Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಳೆದವಾರ ಅದ್ದೂರಿಯಾಗಿ ಮಕ್ಕಳ ನಾಮಕರಣ ಮಾಡಿದ್ದ ಅಮೂಲ್ಯ & ಜಗದೀಶ್ ದಂಪತಿ ಇಂದು ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ, ಈ ಕ್ಯೂಟ್ ವಿಡಿಯೋ ನೋಡಿ.

Posted on November 20, 2022 By Kannada Trend News No Comments on ಕಳೆದವಾರ ಅದ್ದೂರಿಯಾಗಿ ಮಕ್ಕಳ ನಾಮಕರಣ ಮಾಡಿದ್ದ ಅಮೂಲ್ಯ & ಜಗದೀಶ್ ದಂಪತಿ ಇಂದು ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ, ಈ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಕ್ಯೂಟೆಸ್ಟ್ ದಂಪತಿಗಳಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ಜೋಡಿ ಕೂಡ ಒಂದು ಕಳೆದ ವಾರ ಅಷ್ಟೇ ಅದ್ದೂರಿಯಾಗಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಮಕ್ಕಳಿಗೆ ನಾಮಕರಣ ಮಾಡಿದ ಹಿನ್ನೆಲೆ ಇಂದು ತಿರುಪತಿ ದೇವಸ್ಥಾನಕ್ಕೆ ಹೋಗಿ ಮಕ್ಕಳಿಗೆ ಮೊದಲ ಮುಡಿಯನ್ನು ನೀಡಿದ್ದಾರೆ.

ತಮ್ಮ ಎರಡು ಅವಳಿ ಮಕ್ಕಳಿಗೆ ಮುಡಿ ನೀಡಿದಂತಹ ಕೆಲವೊಂದು ಅಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮಕ್ಕಳಿಗೆ ಆಯಸ್ಸು ಆರೋಗ್ಯ ಕೊಟ್ಟು ದೇವರು ಕರುಣಿಸಲಿ ಎಂದು ಆಶಿಸಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಅಮೂಲ್ಯ ಅವರು ಕಳೆದ ಮೂರು ವರ್ಷದ ಹಿಂದೆ ಉದ್ಯಮಿ ಹಾಗೂ ರಾಜಕಾರಣಿ ಆಗಿರುವಂತಹ ಜಗದೀಶ್ ಚಂದ್ರನ್ ಅವರನ್ನು ಮದುವೆಯಾಗಿದ್ದಾರೆ.

ಇದು ಪಕ್ಕ ಅರೇಂಜ್ ಮ್ಯಾರೇಜ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು ಇಬ್ಬರು ಒಟ್ಟಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಕೆಲವು ನೆಟ್ಟಿಗರು ಗಣೇಶ್ ಮತ್ತು ಅಮೂಲ್ಯ ನಡುವೆ ಬೇರೇನೆ ಸಂಬಂಧ ಇದೆ ಎಂದು ಗಾಸಿಪ್ ಹಬ್ಬಿಸುತ್ತಾರೆ. ಇದರಿಂದ ಗಣೇಶ ಅವರು ಬಹಳನೇ ಮನನೊಂದು ಕೊಳ್ಳುತ್ತಾರೆ ತದನಂತರ ನಾನೇ ಒಳ್ಳೆಯ ಹುಡುಗನನ್ನು ಹುಡುಕಿ ಅಮೂಲ್ಯಳಗೆ ಮದುವೆ ಮಾಡಬೇಕು ಎಂಬ ದೃಢ ನಿರ್ಧಾರವನ್ನು ಮಾಡುತ್ತಾರೆ‌.

ತದನಂತರ ಗಣೇಶ್ ಅವರ ಆತ್ಮೀಯ ಸ್ನೇಹಿತರಾದಂತಹ ಜಗದೀಶ್ ಅವರನ್ನು ಭೇಟಿ ಮಾಡಿ ಅಮೂಲ್ಯ ಅವರನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾರೆ. ತದನಂತರ ಅಮೂಲ್ಯ ಅವರನ್ನು ಜಗದೀಶ್ ಭೇಟಿಯಾಗಿ ಇಬ್ಬರೂ ಕೂಡ ಪರಸ್ಪರ ಮಾತನಾಡಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಮದುವೆಯಾದ ಎರಡು ವರ್ಷಗಳ ಕಾಲ ಹಾಯಾಗಿ ಕಾಲ ಕಳೆಯುತ್ತಾರೆ ಕಳೆದ ಆರು ತಿಂಗಳ ಹಿಂದೆ ನಟಿ ಅಮೂಲ್ಯ ಮುದ್ದಾದ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ.

ಈ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂಬ ಹೆಸರನ್ನು ಕೂಡ ನಾಮಕರಣ ಮಾಡಿದ್ದಾರೆ ಗೋಲ್ಡನ್ ಸ್ಟಾರ್ ದಂಪತಿಗಳು ನಾಮಕರಣ ಶಾಸ್ತ್ರದ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ವಿಶೇಷ ಏನೆಂದರೆ ಇಬ್ಬರು ಮುದ್ದು ಮಕ್ಕಳಿಗೆ ಚಿನ್ನದ ಸರ ಮತ್ತು ಕೈಗೆ ಕಡಗವನ್ನು ತೊಡಿಸುವ ಮೂಲಕ ಉಡುಗೊರೆಯನ್ನು ನೀಡುತ್ತಾರೆ ಗಣೇಶ್ ದಂಪತಿಗಳು ಮಕ್ಕಳಿಗೆ ಉಡುಗೊರೆ ನೀಡಿದಂತಹ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಸದ್ಯಕ್ಕೆ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ತಮ್ಮ ಮಕ್ಕಳು ಒಟ್ಟಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಅಮೂಲ್ಯ ನಟಿಯಾಗಿದ್ದರು ಕೂಡ ಶಾಸ್ತ್ರ ಸಂಪ್ರದಾಯ ಪಾಲಿಸುವುದರಲ್ಲಿ ನಟಿ ಅಮೂಲ್ಯ ಅವರು ಎತ್ತಿದ ಕೈ ಅಂದರೆ ಹೇಳಬಹುದು. ನಾಮಕರಣ ಶಾಸ್ತ್ರ ಮಾಡುವ ಒಂದು ವಾರದ ಹಿಂದೆಯಷ್ಟೇ ಆದಿ ಚುಂಚನಗಿರಿ ಮಠಕ್ಕೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿ.

ಅಲ್ಲಿ ಇರುವಂತಹ ನಿರ್ಮಲಾನಂದ ಗುರೂಜಿ ಅವರನ್ನು ಭೇಟಿ ಮಾಡಿ ಮಕ್ಕಳಿಗೆ ಯಾವ ಹೆಸರನ್ನು ಇಟ್ಟರೆ ಶ್ರೇಯಸ್ಸು ಎಂಬ ವಿಚಾರವನ್ನು ಚರ್ಚೆ ಮಾಡಿ ಗುರುಗಳ ಸಲಹೆಯನ್ನು ಪಡೆದ ನಂತರವಷ್ಟೇ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನಡೆಸಿದರು ಇದೀಗ ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು‌.

https://youtu.be/2JuXyIStwKA

Entertainment Tags:Actor Amulya, Adhav, Amulya Jagadeesh, Atharv
WhatsApp Group Join Now
Telegram Group Join Now

Post navigation

Previous Post: ನಟನೆ ಬಿಟ್ಟು ಹೊಸ ಉದ್ಯಮ ಪ್ರಾರಂಭಿಸಿದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಏನದು ಗೊತ್ತ.? ಇನ್ಮುಂದೆ ನೀವು ಯಾವಾಗ ಬೇಕಾದ್ರು ಇವರನ್ನ ಭೇಟಿ ಆಗ್ಬೋದು.
Next Post: ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore