Home Useful Information ಈ ದೇವಸ್ಥಾನದಲ್ಲಿ ಊಟ ವಸತಿ ಸೇವೆ ಉಚಿತ ಕೇವಲ ಏಳು ದಿನದಲ್ಲಿ ದೇಹದ ಎಲ್ಲಾ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ.!

ಈ ದೇವಸ್ಥಾನದಲ್ಲಿ ಊಟ ವಸತಿ ಸೇವೆ ಉಚಿತ ಕೇವಲ ಏಳು ದಿನದಲ್ಲಿ ದೇಹದ ಎಲ್ಲಾ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ.!

0
ಈ ದೇವಸ್ಥಾನದಲ್ಲಿ ಊಟ ವಸತಿ ಸೇವೆ ಉಚಿತ ಕೇವಲ ಏಳು ದಿನದಲ್ಲಿ ದೇಹದ ಎಲ್ಲಾ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ.!

 

ಪ್ರಪಂಚದಲ್ಲಿ ಒಂದಕ್ಕಿಂತ ಒಂದು ದೊಡ್ಡ ರೋಗಗಳು ಇದೆ. ಕೆಲ ವೊಂದು ರೋಗಗಳನ್ನು ವೈದ್ಯರು ಕೂಡ ಗುಣಪಡಿಸಲು ಸಾಧ್ಯವಾಗು ವುದಿಲ್ಲ ಅಂತಹ ರೋಗಗಳನ್ನು ಕೂಡ ನಾವು ನೋಡಬಹುದು. ಆದರೆ ವೈದ್ಯರು ಗುಣಪಡಿಸಲು ಸಾಧ್ಯವಾಗದೇ ಇರುವಂತಹ ರೋಗಗಳನ್ನು ನಾವು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ಗುಣಪಡಿಸಿಕೊಳ್ಳಬಹುದು ಹೌದು ಏನಿದು ಆಶ್ಚರ್ಯ ಎಂದು ನಿಮಗೆ ಅನ್ನಿಸಬಹುದು ಆದರೆ ಇದು ಸತ್ಯ.

ಭಾರತದಲ್ಲಿ ಅತಿ ಹೆಚ್ಚು ಜನರಿಗೆ ಆಗುವಂತಹ ಪಾರ್ಶ್ವ ವಾಯು ಅಥವಾ ಪ್ಯಾರಾಲಿಸಿಸ್, ಕಣ್ಣಿನ ಸಮಸ್ಯೆ ಅತಿಯಾದ ತಲೆನೋವಿನ ಸಮಸ್ಯೆ, ಎಲ್ಲಾ ರೀತಿಯ ಚರ್ಮರೋಗದ ಸಮಸ್ಯೆ ಗಳಿಗೂ ಕೂಡ ಈ ದೇವಸ್ಥಾನಕ್ಕೆ ಹೋದರೆ ಸಾಕು ಅದು ಸಂಪೂರ್ಣವಾಗಿ ಗುಣವಾಗುತ್ತದೆ.

ಈ ದೇವಸ್ಥಾನದ ಹೆಸರು :- ಚತುರ್ ದಾಸ್ ಜಿ ಮಹಾರಾಜ್ ಬುಟಾಟಿ ಧಮ್. ನೂರಕ್ಕೆ ನೂರರಷ್ಟು ರೋಗವನ್ನು ನಿವಾರಿಸುವಂತಹ ಮಂದಿರ ಎಂದೇ ಹೇಳಬಹುದು.
ಈ ದೇವಸ್ಥಾನದ ವಿಳಾಸ :- ರಾಜಸ್ಥಾನ ರಾಜ್ಯದ ಜೋಧಪುರ್ ನಗರಕ್ಕೆ ಹೋಗಬೇಕು ಜೋಧಪುರ್ ನಗರದಿಂದ 146 ಕಿಲೋಮೀಟರ್ ಪ್ರಯಾಣ ಮಾಡಿದರೆ ಬುಠಟಿಹಳ್ಳಿ ಸಿಗುತ್ತೆ ಇದೇ ಹಳ್ಳಿಯಲ್ಲಿ ನೆಲೆಸಿರುವ “ಚತುರ್ದಾಸ್ ಜಿ ಮಹಾರಾಜ ದೇವಸ್ಥಾನ”.

ಮತ್ತೊಂದು ಅದ್ಭುತವಾದ ಸಂಗತಿ ಏನು ಎಂದರೆ. ಈ ದೇವಸ್ಥಾನ ಸಂಪೂರ್ಣವಾಗಿ ಉಚಿತ ಬರುವ ಭಕ್ತಾದಿಗಳಿಗೆ ಊಟ ವಸತಿ ಸೇವೆ ಎಲ್ಲವೂ ಕೂಡ ಉಚಿತ. ಈ ದೇವಸ್ಥಾನಕ್ಕೆ ಹೋಗುವ ಯಾರೊಬ್ಬ ಭಕ್ತಾದಿಗಳು ಕೂಡ ಕಾಣಿಕೆಯನ್ನು ಹಾಕುವಂತಿಲ್ಲ.

ಈ ದೇವಸ್ಥಾನದಲ್ಲಿ ಹೋಗುವಂತಹ ಭಕ್ತಾದಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಹೊರತು ಇಲ್ಲಿರುವಂತಹ ದೇವರು ಯಾವುದೇ ರೀತಿಯ ಕಾಣಿಕೆಯನ್ನು ಕೇಳುವುದಿಲ್ಲ ಹಾಗೂ ಅಲ್ಲಿ ಯಾರು ಕೂಡ ಕಾಣಿಕೆ ಯನ್ನು ಕೇಳುವುದಿಲ್ಲ. ವಿದೇಶಗಳಿಂದಲೂ ಕೂಡ ಸಾಕಷ್ಟು ಭಕ್ತಾದಿಗಳು ಇಲ್ಲಿಗೆ ಬಂದು ಸಾಕಷ್ಟು ರೋಗಗಳನ್ನು ಗುಣಪಡಿಸಿಕೊಂಡು ಹೋಗಿದ್ದಾರೆ.

ಅಷ್ಟೇ ಅಲ್ಲದೆ ಕರ್ನಾಟಕದಿಂದಲೂ ಕೂಡ ನೂರಾರು ಮಂದಿ ಈ ದೇವಸ್ಥಾನಕ್ಕೆ ಬಂದು ಅವರ ಸಮಸ್ಯೆಗಳನ್ನು ಕೂಡ ಗುಣಪಡಿಸಿ ಕೊಂಡು ಹೋಗಿದ್ದಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಚತುರ್ ದಾಸ್ ಜಿ ಮಹಾರಾಜ್ ಬುಟಾಟಿ. ಇವರನ್ನು ನಡೆಯುತ್ತಿದ್ದ ದೇವರು ಎಂದೇ ಕರೆಯುತ್ತಾರೆ. ಇವರು ಜೀವಂತವಾಗಿ ಸಮಾಧಿ ಯಾಗಿರುವ ದೈವ ಪುರುಷರು ಸುಮಾರು 500 ವರ್ಷಗಳ ಹಿಂದೆ ಬುಟಾಟಿ ನಗರಕ್ಕೆ ಬಂದು ನೆಲೆಸುತ್ತಾರೆ.

ಇವರು ಯಾವ ಒಂದು ಕಾರಣಕ್ಕಾಗಿ ಬುಟಾಟಿ ನಗರಕ್ಕೆ ಬಂದು ಸೇರಿದರು ಇವರ ತಂದೆ ತಾಯಿಗಳು ಯಾರು ಇವರ ಹಿನ್ನೆಲೆ ಏನು ಎಂದು ಸಹ ಇಲ್ಲಿಯವರೆಗೆ ಯಾರಿಗೂ ಕೂಡ ತಿಳಿದಿಲ್ಲ. ಅಂದಿನ ಸಮಯದಲ್ಲಿ ಚತುರ್ ದಾಸ್ ಜಿ ಮಹಾರಾಜ್ ಅವರು ಭಕ್ತರ ಕೈಗಳನ್ನು ಮುಟ್ಟಿದರೆ ಸಾಕು ರೋಗಗಳೆಲ್ಲವೂ ಕೂಡ ಗುಣವಾಗುತ್ತಿತ್ತು 1970 ರಲ್ಲಿ ಲಕ್ಷಾಂತರ ಭಕ್ತಾದಿಗಳ ಮುಂದೆ ಜೀವಂತ ಸಮಾಧಿಯಾಗುತ್ತಾರೆ.

ಈಗ ಶ್ರೀ ರಾಘವೇಂದ್ರ ಸ್ವಾಮಿಗಳು ಹೇಗೆ ಇದ್ದಾರೋ ಅದೇ ರೀತಿ ಚತುರ್ ದಾಸ್ ಜಿ ಮಹಾರಾಜ್ ಅವರು. ಪ್ಯಾರಾಲಿಸಿಸ್, ಕಣ್ಣಿನ ಸಮಸ್ಯೆ ಅತಿಯಾದ ತಲೆನೋವಿನ ಸಮಸ್ಯೆ, ಚರ್ಮದ ಸಮಸ್ಯೆ ಇದ್ದವರು ಈ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ಇದ್ದು ಪರಿಕರಂ ಸೇವೆ ಮಾಡಬೇಕು. ಪರಿಕರಂ ಸೇವೆ ಎಂದರೆ ಬೆಳಗಿನ ಜಾವ 5:30ಕ್ಕೆ ತಣ್ಣೀರಿನ ಸ್ನಾನ ಮಾಡಿ ದೇವಸ್ಥಾನದ ಸುತ್ತ 108 ಪ್ರದಕ್ಷಿಣೆಯನ್ನು ಹಾಕಬೇಕು.

ಆನಂತರ ದೇವಸ್ಥಾನದ ಮುಂಭಾಗದಲ್ಲಿ ನಿಂತು 11 ದೀರ್ಘ ದಂಡ ನಮಸ್ಕಾರ ಹಾಕಬೇಕು ಅದೇ ರೀತಿಯಾಗಿ ಸಂಜೆ 21 ಪ್ರದಕ್ಷಿಣೆ ಮಾಡಿ 11 ದೀರ್ಘ ದಂಡ ನಮಸ್ಕಾರ ಹಾಕಬೇಕು. ಹೀಗೆ ಈ ರೀತಿ ಮಾಡಿದರೆ ಒಂದು ಪರಿಕರಂ ಸೇವೆ ಮುಕ್ತಾಯ ಆದಂತೆ ಅರ್ಥ ಇದೇ ರೀತಿಯಾಗಿ ಏಳು ದಿನಗಳ ಕಾಲ ಪರಿಕರಂ ಸೇವೆ ಮಾಡಬೇಕು ಏಳು ದಿನಗಳು ಕೂಡ ಭಕ್ತಾದಿಗಳಿಗೆ ಉಚಿತವಾದ ವಸತಿ ಊಟದ ಸೇವೆ ಇರುತ್ತದೆ.

ಒಂದು ವೇಳೆ ಆರೋಗ್ಯ ಸಮಸ್ಯೆ ಇರುವವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದರೆ ಅವರ ಜೊತೆ ಬಂದಿರುವವರು ಈ ಸೇವೆಯನ್ನು ಮಾಡಬಹುದು. ಏಳು ದಿನಗಳು ಕಳೆದ ಮುಂದಿನ ಏಳು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ನಿಮ್ಮ ಕಣ್ಣಮುಂದೆ ಕಾಣಿಸುತ್ತದೆ. ಈ ಸಮಸ್ಯೆ ಗುಣವಾದ ಒಂದು ವರ್ಷದ ಒಳಗಾಗಿ ನೀವು ಈ ದೇವಸ್ಥಾನಕ್ಕೆ ಬಂದು ಎರಡು ದಿನಗಳು ಇದ್ದು ಚತುರ್ದಾಸ್ ಜಿ ಅವರ ಸೇವೆ ಮಾಡಿಕೊಂಡು ಹೋಗಬೇಕು.

LEAVE A REPLY

Please enter your comment!
Please enter your name here