ಈ ವರ್ಷ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತರೆಯ ಕಲಾವಿದರುಗಳಿಗೆ ಮದುವೆ ಯೋಗ ಕೂಡಿ ಬಂದಿದೆ. ಈಗಾಗಲೇ ಕನ್ನಡದ ಅನೇಕ ನಾಯಕ ನಟ ನಟಿಯರು ಈ ವರ್ಷ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಮತ್ತೆ ಕೆಲವರು ಸಪ್ತಪದಿ ತುಳಿಯುವ ಮೂಲಕ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದ್ದಾರೆ.
ಮೊನ್ನೆ ಅಷ್ಟೇ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಧಿತಿ ಮತ್ತು ಪಾರು ಧಾರವಾಹಿಯ ಪ್ರೀತಮ್ ಅವರು ಎಂಗೇಜ್ಮೆಂಟ್ ಮಾಡಿಕೊಂಡ ಸುದ್ದಿ ಎಲ್ಲೆಡೆ ವರದಿ ಆಗಿತ್ತು. ಈಗ ಅದೇ ಗಟ್ಟಿಮೇಳ ಧಾರಾವಾಹಿಯ ಮತ್ತೊಬ್ಬ ಕಲಾವಿದೆಯ ಮದುವೆ ಇಂದು ಅದ್ದೂರಿಯಾಗಿ ಜರುಗಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಭಿನಯಿಸುತ್ತಿರುವ ಸುಹಾಸಿನಿ ಪಾತ್ರಧಾರಿ ಸ್ವಾತಿ ಎಚ್ ವಿ ಅವರು ಮೈಸೂರು ಮೂಲದ ನಾಗಾರ್ಜುನ ರವಿ ಎನ್ನುವವರ ಕೈ ಹಿಡಿದಿದ್ದಾರೆ.
ಇವರಿಬ್ಬರ ವಿವಾಹ ಮಹೋತ್ಸವ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದಿದೆ, ನಂದಿನಿ ಅಭಿಷೇಕ್ ಶಿಲ್ಪಾ ಶೆಟ್ಟಿ ಅನಿಕಾ ಸಿಂದ್ಯಾ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ಹರಸಿದ್ದಾರೆ. ಸ್ವಾತಿ ಹೆಚ್ ವಿ ಅವರು ಗಟ್ಟಿಮೇಳ ಧಾರಾವಾಹಿ ಮುಂಚೆ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೊದಮೊದಲು ಇವರನ್ನು ಸರ್ವ ಮಂಗಳ ಮಾಂಗಲ್ಯೇ ಎನ್ನುವ ಧಾರವಾಹಿಯಲ್ಲಿ ಕನ್ನಡಿಗರು ನೋಡಿದ್ದರು.
ಶುಭ ವಿವಾಹ, ರಂಗನಾಯಕಿ, ಗಂಗಾ, ಪುಟ್ಟ ಗೌರಿ ಮದುವೆ, ನಾಗಕನ್ನಿಕೆ, ಬೆಟ್ಟದ ಹೂವು, ಕನ್ಯಾಕುಮಾರಿ ಈ ಧಾರಾವಾಹಿಗಳಲ್ಲಿ ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ವಿಲನ್ ರೋಲ್ಗಳಲ್ಲೇ. ಇಷ್ಟು ಯಂಗ್ ಆಗಿರುವ ಲೇಡಿ ವಿಲನ್ ನಟನೆಗೆ ಕಿರುತೆರೆಯ ಪ್ರೇಕ್ಷಕರು ಮಾರು ಹೋಗಿದ್ದರು. ಇವರು ನಟಿಸಿರುವ ಪಾತ್ರಗಳಲ್ಲಿ ಇವರನ್ನು ನೆನಪಿಟ್ಟುಕೊಂಡಿರುವ ಜನತೆ ರನ್ನು ಅದೇ ಹೆಸರಿನಿಂದ ಗುರುತಿಸುವುದು ಹೆಚ್ಚು.
ಇನ್ನು ಇವರು ಕೈ ಹಿಡಿದಿರುವ ನಾಗಾರ್ಜುನ ರವಿ ಎನ್ನುವವರು ಸಹ ಕಲಾವಿದರಾಗಿದ್ದಾರೆ. ತನ್ನದೇ ಪ್ರಫೆಷನ್ ಪಾರ್ಟ್ನರ್ ಹುಡುಕಿಕೊಂಡಿರುವ ಸ್ವಾತಿ ಎಚ್ಪಿ ಅವರ ಸದ್ದಿಲ್ಲದೆ ಸುಳಿವೇ ಕೊಡದೆ ಮದುವೆಯಾಗಿ ಬಿಟ್ಟಿದ್ದಾರೆ. ಇನ್ನು ಸ್ವಾತಿ ಹೆಚ್ ವಿ ಅವರ ಬಗ್ಗೆ ಹೇಳುವುದಾದರೆ ಇವರು 2009ರಲ್ಲಿ ಮಿಸ್ ಕರ್ನಾಟಕ ಅವಾರ್ಡ್ ಅನ್ನು ಕೂಡ ಮುಡಿಗೇರಿಸಿಕೊಂಡಿದ್ದರು.
ಇದಾದ ಬಳಿಕ ಹಲವು ಸಿನಿಮಾ ಆಫರ್ಗಳು ಕೂಡ ಇವರನ್ನು ಹರಿಸಿ ಬಂದಿದ್ದವು. ಇದುವರೆಗೆ 11 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿರುವ ಇವರು ಆ ನಂತರವಷ್ಟೇ ಕಿರುತೆರೆ ಕಡೆ ಮುಖ ಮಾಡಿದರು. ಸ್ವಾತಿ ಹೆಚ್ ವಿ ಅವರು ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ದಾರ, ಉಡ, ಹುಂಜ, ವಿಘ್ನೇಶ್ವರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರಮಂದಿರ ಮರ್ಲಿನ್ ಇನ್ನೇನು ಬಿಡುಗಡೆಗೆ ತಯಾರಾಗಿದೆ.
ಜುವೆಲರಿ ಆರ್ಟ್ ಅಲ್ಲಿ ಫ್ಯಾಶನ್ ಡಿಸೈನಿಂಗ್ ಡಿಪ್ಲೋಮೋ ಮಾಡಿದ್ದ ಇವರು ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಉದ್ಯೋಗಿ ಆಗಿದ್ದರು. ನೋಡಲು ಸುಂದರಿ ಹಾಗೂ ಕಲೆ ಬಗ್ಗೆ ಆಸಕ್ತಿ ಕೂಡ ಇದ್ದ ಕಾರಣ ಬಣ್ಣ ಹಚ್ಚಲು ನಿರ್ಧಾರ ಮಾಡಿದ್ದ ಇವರು ಮಾಡೆಲ್ ವೃತ್ತಿಯನ್ನು ಆಯ್ದುಕೊಂಡರು. ಇದಾದ ನಂತರ ಒಂದರ ಹಿಂದೆ ಒಂದರಂತೆ ಸಿನಿಮಾ ಹಾಗೂ ಧಾರವಾಹಿ ಆಫರ್ ಗಳು ಇವರನ್ನು ಹುಡುಕಿ ಬಂದವು.
ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ ಈ ನಟಿ ಇಂದು ಕರ್ನಾಟಕದಲ್ಲಿ ಫೇಮಸ್ ಆದ ಕಿರುತೆರೆಯ ಕಲಾವಿದೆಯರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಕೂಡ ಯಂಗ್ ಆಗಿರವ ಇವರು ನಿರ್ವಹಿಸುವ ಪಾತ್ರಗಳು ಮಾತ್ರ ವಯಸ್ಸಿಗಿಂತ ಹೆಚ್ಚಿನ ಪ್ರಬುದ್ಧತೆ ಹೊಂದಿರುವ ಪಾತ್ರಗಳಾಗಿದ್ದು ಒಪ್ಪಿಕೊಂಡ ಪಾತ್ರಕ್ಕೆ ಅಷ್ಟೇ ತಕ್ಕ ಮಟ್ಟದ ನ್ಯಾಯ ಕೂಡ ಒದಗಿಸುವಲ್ಲಿ ಗೆದ್ದಿದ್ದಾರೆ. ಅವರ ಬದುಕಿನ ಹೊಸ ಅಧ್ಯಾಯಕ್ಕೆ ಶುಭವಾಗಲಿ ಎಂದು ಹರಸೋಣ.