Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

Posted on February 11, 2023 By Kannada Trend News No Comments on ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

 

ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ serial actress) ಆದ ಅಭಿನಯ (Abhinaya) ಅವರ ಮೇಲೆ ಕೇಸ್ ಒಂದು ದಾಖಲಾಗಿತ್ತು. ಅದು ಕೂಡ ಅತ್ತಿಗೆಗೆ ವರದಕ್ಷಿಣೆ ಕಿ.ರು.ಕು.ಳ ಕೊಟ್ಟು ಹ.ಲ್ಲೆ ಮಾಡಿರುವ ಕೇಸ್ (Dowry case) ಆಗಿತ್ತು. ಇವರ ಅಣ್ಣ ಚೆಲುವರಾಜ್ (Brother Cheluvaraj) ಅವರ ಪತ್ನಿಯಾದ ಲಕ್ಷ್ಮಿ ದೇವಿ ಅವರು ಅಭಿನಯ ಅವರ ಮೇಲೆ ಮತ್ತು ಅವರ ತಾಯಿ ಹಾಗೂ ಸಹೋದರನ ಮೇಲೆ 2002ರಲ್ಲಿ ದಾಖಲಿಸಿದ್ದ ಕೇಸ್ ಇದಾಗಿದೆ.

ಬರೋಬ್ಬರಿ 20 ವರ್ಷಗಳ ನಂತರ 2022 ಡಿಸೆಂಬರ್ ಅಲ್ಲಿ ಇವರ ತಪ್ಪಿಗೆ ಶಿ.ಕ್ಷೆ.ಯಾಗಿ ಎರಡು ವರ್ಷಗಳ ಜೈಲು ಶಿ.ಕ್ಷೆ ನೀಡಿತ್ತು. ಆದರೆ ಸೆಶನ್ ಕೋರ್ಟ್ (session court) ನೀಡಿದ್ದ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ (High court) ಅಭಿನಯ ಹಾಗೂ ತಾಯಿ ಜಯಮ್ಮ (Mother Jayamma) ಮತ್ತು ಸಹೋದರ ಚೆಲುವರಾಜ್ ಅವರು ಮನವಿ ಸಲ್ಲಿಸಿದರು. ಆದರೆ ಹೈಕೋರ್ಟ್ ಸೇಷನ್ ಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದ್ದು ಶಿ.ಕ್ಷೆ ಜಾರಿ ಮಾಡೇ ಬಿಟ್ಟಿತು.

ಇದಾದ ಮೇಲೆ ದೊಡ್ಡ ಹೈಡ್ರಾಮವೇ ನಡೆದಿದೆ. ನಟಿ ಅಭಿನಯ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜ್ ಅವರನ್ನು ಸೆರೆಹಿಡಿದು ಕೋರ್ಟ್ ಗೆ ಹಾಜರು ಪಡಿಸಬೇಕಾಗಿತ್ತು ಆದರೆ ಅಷ್ಟರಲ್ಲಿ ಮೂರು ಜನ ಬಂಧನ ಭೀತಿಯಿಂದ ತಲೆ ಮರಿಸಿಕೊಂಡಿದ್ದಾರೆ. ಇದರ ಕಾರಣದಿಂದಾಗಿ ಚಂದ್ರಲೇಔಟ್ (Chandra layout) ಪೊಲೀಸರು ಲುಕ್ ಔಟ್ ನೋಟಿಸ್ (look out notice) ಜಾರಿ ಮಾಡಿ ಅಭಿನಯ ಜಯಮ್ಮ ಮತ್ತು ಚೆಲುವರಾಜ್ ಬಗ್ಗೆ ಏನೇ ಮಾಹಿತಿ ಸಿಕ್ಕಿದರು ಪೊಲೀಸರಿಗೆ ತಿಳಿಸಿ ಎಂದು ನಾಗರಿಕರಲ್ಲಿ ಮನವಿ ಮಾಡಿತ್ತು.

ಪೊಲೀಸರು ಇವರನ್ನು ಹುಡುಕುವ ಮೊದಲೇ ಸುಪ್ರೀಂಕೋರ್ಟ್ (Supreme court) ಮೊರೆ ಹೋಗಿರುವ ಅಭಿನಯ ಅವರು ತಾತ್ಕಾಲಿಕವಾಗಿ ಇದರಿಂದ ರಿಲೀಫ್ ಪಡೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಈ ಮೂರು ಜನರ ಅಹವಾಲನ್ನು ಕೇಳಿ ಮೂವರಿಗೂ ತಾತ್ಕಾಲಿಕ ಜಾಮಿನನ್ನು (Bail) ಮಂಜೂರು ಮಾಡಿದೆ. ಮತ್ತು ಪ್ರಕರಣವನ್ನು ಮುಂದಿನ ವಿಚಾರಣೆ ತನಕ ಮುಂದೂಡಿದೆ.

ಅಭಿನಯ ಅವರ ಅಣ್ಣ ಚಲುವರಾಜ್ ಲಕ್ಷ್ಮಿ ದೇವಿಯನ್ನು ಅವರನ್ನು ಮದುವೆ ಆಗಿ ನಂತರ ತಾಯಿ ಜೊತೆ ಸೇರಿ ವರದಕ್ಷಿಣೆ ತರುವಂತೆ ನಾನಾ ರೀತಿ ಹಿಂ.ಸೆ ಕೊಟ್ಟು ಶೋಷಣೆ ಮಾಡಿದ್ದರು, ಈ ಕೃತ್ಯದಲ್ಲಿ ನಟಿ ಅಭಿನಯ ಅವರು ಅವರ ಕುಮ್ಮಕು ಸಹ ಇದೆ ಎಂದು ಅವರ ಹೆಸರನ್ನು ಸೇರಿಸಿ ದೂರು ನೀಡಿದ್ದರು. ಇದರ ತೀರ್ಪು ಬಂದ ಬಳಿಕ ಅನೇಕ ನ್ಯೂಸ್ ಚಾನೆಲ್ ಗಳಲ್ಲಿ ಲಕ್ಷ್ಮಿ ದೇವಿಯವರು ಮಾತನಾಡಿ ನಟಿ ಅಭಿನಯ ಅವರ ಬಣ್ಣ ಹಚ್ಚಿದ ಮುಖವಾಡದ ಹಿಂದೆ ಇರುವ ನಿಜವಾದ ಮುಖ ಏನು ಎನ್ನುವುದನ್ನು ಬಯಲು ಮಾಡಿದ್ದರು.

ಪೊಲೀಸರ ಅತಿಥಿ ಆಗಬೇಕಾಗಿದ್ದ ಅಭಿನಯ ಕುಟುಂಬದವರು ಎಸ್ಕೇಪ್ ಆಗಿ ಈಗ ಸುಪ್ರೀಂ ಕೋರ್ಟ್ ಇಂದ ಬೇಲ್ ತಂದು ಪಾರಾಗಿದ್ದಾರೆ. ನಟಿ ಅಭಿನಯ ಅವರು ಇತ್ತೀಚೆಗೆ ಝೀ ಕನ್ನಡ (Zee kannada) ವಾಹಿನಿಯ ಹಿಟ್ಲರ್ ಕಲ್ಯಾಣ (Hitler Kalyana) ಧಾರವಾಹಿಯಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೆಲ್ಲಾ ಅವಾಂತರ ಆದ ಮೇಲೆ ಆ ಧಾರವಾಹಿಯಿಂದ ಹೊರ ಬಂದಿದ್ದಾರೆ. ಆದರೂ ನಟಿ ಅಭಿನಯ ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಜನರಿಗೆ ಬಹಳ ಹತ್ತಿರವಾಗಿರುತ್ತಿತ್ತು. ಇಷ್ಟು ನಗಿಸುತ್ತಿದ್ದ ಈಕೆಯ ಒಳ ಮನಸ್ಸಿಗೆ ಎಷ್ಟು ಕೆಟ್ಟದಾಗಿದ್ದಾಗಿದೆ ಎನ್ನುವುದು ಬಯಲಾಗಿ ಈಗ ಎಲ್ಲರೂ ಈಗ ಅಭಿನಯ ಅವರ ಕೆಟ್ಟತನದ ಬಗ್ಗೆ ಮಾತನಾಡುತ್ತಿದ್ದಾರೆ.

 

Viral News Tags:Abhinaya, Actor Abhinaya
WhatsApp Group Join Now
Telegram Group Join Now

Post navigation

Previous Post: ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
Next Post: ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore