Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು

Posted on March 14, 2023 By Kannada Trend News No Comments on ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು

 

ಅನುಶ್ರೀ ಅವರು ‘Anchor Anushree’ ಎಂಬ ಯೂ ಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಆ ಮೂಲಕ ಅನೇಕ ನಟ ದಿಗ್ಗಜರನ್ನು ನಟಿ ಮಣಿಯರನ್ನು ಸಂದರ್ಶನ ಮಾಡುತ್ತಾರೆ. ಈವರೆಗೂ ಅನುಶ್ರೀ ಅವರು ತಾವೇ ನಡೆಸುತ್ತಿರುವ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿ ಬಾಸ್ ದರ್ಶನ್ ಅವರ ಸಂದರ್ಶನವನ್ನು ಮಾಡಿಲ್ಲ. ಈ ಬಗ್ಗೆ ಅನೇಕರಲ್ಲಿ ಪ್ರಶ್ನೆಯು ಕಾಡುತ್ತಿತ್ತು. ಆದರೆ ಇದೀಗ ಸ್ವತಃ ಅನುಶ್ರೀ ಅವರೇ ಈ ಪ್ರಶ್ನೆಗೆ ಉತ್ತರ ಹೇಳಿರುವ ವಿಡಿಯೋ ಒಂದು ಸಕ್ಕತ್ತಾಗಿ ವೈರಲ್ ಆಗ್ತಿದೆ.

ಅನುಶ್ರೀ ಅವರು ನೀಡಿದ ಉತ್ತರವೇನು? ಎಂದು ತಿಳಿದುಕೊಳ್ಳಲು ಈ ಬರಹವನ್ನು ಸಂಪೂರ್ಣವಾಗಿ ಓದಿ. ‘ಅನುಶ್ರೀ ಅವರು ಯಾಕೆ ದರ್ಶನ್ ಅವರ ಸಂದರ್ಶನವನ್ನು ಮಾಡಿಲ್ಲ? ಅವರ ಮಧ್ಯೆ ಏನಾದರೂ ಭಿನ್ನ ಅಭಿಪ್ರಾಯಗಳು ಇವೆಯೇ? ದರ್ಶನ್ ಸರ್ ಇವರ ಚಾನೆಲ್ ಗೆ ಬಂದು ಇಂಟರ್ವ್ಯೂ ನೀಡಲು ನಿರಾಕರಿಸಿದರನಿರಾಕರಿಸಿದರೇ? ಅಥವಾ ಅನುಶ್ರೀ ಅವರೇ ಚಾಲೆಂಜಿಂಗ್ ಸ್ಟಾರ್ ಅವರನ್ನು ಇಂಟರ್ವ್ಯೂ ಮಾಡಲು ಹಿಂಜರಿದರೇ.?’ ಈ ರೀತಿಯಾಗಿ ಅನೇಕ ಪ್ರಶ್ನೆಗಳು ನೆಟ್ಟಿಗರನ್ನು ಕಾಡುತ್ತಿತ್ತು.

ಆದರೆ ಇದೀಗ ಸ್ಪಷ್ಟವಾದ ಉತ್ತರವು ಅನುಶ್ರೀ ಅವರ ಬಾಯಿಂದಲೇ ಬಂದಿದೆ. ತಮ್ಮ ನೆಚ್ಚಿನ ನಟ ಅಥವಾ ನಟಿಯರ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಲ್ಲಿ ಇರುವುದು ಸಹಜ. ಅದಕ್ಕಾಗಿಯೇ ಯೂಟ್ಯೂಬ್ ನಲ್ಲಿ ಅಥವಾ ಇನ್ನಿತರ ಮೂಲಗಳಲ್ಲಿ ತಮ್ಮ ನಾಯಕ ಅಥವಾ ನಾಯಕಿಯರ ಸಂದರ್ಶನವನ್ನು ಹುಡುಕಿ ವೀಕ್ಷಿಸುತ್ತಾ ಇರುತ್ತಾರೆ. ಹೊಸ ಚಿತ್ರವು ತೆರೆ ಕಾಣಲಿದೆ ಎಂದಾದರೆ ತಮ್ಮ ಫೇವರೆಟ್ ಯಾರಿದ್ದಾರೆ? ಅವರ ಪಾತ್ರವೇನು? ಎಂದೆಲ್ಲಾ ತಿಳಿದುಕೊಳ್ಳುತ್ತಾರೆ.

ಮದುವೆ, ವಿದ್ಯಾಭ್ಯಾಸ, ಕ್ರಶ್, ಪ್ರೀತಿ ಹೀಗೆ ಅನೇಕ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಕುತೂಹಲವನ್ನು ತೋರಿಸುತ್ತಾರೆ. ಇದೀಗ ಡಿ ಬಾಸ್ ದರ್ಶನ್ ಅವರೊಂದಿಗೆ ಅನುಶ್ರೀ ಅವರು ನಡೆಸಿಕೊಡುವ ಸಂದರ್ಶನವನ್ನು ನೋಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅನುಶ್ರೀ ಅವರಿಗೆ ಈ ಬಗ್ಗೆ ಅನೇಕ ಮಂದಿ ಕಾಮೆಂಟ್ಸ್ ಗಳ ಮೂಲಕ, ಮೆಸೇಜ್ ಮಾಡುವುದರ ಮೂಲಕ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ.

ಸ್ಥಳೀಯ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನುಶ್ರೀಯವರು ತಮ್ಮಲ್ಲಿದ್ದ ಪ್ರತಿಭೆ ಹಾಗೂ ತಮ್ಮ ಪ್ರಯತ್ನದಿಂದಾಗಿ ಇಂದು ಕನ್ನಡದ ಟಾಪ್ ವನ್ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ವಿಷಯಗಳನ್ನು ಸಂಗ್ರಹಿಸುವುದು ಹಾಗೂ ಸಂಗ್ರಹಿಸಿದ ವಿಷಯಗಳನ್ನು ವಿವರಿಸುವುದು ಎರಡರಲ್ಲೂ ಇವರು ಜಾಣರು. ಅನುಶ್ರೀ ಅವರು ನಡೆಸಿಕೊಡುವ ನಿರೂಪಣೆಯಲ್ಲಿ ಅಥವಾ ಸಂದರ್ಶನದಲ್ಲಿ ಹಾಸ್ಯ ಚಟಾಕಿಗಳು ಅಡಗಿರುತ್ತವೆ. ಅನುಶ್ರೀ ಅವರು ತಾವು ಈವರೆಗೂ ಡಿ ಬಾಸ್ ದರ್ಶನ್ ಅವರನ್ನು ಸಂದರ್ಶನ ಮಾಡಿಲ್ಲ ಏಕೆ ಎಂಬುದಕ್ಕೆ ಉತ್ತರವನ್ನು ನೀಡಿದ್ದಾರೆ.

ಅನುಶ್ರೀ ಅವರು ಈ ರೀತಿಯಾಗಿ ಹೇಳಿದ್ದಾರೆ; ” ನಾನು ಲೈವ್ ಅಲ್ಲಿ ಬಂದಿರುವುದರಿಂದ ಈ ಮಾತನ್ನು ನಿಮಗೆ ಹೇಳಲೇಬೇಕು.. ಪ್ರತಿಯೊಬ್ಬರು ನನಗೆ ದರ್ಶನ್ ಸರ್ ಇಂಟರ್ವ್ಯೂ ಮಾಡಿ ಅಂದ್ಬಿಟ್ಟು ಮೆಸೇಜ್ ಮಾಡ್ತೀದೀರಾ… ಒಂದು ವಿಷಯ ಏನಪ್ಪಾ ಎಂದರೆ ದರ್ಶನ್ ಸರ್ ಅವರ ಇಂಟರ್ವ್ಯೂ ಮಾಡಬಾರದು ಎನ್ನುವುದಾಗಲಿ ಅಥವಾ ಮಾಡಕ್ಕಾಗಲ್ಲ ಎನ್ನುವುದಾಗಲಿ, ಅಷ್ಟೊಂದು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ… ಎಲ್ಲರ ಹಾಗೆ ನಾನುನೂ ತುಂಬಾ ಕಾಯ್ತಾ ಇದೀನಿ..

ಯಾವಾಗ ದರ್ಶನ್ ಸರ್ ನನ್ನ ಚಾನೆಲ್ ಗೆ ಬರ್ತಾರೆ? ನಾನು ಯಾವಾಗ ಅವರ ಇಂಟರ್ವ್ಯೂ ಮಾಡ್ತೀನಿ? ಅಂತಾ..ಈ ವರೆಗೆ ಅವಕಾಶ ಸಿಕ್ಕಿಲ್ಲ ಆದರೆ ಪ್ರಯತ್ನಗಳು ನಡೀತಾನೇ ಇವೆ… ಖಂಡಿತವಾಗಿಯೂ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ನನಗೆ ಆ ಅವಕಾಶ ಸಿಗುತ್ತೆ.. ನಾನು ದರ್ಶನ್ ಸರ್ ಇಂಟರ್ವ್ಯೂ ಮಾಡಬೇಕು.. ಯಶ್ ಸರ್, ಮುರಳಿ ಸರ್, ಧ್ರುವ ಸರ್, ಗಣೇಶ್ ಸರ್ ಹೀಗೆ ಇನ್ನು ಅನೇಕರ ಇಂಟರ್ವ್ಯೂ ಮಾಡಬೇಕು…” ಎಂದು ಅನುಶ್ರೀ ಅವರು ಹೇಳಿದ್ದಾರೆ.

Entertainment Tags:Anchor ansuhree, Darshan

Post navigation

Previous Post: ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.
Next Post: 21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore