Home Entertainment ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಖಿನ್ನತೆಗೆ ಹೋಗಿದ್ದಾಗ ನನ್ನ ಮೊದಲಿನ ರೀತಿ ಮಾಡಿದ್ದು ಇವರೇ ಎಂದು ಕನ್ನಡದಲ್ಲಿ ಮಾತನಾಡುತ್ತಲೇ ಕಣ್ಣಿರಿಟ್ಟ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಖಿನ್ನತೆಗೆ ಹೋಗಿದ್ದಾಗ ನನ್ನ ಮೊದಲಿನ ರೀತಿ ಮಾಡಿದ್ದು ಇವರೇ ಎಂದು ಕನ್ನಡದಲ್ಲಿ ಮಾತನಾಡುತ್ತಲೇ ಕಣ್ಣಿರಿಟ್ಟ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

0
ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಖಿನ್ನತೆಗೆ ಹೋಗಿದ್ದಾಗ ನನ್ನ ಮೊದಲಿನ ರೀತಿ ಮಾಡಿದ್ದು ಇವರೇ ಎಂದು ಕನ್ನಡದಲ್ಲಿ ಮಾತನಾಡುತ್ತಲೇ ಕಣ್ಣಿರಿಟ್ಟ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

 

ಖಿನ್ನತೆಗೆ ಒಳಗಾಗಿದ್ದ ದೀಪಿಕಾ ಪಡುಕೋಣೆಗೆ ಕನ್ನಡದ ಚಿಕಿತ್ಸೆ ಬಾಲಿವುಡ್ (Bollywood) ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗೆ ಗುರಿ ಆಗಿರುವ ದೀಪಿಕಾ ಪಡುಕೋಣೆ (Deepika padukon ) ಅವರ ಮೂಲ ನೆಲೆ ಕರ್ನಾಟಕವೇ ಎನ್ನುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ವಿಷಯ. ದೀಪಿಕಾ ಪಡುಕೋಣೆ ಅವರು ಹುಟ್ಟಿದ್ದು ತುಳುನಾಡಿನಲ್ಲಿ ಹಾಗೂ ವಿದ್ಯಾಭ್ಯಾಸ ಪಡೆದದ್ದು ಮತ್ತು ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿಯೇ.

ಬೆಂಗಳೂರಲ್ಲಿ ಓದುತ್ತಾ ಇದ್ದಂತೆ ಫ್ಯಾಷನ್ ಹಾಗೂ ಮಾಡಲಿಂಗ್ ಕಡೆ, ಅಟ್ರಾಕ್ಟ್ ಆದ ದೀಪಿಕಾ ಪಡುಕೋಣೆ ಅವರು ಮಾಡಲಿಂಗ್ ಅನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು. ನಂತರ ಉಪೇಂದ್ರ (Upendra) ಅವರ ಅಭಿನಯದ ಐಶ್ವರ್ಯ (Aishwarya) ಸಿನಿಮಾದಲ್ಲಿ ಮೊಟ್ಟಮೊದಲಿಗೆ ನಾಯಕ ನಟಿ ಆಗುವ ಅವಕಾಶ ಪಡೆದುಕೊಂಡು ತನ್ನ ಅದೃಷ್ಟವನ್ನು ಬದಲಾಯಿಸಿಕೊಂಡರು. ಆಮೇಲೆ ಬಿ ಟೌನ್ ಕಡೆಗೆ ವಾಲಿದ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಅಂತಹ ಖ್ಯಾತ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡುವುದಲ್ಲದೆ ಇಡೀ ಇಂಡಿಯಾದ ಎಲ್ಲಾ ಇಂಡಸ್ಟ್ರಿಗಳಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ನಟಿ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.

ಇತ್ತೀಚಿಗೆ ರಣವೀರ್ ಸಿಂಗ್ (Ranaveer Singh) ಅವರನ್ನು ವಿವಾಹವಾಗುವ (Marriage) ಮೂಲಕ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರಿಗೆ ಕೈ ತುಂಬಾ ಹಣವಿದ್ದರೂ, ಬಂಗಲೆ, ಕಾರು, ಹೆಸರು ಎಲ್ಲಾ ಇದ್ದರೂ ಕೂಡ ಆರೋಗ್ಯದ ಭಾಗ್ಯವೇ ಇಲ್ಲ. ದೈಹಿಕವಾಗಿ ಈಕೆ ಸದೃಢವಿದ್ದರೂ ಕೂಡ ಮಾನಸಿಕ ಖಿನ್ನತೆ (Depression) ಇವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮದುವೆಗೂ ಮುನ್ನವೇ ಈಕೆ ಬೆಂಗಳೂರಿಗೆ ಬಂದು ಗುಟ್ಟಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈಗ ಜಗ ಜಾಹಿರಾಗಿ ಹೋಗಿದೆ.

ಆದರೆ ಅದರಿಂದ ಪ್ರಯೋಜನವಿಲ್ಲದೆ ಇತ್ತೀಚೆಗಷ್ಟೇ ಮತ್ತೊಮ್ಮೆ ವಿದೇಶಕ್ಕೆ ಹೋಗಿ ದುಬಾರಿ ಚಿಕಿತ್ಸೆಗಳನ್ನು ಕೂಡ ಹಣ ವ್ಯಯಿಸಿ ಪಡೆದುಕೊಳ್ಳುತ್ತಿದ್ದರು. ಆದರೆ ಯಾವುದರಿಂದಲೂ ಈಕೆಯ ಮನಸ್ಸಿಗೆ ಶಾಂತಿ ದೊರಕತೆ ಇರುವುದರಿಂದ ಮತ್ತೊಮ್ಮೆ ಕರುನಾಡಿನ ಕಡೆ ಮುಖ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ತಮ್ಮ ಈ ಸಮಸ್ಯೆಗೆ ಪರಿಹಾರ ಏನು ಎನ್ನುವುದನ್ನು ತುಳುನಾಡಿನ ಜನರ ನಂಬಿಕೆ ಆಗಿರುವ ದೈವಗಳ ಬಳಿ ಬಂದು ಪ್ರಶ್ನೆ ಇಟ್ಟು ಕೇಳಿದ್ದಾರೆ.

ದೈವ ಕೊಟ್ಟ ಮಾತಿನಂತೆ ಆಯುರ್ವೇದ ಚಿಕಿತ್ಸೆಯ ಕಡೆ ದೀಪಿಕಾ ಪಡುಕೋಣೆ ಮನಸು ಮಾಡಿದ್ದು ಚೇತರಿಕೆಯನ್ನು ಕೂಡ ಕಂಡಿದ್ದಾರೆ. ಇದೀಗ ಸಂತಸದಿಂದ ದೀಪಿಕಾ ಪಡುಕೋಣೆ, ಚಿಕಿತ್ಸೆಯ ಬಗ್ಗೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾಯಿ ನೆಲ, ತಾಯಿ ಭಾಷೆ, ತಾಯಿ ಮಡಿಲಿಗೆ ಸಮಾನವಾದದ್ದು. ಆ ಕಾರಣದಿಂದಲೇ ಮತ್ತೆ ತನ್ನೂರಿನ ಕಡೆ ಮರಳಿ ಬಂದಿದ್ದರಿಂದಲೇ ಆಕೆಗೆ ಮನಶಾಂತಿಯ ಸಿಕ್ಕಿರಬಹುದು ಅಥವಾ ಇಷ್ಟು ದಿನ ಮರೆತಿದ್ದ ದೈವವನ್ನು ಆಕೆ ನೆನೆಸಿಕೊಂಡ ಕಾರಣ ಆಕೆಗೆ ಆ ಸಮಸ್ಯೆ ಗುಣಪಡಿಸಿಕೊಳ್ಳುವ ಶಕ್ತಿ ಬಂದಿದೆಯೋ ಏನೋ, ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅವರು ತಾವು ಪಡೆದುಕೊಳ್ಳುತ್ತಿರುವ ಚಿಕಿತ್ಸೆ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ನನಗೆ ಒಂದು ರೀತಿಯ ಮಾನಸಿಕ ಖಿನ್ನತೆ ಕಾಡಿತ್ತು ಈಗ ಈ ಚಿಕಿತ್ಸೆ ಕಡೆ ಬಂದ ಮೇಲೆ ತುಂಬಾ ಹಗುರವಾಗಿದ್ದೇನೆ ಎಂದಿದ್ದಾರೆ. ಹಿಂದೆ ನನ್ನ ವರ್ಕ್ ಪ್ರೆಷರ್ ನನ್ನನ್ನ ಈ ರೀತಿ ಮಾಡಿತ್ತು ಆದರೆ ಲೈಫ್ ಸ್ಟೈಲ್ ಬದಲಿಸಿಕೊಂಡ ಮೇಲೆ ಮೆಡಿಕೇಶನ್ ಗೆ ಬಂದ ಮೇಲೆ, ಸಮಯ ನಿಗದಿಸಿ ಪಡಿಸಿಕೊಂಡು ಎಲ್ಲವನ್ನು ನಿಭಾಯಿಸುವುದನ್ನು ಕಲಿತ ಮೇಲೆ ಬಹಳ ಆರಾಮವಾಗಿದ್ದೇನೆ ಎಂದು ಮುದ್ದು ಮುದ್ದಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here