Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ಅನುಕೂಲ ಮಾಡಿಕೊಡುವ ಸಿಂಪಲ್ ಟ್ರಿಕ್ ಗಳು ಇವು.!

Posted on June 28, 2023 By Kannada Trend News No Comments on ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ಅನುಕೂಲ ಮಾಡಿಕೊಡುವ ಸಿಂಪಲ್ ಟ್ರಿಕ್ ಗಳು ಇವು.!

 

● ಸಾರಿಗೆ ಉಪ್ಪು ಹೆಚ್ಚಾದರೆ ಒಂದು ಕಬ್ಬಿಣದ ಸೌಟನ್ನು ಕೆಂಪಾಗುವಂತೆ ಚೆನ್ನಾಗಿ ಕಾಯಿಸಿ ನಂತರ ಅದನ್ನು ಸಾರಿನ ಒಳಗೆ ಅದ್ದಿದರೆ ಆಟೋಮೆಟಿಕ್ ಆಗಿ ಉಪ್ಪು ಕಡಿಮೆ ಆಗುತ್ತದೆ.
● ದ್ರಾಕ್ಷಿ, ಟೊಮೆಟೊ, ಮೂಸಂಬಿ, ಕಿತ್ತಳೆ ಇಂತಹ ಹಣ್ಣುಗಳನ್ನು ಕುದಿಯುವ ನೀರಿಗೆ ಹಾಕಿ ಎರಡು ನಿಮಿಷ ಬಿಟ್ಟು ನಂತರ ತಣ್ಣೀರಿಗೆ ಹಾಕಿದರೆ ಅವುಗಳ ಮೇಲೆ ಇರುವ ಸಿಪ್ಪೆಯನ್ನು ಸುಲಭವಾಗಿ ಬಿಡಿಸಬಹುದು.

● ಗಾಜಿನ ಲೋಟಕ್ಕೆ ಬಿಸಿಯಾದ ಕಾಫಿ ಚಹಾ ಹಾಕುವ ಮುನ್ನ ಆ ಲೋಟಕ್ಕೆ ಒಂದು ಚಮಚ ಹಾಕಿ ನಂತರ ಕಾಫಿ ಟೀ ಹಾಕಿದರೆ ಮೊದಲಿಗೆ ಚಮಚ ಅದರ ಬಿಸಿಯನ್ನು ಹೀರಿಕೊಳ್ಳುವ ಕಾರಣ ಗಾಜಿನ ಗ್ಲಾಸು ಬಿಸಿಗೆ ಒಡೆಯುವುದು ತಪ್ಪುತ್ತದೆ.
● ಕಾಫಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

● ಆಲೂಗೆಡ್ಡೆ ಬೇಯಿಸಿ ಆ ನೀರಿನಿಂದ ಬೆಳ್ಳಿ ಮತ್ತು ಇತರ ಲೋಹದ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.
● ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿ ಇಟ್ಟರೆ ಟೀ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಟೀ ಕುದಿಯುವಾಗ ಕಿತ್ತಾಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆಯನ್ನು ಹಾಕಿದರೆ ಆ ಟೀ ಗೆ ವಿಶೇಷ ರುಚಿ ಬರುತ್ತದೆ.
● ತೊಗರಿ ಬೇಳೆಯನ್ನು ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನ ಕಾಯಿಯನ್ನು ಬೇಯಲು ಇಟ್ಟರೆ ಬೇಳೆ ಬೇಗ ಬೇಯುತ್ತದೆ ಮತ್ತು ಚೆನ್ನಾಗಿ ಬೇಯುತ್ತದೆ.

● ಕಡಗೋಲನ್ನು ಬಿಸಿನೀರಿಗೆ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರನ್ನು ಮತ್ತು ಬೇಸಿಗೆ ಕಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ತಂಪು ನೀರನ್ನು ಹಾಕಿದರೆ ಬೆಣ್ಣೆ ಬೇಗ ಬರುತ್ತದೆ.
● ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಚಿಕ್ಕ ಸೌಟು ಅಥವಾ ಚಮಚವನ್ನು ಹಾಕಿ ಇಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

● ಸೊಪ್ಪುಗಳನ್ನು ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಇಡಬೇಡಿ, ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿದುಬಿಡುತ್ತದೆ.
● ಕಾಲಿ ಫ್ಲವರ್ ಗೆ ಸ್ವಲ್ಪ ವಿನೆಗರ್ ಬಳಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ.
● ಮಸಾಲೆ ಅಥವಾ ಕೊಬ್ಬರಿಯನ್ನು ರುಬ್ಬುವಾಗ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿದರೆ ಅದು ಬೇಗ ನುಣ್ಣಗಾಗುತ್ತದೆ ಮತ್ತು ಒರಳು ಕಲ್ಲಿನಲ್ಲಿ ಈ ರೀತಿ ರುಬ್ಬುವಾಗ ಉಪ್ಪು ಹಾಕಿದರೆ ಅದು ಸಿಡಿಯುವುದಿಲ್ಲ.

● ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಮೊದಲು ಸ್ವಲ್ಪ ನೀರಿನಲ್ಲಿ ನೆನೆಸಿಟ್ಟು, ನೀರು ಬಸಿದು 3-4 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆ ರೀತಿ ಆಗದೆ ಉದುರು ಉದುರಾಗಿರುತ್ತದೆ.
● ದೋಸೆ ಅಕ್ಕಿ ಜೊತೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿ ದೋಸೆ ಮಾಡಿದರೆ ದೋಸೆ ಮೃದುವಾಗಿರುತ್ತದೆ.
● ಬಾಳೆಕಾಯಿ ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿಕೊಂಡರೆ ಕೈಗಳು ಕಪ್ಪಾಗುವುದಿಲ್ಲ.
● ಗಾಳಿ ಬರುವ ಜಾಗದಲ್ಲಿ ಕುಳಿತುಕೊಂಡು ಈರುಳ್ಳಿ ಹಚ್ಚಿದರೆ ಕಣ್ಣೀರು ಬರುವುದಿಲ್ಲ

● ಕೈ ಸೀಮೆಎಣ್ಣೆ ಆಗಿ, ಅದೇ ವಾಸನೆ ಬರುತ್ತಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ. ಆಗ ಅದು ಸರಿ ಹೋಗುತ್ತದೆ.
● ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತ್ತು ಸ್ಟೀಲ್ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಿಗೆ ಅಂಟಿರುವ ಕೊಳೆ ಹಾಗೂ ಜಿಡ್ಡು ಬೇಗ ಹೋಗುತ್ತದೆ ಮತ್ತು ಹೊಸದರಂತೆ ಬಹಳ ಫಳ
ಫಳ ಎಂದು ಹೊಳೆಯುತ್ತದೆ.
● ಕೈಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಹಸಿಮೆಣಸಿನಕಾಯಿ ಹಚ್ಚಿದರೆ ಖಾರದಿಂದ ಕೈಗಳು ಉರಿಯುವುದಿಲ್ಲ.

Useful Information
WhatsApp Group Join Now
Telegram Group Join Now

Post navigation

Previous Post: ಮನೆಯಲ್ಲೇ ಕುಳಿತು 5 ನಿಮಿಷಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ವಿಧಾನ.!
Next Post: ಪಲಾವ್ ಎಲೆಗೆ ಇರುವ ಶಕ್ತಿ ಎಂತಹದ್ದು ಗೊತ್ತಾ.? ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಲಾವ್ ಎಲೆಯ ಈ ತಂತ್ರದಿಂದ ಪರಿಹಾರ ಮಾಡಬಹುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore