Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

Posted on February 11, 2023 By Kannada Trend News No Comments on ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

 

ಕನ್ನಡ ಕಿರುತೆರೆಯ ನಂಬರ್ ಒನ್ ಮಹಿಳಾ ನಿರೂಪಕಿ ಎನ್ನುವ ಖ್ಯಾತಿಗೆ ಒಳಗಾಗಿರುವ ಅನುಶ್ರೀ (Anushree) ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar)ಅವರ ಅಪ್ಪಟ ಅಭಿಮಾನಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಾಕಷ್ಟು ಬಾರಿ ಅನೇಕ ವೇದಿಕೆಗಳಲ್ಲಿ ಇದನ್ನು ಅನುಶ್ರೀ ಅವರು ಹೇಳಿಕೊಂಡಿದ್ದಾರೆ ಮುಂದುವರೆದು ತಮ್ಮ ಯೂಟ್ಯೂಬ್ ಚಾನೆಲ್ (you tube) ಅನ್ನು ಕೂಡ ಪುನೀತ್ ಅವರ ಎಪಿಸೋಡ್ ಇಂದಲೇ ಆರಂಭಿಸಿ ಈಗ ಲೋಗೋ (Logo) ಅನ್ನು ಕೂಡ ಅದೇ ರೀತಿ ಡಿಸೈನ್ ಮಾಡಿಸಿಕೊಂಡಿದ್ದಾರೆ.

ಈ ರೀತಿ ಅಪ್ಪು ಅವರ ಗುಣ ಮತ್ತು ವ್ಯಕ್ತಿತ್ವ ನೋಡಿ ಕೋಟ್ಯಂತರ ಮಂದಿ ಪುನೀತ್ ಅವರಿಗೆ ಅಭಿಮಾನಿಗಳಾಗಿದ್ದಾರೆ. ಹಾಗೆಯೇ ಅಂತವರಲ್ಲಿ ಅನುಶ್ರೀ ಅವರು ಕೂಡ ಒಬ್ಬರು. ಆದರೆ ಒಬ್ಬ ಜವಾಬ್ದಾರಿಯುತ ನಿರೂಪಕಿ ಆಗಿ ಅವರು ಅಪ್ಪು ಅವರ ಅಭಿಮಾನಿ ಎನ್ನುವ ಕಾರಣ ಮಾತ್ರಕ್ಕೆ ಮತ್ತೊಬ್ಬ ಸ್ಟಾರ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುವಂತಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು (Appu) ಹಾಗೂ ದಚ್ಚು (Dachchu) ಅವರ ಅಭಿಮಾನಿಗಳ (fans) ನಡುವೆ ಪ್ರತಿಯೊಂದು ವಿಷಯಕ್ಕೂ ಸಂಘರ್ಷ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಬರಹಗಳ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದ ಇವರು ಮುಂದುವರೆದು ಹೊಸಪೇಟೆಯಲ್ಲಿ (Hosapet) ಮಾಡಿದ ಗಲಾಟೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದು ಮಾಸುವ ಮುನ್ನವೇ ಈಗ ಅದಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ರೀತಿಯ ಲಕ್ಷಣಗಳು ಕಂಡುಬರುತ್ತವೆ, ಅದರಲ್ಲೂ ಪಬ್ಲಿಕ್ ಫೇಸ್ ಎಂದು ಕರೆಸಿಕೊಂಡ ಸೆಲೆಬ್ರಿಗಳೇ ಈ ರೀತಿ ನಡೆದುಕೊಳ್ಳುತ್ತಿರುವುದು ಅಸಹನೀಯ ವಿಷಯವಾಗಿದೆ.

ಇಷ್ಟಕ್ಕೂ ಅನುಶ್ರೀ ಅವರು ದರ್ಶನ್ ಅವರ ವಿಷಯದಲ್ಲಿ ಯಾವ ರೀತಿ ನಡೆದುಕೊಂಡರು ಅವರಿಂದ ಆದ ಮಿಸ್ಟೇಕ್ ಏನು ಎಂದು ವಿವರಿಸಲು ಕನಕೋತ್ಸವ ಕಾರ್ಯಕ್ರಮದಲ್ಲಿ ಆದ ಆ ಒಂದು ಘಟನೆಯ ಸಾಕು. ಕನಕೋತ್ಸವ 2023 (Kanakothsava 2023) ಎನ್ನುವ ಕಾರ್ಯಕ್ರಮ ಡಿಕೆ ಸಹೋದರರ (DK brothers) ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದಿತ್ತು ಆ ಕಾರ್ಯಕ್ರಮಕ್ಕೆ ನಿರೂಪಕಿ ಆಗಿ ಅನುಶ್ರೀ ಅವರು ಹೋಗಿದ್ದರು.

ವೇದಿಕೆ ಮೇಲೆ ಹಾಡುಗಳ ಕುರಿತು ಮಾತನಾಡುವಾಗ ಕೆಳಗಿದ್ದ ಕೆಲವು ದರ್ಶನ್ ಅವರ ಅಭಿಮಾನಿಗಳಿಂದ ಪುಷ್ಪವತಿ (Pushpavathi) ಹಾಡನ್ನು ಹಾಕುವಂತೆ ಕೋರಿಕೆ ಬರುತ್ತಿತ್ತು. ಆಗಷ್ಟೇ ಕ್ರಾಂತಿ (Kranthi) ಸಿನಿಮಾದ ಒಂದೊಂದೇ ಹಾಡು ರಿಲೀಸ್ ಆಗುತ್ತಿತ್ತು, ಸರಿಯಾಗಿ ಅದೇ ಸಮಯಕ್ಕೆ ಕನಕೋತ್ಸವ ಕಾರ್ಯಕ್ರಮ ಏರ್ಪಟ್ಟಿತ್ತು. ಆ ಸಮಯದಲ್ಲಿ ಟ್ರೆಂಡಿಂಗ್ ಹಾಡಾಗಿದ್ದ ಕಾರಣ ದಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪುಷ್ಪವತಿ ಹಾಡನ್ನು ಹಾಕಬೇಕು ಎಂದು ಕೂಗಿ ಕೇಳುತ್ತಿದ್ದರು.

ವೇದಿಕೆ ಮೇಲಿದ್ದ ಅನುಶ್ರೀ ಅವರು ಈ ಕೂಗು ಬಂದ ತಕ್ಷಣ ಕೆಳಗೆ ನೋಡಿ ಪುಷ್ಪವತಿ ಎಂದು ಕೂಗುತ್ತಿದ್ದ ಅಪ್ಪಟ ಡಿ ಬಾಸ್ ಅಭಿಮಾನಿಯನ್ನು ಪುಷ್ಪವತಿ ಬರುತ್ತದೆ ನೀನು ಈ ರೀತಿ ಆಡುತ್ತಿದ್ದರೆ ನಿನ್ನ ಬೆನ್ನ ಗತಿ ಏನಾಗಬೇಕು ನೋಡಿಕೋ ಎಂದು ಕಾಲೆಳೆದಿದ್ದಾರೆ. ಇಷ್ಟಕ್ಕೆ ನಿಲ್ಲದೆ ಅವರ ಅಹಂಕಾರದ ಪರಮಾವಧಿಯು ಇನ್ನು ಮುಂದುವರೆದಿದೆ. ಹಾಡು ಹಾಕಲು ತಡವಾಗುತ್ತಿದ್ದಂತೆ ಅಭಿಮಾನಿಗಳೆಲ್ಲ ಒಟ್ಟಾಗಿ ಸೇರಿ ಪುಷ್ಪವತಿ ಪುಷ್ಪವತಿ ಎಂದು ಕೂಗುತ್ತಿದ್ದರು.

ಆಗ ಅವರ ಕಡೆ ನೋಡಿದ ಅನುಶ್ರೀ ಅವರು ಒಬ್ಬರನ್ನು ಉದ್ದೇಶಿಸಿ ನೀನು ಒಬ್ಬ ಇಲ್ಲಿ ಕಿರಿಚಿಕೊಳ್ಳುವುದರಿಂದ ಏನು ಮಾಡಲು ಆಗುವುದಿಲ್ಲ, ನಿನ್ನಂತೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಬರುತ್ತದೆ ಅಲ್ಲಿವರೆಗೂ ಸಮಾಧಾನ ಇಟ್ಟುಕೋ ಎಂದು ಉದಾಸೀನವಾಗಿ ಮಾತನಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಬೇಸರ ಹಾಗೂ ಕೋಪಕ್ಕೆ ಕಾರಣ ಆಗಿದೆ ಅವರು ಅಪ್ಪು ಅಭಿಮಾನಿ ಆಗಿರುವ ಕಾರಣದಿಂದಲೇ ಕ್ರಾಂತಿ ಚಿತ್ರದ ಹಾಡನ್ನು ಕೇಳಿದ್ದಕ್ಕೆ ಉರಿದುಕೊಂಡು ಈ ರೀತಿ ವೇದಿಕೆ ಮೇಲೆ ಮಾತನಾಡಿರುವುದು ಎಂದು ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ. ಸದ್ಯಕ್ಕೆ ಅನುಶ್ರೀ ಅವರು ಆ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಂಡರು ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೀವು ಸಹ ನೋಡಿ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Viral News Tags:Anchor Anushree, Anushree, Darshan, Kanakothsava
WhatsApp Group Join Now
Telegram Group Join Now

Post navigation

Previous Post: ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?
Next Post: ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore