Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೂಲವ್ಯಾಧಿಯನ್ನು ಒಂದು ವಾರದಲ್ಲಿ ನಿವಾರಣೆ ಮಾಡುವ ಮನೆಮದ್ದು.!

Posted on November 9, 2023 By Kannada Trend News No Comments on ಮೂಲವ್ಯಾಧಿಯನ್ನು ಒಂದು ವಾರದಲ್ಲಿ ನಿವಾರಣೆ ಮಾಡುವ ಮನೆಮದ್ದು.!

ಮೂಲವ್ಯಾಧಿ ಸಮಸ್ಯೆ ಬಹಳ ನೋವನ್ನು ಕೊಡುವಂತಹ ಸಮಸ್ಯೆ ಯಾಗಿದ್ದು ಈ ಸಮಸ್ಯೆ ಬಂದರೆ ಇದನ್ನು ತಕ್ಷಣವೇ ಗುಣಪಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಈ ಸಮಸ್ಯೆ ಹೆಚ್ಚಾದರೆ ಅದರಿಂದ ಹೆಚ್ಚಿನ ಪ್ರಮಾಣದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹೌದು ಕೆಲವೊಂದಷ್ಟು ಜನರಿಗೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಸೀಳು ಬಿಟ್ಟ ಹಾಗೆ ಹಾಗೂ ಕೆಲವೊಂದಷ್ಟು ಜನರಿಗೆ ಮೊಳಕೆ ಬಂದಿರುವ ಹಾಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದನ್ನೇ ನಾವು ಪಿಸ್ತೂಲ, ಪೈಲ್ಸ್ ಹೀಗೆ ಇನ್ನೂ ಹಲವಾರು ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.

ಇಂತಹ ಯಾವುದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಇದನ್ನು 1 ರಿಂದ 3 ವಾರದ ಒಳಗಡೆ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಹಾಗಾದರೆ ಯಾವ ಕೆಲವು ವಿಧಾನ ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಮುಟ್ಟಿದರೆ ಮುನಿ ಸೊಪ್ಪು 60 ಗ್ರಾಂ
* ಎಕ್ಕದ ಎಲೆ 20 ಗ್ರಾಂ
* ನುಗ್ಗೆ ಸೊಪ್ಪು 20 ಗ್ರಾಂ
ಇಷ್ಟನ್ನು ಚೆನ್ನಾಗಿ ಚಟ್ನಿಯ ರೂಪದಲ್ಲಿ ಅರೆಯಬೇಕು ಇದನ್ನು ಪೈಲ್ಸ್ ಆಗಿರುವಂತಹ ಜಾಗಕ್ಕೆ ಹಚ್ಚಿ ಒಂದು ಬಟ್ಟೆಯನ್ನು ಕಟ್ಟಿಕೊಂಡು ಮಲಗ ಬೇಕು. ಈ ರೀತಿಯಾಗಿ ಒಂದು ವಾರ ತಪ್ಪದೇ ಪ್ರತಿದಿನ ಮಾಡಬೇಕು, ಈ ರೀತಿ ಮಾಡುವುದರಿಂದ ಎಷ್ಟೇ ಗುರುದ್ವಾರದಲ್ಲಿ ಮೊಳೆ ಬಂದಿದ್ದರು ಅದು ಸಂಪೂರ್ಣವಾಗಿ ಕರಗಿ ಹೋಗುತ್ತದೆ.

ನಂತರ ಹೊಟ್ಟೆಗೆ ತೆಗೆದುಕೊಳ್ಳುವ ಔಷಧಿ ಯಾವುದು ಎಂದು ನೋಡುವುದಾದರೆ ಮೇಲೆ ಹೇಳಿದಂತೆ ಮುಟ್ಟಿದರೆ ಮುನಿ ಸೊಪ್ಪಿನ ಎಲೆ ತೆಗೆದುಕೊಂಡು ಅದನ್ನು ಚೆನ್ನಾಗಿ ಅರೆಯಬೇಕು ಯಾವುದೇ ನೀರನ್ನು ಮಿಶ್ರಣ ಮಾಡದೆ ಅದನ್ನ ಚೆನ್ನಾಗಿ ಅರೆದು ಅದರಲ್ಲಿ ಬರುವಂತಹ ರಸವನ್ನು ತೆಗೆದು ಕೊಂಡು ಅದನ್ನು ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಬೆಳಗ್ಗಿನ ಸಮಯ 5 ರಿಂದ 5:30 ಗಂಟೆ ಒಳಗಾಗಿ ಸೇವನೆ ಮಾಡಬೇಕು ಹೌದು ಈ ಸಮಯ ದಲ್ಲಿ ಕಡ್ಡಾಯವಾಗಿ ಸೇವನೆ ಮಾಡಲೇಬೇಕು.

ಈ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ನೀವು ಇದನ್ನು ಸೇವನೆ ಮಾಡಿದರೆ ಇದರ ಒಂದು ಪ್ರತಿಫಲ ನಿಮಗೆ ಸಿಗುವುದಿಲ್ಲ ಆದ್ದರಿಂದ ನಿರ್ದಿಷ್ಟವಾದಂತಹ ಈ ಸಮಯದಲ್ಲಿ ನೀವು ಇದನ್ನು ತೆಗೆದುಕೊಳ್ಳುವುದರಿಂದ ಇದರ ಒಂದು ಪ್ರತಿಫಲವನ್ನು ನೀವು ಪಡೆಯಬಹುದಾಗಿದೆ.

ಕೆಲವೊಂದಷ್ಟು ಜನ ಇದನ್ನು ಕಡ್ಡಾಯವಾಗಿ ಅನುಸರಿಸಿ ಕೇವಲ ಮೂರ್ನಾಲ್ಕು ದಿನದಲ್ಲಿ ಗುಣಪಡಿಸಿಕೊಂಡಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು. ಸರಿ ಸುಮಾರು ನೂರಕ್ಕೆ ತೊಂಬತ್ತರಷ್ಟು ಜನರಿಗೆ ಈ ವಿಧಾನ ತುಂಬಾ ಉಪಯುಕ್ತವಾಗಿ ಕೆಲಸ ಮಾಡುತ್ತದೆ.

ಆದರೆ ಕೇವಲ 10% ಜನರಿಗೆ ಈ ಒಂದು ಪ್ರಯೋಗ ಮನೆಮದ್ದು ಕೆಲಸ ಮಾಡುವುದಿಲ್ಲ ಅಂತವರಿಗೆ ಆ ಒಂದು ಮೂಲವ್ಯಾಧಿಯ ಜಾಗದಲ್ಲಿ ಹಲವಾರು ಇನ್ಫೆಕ್ಷನ್ ಗಳು ಆಗಿರುತ್ತದೆ. ಕೆಲವೊಮ್ಮೆ ಅದು ಗೆಡ್ಡೆ ಯಾಗಿ ಕ್ಯಾನ್ಸರ್ ಗೂ ಸಹ ತಿರುಗಬಹುದು. ಆದ್ದರಿಂದ ಅದನ್ನು ನೀವು ಸೂಕ್ತ ವೈದ್ಯರ ಬಳಿ ಹೋಗಿ ಅದರಲ್ಲೂ ಆಯುರ್ವೇದ ಆಸ್ಪತ್ರೆಗಳಿಗೆ ಹೋಗಿ ನಾಡಿ ಪರೀಕ್ಷೆಯ ಮೂಲಕ ಅದನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಮುಖ್ಯ.

ಪ್ರತಿಯೊಬ್ಬರಿಗೂ ಕೂಡ ಮೂಲವ್ಯಾಧಿ ಸಮಸ್ಯೆ ಬಂದ ತಕ್ಷಣ ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಹೆಚ್ಚು ಆಲೋಚನೆ ಮಾಡುತ್ತಿರುತ್ತಾರೆ ಆದರೆ ಆಯುರ್ವೇದ ಔಷಧಿ ಯಾವುದೇ ರೀತಿಯ ಸಮಸ್ಯೆಗೂ ಆಪರೇಷನ್ ಇಲ್ಲದೆ ಸೂಕ್ತವಾದಂತಹ ಮನೆಮದ್ದುಗಳು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಎಲ್ಲಾ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದಾಗಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಸಾಕ್ಷಾತ್ ಲಕ್ಷ್ಮೀದೇವಿ ಹೇಳಿರುವ ಲಕ್ಷ್ಮಿ ಕಟಾಕ್ಷ ರಹಸ್ಯ.! ದೀಪಾವಳಿಯ 5 ದಿನದಲ್ಲಿ ಒಂದು ದಿನ ಈ ಮೂರನ್ನು ಮುಖ್ಯವಾಗಿ ಮಾಡಿ.!
Next Post: ಅತಿ ವೇಗವಾಗಿ ತೂಕ ತಿಳಿಸಲು ಎರಡು ಪದಾರ್ಥ ಸಾಕು, ಹೊಟ್ಟೆ ಬೊಜ್ಜು ಸೊಂಟದ ಸುತ್ತ ಕಡಿಮೆ ಆಗುತ್ತೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore