ತಲೆಯಲ್ಲಿ ಕೂದ್ಲೇ ಇಲ್ಲ ನೀನು ನನ್ನ ಮದ್ವೆ ಅಗ್ತಿಯಾ.? ಮದ್ವೆ ಪ್ರೋಪೊಸಲ್ ನಿರಾಕರಿಸಿದ ಆಂಕರ್ ಅನುಶ್ರೀ. ಅಷ್ಟಕ್ಕೂ ಅನುಶ್ರೀ ನಾ ಮದ್ವೆ ಆಗ್ತೀನಿ ಅಂತ ಹೇಳಿದ್ದ ಭೂಪ ಯಾರು ಗೊತ್ತ.?

 

ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಜಾದು ಮಾಡಿರುವ ನಿರೂಪಕಿ ಅನುಶ್ರೀ ಅವರು ಎಲ್ಲೇ ಹೋದರು ಕೂಡ ಅವರ ಮದುವೆ ಬಗ್ಗೆ ಸುದ್ದಿ ಆಗುತ್ತಾರೆ. ಅವರು ನಿರೂಪಣೆ ಮಾಡುವ ಕಾರ್ಯಕ್ರಮಗಳ ವೇದಿಕೆಯಾಗಲಿ, ಮಾಧ್ಯಮದವರ ಮುಂದೆ ಆಗಲಿ ಸದಾ ಕಾಲ ಈಕೆಗೆ ಈ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ ಆದರೆ ಮೊದಲ ಬಾರಿಗೆ ಅವರೇ ಅವರ ಮದುವೆ ಬಗ್ಗೆ ತಮಾಷೆ ಮಾಡಿಕೊಂಡಿದ್ದಾರೆ.

ಈಗ ವಾರದಿಂದ ಜರುಗುತ್ತಿರುವ ಚಿಕ್ಕಬಳ್ಳಾಪುರದ ಉತ್ಸವದಲ್ಲಿ ನಾನಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು ಕೃಷಿ ಮೇಳ, ಉದ್ಯೋಗ ಮೇಳ, ರಕ್ತದಾನ ಶಿಬಿರ, ಫಲ ಪುಷ್ಪ ಮೇಳ ಹಾಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮನರಂಜನ ಕಾರ್ಯಕ್ರಮಗಳು ಎಲ್ಲವನ್ನು ಜಿಲ್ಲಾ ಕೇಂದ್ರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.

ಇದರಲ್ಲಿ ದರ್ಶನ್, ಸುದೀಪ್ ಮತ್ತು ಇತರ ಸ್ಟಾಥ್ ಗಳು ಹಾಗೂ ತೆಲುಗು ಸ್ಟಾರ್ ಗಳು ಸೇರಿದಂತೆ ಅನೇಕರು ಬಾಗಿಯಾಗಿ ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಹೊಣೆಯನ್ನು ಅನುಶ್ರೀ ಯವರು ಹೊತ್ತುಕೊಂಡಿದ್ದರು. ತಮ್ಮ ಲವಲವಿಕೆ ಮಾತುಗಳಿಂದ ಪ್ರೇಕ್ಷಕರನ್ನು ಮನರಂಜನೆ ಗೊಳಿಸುವ ಅನುಶ್ರೀ ಅವರು ಹೀಗೆ ಮಾತಿನ ಮಧ್ಯೆ ಅಲ್ಲಿದ್ದ ಯುವತಿ ಒಬ್ಬರನ್ನು ಬಹಳ ಸುಂದರವಾಗಿದ್ದೀರ ಎಂದು ಹೊಗಳಿದ್ದಾರೆ.

ಮತ್ತು ಆಕೆಯನ್ನು ಮದುವೆ ಆಗಿದೆಯಾ ಅಂತ ಕೇಳಿದರೆ ಯುವತಿ ಇಲ್ಲ ಮೇಡಂ ಇನ್ನು ಸಿಂಗಲ್ ಎಂದು ಉತ್ತರ ಕೊಟ್ಟಿದ್ದಾರೆ. ನಾನು ಕೂಡ ಇನ್ನು ಸಿಂಗಲ್ ನನ್ನನ್ನು ಎಲ್ಲರೂ ಮದುವೆ ಬಗ್ಗೆ ಕೇಳುತ್ತಾರೆ ಇಬ್ಬರೂ ಸಹ ಚಿಕ್ಕಬಳ್ಳಾಪುರದಲ್ಲಿ ಯಾರಾದರೂ ಒಳ್ಳೆ ಹುಡುಗರು ಸಿಗುತ್ತಾರೆ ಎಂದು ಹುಡುಕೋಣವ ಎಂದು ಕೇಳಿದ್ದಾರೆ. ಮತ್ತೆ ವೇದಿಕೆ ಮೇಲೆ ಬಂದು ಯಾರಾದರೂ ನನ್ನನ್ನು ಮದುವೆ ಆಗುತ್ತೀರಾ ಕೈ ಮೇಲೆ ಮಾಡಿ ಎಂದು ಕೇಳುತ್ತಾರೆ.

ಅವರು ಇಷ್ಟು ಹೇಳುತ್ತಿದ್ದೆ ಅಲ್ಲಿ ನೆರೆದಿದ್ದ ಯುವಕರು ಅಂಕಲ್ಗಳು ಎಲ್ಲರೂ ಸಹ ಅವರನ್ನು ಮದುವೆಯಾಗಲು ಮುಗಿಬಿದ್ದು ಪ್ರತಿಕ್ರಿಸುತ್ತಾರೆ. ಆ ಪೈಕಿ ಪ್ರತಿಯೊಬ್ಬರ ಬಳಿ ಹೋಗಿ ಅವರನ್ನು ವಿಚಾರಣೆ ಮಾಡಿ ಅವರುಗಳ ಬಗ್ಗೆ ಕಾಮೆಂಟ್ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರಿಗೆ ನೀವು ಅಂಕಲ್ ರೀತಿ ಇದ್ದೀರಾ ಮೊಮ್ಮಕ್ಕಳ ಮದುವೆಗೆ ಬಂದಿದ್ದಾರೆ ಅನಿಸುತ್ತದೆ ನಿಮಗೀಗ ನನ್ನ ಜೊತೆ ಮದುವೆ ಬೇಕಾ ಅಂತ ಕೇಳಿದ್ದಾರೆ.

ಮತ್ತೆ ಇನ್ನೊಬ್ಬ ಹುಡುಗನ ಬಳಿ ಹೋಗಿ ನಿನ್ನ ತಲೆಯಲ್ಲಿ ಕೂದಲೇ ಇಲ್ಲ ನೀನು ನನ್ನನ್ನು ಮದುವೆಯಾಗುತ್ತೀಯಾ ಅಂತ ಹೇಳಿ ಅದಕ್ಕೆ ಕಾಂತರಾ ಸಿನಿಮಾದ ಫೇಮಸ್ ಡೈಲಾಗ್ ಅದು ಕಾಡಿನಲ್ಲಿ ಸೊಪ್ಪು ಸಿಗುತ್ತದೆ ಈ ಡೈಲಾಗ್ ಹೊಡೆದು ಕಾಲು ಎಳೆದಿದ್ದಾರೆ. ಮತ್ತೊಬ್ಬ ಹುಡುಗನನ್ನು ನೋಡಿ ನೀನು ನೋಡಲು ಸುಮಾರಾಗಿ ಇದ್ದೀಯ ನಿನ್ನ ಜೊತೆ ಬೇಕಾದರೆ ಯೋಚಿಸಬಹುದು ಆದರೆ ಮದುವೆ ಎನ್ನುವುದು ಈ ತಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳುವುದಲ್ಲ ಇದು ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ ಎಂದು ಹೇಳಿ ತಮಾಷೆಯಾಗಿ ಮದುವೆ ವಿಚಾರದಿಂದ ಜಾರಿಕೊಂಡಿದ್ದಾರೆ.

ಸದ್ಯಕ್ಕೆ ಅನುಶ್ರೀ ಅವರ ಮದುವೆ ವಿಚಾರ ಒಂದು ತಮಾಷೆಯ ಸಂಗತಿ ಆಗಿದ್ದು ಈಗ ಅವರೇ ಅದನ್ನು ಕಾಮಿಡಿ ಕಂಟೆಂಟ್ ಮಾಡಿಕೊಂಡಿದ್ದಾರೆ. ಶೀಘ್ರವೇ ಅವರಿಗೆ ಮದುವೆಯಾಗಿ ಇದರಿಂದ ತಪ್ಪಿಸಿಕೊಳ್ಳಲಿ ಅವರಿಗೆ ಶೀಘ್ರಮೇವ ಕಲ್ಯಾಣ ಪಾಪ್ತಿರಸ್ತು ಎಂದು ಹಾರೈಸೋಣ. ಅವರ ಈ ತಮಾಷೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನುಶ್ರೀ ಅವರು ಎಷ್ಟು ಚೆನ್ನಾಗಿ ಕಾಮಿಡಿ ಮಾಡಿದ್ದಾರೆ ಎಂದು ನೀವು ಸಹ ನೋಡಿ.

Leave a Comment

WhatsApp Group Join Now
Telegram Group Join Now