Home Entertainment ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

0
ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

 

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕರ್ನಾಟಕ ಕಂಡ ಒಬ್ಬ ಕನಸುಗಾರ. ಇವರು ಹುಟ್ಟಿದ್ದೇ ಸಿನಿಮಾಗಾಗಿ ಎನ್ನುವ ರೀತಿ ಬದುಕು ಪೂರ್ತಿ ಸಿನಿಮಾಗಾಗಿ ಅರ್ಪಿಸಿಕೊಂಡವರು. ಇವರ ಕೆರಿಯರ್ ನ ಆರಂಭಿಕ ದಿನದಲ್ಲಿ ಇವರು ಮುಟ್ಟಿದ್ದೆಲ್ಲ ಚಿನ್ನ ಆಗಿರುತ್ತಿತ್ತು. ಪ್ರೇಮಲೋಕ, ರಣಧೀರ, ಯುಗಪುರುಷ, ಅಂಜದಗಂಡು ಸಿನಿಮಾದಿಂದ ಹಿಡಿದು ಪುಟ್ನಂಜ, ಚಿಕ್ಕೆಜಮಾನ್ರು, ಸಿಪಾಯಿ, ಹಳ್ಳಿಮೇಷ್ಟ್ರು ,ಮಾಂಗಲ್ಯಂ ತಂತುನಾನೇನ, ಕನಸುಗಾರ ಇನ್ನು ಮುಂತಾದ ಅನೇಕ ಸೂಪರ್ ಹಿಟ್ ಗಳನ್ನು ಕನ್ನಡಕ್ಕೆ ನೀಡಿರುವ ಇವರ ಈ ಸಾಧನೆಗೆ ಇವರೇ ಸಾಟಿ.

ಆದರೆ ಅದು ಯಾಕೋ ಕಳೆದ ಕೆಲವು ವರ್ಷಗಳಿಂದ ರವಿಚಂದ್ರನ್ ಅವರ ಯಾವ ಚಿತ್ರವೂ ಅಷ್ಟೊಂದು ದೊಡ್ಡ ಮಟ್ಟದ ಹಿಟ್ ಆಗುತ್ತಿಲ್ಲ. ಇದರಿಂದ ರವಿಚಂದ್ರನ್ ಅವರೂ ಸಹಾ ಬೇಸತ್ತು ಹೋಗಿದ್ದಾರೆ. ಆದರೆ ಸಿನಿಮಾ ಮಾಡುವ ಸ್ಪೂರ್ತಿ ಮಾತ್ರ ಕಡಿಮೆ ಮಾಡಿಕೊಂಡಿಲ್ಲ. ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಪಾಲ್ಗೊಳ್ಳುತ್ತಿದ್ದ ಇವರು ಅದೇ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದರು.

ಇತ್ತೀಚೆಗೆ ಅವರು ತಮ್ಮ ಇಷ್ಟದ ಮನೆಯನ್ನು ಮಾರಿ ಬೇರೆ ಫ್ಲಟ್ ಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಮಾಧ್ಯಮಗಳು ನಾನಾ ಬಣ್ಣ ಕೊಟ್ಟು ಪ್ರಚಾರ ಮಾಡುತ್ತಿರುವ ವಿಷಯವನ್ನು ಹೇಳಿಕೊಂಡು ಎಲ್ಲಕ್ಕಿಂತಲೂ ದುಃಖವಾಗುತ್ತಿರುವುದು ನನ್ನ ಪ್ರೇಕ್ಷಕರಿಗೆ ನೆಚ್ಚಿನ ಸಿನಿಮಾ ಕೊಡಲು ಆಗುತ್ತಿಲ್ಲ ಎನ್ನುವುದು ಎಂದಿದ್ದ ರವಿಚಂದ್ರನ್ ಅವರಿಗೆ ಈಗ ಕೇಡಿ ಚಿತ್ರತಂಡವು ತನ್ನ ಸಿನಿಮಾಗೆ ವಿಶೇಷವಾದ ಪಾತ್ರಕ್ಕೆ ಆಹ್ವಾನಿಸಿದೆ. ಕೇಡಿ ದಿ ಡೆವಿಲ್ ಎನ್ನುವ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶಿಸುತ್ತಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಅವರು ಹೀರೋ ಆಗಿದ್ದಾರೆ.

ರೌಡಿಸಂ ಕುರಿತ ಚಿತ್ರ ಇದಾಗಿದ್ದು ಚಿತ್ರದಲ್ಲಿ ಹಲವು ಸೆಲೆಬ್ರಿಗಳು ಇರುವ ನಿರೀಕ್ಷೆ ಇದೆ. ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರು ಮತ್ತು ಕರ್ನಾಟಕದಿಂದ ಹೋಗಿ ಅಲ್ಲಿ ಹೆಸರು ಮಾಡಿದ ಶಿಲ್ಪಶೆಟ್ಟಿ ಅವರು ಈ ಸಿನಿಮಾದಲ್ಲಿ ಇರುವುದು ಬಹುತೇಕ ಕನ್ಫರ್ಮ್ ಆಗಿದೆ. ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಕೂಡ ಬಹಳ ಅದ್ದೂರಿಯಾಗಿ ನಡೆದಿದ್ದು ಕೆವಿಎನ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಗಡ್ ಲುಕ್ಕಿನಲ್ಲಿ ಧ್ರುವ ಸರ್ಜಾ ಅವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಸಿನಿಮಾ ಕುರಿತು ಹಬ್ಬುತ್ತಿರುವ ಸುದ್ದಿಗಳನ್ನು ನೋಡಿ ಪ್ರೇಕ್ಷಕರು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗ ರವಿಚಂದ್ರನ್ ಅವರು ಸಹ ಈ ಸಿನಿಮಾ ಗೆ ಸೇರಿರುವುದು ತಿಳಿದು ಬಂದಿದ್ದು ಹಾಗೆ ಅವರ ಹೊಸ ಲುಕ್ ಕೂಡ ರಿಲೀಸ್ ಆಗಿದೆ. ಹಣೆಯಲ್ಲಿ ವಿಭೂತಿ ಇಟ್ಟು, ಕಣ್ಣಿಗೆ ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕಾರೆನೊಳಗೆ ಸೂಟು ಬೂಟು ಹಾಕಿಕೊಂಡು ಕುಳಿತಿರುವ ಇವರ ಗೆಟಪ್ ಬಹಳ ವಿಭಿನ್ನವಾಗಿದೆ.

ಇವರ ಈ ಹೊಸ ಲುಕ್ ಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇವರ ಪಾತ್ರದ ಕುರಿತು ತಿಳಿದುಕೊಳ್ಳಲು ಕಾತುರರಾಗಿದ್ದಾರೆ ಮತ್ತು ರವಿಚಂದ್ರನ್ ಅವರಿಗೆ ಈ ಸಮಯದಲ್ಲಿ ಸಿಕ್ಕಿರುವ ಈ ಅವಕಾಶ ಬಹಳ ಅಮೂಲ್ಯದ್ದಾಗಿದೆ. ಅದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಕೂಡ ಸುದ್ದಿ ಆಗಿದೆ. ತಾವು ಅಷ್ಟು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಕೂಡ ರವಿಚಂದ್ರನ್ ಅವರ ಈ ಸಿನಿಮಾಗಾಗಿ ಕೇವಲ ಒಂದು ಕೋಟಿ ರೂಪಾಯಿಗಳನ್ನು ಮಾತ್ರ ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ. ಇದರಿಂದಲಾದರೂ ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ

LEAVE A REPLY

Please enter your comment!
Please enter your name here