Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಕ್ತಹೀನತೆ ಇರುವವರಿಗೆ ದಿವ್ಯ ಔಷಧ ಇದು, ಎಷ್ಟು ಬೇಗ ರಕ್ತ ವೃದ್ಧಿಯಾಗುತ್ತದೆ ಗೊತ್ತಾ.?

Posted on December 9, 2023 By Kannada Trend News No Comments on ರಕ್ತಹೀನತೆ ಇರುವವರಿಗೆ ದಿವ್ಯ ಔಷಧ ಇದು, ಎಷ್ಟು ಬೇಗ ರಕ್ತ ವೃದ್ಧಿಯಾಗುತ್ತದೆ ಗೊತ್ತಾ.?

 

ಸರ್ವೆಯೊಂದರ ಪ್ರಕಾರ ನಮ್ಮ ಭಾರತದಲ್ಲಿ 90%ರಷ್ಟು ಮಹಿಳೆಯರು ಅನಿಮಿಯಾಗಿ ತುತ್ತಾಗಿದ್ದಾರೆ. ಅನಿಮಿಯಾ ಎಂದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗಿದೆ ಎಂದರ್ಥ, ಇದನ್ನು ರಕ್ತಹೀನತೆ ಎಂದು ಕೂಡ ಕರೆಯುತ್ತಾರೆ. ರಕ್ತಹೀನತೆಗೆ ತುತ್ತಾದವರಿಗೆ ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುತ್ತದೆ, ಮುಖ ಊದಿಕೊಳ್ಳುತ್ತದೆ,

ಯಾವುದರಲ್ಲೂ ಆಸಕ್ತಿ ಇರುವುದಿಲ್ಲ, ಸದಾ ಮಂಕಾಗಿರುತ್ತಾರೆ ಕಣ್ಣಿನಲ್ಲಿ ಕಾಂತಿ ಇರುವುದಿಲ್ಲ, ಸ್ವಲ್ಪ ಕೆಲಸ ಮಾಡಿದರು ಸುಸ್ತಾಗುತ್ತದೆ, ಯಾವಾಗಲೂ ಮಲಗಿರಬೇಕು ಎನಿಸುತ್ತದೆ. ಆದರಲ್ಲೂ ಹೆಣ್ಣು ಮಕ್ಕಳು ಈ ಸಮಸ್ಯೆಗೆ ಹೆಚ್ಚು ಗುರಿಯಾಗುತ್ತಾರೆ. ಗಂಡು ಮಕ್ಕಳಿಗೂ ಕೂಡ ಇದು ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನೀವೇನಾದರೂ ಇಂತಹ ಸಮಸ್ಯೆಯಲ್ಲಿ ಸಿಲುಕಿದರೆ ರಕ್ತದ ಪ್ರಮಾಣ ಹೆಚ್ಚಾಗಬೇಕು ಅದರಲ್ಲೂ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗಬೇಕು ಎಂದರೆ ಈಗ ನಾವು ಹೇಳುವ ಈ ಟಿಪ್ ಗಳನ್ನು ಫಾಲೋ ಮಾಡಿ. ಕಬ್ಬಿಣಾಂಶ ಹೆಚ್ಚಿಗೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ ರಕ್ತ ಹೆಚ್ಚಾಗುತ್ತದೆ ಮತ್ತು ಶುದ್ಧವಾಗುತ್ತದೆ.

ಆ ಮೂಲಕ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಮತೋಲನಕ್ಕೆ ಬರುತ್ತದೆ. ಕಬ್ಬಿಣಾಂಶ ಹೆಚ್ಚಿಗೆ ಇರುವುದು ನುಗ್ಗೆ ಸೊಪ್ಪಿನಲ್ಲಿ ನುಗ್ಗೆಸೊಪ್ಪಿನನ್ನ ಜ್ಯೂಸ್ ಅಥವಾ ನುಗ್ಗೆ ಸೊಪ್ಪಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಇದರ ಜೊತೆಗೆ ದಾಳಿಂಬೆ ಹಣ್ಣು ಹಾಗೂ ಸೇಬಿನ ಹಣ್ಣಿನ ನಿಯಮಿತವಾದ ಸೇವನೆ ಕೂಡ ರಕ್ತ ಹೀನತೆಗೆ ಪರಿಹಾರವಾಗುತ್ತದೆ.

ಬೆಲ್ಲ ಹಾಗೂ ಬೇಳೆಕಾಳುಗಳು ಕೂಡ ರಕ್ತಹೀನತೆ ಪರಿಹರಿಸುತ್ತದೆ, ಬೀಟ್ರೂಟ್ ಜ್ಯೂಸ್ ಸೇವಿಸುವುದರಿಂದ ಮತ್ತು ಆಹಾರದಲ್ಲಿ ಬೀಟ್ರೂಟ್ ತಪ್ಪದೆ ಬಳಸುವುದರಿಂದ ಕೂಡ ರಕ್ತ ಹೆಚ್ಚಾಗುತ್ತದೆ ಇವುಗಳ ಜೊತೆಗೆ ಮತ್ತೊಂದು ಶೀಘ್ರ ಪರಿಣಾಮ ಕೊಡುವ ಆಹಾರ ಹೀಗಿದೆ ನೋಡಿ.

ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ, ಸುಸ್ತು ಕಡಿಮೆ ಆಗುತ್ತದೆ. ಆಕ್ಟಿವ್ ಆಗುತ್ತಾರೆ ಮತ್ತು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುವುದು ನಿಜ. ಅದೇ ರೀತಿಯಾಗಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಮತೋಲನಕ್ಕೆ ಬರುತ್ತದೆ.

ಆದರೆ ಇದನ್ನು ಸೇವಿಸುವುದಕ್ಕೆ ಒಂದು ವಿಧಾನ ಇದೆ. ನೀವು ರಾತ್ರಿ ಹೊತ್ತು 10 ರಿಂದ 15 ಒಣ ದ್ರಾಕ್ಷಿ ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಮತ್ತು ರಾತ್ರಿ ಪೂರ್ತಿ ಅದನ್ನು ಹಾಗೆ ಬಿಡಬೇಕು. ಮರುದಿನ ಬೆಳಿಗ್ಗೆ ಆ ನೀರನ್ನು ಶೋಧಿಸಿಕೊಂಡು ಕುಡಿಯಬೇಕು ಮತ್ತು ಆ ದ್ರಾಕ್ಷಿಯನ್ನು ಕೂಡ ತಿನ್ನಬೇಕು, .ಈ ರೀತಿ ಕೇವಲ ಒಂದು ತಿಂಗಳು ಮಾಡಿದರೆ ಸಾಕು ಬಹಳ ಉತ್ತಮ ರಿಸಲ್ಟ್ ಕಾಣುತ್ತೀರಿ.

ನಿಮಗೇನಾದರೂ ಈ ಮೇಲೆ ನಾವು ತಿಳಿಸಿದ ಲಕ್ಷಣಗಳು ಕಾಣಿಸಿಕೊಂಡರೆ ತಪ್ಪದೇ ಸೂಕ್ತ ವೈದ್ಯರನ್ನು ಭೇಟಿಯಾಗಿ ಅವರು ನಿಮ್ಮ ರಕ್ತ ಪರೀಕ್ಷೆ ಮಾಡಿ Hb level ಹೇಗಿದೆ ಎಂದು ಹೇಳುತ್ತಾರೆ. ಮತ್ತು ಕಬ್ಬಿಣಾಂಶ ಯುಕ್ತ ಮಾತ್ರೆಗಳನ್ನು ಕೂಡ ನೀಡುತ್ತಾರೆ. ಹೆಣ್ಣು ಮಕ್ಕಳಿಗೆ ರಕ್ತಹೀನತೆ ಉಂಟಾಗಬಾರದು.

ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿ ಮತ್ತು ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಮಾಡಿ ಜಂಕ್ ಫುಡ್ ಗಳಿಂದ ಹಾಗೂ ದು’ಶ್ಚ’ಟಗಳಿಂದ ದೂರ ಇದ್ದು ಆರೋಗ್ಯ ರಕ್ಷಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರೂ ಹಾಗ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

Useful Information

Post navigation

Previous Post: ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ಉಳಿಯಬೇಕು ಎಂದರೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾತ್ರಿಹೊತ್ತು ಉಪ್ಪಿನಿಂದ ಈ ಒಂದು ಕೆಲಸ ಮಾಡಿ.!
Next Post: ಹಲ್ಲಿ ಮೈ ಮೇಲೆ ಬಿದ್ದರೆ ಕೆಟ್ಟದಾಗುತ್ತದಾ.? ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಒಳ್ಳೆಯದು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore