Home Viral News ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

0
ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

ಅದ್ಯಾಕೋ ದರ್ಶನ್ (Darshan) ಅವರನ್ನು ವಿವಾದಗಳು ಬಿಡುವಂತೆ ಕಾಣುತ್ತಲೇ ಇಲ್ಲ. ಸದಾ ಒಂದಲ್ಲ ಒಂದು ವಿಷಯದಿಂದ ಗಲಾಟೆ ಮಾಡಿಕೊಂಡು ಸುದ್ದಿ ಆಗುತ್ತಲೇ ಇರುತ್ತಾರೆ ಇವರು. ದರ್ಶನ್ ಸಿನಿಮಾಗಳು ಎಷ್ಟು ಸುದ್ದಿಯಾಗುತ್ತದೆಯೋ ಅವರ ಕುರಿತಾದ ವಿವಾದಗಳು (controversies) ಕೂಡ ಅಷ್ಟೇ ಬೇಗ ಸುದ್ದಿಯಾಗುತ್ತವೆ. ಈ ಹತ್ತು ವರ್ಷಗಳ ಇತಿಹಾಸವನ್ನೇ ನೋಡುವುದಾದರೆ ಇದುವರೆಗೂ ದರ್ಶನ್ ಅವರು ಪತ್ನಿ ಮೇಲೆ ಹ.ಲ್ಲೆ ಮಾಡಿದ್ದರು.

ಮಗನ ಮೇಲೆ ಹ.ಲ್ಲೆ ಮಾಡಿದ್ದರು ಹಾಗೂ ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು ಇತ್ಯಾದಿಗಳನ್ನು ಸಾಕಷ್ಟು ನೋಡಿದ್ದೇವೆ. ಇನ್ನು ಅನೇಕ ವಿಚಾರಗಳು ವರದಿ ಆಗದೆಯೇ ಮುಚ್ಚಿ ಹೋಗಿರಲೂಬಹುದು. ಇದುವರೆಗೆ ಮಾಧ್ಯಮಗಳಿಗೆ ಸಾಕಷ್ಟು ಸುದ್ದಿ ದರ್ಶನ್ ಅವರ ಕುರಿತ ಗಲಾಟೆಗಳ ಬಗ್ಗೆ ಸಿಕ್ಕಿದೆ ಮತ್ತು ದರ್ಶನ್ ಅವರು ಮಾಧ್ಯಮಗಳನ್ನು ಸಹ ಏಕವಚನದಲ್ಲಿ ನಿಂದಿಸಿರುವುದು ವರದಿಯಾಗಿ ಈಗ ಕನ್ನಡ ಸುದ್ದಿ ಮಾಧ್ಯಮಗಳೆಲ್ಲ ಅವರನ್ನು ಬ್ಯಾನ್ ಕೂಡ ಮಾಡಿವೆ.

ಇಷ್ಟಾದರೂ ದರ್ಶನ್ ಬುದ್ಧಿ ಕಲಿತಂತೆ ಕಾಣುತ್ತಲೇ ಇಲ್ಲ. ಮತ್ತೊಮ್ಮೆ ತನ್ನ ವರಸೆಯನ್ನು ಪ್ರದರ್ಶಿಸಿದ್ದಾರೆ. ಅದೇನೆಂದರೆ ವಿ2 ಎನ್ನುವ ಡಿಜಿಟಲ್ ಮಾಧ್ಯಮದ (V2 digital media) ಕ್ಯಾಮರಮನ್ ಮತ್ತು ವರದಿಗಾರರ ಮೇಲೆ ದರ್ಶನ್ ಬಾಡಿ ಗಾರ್ಡ್ ಗಳು ಹ.ಲ್ಲೆ ಮಾಡಿದ್ದಾರೆ. ಆದರೆ ಇದನ್ನು ದರ್ಶನ್ ಅವರ ಹೇಳಿ ಮಾಡಿಸಿದ್ದಾರಾ ಅಥವಾ ಮತ್ಯಾವ ವಿಚಾರಕ್ಕೆ ಇವರ ನಡುವೆ ಗಲಾಟೆ ಆಗಿ ಹಲ್ಲೆ ಮಾಡಿದ್ದಾರೋ ಗೊತ್ತಿಲ್ಲ.

ವಿ2 ವಾಹಿನಿಯ ಕ್ಯಾಮೆರಾಮೆನ್ ದಯಾನಂದ್ ಮತ್ತು ವರದಿಗಾರರಾದ ಮಧುಸೂಧನ್ ಎನ್ನುವ ಸಿಬ್ಬಂದಿ ಮೇಲೆ ದರ್ಶನ್ ಬಾಡಿಗಾರ್ಡ್ ಕಡೆಯಿಂದ ಮಾ.ರ.ಣಾಂ.ತಿ.ಕ ಹ.ಲ್ಲೆ ಆಗಿದೆ ಎನ್ನುವ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಗಲಾಟೆಯ ರಭಸದಲ್ಲಿ ಅವರಿಗೆ ಹಿಗ್ಗಾ ಮುಗ್ಗಾ ತಳಿಸಿ ಹಲ್ಲು ಕೂಡ ಮುರಿದಿದ್ದಾರೆ ಎನ್ನುವುದು ಅವರ ಕಡೆಯಿಂದ ಆರೋಪ.

ಈ ಬಗ್ಗೆ ಆರ್ ಆರ್ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಡಲು ಹೋದರು ಎಫ್ಐಆರ್ ಹಾಕದೆ ಏನ್ ಸಿ ಮಾಡಿ ಕಳಿಸಿದ್ದಾರೆ ಎಂದು ಚಾನೆಲ್ ಸಂಬಂಧಿತರು ಸಾಮಾಜಿಕ ಜಾಣತನದಲ್ಲಿ ವಿಡಿಯೋ ಮಾಡಿ ಆ.ಕ್ರೋ.ಶ ಹಾಕಿದ್ದಾರೆ. ಕೋರ್ಟ್ ಅನುಮತಿ ತೆಗೆದುಕೊಂಡು ಹಾಕಬೇಕು ಎಂದು ಸಮಜಾಯಿಷಿ ಹೇಳಿದ್ದಾರೆ, ಜೊತೆಗೆ ಹ.ಲ್ಲೆ ಅದ ಸ್ಥಳದಿಂದ ಸೆಂಟ್ ಜಾನ್ಸ್ ಆಸ್ಪತ್ರೆ ಹತ್ತಿರವಿತ್ತು ಅಲ್ಲಿಗೆ ಚಿಕಿತ್ಸೆಗೆ ಹೋದರೆ ಮೆಡಿಕಲ್ ರಿಪೋರ್ಟ್ ಮಾಡಲು ಕೇಳಿದರೆ ಅದಕ್ಕೂ ಕೂಡ ಅವರು ಸರಿಯಾಗಿ ಸ್ಪಂದಿಸಿಲ್ಲ ಅವರು ಸಹ ಇನ್ಫ್ಲುಯೆನ್ಸ್ ಇಂದ ಈ ರೀತಿ ಮಾಡಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಇದೆಲ್ಲ ಮುಂದುವರಿಯಬಾರದು ಈಗಾಗಲೇ ಸಾಕಷ್ಟು ಬಾರಿ ಇವರ ಕಡೆಯಿಂದ ಈ ರೀತಿ ನಡವಳಿಕೆಗಳು ಆಗಿವೆ. ಆದರೂ ಇವರು ಬುದ್ಧಿ ಕಲಿತಿಲ್ಲ ಈ ಬಾರಿ ಡಿಜಿಟಲ್ ಮಾಧ್ಯಮಗಳೆಲ್ಲ ಒಟ್ಟಿಗೆ ಸೇರಿ ನಮಗೆ ನ್ಯಾಯ ಕೊಡಿಸಬೇಕು ಎಂದು ಈ ವಿಡಿಯೋದಲ್ಲಿ ಚಾನೆಲ್‌ ಸಿಬ್ಬಂದಿ ಮಾತನಾಡಿದ್ದಾರೆ.

ಆದರೆ ಇದರಲ್ಲಿ ಸತ್ಯಾಂಶ ಎಷ್ಟಿದೆಯೋ ಅಥವಾ ಮಾಧ್ಯಮದ ತಪ್ಪು ಏನಿದೆಯೋ ಅಥವಾ ಈ ಎಲ್ಲಾ ಘಟನೆಗಳ ಮಧ್ಯೆ ದರ್ಶನ್ ಅವರು ಬಾಗಿ ಆಗಿದ್ದಾರಾ ಇಲ್ಲವೋ ಅದು ಗೊತ್ತಿಲ್ಲ. ಆದರೆ ದರ್ಶನ್ ಅವರ ಬಾಡಿಗಾರ್ಡ್ ಎನ್ನುವ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಾರಿ ಚರ್ಚೆಗೆ ಒಳಗಾಗಿದೆ ಮುಂದೆ ಪ್ರಕರಣದ ಬಗ್ಗೆ ಏನು ತಿರುವುಗಳಾಗುತ್ತದೆಯೋ ಕಾದು ನೋಡಬೇಕು, ನೊಂದವರಿಗೆ ಸರಿಯಾದ ತೀರ್ಪು ಸಿಗಲೇಬೇಕು ಎಂಬುದು ಕೆಲವರ ಅಭಿಪ್ರಾಯ.

https://youtu.be/ZkR6h0gIYQM

LEAVE A REPLY

Please enter your comment!
Please enter your name here