಿರ್ಮಾಣ, ನೆರಳು ಪರದೆ‌.

ಪ್ಯಾಕ್ ಹೌಸ್ ಮತ್ತು ತಳ್ಳುವ ಗಾಡಿ ಹೀಗೆ ವಿವಿಧ ಘಟಕಗಳಿಗೆ ಹೀಗೆ ಎಲ್ಲಾ ವರ್ಗದ ರೈತರಿಗೆ ಶೇಕಡ 50ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲು ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಹೌದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಹನಿ ನೀರಾವರಿ ಕಾರ್ಯಕ್ರಮದ ಅಡಿ ಸಹಾಯಧನವನ್ನು ನೀಡಲಾಗುತ್ತದೆ.

ಈ ಸುದ್ದಿ ಓದಿ:-ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿ ಗಳಿಗೆ ಶೇಕಡ 75ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡ 90ರಂತೆ ಸಹಾಯಧನವನ್ನು ವಿತರಿಸಲಾಗುವುದು. ಮೆಘ ಮೈಕ್ರೋ ಅಗ್ರಿ ಆರ್‌ಟಿ ಸಿಸ್ಟಮ್ ಕಾರ್ಯಕ್ರಮದ ಅಡಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ.

ಮಾವು, ಸೀತಾಫಲ, ಸೀಬೆಹಣ್ಣು, ಗೇರೆ ಹಣ್ಣು, ಹುಣಸೆಹಣ್ಣು, ನೇರಳೆ ಮತ್ತು ಎಳನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಮತ್ತು ಬಯೋ ಡೈಜಿಸ್ಟರ್ ಮತ್ತು ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ, ಮತ್ತು ಶ್ರೀಗಂಧ ಬೆಳೆಯುವು ದಕ್ಕೂ ಕೂಡ ಅರ್ಜಿಯನ್ನು ಪ್ರಾರಂಭಿಸಲಾಗಿದೆ.

ಹೀಗೆ ಮೇಲ್ಕಂಡ ಎಲ್ಲ ಯೋಜನೆಗಳ ಅಡಿಯಲ್ಲಿ ಆಸಕ್ತ ಎಲ್ಲಾ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಸಕ್ತ ರೈತರು ಹಾಗೂ ರೈತರ ಕುಟುಂಬಕ್ಕೆ ಸೇರಿದವರು ಹಾಗೂ ರೈತ ಬಾಂಧವರು ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಅಥವಾ ನಿಮಗೆ ಸಂಬಂಧಪಟ್ಟ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಆದ್ದರಿಂದ ಯಾರೆಲ್ಲ ರೈತರು ಈ ಮೇಲೆ ಹೇಳಿದ ಇಷ್ಟು ಬೆಳೆಗಳನ್ನು ಬೆಳೆಯಬೇಕು ಎಂದು ಆಸಕ್ತಿ ಇದ್ದರೆ ಅವರು ಕೂಡಲೇ ಈಗ ನಾವು ಹೇಳಿದ ಈ ಮಾಹಿತಿಯನ್ನು ಅನುಸರಿಸುವುದರ ಮೂಲಕ ಆ ಒಂದು ಸ್ಥಳಗಳಿಗೆ ಹೋಗಿ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಆನಂತರ ನೀವು ಈ ಬೆಳೆಗಳನ್ನು ಬೆಳೆಯುವುದರ ಮೂಲಕ ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಅವರ ಭೂಮಿಗೆ ತಕ್ಕಂತೆ ಯಾವ ಬೆಳೆಯನ್ನು ಬೆಳೆದರೆ ಅವರಿಗೆ ಲಾಭ ಉಂಟಾಗುತ್ತದೆ ಹಾಗೂ ಯಾವ ಸ್ಥಳದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎನ್ನುವುದನ್ನು ಸಹ ಕೃಷಿ ಅಧಿಕಾರಿಗಳನ್ನು ಕೇಳಿ ತಿಳಿದುಕೊಂಡು ಆನಂತರ ನೀವು ಅಂದುಕೊಂಡಂತೆ ಬೆಳೆಗಳನ್ನು ಬೆಳೆಯುವುದರ ಮೂಲಕ ಅತಿಹೆಚ್ಚಿನ ಲಾಭವನ್ನು ಸಹ ಪಡೆಯಬಹುದು.

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ರೈತರು ಕೂಡ ಇಂತಹ ಕೆಲವೊಂದಷ್ಟು ಪ್ರಯೋಜನ ಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ತಮ್ಮ ಜೀವನ ದಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆದು ತಮ್ಮ ಜೀವನದಲ್ಲಿ ಅಭಿವೃದ್ಧಿ ಯನ್ನು ಪಡೆಯಬಹುದಾಗಿದೆ ಎಂದೇ ತಿಳಿಸಲಾಗಿದೆ.

ಈ ಸುದ್ದಿ ಓದಿ:-ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!

ಒಟ್ಟಾರೆಯಾಗಿ ಈ ಒಂದು ಯೋಜನೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ರೈತರು ಕೂಡ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಅವರು ಕೂಡ ಎಲ್ಲರಂತೆ ನೆಮ್ಮದಿಯ ಜೀವನವನ್ನು ನಡೆಸಬೇಕು ಎಲ್ಲದರಲ್ಲಿ ಯೂ ಕೂಡ ಲಾಭವನ್ನು ಪಡೆಯಬೇಕು ಎನ್ನುವುದೇ ಈ ಯೋಜನೆಯ ಉದ್ದೇಶವಾಗಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸಂಸದ ಪಿ.ಸಿ ಮೋಹನ್​ ಭರಪೂರ ಕೊಡುಗೆ
Next Post: ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore