Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಎಣ್ಣೆ ಹಚ್ಚಿದ್ರೆ ಉದುರಿದ ಕೂದಲು ಮತ್ತೆ ಹುಟ್ಟುತ್ತೆ.! ಬಿಳಿ ಕೂದಲ ಸಮಸ್ಯೆಗೆ ರಾಮಬಾಣ.! ಮನೆಯಲ್ಲೇ ತಯಾರಿಸಿ ಈ ನೈಸರ್ಗಿಕ ಎಣ್ಣೆ

Posted on November 18, 2023 By Kannada Trend News No Comments on ಈ ಎಣ್ಣೆ ಹಚ್ಚಿದ್ರೆ ಉದುರಿದ ಕೂದಲು ಮತ್ತೆ ಹುಟ್ಟುತ್ತೆ.! ಬಿಳಿ ಕೂದಲ ಸಮಸ್ಯೆಗೆ ರಾಮಬಾಣ.! ಮನೆಯಲ್ಲೇ ತಯಾರಿಸಿ ಈ ನೈಸರ್ಗಿಕ ಎಣ್ಣೆ

 

ತಲೆ ಕೂದಲು ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಸೊಪಾಪಾಗಿದ್ದರೆ ನೋಡಲು ಅಂದ. ಹೆಣ್ಣು ಮಕ್ಕಳಿಗೆ ಉದ್ದ ಕೂದಲೇ ಲಕ್ಷಣ ಎಂದು ಹೇಳುತ್ತಾರೆ. ಈ ಕೂದಲನ್ನ ಆರೋಗ್ಯ ಕಾಪಾಡಿಕೊಳ್ಳಲು ಸುಧಾರಿಸಲು ಅದನ್ನು ಮೈನ್ಟೈನ್ ಮಾಡಲು ಈಗಿನ ಕಾಲದ ಜನರು ಸಾಕಷ್ಟು ಹಣ ಸುರಿದು ಎಣ್ಣೆ, ಶಾಂಪೂ, ಕಂಡೀಶನ್ ಇದೆಲ್ಲವನ್ನು ಖರೀದಿಸುತ್ತಾರೆ.

ಹಾಗೆ ಗಂಡು ಮಕ್ಕಳಿಗೂ ಕೂಡ ಕಡಿಮೆ ಏನಿಲ್ಲ, ಬೋಳು ತಲೆ ಇದ್ದರೆ ಹೆಚ್ಚು ವಯಸ್ಸಾದವರ ರೀತಿ ಕಾಣುತ್ತೆವೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆ .ಹೀಗಾಗಿ ಉದುರಿದ ಕೂದಲು ಮತ್ತೆ ಹುಟ್ಟುವುದಕ್ಕೆ, ಮಾತ್ರವಲ್ಲದೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ಒಂದು ಉತ್ತಮವಾದ ಆಯುರ್ವೇದಿಕ್ ಔಷಧಿಯ ಬಗ್ಗೆ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.

ಕೇಶಾಮೃತ ತೈಲ ಎಂದು ಕರೆಯಲಾಗುವ ಈ ಒಂದು ಔಷಧಿಯನ್ನು ‌ನಿಮ್ಮ ಮನೆಯಲ್ಲಿಯೇ ಇರುವ ಹಾಗೂ ಮನೆಯ ಅಕ್ಕ-ಪಕ್ಕದಲ್ಲಿಯೇ ದ ಸಿಗುವ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಬಳಸಿಕೊಂಡು ನ್ಯಾಚುರಲ್ ಆಗಿ ತಯಾರಿಸಬಹುದು ಮತ್ತು ಇದರ ಬಳಕೆಯಿಂದ ನಿಮ್ಮ ತಲೆ ಕೂದಲು ಚೆನ್ನಾಗಿ ಆಗುವಂತೆ ಮಾಡಳಬಹುದು.

ಎಲ್ಲರಿಗೂ ಕೂಡ ಕೂದಲ ಆರೋಗ್ಯ ಚೆನ್ನಾಗಿರಬೇಕು ಎನ್ನುವ ಆಸೆ ಇರುತ್ತದೆ ಆದರೆ ಎಲ್ಲರೂ ಅಷ್ಟು ಕಾಳಜಿ ಮಾಡಲು ಸಮಯಾವಕಾಶ ಕೂಡ ಇರುವುದಿಲ್ಲ. ಈ ರೀತಿ ಮಾಡುವ ನಿರ್ಲಕ್ಷದಿಂದ ಮುಂದೆ ಪಶ್ಚಾತಾಪ ಪಡುವ ರೀತಿ ಆಗುತ್ತದೆ ಹಾಗಾಗಿ ಕೂದಲು ಬೆಳೆಯುವುದಕ್ಕೆ ಮತ್ತು ಕೂದಲಿನ ಹಾರೈಕೆಗೆ ಮಾತ್ರವಲ್ಲದೆ ಕೂದಲು ಚೆನ್ನಾಗಿರಬೇಕು ಎನ್ನುವ ಮುಂಜಾಗ್ರತೆಯಿಂದ ಸಹ ನೀವು ಈ ಇದನ್ನು ಬಳಸಬಹುದು. ಯಾವುದೇ ಖರ್ಚಿಲ್ಲದೆ ಈ ಕೇಶ ಅಮೃತ ತೈಲವನ್ನು ತಯಾರಿಸಲು ಬೇಕಾಗಿರುವ ವಸ್ತುಗಳ ಪಟ್ಟಿ ಹೀಗಿದೆ ನೋಡಿ.

ದಾಸವಾಳ, ಮೆಹಂದಿ, ಬೃಂಗರಾಜ, ಅಲೋವೆರಾ, ಕಪ್ಪು ತುಳಸಿ ಕರಿಬೇವು, ಬೇವು, ಬೆಟ್ಟದ ನೆಲ್ಲಿಕಾಯಿ, ದಾಸವಾಳ ‌, ತಂಗಡಿ ಹೂವು, ಕಣಗಲೆ ಹೂವು, ವನಗನ್ನೆ, ಅಡಿಕೆ ಸೊಪ್ಪು, ಕರಿಲೆಕ್ಕೆ, ಸಹದೇವಿ, ಕಾಡು ತುಳಸಿ, ಔಡಲ ಗೊಂಚಲು ಮತ್ತು ಮಾತಂಗಿ ಸಸ್ಯ, ಆಲದ ಬೀಳಲಲಿನ ಕುಡಿ ಇಂಗಳಾರದ ಕಾಯಿ ತಾರೆಕಾಯಿ, ಶುದ್ಧವಾದ ಅಳಲೇಕಾಯಿ, ಅಂಟವಾಳದ ಕಾಯಿ ಮುಂತಾದ 32 ಬಗೆಯ ಗಿಡಮೂಲಿಕೆಗಳನ್ನು ಹಾಕಿ ಕಲ್ಕವನ್ನು ತಯಾರಿಸಿ ಕೊಳ್ಳಬೇಕು.

ನಂತರ ಅದಕ್ಕೆ ಶುದ್ಧವಾದ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಈ ಕಲ್ಕಕ್ಕೆ ಹಾಕಿ ಮಿಕ್ಸ್ ಮಾಡಿ ಬಿಸಿಲಿನಲ್ಲಿ ಇಡಿ‌. ಏಳು ದಿನಗಳವರೆಗೆ ಸೂರ್ಯನ ಬಿಸಿನಲ್ಲಿ ಇಟ್ಟು ನಂತರ ಸ್ವಲ್ಪ ಬಿಸಿ ಮಾಡಬೇಕು. ನೀರಿನಾಂಶವೆಲ್ಲಾ ಹೋಗುವವರೆಗೂ ಪ್ರತಿನಿತ್ಯ ಹೀಗೆ ಮಾಡಬೇಕು ಎಣ್ಣೆ ಕಲ್ಕ ಎಲ್ಲಾ ಚೆನ್ನಾಗಿ ಬೆರೆತ ನಂತರ ಈಗ ಗಿಡಮೂಲಿ ಕೆಳಗಡೆ ಔಷಧಿ ಅಂಶ ಎಣ್ಣೆಗೂ ಬಂದಿರುತ್ತದೆ ಅದನ್ನು ಶೋಧಿಸಿ ನೆತ್ತಿಗೆ ಹಾಗೂ ಕೂದಲಿಗೆ ಹಚ್ಚಲು ಬಳಸಬಹುದು ಬಳಸಬಹುದು.

ತಲೆ ಕೂದಲಿನ ನಾನಾ ರೀತಿಯ ಸಮಸ್ಯೆಗಳಾದ ತಲೆ ಹೊಟ್ಟು, ಕೂದಲು ಉದುರುವುದು, ಬೇಗ ಬಿಳಿ ಆಗುವುದು, ಕೂದಲು ಸಣ್ಣ ಇರುವುದು ಇತ್ಯಾದಿ ಎಲ್ಲಾ ಸಮಸ್ಯೆಗೂ ಪರಿಹಾರ ವಾಗಿರುತ್ತದೆ. ಇದನ್ನು ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ನಿದ್ದೆ ಮಾಡಿದರೆ ಬಹಳ ಚೆನ್ನಾಗಿ ರಿಲಾಕ್ಸ್ ಆಗುತ್ತದೆ. ಮಾನಸಿಕ ಒತ್ತಡ ಟೆನ್ಶನ್ ನಿದ್ರಾ ಹೀನತೆ ಈ ಸಮಸ್ಯೆಗಳು ಕೂಡ ಪರಿಹಾರ ಆಗುತ್ತವೆ.

Useful Information
WhatsApp Group Join Now
Telegram Group Join Now

Post navigation

Previous Post: ವ್ಯವಹಾರದಲ್ಲಿ ವಿಘ್ನ ಕೆಲಸಕಾರ್ಯದಲ್ಲಿ ತೊಂದರೆ, ಹಣಕಾಸು ಸಮಸ್ಯೆ, ಆರೋಗ್ಯದಲ್ಲಿ ಏರುಪೇರು ಏನೇ ಸಮಸ್ಯೆ ಇರಲಿ, ಬಿಳಿ ಸಾಸಿವೆಯಿಂದ ಈ ಉಪಾಯವನ್ನು ಮಾಡಿ ಸಾಕು.!
Next Post: ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore