Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.

Posted on August 7, 2022 By Kannada Trend News No Comments on ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.

ಕರುನಾಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ದಚ್ಚು ಅದ್ಯಾಕೋ ಇತ್ತೀಚಿಗೆ ತೀರ ವಿವಾದಕ್ಕೆ ಎಡೆಯಾಗುತ್ತಿದ್ದಾರೆ. ಕಳೆದ ಬಾರಿ ಅವರ ವಾಯ್ಸ್ ನಲ್ಲಿ ರಿಲೀಸ್ ಆದ ರೆಕಾರ್ಡಿಂಗ್ ಒಂದರಲ್ಲಿ ಮಾಧ್ಯಮಗಳನ್ನು ತೀವ್ರವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಕಾರಣ ಮಾಧ್ಯಮಗಳು ದರ್ಶನ್ ಅವರ ಯಾವುದೇ ಸಿನಿಮಾಗಳಿಗೂ ನಾವು ಪ್ರಚಾರ ನೀಡುವುದಿಲ್ಲ ಎಂದು ಸ್ಟ್ರೈಕ್ ಮಾಡುತ್ತಿವೆ. ಜೊತೆಗೆ ದರ್ಶನ್ ಅವರ ಹೆಸರು ಇನ್ ಯಾವುದೇ ಸಂದರ್ಭದಲ್ಲಿ ಬಂದರೂ ಕೂಡ ಅಲ್ಲಿಗೆ ಬೀಪ್ ಸೌಂಡ್ ಹಾಕುವಷ್ಟು ದರ್ಶನ್ ಅವರನ್ನು ದ್ವೇಷಿಸುತ್ತಿದೆ. ಆದರೂ ದರ್ಶನ ಅಭಿಮಾನಿಗಳೇ ಸೇರಿಕೊಂಡು ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಕೆಲಸ ಮತ್ತು ದರ್ಶನ್ ಅವರ ಇನ್ನುಳಿದ ಎಲ್ಲಾ ಸಿನಿಮಾ ಸಂಭದಿತ ಕೆಲಸಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಈ ಸಮಯದಲ್ಲಿ ಮತ್ತೊಮ್ಮೆ ಪುನೀತ್ ಅವರ ಸಾವಿನ ಬಗ್ಗೆ ಹೇಳಿರುವ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಪುನೀತ್ ಅಭಿಮಾನಿಗಳ ಕೋಪಕ್ಕೆ ಇದು ಕಾರಣವಾಗಿದೆ. ಹಾಗಾಗಿ ದರ್ಶನ್ ಅವರು ಕ್ಷಮೆ ಕೇಳುವವರೆಗೂ ಕ್ರಾಂತಿ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಹೊಸದುರ್ಗ, ಬಳ್ಳಾರಿ, ವಿಜಯನಗರ ಮತ್ತು ಬೆಂಗಳೂರು ಸಿರಿದಂತೆ ಹಲವು ಕಡೆ ಪುನೀತ್ ಅಭಿಮಾನಿಗಳು ದರ್ಶನ್ ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ವಿವಾದ ಏನೆಂದರೆ ದರ್ಶನ್ ಅವರು ಮಾತಿನ ಬರದಲ್ಲಿ ಅಭಿಮಾನಿಗಳ ಅಭಿಮಾನ ಎಷ್ಟಿದೆ ಎಂದು ಪುನೀತ್ ಅವರ ಸಾವಿನಲ್ಲಿ ನಾವು ನೋಡಿದ್ದೇವೆ ಆದರೆ ನನ್ನ ಅಭಿಮಾನಿಗಳು ನನಗೆ ಅದನ್ನು ಬದುಕಿರುವಾಗ ತೋರಿಸಿದ್ದಾರೆ ಇದಕ್ಕಿಂತ ಹೆಚ್ಚಿಗೆ ಏನು ಬೇಕು ಎಂದು ಮಾತಿನ ಬರದಲ್ಲಿ ಹೇಳಿದ್ದರು.

ಅವರು ಯಾವುದೇ ವಿವಾದ ಮಾಡಬೇಕು ಅಥವಾ ಯಾರಿಗಾದರೂ ಅವಮಾನ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ಈ ರೀತಿ ಮಾಡದಿದ್ದರೂ ಸಹ ಕೆಲ ಕಿಡಿಗೇಡಿಗಳು ಅವರು ಹೇಳಿರುವ ಮಾತುಗಳನ್ನು ತಿರುಚಿ ಈ ರೀತಿ ಪುನೀತ್ ಅವರ ಸಾ.ವಿ.ಗೆ ಅವಮಾನ ಮಾಡಿದರೆ ಎಂದು ಬಿಂಬಿಸುತ್ತಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಹೆಸರು ಹೇಳಿಕೊಂಡು ಇನ್ನಿತರ ವಾಕ್ಯಗಳನ್ನು ಸೇರಿಸಿ ಬರೆಯುತ್ತಿದ್ದಾರೆ, ಇದರಿಂದ ಮನನೊಂದು ಕೊಂಡಿರುವ ಪುನೀತ್ ಅಭಿಮಾನಿಗಳು ಇದಕ್ಕೆ ಕಾರಣ ದರ್ಶನ್ ಎಂದು ತಿಳಿದು ಅವರ ಕ್ರಾಂತಿ ಸಿನಿಮಾ ಅಡ್ಡ ಪಡಿಸುವುದಾಗಿ ಹೇಳುತ್ತಿದ್ದಾರೆ. ಹಾಗೂ ಹೊಸ ದುರ್ಗದ ಅಭಿಮಾನಿಗಳು ಪುನೀತ್ ಅವರ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುತ್ತಾ ಅಕಸ್ಮಾತ್ ಅವರೇನಾದರೂ ಕ್ಷಮೆ ಕೇಳದೆ ಹೋದರೆ ಇನ್ನು ದರ್ಶನ್ ಅವರ ಯಾವ ಸಿನಿಮಾಗಳನ್ನು ಕೂಡ ಹೊಸ ದುರ್ಗದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಅವರು ಪುನೀತ್ ಅವರ ಮೇಲೆ ತುಂಬಾ ಪ್ರೀತಿ ತೋರಿಸುತಿದ್ದರು ಅಲ್ಲದೆ ನಾವು ರಾಜ್ ಕುಟುಂಬದ ಕಾಲಿನ ಧೂಳಿಗೂ ಸಮಯ ಇಲ್ಲ ನಾವು ಅವರ ಮನೆ ಅನ್ನ ತಿಂದುಕೊಂಡು ಬೆಳೆದಿರುವವರು ಎಂದು ಹೇಳುತ್ತಿದ್ದರು ಅಂತಹದರಲ್ಲಿ ಪುನೀತ್ ಅವರ ಬಗ್ಗೆ ಅವರು ಇಲ್ಲದ ಈ ನೋವಿನ ಸಮಯದಲ್ಲಿ ಯಾಕೆ ಈ ರೀತಿ ಮತ್ತೆ ಹೇಳಿಕೆ ನೀಡಿ ನಮ್ಮನ್ನು ನೋಯಿಸುತ್ತಿದ್ದಾರೆ ಎಂದು ಕೂಡ ಅಭಿಮಾನಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದುವರೆಗೆ ವಿವಾದದ ಬಗ್ಗೆ ಬಗ್ಗೆ ದರ್ಶನ್ ಅವರು ಏನು ಹೇಳಿಲ್ಲ ಮುಂದೆ ಇದು ಏನು ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ ಅಷ್ಟೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

Entertainment Tags:Appu Fans, Darshan, Darshan fans
WhatsApp Group Join Now
Telegram Group Join Now

Post navigation

Previous Post: ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.
Next Post: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore