Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

Posted on August 25, 2022 By Kannada Trend News No Comments on 13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದಲೂ ಎಲ್ಲೇ ನೋಡಿದರೂ ಕೂಡ ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಪಟ್ಟಂತಹ ಪ್ರಕರಣಗಳೇ ಕಂಡು ಬರುತ್ತಿದೆ. ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ ಒಂದು ಕಡೆ ಅನಿರುಧ್ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ವಾದ ಮಾಡುತ್ತಿದ್ದರೆ. ಮತ್ತೊಂದು ಕಡೆ ಆರೂರು ಜಗದೀಶ್ ಮತ್ತು ಉತ್ತಮ ಎಂಬುವವರು ಅನಿರುಧ್ ಅವರು ಬಹಳನೇ ದುರಹಂಕಾರಿ ನಮ್ಮ ಮಾತನ್ನು ಕೇಳುವುದಿಲ್ಲ ಕಥೆಯಲ್ಲಿ ಬದಲಾವಣೆ ಮಾಡಿ ಅಂತ ಹೇಳುತ್ತಾರೆ. ಸ್ಕ್ರಿಪ್ಟ್ ಅನ್ನು ತಮಗೆ ತಾವೇ ಬದಲಾಯಿಸಿಕೊಳ್ಳುತ್ತಾರೆ.

ನಾವು ಕೊಡುವ ಡೈಲಾಕ್ ಒಂದು ಆದರೆ ಅವರು ಹೇಳುವ ಡೈಲಾಗ್ ಬೇರೆ ಅಷ್ಟೇ ಅಲ್ಲದೆ ಚಿಕ್ಕಪುಟ್ಟ ವಿಚಾರಗಳಿಗೂ ಕೂಡ ತುಂಬಾನೇ ಕೂಗಾಡುತ್ತಾರೆ, ಚಿರಾಡುತ್ತಾರೆ ನಿರ್ದೇಶಕರು ನಿರ್ಮಾಪಕರು ಎಂಬ ಗೌರವವಿಲ್ಲ ನಮಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಎಂದು ತಮ್ಮ ವಾದವನ್ನು ಮಂಡಿಸುತ್ತಾರೆ. ಈ ವಿಚಾರದ ಬಗ್ಗೆ ನಟ ಅನಿರುಧ್ ಅವರನ್ನು ಕೇಳಿದಾಗ ಖಂಡಿತವಾಗಿಯೂ ಕೂಡ ಅಂತಹ ಯಾವುದೇ ಅಹಿತಕರ ಘಟನೆ ನನ್ನಿಂದ ನಡೆದಿಲ್ಲ. ನೀವು ಎಂದಾದರೂ ನನ್ನನ್ನು ನೋಡಿದ್ದೀರಾ ನಾನು ದುರಂಕಾರದಿಂದ ನಡೆದುಕೊಳ್ಳುತೀನಾ, ಒಂದು ವೇಳೆ ನಾನು ದುರಂಕಾರದಿಂದ ನಡೆದುಕೊಳ್ಳುವ ಹಾಗಿದ್ದರೆ ಇಷ್ಟು ವರ್ಷಗಳ ಕಾಲ ನಾನು ಚಿತ್ರರಂಗದಲ್ಲಿ ಆಗಿರಬಹುದು ಅಥವಾ ಕಿರುತೆರೆಯಲ್ಲಿ ಆಗಿರಬಹುದು ಇರುವುದಕ್ಕೆ ಸಾಧ್ಯ ಇರುತ್ತಿತ್ತ ನೀವೇ ಊಹೆ ಮಾಡಿಕೊಂಡು ನೋಡಿ.

ನಾನು ಯಾವ ಮನತೆಯನದಿಂದ ಬಂದಿದ್ದೇನೆ ಎಂಬುದು ನಿಮಗೆ ತಿಳಿದೆ ಇದೆ ನಾನು ವಿಷ್ಣುವರ್ಧನ್ ಅವರ ಮನೆಯಿಂದ ಬಂದಂತಹ ವ್ಯಕ್ತಿ ಅವರ ಸರಳತೆ ಅವರ ಸೌಮ್ಯ ಸ್ವಭಾವ ಹಾಗೂ ಅವರ ಗುಣಗಳನ್ನೇ ಮೈಗೂಡಿಸಿಕೊಂಡು ಹೋಗಿದ್ದೇನೆ. ಹೀಗಿರುವಾಗ ನಾನು ಹೇಗೆ ದುರಂಕಾರದಿಂದ ನಡೆದುಕೊಳ್ಳುವುದಕ್ಕೆ ಸಾಧ್ಯ ಮತ್ತೊಬ್ಬರನ್ನು ನಿಂದಿಸುವುದಕ್ಕೆ ಸಾಧ್ಯ ಎಂದು ಅನಿರುದ್ಧ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಧಾರಾವಾಹಿಗೆ ನಾನು ನಟನೆ ಮಾಡಲು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನೆಂದರೆ, ಈ ಧಾರಾವಾಹಿಯನ್ನು ನಾವು ಸಿನಿಮಾದ ರೀತಿಯಲ್ಲಿ ಅದ್ದೂರಿ ತನದಿಂದ ತೋರಿಸುತ್ತೇವೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ನಾನು ಈ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ನಾನು ಒಪ್ಪಿಕೊಂಡೆ.

ಆದರೆ ದಿನ ಕಳೆದಂತಹ ಈ ಧಾರಾವಾಹಿ ಎಷ್ಟರ ಮಟ್ಟಿಗೆ ಕಳಪೆ ಪ್ರದರ್ಶನವನ್ನು ಕಂಡಿತು ಅಂದರೆ ಅದನ್ನು ನಾನು ಬಾಯಿ ಮಾತಿನಿಂದ ಹೇಳಲು ಸಾಧ್ಯವಿಲ್ಲ. ಕೆಲವು ಉದಾಹರಣೆಗಳನ್ನು ಹೇಳುತ್ತೇನೆ ನೀವೇ ಒಮ್ಮೆ ಗಮನಿಸಿ ಧಾರಾವಾಹಿಯಲ್ಲಿ ನನ್ನನ್ನು 13000 ಕೋಟಿಯ ಒಡೆಯ ಎಂದು ತೋರಿಸಿದ್ದಾರೆ. ಆದರೆ ನಾನು ಮೊದಲು ಬೆಂಜ್ ಕಾರ್ ನಲ್ಲಿ ಓಡಾಡುತ್ತಿದ್ದೆ ದಿನಕಳೆದಂತೆ ಬೆಂಜ್ ಕಾರನ್ನು ಬಿಟ್ಟು ಇನೋವಾ ಕಾರನ್ನು ಓಡಿಸುವುದಕ್ಕೆ ಹೇಳಿದರು ಅದನ್ನು ನಾನು ಒಪ್ಪಿಕೊಂಡೆ. ಸುಮಾರು ಒಂದುವರೆ ವರ್ಷದಿಂದ ನಮ್ಮ ಬೆಡ್ರೂಮ್ ನಲ್ಲಿ ಇರುವಂತಹ ಕಾರ್ಪೆಟ್ ಒಂದೇ ಇದೆ ಅದನ್ನು ಬದಲಾಯಿಸಿಲ್ಲ ಇದನ್ನು ನಾನು ಹೇಳಿಲ್ಲ ಆದರೆ ನನ್ನ ಅಭಿಮಾನಿಗಳಿಗೆ ಸ್ವತಃ ಮೆಸೇಜ್ ಮಾಡಿ ದಯವಿಟ್ಟು ಆ ಬೆಡ್ರೂಮ್ ನಲ್ಲಿ ಇರುವಂತಹ ಕಾರ್ಪೆಟ್ ಅನ್ನು ಬದಲಾಯಿಸಿ ಒಂದುವರೆ ವರ್ಷದಿಂದ ಅದನ್ನೇ ಬಳಕೆ ಮಾಡುತ್ತಿದ್ದೀರಲ್ಲ ಎಂದು ಹೇಳಿದ್ದಾರೆ.

ಇದು ಒಂದು ಕಡೆಯಾದರೆ ನಮ್ಮ ಅಡುಗೆ ಮನೆ ನೋಡಿದ್ದೀರಾ ಅಲ್ಲಿ ಬಳಕೆ ಮಾಡುವಂತಹ ವಸ್ತುಗಳನ್ನು ನೋಡಿದ್ದೀರಾ. ಮೊದಲು ಜೊತೆ ಜೊತೆಯಲಿ ಧಾರಾವಾಹಿ ಎಷ್ಟು ಅದ್ದೂರಿ ತನದಿಂದ ತೋರಿಸಿದರು ಆದರೆ ದಿನ ಕಳೆದಂತೆ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂಬುದನ್ನು ನೀವೇ ನೋಡಿ. ಇದ್ಯಾವುದನ್ನು ಕೂಡ ನಾನು ಪ್ರಶ್ನೆ ಮಾಡುವುದಿಲ್ಲ ಏಕೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವರದ್ದೇ ಆದ ಕಷ್ಟ ನಷ್ಟಗಳು ಇರುತ್ತದೆ. ಹಾಗಾಗಿ ಎಲ್ಲಾ ವಿಚಾರದ ಬಗ್ಗೆಯೂ ಮೂಗು ತೂರಿಸುವುದು ಒಳ್ಳೆಯದಲ್ಲ ಎಂದು ನಾನು ಅರಿತುಕೊಂಡಿದ್ದೇನೆ. ಇಂತಹ ಸಮಯದಲ್ಲೂ ಕೂಡ ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ವರಿಸುತ್ತಿದ್ದಾರೆ ಹಾಗಾಗಿ ಈ ವಿಚಾರವನ್ನು ಇಂದು ನಿಮ್ಮ ಮುಂದೆ ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ನಟ ಅನಿರುಧ್ ಅವರು ತಮ್ಮ ಅಳಲನ್ನು ತೋರಿಸಿಕೊಂಡಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿ ತಂಡದಿಂದ ಈಗಾಗಲೇ ಅನಿರುಧ್ ಅವರನ್ನು ಹೊರಹಾಕಿದ್ದು ಅವರ ಪಾತ್ರಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಧಾರಾವಾಹಿ ತಂಡ ನಿರ್ಧರಿಸಿದೆ. ಸ್ವತಃ ಅನಿರುಧ್ ಅವರೆ ಕರೆ ಮಾಡಿ ನಾನು ಪಾತ್ರವನ್ನು ಮುನ್ನಡೆಸಿಕೊಂಡು ಹೋಗಲು ಸಿದ್ದ ಎಂಬ ವಿಚಾರವನ್ನು ಹೇಳಲು ಕರೆ ಮಾಡಿದರು ಕೂಡ ಅವರ ಕರೆಯನ್ನು ಸ್ವೀಕರಿಸಿಲ್ಲ. ಇವೆಲ್ಲವನ್ನು ನೋಡುತ್ತಿದ್ದರೆ ಯಾರದ್ದು ತಪ್ಪು ಯಾರದ್ದು ಸರಿ ಎಂಬುದನ್ನು ನೀವೇ ಊಹೆ ಮಾಡಿಕೊಂಡು ನೋಡಿ ನಿಮ್ಮ ಪ್ರಕಾರ ಈ ವಿಚಾರದಲ್ಲಿ ತಪ್ಪು ಯಾರದ್ದು ಇರಬಹುದು ಎಂಬುದನ್ನು ನಮಗೆ ಕಾಮೆಂಟ್ ಮಾಡಿ.

ಅನಿರುದ್ಧ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ಒಮ್ಮೆ

Entertainment Tags:Aniruddh jatkhar, Anirudh, Anusirimane, Arya vardhan, Jothe jotheyali
WhatsApp Group Join Now
Telegram Group Join Now

Post navigation

Previous Post: ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?
Next Post: ಆಂಕರ್ ಅನುಶ್ರೀ ಮಾಡಿದ ಈ ಹಾಟ್ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore