Mysore: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ನೀಡಲು ನಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತೆ.!

ಮಿಲ್ಕಿ ಬ್ಯೂಟಿ ತಮನ್ನಾ (ACTRESS THAMANNA)ಎಲ್ಲರಿಗೂ ಇಷ್ಟ ಪಾನ್ ಇಂಡಿಯ ನಟಿಯಾಗಿರುವ ಈಕೆಗೆ ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ದೊಡ್ಡಮಟ್ಟದ ಅಭಿಮಾನಿಗಳು ಇದ್ದಾರೆ. ಆದರೆ ಕರ್ನಾಟಕದ ಉತ್ಪನ್ನವಾದ ಮೈಸೂರು ಸ್ಟ್ಯಾಂಡರ್ಡ್ ಸೋಪ್ ಗೆ (MYSORE SANDAL SOAP) ಈಕೆಯನ್ನು ರಾಯಭಾರಿಯಾಗಿ (BRAND AMBASSADOR) ಜೀವಿಸಿರುವ ವಿಚಾರ ಮಾತ್ರ ಕರ್ನಾಟಕ ಇಚ್ಛೆಗೆ ವಿರೋಧವಾಗಿದೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯಿಂದ ಸ್ಪಷ್ಟವಾಗಿದೆ.

ಕಳೆದೊಂದು ವಾರದಿಂದ ಈ ಒಂದು ವಿಷಯ ಬಾರಿ ಚರ್ಚೆ ಆಗುತ್ತಿದೆ. ಕನ್ನಡ ಪರ ಸಂಘಟನೆಗಳು ಹಾಗೂ ಮತ್ತೊಂದು ಕಡೆ ಸಿನಿಮಾ ಕ್ಷೇತ್ರದವರು ಸೇರಿತಂತೆ ಕನ್ನಡ ನೆಲದ ಅಭಿಮಾನವುಳ್ಳ ಪ್ರತಿಯೊಬ್ಬರೂ ಕೂಡ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಕನ್ನಡ ನೆಲ, ಇಲ್ಲಿನ ಸಂಸ್ಕೃತಿ, ಮೈಸೂರ್ ಸ್ಯಾಂಡಲ್ ಸೋಪ್ ಈ ಬಗ್ಗೆ ನೇರವಾಗಿ ನಟಿ ಸಂಬಂಧ ಹೊಂದಿಲ್ಲ, ಯಾವುದು ಪರಭಾಷ ನಟಿಯನ್ನು ಎರಡು ದಿನದ ಜಾಹಿರಾತಿಗಾಗಿ ರೂ. 6.2 ಕೋಟಿ ಸಂಭಾವನ ನೀಡಿ ಕರೆತರುವ ಸರ್ಕಾರದ ಈ ನಿರ್ಧಾರ ಅವಿವೇಕದ್ದು ಎನ್ನುವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಗೆ ತನ್ನದೇ ಆದ ಇತಿಹಾಸ ಇದೆ ಹಾಗೂ ಈಗಾಗಲೇ ಅದು ತನ್ನ ಚಾಪನ್ನು ಮೂಡಿಸದೆ ಹೀಗಾಗಿಯೂ ಒಂದು ವೇಳೆ ಪ್ರಚಾರಕ್ಕಾಗಿ ನಟಿಯರನ್ನು ಬಳಸಿಕೊಳ್ಳುವುದೇ ಆಗಿದ್ದರೆ ಇಲ್ಲಿನ ನಟಿಯರನ್ನೇ ಆಯ್ಕೆ ಮಾಡಬಹುದಿತ್ತು ಸರ್ಕಾರದ ಇನ್ನಿತರದಿಂದ ನಮ್ಮ ರಾಜ್ಯದ ತೆರಿಗೆ ಹಣ ಅನ್ಯಾಯವಾಗಿ ಬೇರೆ ಕಡೆ ಹರಿಯುತ್ತಿದೆ ಎನ್ನುವುದು ಇನ್ನು ಕೆಲವರ ವಾದ.

ಇನ್ನು ಸ್ಯಾಂಡಲ್ ವುಡ್ ನಟಿಯರಾದ ರಮ್ಯಾ, ರಾಗಿಣಿ ಸೇರಿದಂತೆ ಅನೇಕ ನಟಿಯರು ಕೂಡ ನೇರವಾಗಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಕನ್ನಡ ಪರ ಹೋರಾಟಗಾರರು ಕೂಡ ಸರ್ಕಾರವನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ, ಜನಸಾಮಾನ್ಯರು ಕೂಡ ಸರ್ಕಾರದ ಈ ನಿಲುವನ್ನು ಖಂಡಿಸಿದ್ದಾರೆ. ಇದೆಲ್ಲವನ್ನು ಗಮನಿಸಿದ ಬಳಿಕ ಇದೀಗ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಚಿವರು ಈ ಬಗ್ಗೆ ಸ್ಪಷ್ಟತೆ ನೀಡುವ ಪ್ರಯತ್ನಪಟ್ಟಿದ್ದಾರೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವರಾದ ಎಂ. ಬಿ ಪಾಟೀಲ್ (MINISTER M. B PATIL) ಇವುಗಳಿಗೆ ಪ್ರತಿಕ್ರಿಯಿಸಿದ್ದಾರೆ. ತಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿದ್ದಾರೆ. ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಳಿಕ ಮುಂದುವರೆದು ನಮ್ಮ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ವಿಜೃಂಭಿಸುವಂತೆ ಮಾಡುವ ಕಾಯಕದಲ್ಲಿ ಇದು ಒಂದು ಭಾಗವಷ್ಟೆ. ಈ ಕಾರ್ಯವು ಕೇವಲ ಒಂದು ತಂತ್ರದ ಮೇಲೆ ಅವಲಂಬಿತವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮನ್ನಾ ಭಾಟಿಯಾ ಆಯ್ಕೆ ಪರ ಕೂಡ ಇಲ್ಲಿನ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಈ ವಿವಾದ ತಣ್ಣಗಾಗುತ್ತಾ ಅಥವಾ ಸಚಿವರ ಈ ಹೇಳಿಕೆಯು ಇನ್ನಷ್ಟು ವಿವಾದವನ್ನು ಬುಗಿಲೇಳುವಂತೆ ಮಾಡುತ್ತದೆಯಾ ಕಾದು ನೋಡಬೇಕಿದೆ.

Leave a Comment

WhatsApp Group Join Now
Telegram Group Join Now