ಉಪ್ಪಿಲ್ಲದೆ ರುಚಿ ಇಲ್ಲ, ಉಪ್ಪು ಕೇವಲ ರುಚಿಗೆ ಮಾತ್ರವಲ್ಲದೆ ಮನುಷ್ಯನಿಗೆ ಅನೇಕ ವಿಷಯದಲ್ಲಿ ಬಹಳ ಸಹಕಾರಿಯಾಗಿದೆ. ದೃಷ್ಟಿ ದೋಷ ನಿವಾಳಿಸುವುದಕ್ಕೆ, ಗೃಹ ದೋಷಕ್ಕೆ ವಾಸ್ತುದೋಷ ಪರಿಹಾರ ಮಾಡುವುದಕ್ಕೆ, ನರ ದೃಷ್ಟಿ ದೋಷ ತೆಗೆಯೋದಕ್ಕೆ ಹೀಗೆ ನ’ಕಾ’ರಾ’ತ್ಮ’ಕ ಶಕ್ತಿಗಳಿಂದ ಉಂಟಾಗಿರುವ ಕೆ’ಟ್ಟ ಪರಿಣಾಮಗಳನ್ನು ಹೋಗಿಸುವುದಕ್ಕೆ ಉಪ್ಪು ಬಹಳ ಬಳಕೆ ಆಗುತ್ತದೆ.
ಇದು ಮಾತ್ರ ಅಲ್ಲದೆ ಉಪ್ಪಿನಿಂದ ಧನಾಕರ್ಷಣೆ ಕೂಡ ಮಾಡಬಹುದು. ಯಾಕೆಂದರೆ ಉಪ್ಪು ತಾಯಿ ಮಹಾಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ. ಮಹಾಲಕ್ಷ್ಮಿಯು ಸಮುದ್ರದಲ್ಲಿ ಉದ್ಭವಿಸುವುದರಿಂದ ಸಮುದ್ರದಲ್ಲಿ ಹುಟ್ಟುವ ಈ ಉಪ್ಪನ್ನು ಕೂಡ ಲಕ್ಷ್ಮಿಗೆ ಹೋಲಿಸಲಾಗುತ್ತದೆ, ಉಪ್ಪಿನಿಂದ ಮಾಡುವ ಕೆಲಸಗಳಿಂದ ತಾಯಿ ಅನುಗ್ರಹ ಪಡೆಯಬಹುದು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಮನೆಯಲ್ಲಿ ಯಾವುದೇ ರೀತಿಯ ನೆ’ಗೆ’ಟಿ’ವ್ ವೈಬ್ರೇಶನ್ಸ್ ಇದ್ದರೆ ಆ ದೋಷಗಳನ್ನು ನಿವಾರಿಸಲು ಮನೆಯನ್ನು ಒರೆಸುವಾಗ ಹಿಡಿ ಉಪ್ಪನ್ನು ಹಾಕಿ ಮನೆ ಸಾರಿಸಬೇಕು. ಹಾಗೆ ಉಪ್ಪಿಗೆ ಯಾವಾಗಲು ಗೌರವ ಕೊಡಬೇಕು ಆ ಗೌರವ ತೋರಿ ಮಾತನಾಡುವುದು, ಬೇಕಾಬಿಟ್ಟಿ ಚೆಲ್ಲುವುದು, ಸಂಜೆ ಸಮಯ ಉಪ್ಪನ್ನು ಬೇರೆಯವರಿಗೆ ಕೊಡುವುದು, ಮಂಗಳವಾರ ಶುಕ್ರವಾರ ಉಪ್ಪು ಕೊಡುವುದು ಇಂತಹ ತಪ್ಪನ್ನು ಮಾಡಬಾರದು.
ಬದಲಿಗೆ ಮಂಗಳವಾರ ಹಾಗೂ ಶುಕ್ರವಾರ ಉಪ್ಪನ್ನು ಮನೆಗೆ ತಂದರೆ ಒಳ್ಳೆಯದು ನೀವು ಎಷ್ಟೇ ಕ’ಷ್ಟ ಪಟ್ಟು ದುಡಿಯುತ್ತಿದ್ದರು ನಿಮ್ಮ ಕೈಲಿ ಹಣ ಉಳಿಯುತ್ತಿಲ್ಲ ಎಂದರೆ ಅಥವಾ ನಿಮ್ಮ ಯಾವುದೇ ರೀತಿ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಬೇಕು ಎಂದರೆ ಉಪ್ಪಿನಿಂದ ಈಗ ನಾವು ಹೇಳುವ ಈ ಒಂದು ತಂತ್ರ ಮಾಡಿ ಸಾಕು.
ಇದನ್ನು ಮಂಗಳವಾರದಂದು ಮಾಡಿದರೆ ಬಹಳ ಒಳ್ಳೆಯದು ಮಂಗಳವಾರದ ರಾತ್ರಿ ಹೊತ್ತು ಒಂದು ಗಾಜಿನ ಅಥವಾ ಮಣ್ಣಿನ ಬಟ್ಟಲಿನಲ್ಲಿ ಎರಡು ಹಿಡಿ ಕಲ್ಲುಪ್ಪು ಹಾಕಿ ಉಪ್ಪಿನ ಬಟ್ಟಲನ್ನು ಮನೆಯ ತುಂಬಾ ಹಿಡಿದು ಓಡಾಡಿ. ಹೀಗೆ ಮಾಡುವಾಗ ಮನಸ್ಸಿನಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿಗೆ ಉಂಟಾಗಿರುವ ತೊಂದರೆಗಳೆಲ್ಲ ನಿವಾರಣೆ ಆಗಬೇಕು.
ನಮ್ಮ ಸಮಸ್ಯೆಗಳೆಲ್ಲ ಪರಿಹಾರ ಆಗಬೇಕು, ದೃಷ್ಟಿ ದೋಷ ಬಿದ್ದಿದ್ದರು ಅದೆಲ್ಲ ಕಳೆಯಬೇಕು ಹೀಗೆ ಹೇಳಿಕೊಳ್ಳುತ್ತಾ ಇಂದು ಈ ತಂತ್ರವನ್ನು ಮಾಡಿದ್ದೇನೆ ಈ ಉಪ್ಪಿನಲ್ಲಿ ಎಲ್ಲಾ ನೆ’ಗೆ’ಟಿ’ವ್ ಅಂಶಗಳು ಅಟ್ರಾಕ್ಟ್ ಆಗಿರುತ್ತೆ. ಇದನ್ನು ಹೊರ ಹಾಕಿದಾಗ ನಮ್ಮ ನೆ’ಗೆ’ಟಿ’ವಿ’ಟಿ ಕೂಡ ದೂರ ಹೋಗುತ್ತದೆ ಇನ್ನು ಮುಂದೆ ನಾವು ಚೆನ್ನಾಗಿ ಆಗುತ್ತೇವೆ ಎಂದು ಪಾಸಿಟಿವ್ ಆಗಿ ಹೇಳಿಕೊಳ್ಳಬೇಕು.
ನಂತರ ಅದನ್ನು ಯಾರಿಗೂ ಕಾಣದ ರೀತಿ ಒಂದು ಜಾಗದಲ್ಲಿ ಇಟ್ಟು ಮರುದಿನ ಬೆಳಿಗ್ಗೆ ನೀರಿಗೆ ಹಾಕಿ ನಂತರ ಗಿಡಗಳಿಗೆ ಹಾಕಬೇಕು ಇಲ್ಲವಾದಲ್ಲಿ ಮಂಗಳವಾರ ದಿನ ಕೆಂಪು ವಸ್ತ್ರದಲ್ಲಿ ಎರಡು ಹಿಡಿ ಉಪ್ಪನ್ನು ತೆಗೆದುಕೊಂಡು ಮನೆಯ ದೃಷ್ಟಿ ನಿವಾಳಿಸಿ ಮನೆ ಮುಂಭಾಗಕ್ಕೆ ಕಟ್ಟಬೇಕು.
ಈ ರೀತಿ ಮಾಡುವುದರಿಂದ ನಮಗೆ ಸುತ್ತಮುತ್ತ ಓಡಾಡುವ ನೆ’ಗೆ’ಟಿ’ವ್ ಎನರ್ಜಿ ಅಥವಾ ಮನೆ ಒಳಗೆ ಇದ್ದ ನೆ’ಗೆ’ಟಿ’ವ್ ಎನರ್ಜಿಗಳು ಸೆಳೆಯಲ್ಪಡುತ್ತವೆ. ಮರುದಿನ ಅದನ್ನು ಬಿಚ್ಚಿ ನೀರಿಗೆ ಹಾಕಿ ಕರಗಿದ ಮೇಲೆ ಗಿಡಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ತಿಳಿಯಬಹುದು.
ಕೆಲವರು ನೀರಿಗೆ ನಿಂಬೆಹಣ್ಣನ್ನು ಹಾಕಿ ಮನೆಯಲ್ಲಿ ಇಡುತ್ತಾರೆ ಅದರಿಂದ ಮನೆ ಮೇಲೆ ದೃಷ್ಟಿ ದೋಷ ಆಗಿದೆಯೋ ಅಥವಾ ತಮ್ಮ ಏಳಿಗೆ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆಯೋ ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇದನ್ನು ಮಾಡಲು ಉಪ್ಪಿನಿಂದ ಕೂಡ ಪರೀಕ್ಷೆ ಮಾಡಬಹುದು.
ಒಂದು ಬಟ್ಟಲಿನಲ್ಲಿ ಉಪ್ಪು ಹಾಕಿ ಅದಕ್ಕೆ ಚಿಟಿಕೆ ಅರಿಶಿನ ಮತ್ತು ಕುಂಕುಮ ಇಟ್ಟು ನೀವು ಹಣ ಇಡುವ ಬೀರುವಿನ ಕೆಳಗೆ ಇಟ್ಟು ಒಂದು ವಾರ ಬಿಡಿ, ಉಪ್ಪಿನ ಬಣ್ಣ ಕಪ್ಪು ಅಥವಾ ಕಂದು ಬಣ್ಣ ಆಗಿದ್ದರೆ ನಿಮ್ಮ ಮೇಲೆ ಕೆ’ಟ್ಟ ದೃಷ್ಟಿಗಳು ಬಿದ್ದಿದೆ ಎಂದು ಅರ್ಥ ಅದನ್ನು ನಿವಾರಿಸಿಕೊಳ್ಳುವ ಕಡೆ ಗಮನ ಕೊಡಬೇಕು.
ಈ ಮೇಲೆ ನಾವು ತಿಳಿಸಿದ ಕ್ರಮಗಳ ಮೂಲಕ ಪರೀಕ್ಷೆ ಮಾಡಿಕೊಂಡು ನಂತರ ಪರಿಹಾರ ಮಾಡಿಕೊಂಡು ನಿಮ್ಮ ಜೀವನವನ್ನು ಬದಲಾಯಿಸಿಕೊಂಡು ಜೀವನದಲ್ಲಿ ಬಹಳ ಯಶಸ್ಸು ಕಾಣಲಿ ಎನ್ನುವುದಷ್ಟೇ ಈ ಅಂಕಣದ ಆಶಯ.