Home Entertainment ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

0
ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

ಕನ್ನಡತಿ ಧಾರಾವಾಹಿ ಮುಗಿಯುವ ಬಗ್ಗೆ ಸುಳಿವು ಕೊಟ್ಟ ನಟಿ ರಂಜನಿ ರಾಘವನ್.

ನಟಿ ರಂಜನಿ ರಾಘವನ್ ಅವರು ಈ ಹಿಂದೆ ಪುಟ್ಟಗೌರಿ ಎಂದ ಫೇಮಸ್ ಆಗಿದ್ದರು. ಇದೀಗ ಅವರನ್ನು ಜನ ನಿಧನವಾಗಿ ಪುಟ್ಟಗೌರಿ ಪಾತ್ರದಿಂದ ಮರೆತು ಕನ್ನಡ ಲೆಕ್ಚರರ್ ಅಥವಾ ಭುವಿ ಎಂದು ಕರೆಯುವಷ್ಟು ಕನ್ನಡತಿ ಧಾರಾವಾಹಿ ಪಾತ್ರಕ್ಕೆ ರಂಜಿನಿ ರಾಘವನ್ ಒಗ್ಗಿಕೊಂಡು ಬಿಟ್ಟಿದ್ದಾರೆ. ಕನ್ನಡತಿ ಧಾರವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದು ಪ್ರತಿವಾರದ ಟಿ ಆರ್ ಪಿ ಅಲ್ಲಿ ಇದರದೇ ಮೇಲು ಗೈ ಆಗಿರುತ್ತದೆ.

ಕಳೆದ ಹಲವು ವರ್ಷಗಳಿಂದಲೂ ಕೂಡ ಕನ್ನಡತಿ ಧಾರವಾಹಿ ಪ್ರಸಾರ ಆಗುತ್ತಿದ್ದು ಈ ಧಾರಾವಾಹಿ ಹಿಂದಿಯಲ್ಲಿ ಕೂಡ ಡಬ್ ಆಗಿ ಪ್ರಸಾರವಾಗುತ್ತಿದೆ. ಧಾರಾವಾಹಿಯ ಪ್ರಮುಖ ಪಾತ್ರಗಳಾದ ಹರ್ಷ ಭುವಿ ಅಮ್ಮಮ್ಮ ಮತ್ತು ಸಾನಿಯಾ ಹಾಗೂ ವರು ಪಾತ್ರಗಳು ಜನರ ಮನಸ್ಸಿಗೆ ಬಹಳ ಹಿಡಿಸಿವೆ.

ಎಲ್ಲಾ ಧಾರವಾಹಿಗಳಂತೆ ಇದರಲ್ಲೂ ಟ್ರೈ ಆಂಗಲ್ ಲವ್ ಸ್ಟೋರಿ ಇದ್ದರೂ ಅದರ ಆಚೆಗೆ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ಹಸಿರು ಪೇಟೆಯ ಕನ್ನಡ ಟೀಚರ್ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಾ ಕನ್ನಡ ಕಲಿಸಿ ಉಳಿಸುವ ಪ್ರಯತ್ನದಲ್ಲಿದ್ದರೆ ಈಕೆ ಸಿಂಪ್ಲಿಸಿಟಿ ನೋಡಿ ಹರ್ಷ ಎನ್ನುವ ಹೀರೋ ಆಕೆಯನ್ನು ಬಹಳ ಇಷ್ಟ ಪಡುತ್ತಾನೆ.

ಹರ್ಷನ ತಾಯಿ ರತ್ನಮಾಲ ಅವರು ಸಹ ಹಸಿರು ಪೇಟೆಯವರಾಗಿದ್ದು ಸಣ್ಣ ಕುಟುಂಬದ ಈಕೆ ಇಂದು ದೊಡ್ಡ ಕಂಪನಿ ಕಟ್ಟಿ ನಡೆಸಿಕೊಂಡು ಹಾಗೂ ಅದನ್ನು ಉಳಿಸಲು ಒದ್ದಾಡುತ್ತಿರುತ್ತಾರೆ. ನೂರಾರು ಕೋಟಿ ಮೌಲ್ಯದ ಆಸ್ತಿಗೆ ಒಡತಿ ಆಗಿರುವ ರತ್ನಮ್ಮ ಅವರ ಮಗ ಸ್ಟೈಲ್ ಐಕಾನ್ ಹರ್ಷ ಭುವಿ ಆಪ್ತ ಸ್ನೇಹಿತ ಸ್ನೇಹಿತೆ ವರುವಿನ ಹೃದಯ ಕದ್ದಿರುತ್ತಾನೆ.

ಆದರೆ ಹರ್ಷನ ಪ್ರೀತಿ ಭುವಿ ಕಡೆ ತಿರುಗಿದ ಕಾರಣ ನಾನು ಇಷ್ಟಪಟ್ಟಿದ್ದನ್ನು ದಕ್ಕಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ತಲುಪುವ ವರು ಕೋಪವೀಗ ಭುವಿ ಕಡೆ ತಿರುಗಿದೆ. ತನ್ನ ಮಗನ ಪ್ರೇಯಸಿ ಎನ್ನುವುದನ್ನು ತಿಳಿಯುವ ಮೊದಲೇ ಅಮ್ಮಮ್ಮ ಮತ್ತು ಭುವಿ ನಡುವೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿರುತ್ತದೆ.

ಮನೆಯ ಹಿರಿ ಸೊಸೆ ಆದ ಸಾನಿಯಾ ರತ್ನಮ್ಮ ಕಂಪನಿಯ ಸಿಇಒ ಆಗುವ ಕಾರಣಕ್ಕಾಗಿ ಆದಿಯ ಜೊತೆ ಪ್ರೀತಿ ನಾಟಕವಾಗಿ ಮನೆ ಸೇರುತ್ತಾಳೆ ಇದು ಹರ್ಷ ಹಾಗೂ ಅಮ್ಮಮನಿಗೂ ತಿಳಿದಿರುತ್ತದೆ. ಸಾನಿಯಾ ಮತ್ತು ವರು ನಡುವಿನ ಜುಗಲ್ ಬಂದಿ ಹರ್ಷ ಸಾನಿಯಾ ನಡುವೆ ನಡೆಯುವ ಸಂಘರ್ಷ ನೋಡಲು ಬಹಳ ಮಜವಾಗಿರುತ್ತದೆ.

ಜೊತೆಗೆ ಸುಚಿ, ಬಿಂದು, ಪ್ರತಿಮ, ಭೂಮಿ ಅಜ್ಜಿ ಹಾಗೂ ಲಾಯರ್ ಪಾತ್ರಗಳು ಪಾತ್ರಗಳು ಆಗ ಕಾಣಿಸಿಕೊಂಡು ಕಥೆ ರುಚಿಯನ್ನು ಹೆಚ್ಚಿಸಿದೆ. ಈ ವಿಶೇಷ ಕಥೆಯನ್ನು ಪ್ರತಿದಿನ ನೋಡಲು ಎಲ್ಲರೂ ರಾತ್ರಿ 7:30 ಆಗುವುದನ್ನೇ ಕಾಯುತ್ತಿದ್ದರು. ಆದರೆ ಇದೀಗ ಚಿತ್ರತಂಡದಿಂದ ಶೀಘ್ರದಲ್ಲೇ ಧಾರಾವಾಹಿ ಮುಕ್ತಾಯ ಆಗವುದರ ಬಗ್ಗೆ ಸುಳಿವು ಸಿಗುತ್ತಿದೆ.

ಸ್ವತಃ ಧಾರಾವಾಹಿ ನಾಯಕಿ ಪಾತ್ರಧಾರಿ ಆಗಿರುವ ರಂಜಾನಿ ರಾಘವನ್ ಅವರೇ ರುಚಿ ನಾಲಿಗೆಯಲ್ಲಿ ಇರುವಾಗಲೇ ಊಟ ಮುಗಿಯಬೇಕು ಎನ್ನುವ ಗಾದೆ ಇದೆ ಅದೇ ರೀತಿ ಕಥೆ ಚೆನ್ನಾಗಿರುವಾಗಲೇ ನಾವು ಅಂತ್ಯ ಮಾಡಲು ಬಯಸಿದ್ದೇವೆ. ಸದ್ಯದಲ್ಲೇ ಕನ್ನಡತಿ ಮುಗಿಯಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ ಈಗಷ್ಟೇ ಕನ್ನಡತಿ ಯಲ್ಲಿ ಅಮ್ಮಮ್ಮ ಪಾತ್ರ ಮುಗಿದಿದೆ.

ಅಮ್ಮಮ್ಮ ಇಲ್ಲದೆ ಧಾರಾವಾಹಿ ನೋಡಲು ಪ್ರೇಕ್ಷಕರು ಕೂಡ ಬೇಸರದಲ್ಲಿ ಇದ್ದಾರೆ. ಮನೆ ಹಿರಿಯರು ಇರದ ಮನೆ ಕಥೆ ಹೇಗಿರಲಿ ಭುವಿ ಅಮ್ಮಮ್ಣ ಗೆ ಕೊಟ್ಟ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವ ಕಾತುರದಿಂದ ಜನ ಕಾಯುತ್ತಿದ್ದಾರೆ ಕಥೆ ಹೇಗೆ ಮುಕ್ತಾಯಗೊಳಲಿದೆ ಎನ್ನುವ ನಿರೀಕ್ಷೆ ಕೂಡ ಈಗ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here