Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವೈರಲ್ ಆಯ್ತು ಕಳೆದ ವರ್ಷ ಇದೇ ದಿನ ದೀಪಾವಳಿ ಹಬ್ಬದಂದು ಅಪ್ಪು ಕೊನೆಯದಾಗಿ ಹೇಳಿದ ಮಾತು. ಈ ವಿಡಿಯೋ ನೋಡಿ.

Posted on October 25, 2022 By Kannada Trend News No Comments on ವೈರಲ್ ಆಯ್ತು ಕಳೆದ ವರ್ಷ ಇದೇ ದಿನ ದೀಪಾವಳಿ ಹಬ್ಬದಂದು ಅಪ್ಪು ಕೊನೆಯದಾಗಿ ಹೇಳಿದ ಮಾತು. ಈ ವಿಡಿಯೋ ನೋಡಿ.

ಪುನೀತ್ ರಾಜಕುಮಾರ್ ದೊಡ್ಮನೆಯ ಕುಡಿಯಾಗಿ ಹುಟ್ಟಿ ಇಂದು ಇಡೀ ರಾಜ್ಯದ ಜನರಿಂದ ಮನೆಮಗನೆಂದು ಕರೆಸಿಕೊಂಡಿರುವ ಕನ್ನಡಿಗರ ಕಣ್ಮಣಿ. ಈ ಯುವರತ್ನನಿಗೆ ಕನ್ನಡಿಗರು ಅರಸು ಪಟ್ಟ ಕೊಟ್ಟಾಗಿದೆ, ಯುದ್ಧವೇ ಮಾಡದೆ ರಾಜ್ಯವನ್ನು ಗೆದ್ದ ರಾಜಕುಮಾರ ಎಂದು ಈ ಭಾಗ್ಯವಂತನನ್ನು ಎಲ್ಲರೂ ಹೊಗಳುತ್ತಿದ್ದಾರೆ. ಬೆಲೆ ಕಟ್ಟಲಾಗದ ಈ ಬೆಟ್ಟದ ಹೂವನ್ನು ನೆನೆದು ಪ್ರತಿದಿನವೂ ಕೂಡ ಕನ್ನಡಿಗರು ಭಾವುಕರಾಗುತ್ತಿದ್ದಾರೆ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ವೀರ ಕನ್ನಡಿಗ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಪೃಥ್ವಿ ತೂಕದ ಗುಣ ಆಕಾಶದ ಎತ್ತರಕ್ಕೆ ವಿಶಾಲ ಹೃದಯ ಹೊಂದಿದ್ದ ಅಪುವಿನ ಸ್ನೇಹ ಮೈತ್ರಿಯನ್ನು ಕನ್ನಡ ಚಿತ್ರರಂಗ ಮಾತವಲ್ಲದೇ ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ಬಯಸುತಿದ್ದರು. ಬಹುಶಃ ಅಪ್ಪು ಕೇವಲ ಒಬ್ಬ ನಟನಾಗಿ ಉಳಿದಿದ್ದರೆ ಅವರ ಹೆಸರು ಇಷ್ಟು ರಾರಾಜಿಸುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅಪ್ಪು ನಿಜ ವ್ಯಕ್ತಿತ್ವದಿಂದ ಇಂದು ಅವರು ಅಭಿಮಾನಿಗಳ ದೈವವಾಗಿದ್ದಾರೆ. ಕರ್ನಾಟಕದ ಎಷ್ಟೋ ರೈತರ ಪಾಲಿಗೆ ಉಚಿತವಾಗಿ ನಂದಿನ ಹಾಲಿಗೆ ಪ್ರಚಾರ ನೀಡುವ ಮೂಲಕ ಮತ್ತು ಮೈಸೂರಿನಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಆಶ್ರಯಕ್ಕಾಗಿ ಕಟ್ಟಿರುವ ಶಕ್ತಿ ಧಾಮದ ನೆರವಿಗೆ ನಿಂತಿರುವ ಸಲುವಾಗಿ ಸಾಕಷ್ಟು ಅನಾಥಾಶ್ರಮಗಳು ವೃದ್ಧಾಶ್ರಮಗಳು ಗೋಶಾಲೆಗಳನ್ನು ನಡೆಸುತ್ತಿರುವ ಸಲುವಾಗಿ, ಸಹಾಯ ಅರಸಿ ಬಂದವರಿಗೆ ಎಂದು ಕೂಡ ಬರಿ ಕೈಯಲ್ಲಿ ಕಳುಹಿಸಿದ ಸಲುವಾಗಿ ಇಂದು ಅಪ್ಪು ಎನ್ನುವ ಚೇತನ ದೇವರಾಗಿದ್ದಾರೆ.

ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ ಮನುಷ್ಯ ಆಗಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆದರ್ಶವಾಗಿ ಜೀವನ ಎಂದರೆ ಏನು ಹೇಗೆ ಬದುಕಬೇಕು ಎನ್ನುವುದನ್ನು ಅಪ್ಪು ಕಲಿಸಿ ಹೋಗಿದ್ದಾರೆ. ಇಂದು ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ವರ್ಷವಾಗುತ್ತಿದೆ ಅಪ್ಪು ಇಲ್ಲದೆ ಇದು ಎರಡನೇ ದೀಪಾವಳಿ ಆದರೆ ಯಾರ ಮನೆಯಲ್ಲಿ ಕೂಡ ಆ ಸಂಭ್ರಮವಿಲ್ಲ. ಅಪ್ಪು ಅವರು ಈ ಬಾರಿ ದೀಪಾವಳಿ ಹಬ್ಬಕ್ಕಾಗಿ ಶುಭ ಕೋರಿದ್ದಾರೆ ಈ ವಿಷಯ ಎಲ್ಲರಿಗೂ ಆಶ್ಚರ್ಯ ಮೂಡಿಸಬಹುದು ಆದರೆ ಈ ಹಿಂದೆ ಅಪ್ಪು ಅವರು ಎರಡು ವರ್ಷಗಳ ಹಿಂದಿನ ದೀಪಾವಳಿಗಾಗಿ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಶುಭಾಶಯ ತಿಳಿಸಿದ ವಿಡಿಯೋ ಬಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಆ ವಿಡಿಯೋವನ್ನು ಶಿವರಾಜ್ ಕುಮಾರ್ ಫ್ಯಾನ್ಸ್ ಕ್ಲಬ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

View this post on Instagram

A post shared by Dr.Shivarajakumar Updates (@dr_shivarajkumar_updates)

ಈ ವಿಡಿಯೋದಲ್ಲಿ ಅಪ್ಪು ಅವರು ಕನ್ನಡ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಎನ್ನುವ ಹಾಡಿನ ಮೂಲಕ ಕೋರಿದ್ದಾರೆ ಮತ್ತು ದೀಪಾವಳಿ ಹಬ್ಬ ಎಲ್ಲರಿಗೂ ಶಾಂತಿ ನೆಮ್ಮದಿ ಹಾಗೂ ಸಂತೋಷ ಆರೋಗ್ಯವನ್ನು ತರಲಿ ಎಂದಿದ್ದಾರೆ. ಜೊತೆಗೆ ಈ ವರ್ಷ ನಾವು ಪಠಾಕಿಗಳನ್ನು ಉರಿಸುವ ಮೂಲಕ ದೀಪಾವಳಿ ಆಚರಿಸುವುದು ಬೇಡ ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಉರಿಸುವ ಮೂಲಕ ದೀಪಾವಳಿ ಹಬ್ಬವನ್ನು ಮಾಡೋಣ ಎಂದಿದ್ದಾರೆ.

ಪ್ರಕೃತಿಯ ಬಗ್ಗೆ ಕಾಳಜಿ ಇರಲಿ ಹಾಗೂ ನಿಮ್ಮ ಅಕ್ಕಪಕ್ಕದ ಮನೆಗಳಲ್ಲಿ ಯಾರು ಕಷ್ಟದಲ್ಲಿ ಇದ್ದಾರೋ ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಮೂಲಕ ಕೂಡ ತಮಗೆ ಸಿಕ್ಕ ಚಿಕ್ಕ ಅವಕಾಶದಲ್ಲೂ ಸಮಾಜಕ್ಕಾಗಿ ಅವರ ಸಹೃದಯ ಹೇಗೆ ಮಿಡಿಯುತಿತ್ತು ಎಂದು ಮತ್ತೊಮ್ಮೆ ಅರಿವಾಗುತ್ತದೆ. ವಿಡಿಯೋ ನೋಡಿದರೆ ಅದು ಮುಗಿಯುತ್ತಿದ್ದಂತೆ ಪ್ರತಿಯೊಬ್ಬರ ಕಣ್ಣಾಲಿ ಕೂಡ ತೇವ ಆಗುವುದು ಸುಳ್ಳಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Entertainment Tags:Appu, Deepavali, Puneeth Raj Kumar
WhatsApp Group Join Now
Telegram Group Join Now

Post navigation

Previous Post: ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.
Next Post: ಯಾವ್ದೇ ಕಾರಣಕ್ಕೂ ಶಮಿಕಾನನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಖಡಕ್ಕಾಗಿ ಹೇಳಿದ ನಿಖಿಲ್ ಕುಮಾರಸ್ವಾಮಿ ಇದಕ್ಕೆ ರಾಧಿಕಾ ಕೊಟ್ಟು ತಿರುಗೇಟು ಏನೂ ಗೊತ್ತ.? ನಿಜಕ್ಕೂ ಆಶ್ಚರ್ಯ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore