Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದೆಲ್ಲ ನನ್ಗೆ ಆಗ್ಬೇಕಿತ್ತಾ ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟ ವೈಷ್ಣವಿ

Posted on November 27, 2022November 27, 2022 By Kannada Trend News No Comments on ಇದೆಲ್ಲ ನನ್ಗೆ ಆಗ್ಬೇಕಿತ್ತಾ ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟ ವೈಷ್ಣವಿ

 

ಕಿರುತೆರೆ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಕಳೆದ ತಿಂಗಳು ವೈಷ್ಣವಿ ಗೌಡ ಅವರು ವಿರಾಜ್ ಎನ್ನುವ ಸಿನಿಮಾದ ಹೀರೋ ಆದ ವಿದ್ಯಾಭರಣ ಅವರೊಂದಿಗೆ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ಮತ್ತು ಫೋಟೋಗಳಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಸೇರಿದಂತೆ ಸನ್ನಿಧಿ ಮತ್ತು ವಿದ್ಯಾಭರಣ ಅವರ ಕುಟುಂಬದ ಅನೇಕ ಸದಸ್ಯರು ಇದ್ದರು.

ಹೀಗಾಗಿ ಎಲ್ಲರೂ ಸಹ ಸನ್ನಿಧಿಯವರು ಗುಟ್ಟಾಗಿ ಮದುವೆ ಒಪ್ಪಂದ ಅಥವಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದರು. ಇದಾದ ಸ್ವಲ್ಪ ದಿನಗಳ ನಂತರ ನಾನಿನ್ನು ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ ಎನ್ನುವ ಹೇಳಿಕೆ ಕೊಟ್ಟು ವೈಷ್ಣವಿ ಗೊಂದಲ ಕ್ರಿಯೇಟ್ ಮಾಡಿದ್ದರು. ಇದರ ಬೆನ್ನಲ್ಲೇ ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾಭರಣ ಅವರ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಆಡಿಯೋಗಳು ಅಪ್ಲೋಡ್ ಆಗಿವೆ.

ಕಿರುತೆರೆ ನಟಿ ಎಂದು ಹೇಳಿಕೊಂಡಿರುವ ಯುವತಿ ಮತ್ತು ಮತ್ತೊಬ್ಬ ಹುಡುಗಿ ಇಬ್ಬರು ಈ ಆಡಿಯೋದಲ್ಲಿ ಮಾತನಾಡಿದ್ದಾರೆ. ಇವರಿಬ್ಬರ ಪರಸ್ಪರ ಒಬ್ಬರಿಗೊಬ್ಬರು ಕರೆ ಮಾಡಿ ಮಾತನಾಡಿರುವ ಆಡಿಯೋ ಇದಾಗಿದ್ದು ಬೇಕಂತಲೇ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ವಿದ್ಯಾಭರಣ್ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿಲ್ಲ ಈಗಾಗಲೇ ನಾಲ್ಕೈದು ಹುಡುಗಿಯರ ಜೊತೆ ಇವರಿಗೆ ಸಂಬಂಧ ಇತ್ತು, ಮತ್ತು ಇವರ ಈ ಎಲ್ಲಾ ಆಟಗಳಿಗೆ ಅವರ ಕುಟುಂಬಸ್ಥರ ಸಪೋರ್ಟ್ ಇದೆ.

ವೈಷ್ಣವಿ ಅವರನ್ನು ಇವನು ವಿವಾಹವಾದರೆ ಮೂರೇ ವರ್ಷಗಳಲ್ಲಿ ಆ ಮದುವೆ ಮುರಿದು ಬೀಳುತ್ತದೆ ಹೀಗಾಗಿ ಈ ವಿಷಯವನ್ನು ಮೀಡಿಯಾದವರಿಗೆ ಹಾಗೂ ವೈಷ್ಣವಿ ಕುಟುಂಬದವರಿಗೆ ತಿಳಿಸಬೇಕು ಎಂದು ಹೇಳಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ವೈಷ್ಣವಿ ಗೌಡ ಅವರು ಮುಂಚೆ ಅವರ ಬಗ್ಗೆ ತಿಳಿದಿದ್ದು ಒಳ್ಳೆಯದಾಯಿತು ಎಂದು ಹೇಳಿ ಆಗಿದ್ದ ಮಾತುಕತೆ ಮುರಿದುಕೊಳ್ಳುವ ತರಹ ಮಾತನಾಡಿದ್ದಾರೆ.

ಅತ್ತ ವಿದ್ಯಾಭರಣ್ ಈ ಆಡಿಯೋದಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು ನಾವು ಇದಕ್ಕಾಗಿ ಈಗಾಗಲೇ ಸಂಪಂಗಿ ರಾಮನಗರ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದೇವೆ. ಅವರು ಯಾರು ಯಾವ ಉದ್ದೇಶದಿಂದ ಈ ರೀತಿ ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಎನ್ನುವುದನ್ನು ಹುಡುಕುತ್ತಿದ್ದೇವೆ. ಎಲ್ಲರ ಜೀವನದಲ್ಲಿ ಇರುವಂತೆ ನನ್ನ ಜೀವನದಲ್ಲೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಳು ಅಷ್ಟೇ ಆದರೆ ನನ್ನ ಮೇಲೆ ಇಲ್ಲಸಲ್ಲದ ಮಾತುಗಳು ಈ ಆಡಿಯೋ ದಲ್ಲೇ ಉದ್ದೇಶಪೂರ್ವಕವಾಗಿ ಮಾತನಾಡಲಾಗಿದೆ ಎಂದು ಹೇಳಿದ್ದರು.

ಸನ್ನಿಧಿ ಕುಟುಂಬದವರು ಇಂದು ಮೀಡಿಯಾದವರ ಜೊತೆ ಮಾತನಾಡಿದ್ದಾರೆ, ಜೊತೆಗೆ ವಿದ್ಯಾಭರಣ ಅವರ ತಾಯಿ ಕಳಿಸಿರುವ ಆಡಿಯೋ ಕೂಡ ಮೀಡಿಯಾಗೆ ಕೊಟ್ಟಿರುವ ವೈಷ್ಣವಿ ಗೌಡ ಅವರ ತಾಯಿ ಈ ಆರೋಪಗಳಲ್ಲಿ ಎಷ್ಟು ಸತ್ಯವಿದೆಯೋ ಸುಳ್ಳು ಇದೆಯೋ ಗೊತ್ತಿಲ್ಲ ಆದರೆ ಆ ಹುಡುಗಿಯರು ನನಗೆ ಡೈರೆಕ್ಷನ್ ಕೊಡುವ ರೀತಿ ಮಾತನಾಡಿದ್ದಾರೆ ಅದು ಸರಿ ಇಲ್ಲ ಎನಿಸುತ್ತದೆ.

ಮೊದಲ ದಿನವೇ ನಾನು ನಮ್ಮ ಮಗಳಿಗೆ ಈ ವಿಷಯ ತಿಳಿಸಲಿಲ್ಲ. ಮೀಡಿಯಾದಲ್ಲಿ ವಿಷಯ ಜೋರಾಗಿ ಪ್ರಸಾರವಾಗುತ್ತಿದ್ದಂತೆ ಮಗಳು ಬಂದು ಇಷ್ಟೆಲ್ಲಾ ಆಗಿದೆಯಾ ಎಂದು ಕೇಳಿದಳು ಮತ್ತು ನನಗೆ ಮಾತ್ರ ಯಾಕೆ ಹೀಗೆ ಆಗುತ್ತಿದೆ ಎಂದು ದುಃಖಿಸಿದಳು. ಇಂದು ಅವಳು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು ಕೂಡ ಮುಂಚೆ ಇದ್ದ ಲವಲವಿಕೆ ಆಕೆಯ ಮುಖದಲ್ಲಿ ಕಾಣದೆ ನೋವು ತುಂಬಿಕೊಂಡಿತ್ತು ಎಂದು ಹೇಳಿ ವೈಷ್ಣವಿ ತಾಯಿ ಭಾನು ರವಿಕುಮಾರ್ ಕೂಡ ಬೇಸರಿಸಿ ಕೊಂಡಿದ್ದಾರೆ.

Entertainment Tags:Vaishnavi
WhatsApp Group Join Now
Telegram Group Join Now

Post navigation

Previous Post: ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಧಾರವಾಹಿ ಸ್ವಾತಿ, ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ.
Next Post: ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore