Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

Posted on January 6, 2023 By Kannada Trend News No Comments on ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

 

ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿದ್ದ ಜ್ಯೋತಿಷಿ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಬಿಗ್ ಬಾಸ್ ಆರ್ಯವರ್ಧನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹೆಚ್ಚು ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುರೂಜಿ, ಟಾಸ್ಕ್ ಗಳಲ್ಲೂ ಅಷ್ಟೇ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಲು ಪ್ರಯತ್ನ ಪಡುತ್ತಿದ್ದರು. ಮನರಂಜನ ವಿಷಯದಲ್ಲಿ ಮೇಲುಗೈ ಆಗಿದ್ದ ಅವರು ಬಿಗ್ ಬಾಸ್ ಗೆಲ್ಲದೆ ಹೋದದ್ದಕ್ಕಾಗಿ ಬಹಳ ಬೇಸರ ಪಟ್ಟು ಕೊಂಡಿದ್ದಾರೆ.

ಇದರ ಜೊತೆಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಬಗ್ಗೆಯೂ ಕೂಡ ವಿವರವಾಗಿ ಸುದ್ದಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಹಲವು ಚಾನೆಲ್ಗಳಿಗೆ ಸಂದರ್ಶನ ಕೊಡುತ್ತಿರುವ ಇವರು ಸುದ್ದಿಮನೆ youtube ಚಾನೆಲ್ ಅವರ ಜೊತೆ ಕೂಡ ಮಾತನಾಡಿ ಕಷ್ಟ ಸುಖ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಹೋದ ಎರಡನೇ ವಾರಕ್ಕೆ ನಾನು ಮಧ್ಯರಾತ್ರಿ ಮನೆಯಿಂದ ಆಚೆ ಹೋಗುತ್ತೇನೆ ಎನ್ನುವುದರ ಸುಳಿವು ಸಿಕ್ಕಿತ್ತು. ನಾನು ಹಳೆಯ ಬಿಗ್ ಬಾಸ್ ಯಾವ ಶೋ ಅನ್ನೂ ಕೂಡ ನೋಡಿಲ್ಲ, ಕೆಲವು ಬೈಟ್ ಗಳನ್ನು ಮಾತ್ರ ನೋಡಿದ್ದೆ. ಬಿಗ್ ಬಾಸ್ ಮನೆ ಅಲ್ಲಿ ನಾನು ಕೆಲವೇ ಮಂದಿ ನೋಡಿ ಈಗ ಆಚೆ ಬಂದ ಮೇಲೆ ಇಡೀ ಪ್ರಪಂಚವನ್ನು ನೋಡುವುದಕ್ಕೆ ಕಷ್ಟವಾಗುತ್ತಿದೆ. ಅಲ್ಲದೆ ನನಗೆ ಒಂದು ರೀತಿಯ ಭಯ ಕೂಡ ಕಾಡುತ್ತಿದೆ, ನಾನು ಬದುಕುತ್ತೇನಾ ಇಲ್ಲವಾ ಎನ್ನುವ ಅನುಮಾನ ಕೂಡ ಶುರು ಆಗಿದೆ.

ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನಾನು ತುಂಬಾ ಧೈರ್ಯವಾಗಿ ಇದ್ದೆ ಆದರೆ ಬಿಗ್ ಬಾಸ್ ಮನೆಯಿಂದ ಬಂದಮೇಲೆ ಯಾವುದೋ ಗುಂಗು ನನ್ನನ್ನು ಕಾಡುತ್ತಿದೆ. ಸದ್ಯಕ್ಕೆ ನಾನು ಇನ್ನು ಮೂರರಿಂದ ಆರು ತಿಂಗಳವರೆಗೆ ನನ್ನ ಆಫೀಸ್ ಕೂಡ ಓಪನ್ ಮಾಡುವ ಯೋಚನೆಯಲ್ಲಿ ಇಲ್ಲ. ನನಗೆ ಆಫೀಸ್ ರೆಂಟ್ ಕೂಡ ಕಟ್ಟಲು ಕಷ್ಟ ಆಗುತ್ತಿದೆ ನಾನು ಓಡಾಡುತ್ತಿರುವ ಕಾರಿನ ಲೋನ್ ಕೂಡ ನಾನು ಕಟ್ಟಿಲ್ಲ. ನನ್ನ ಹೆಂಡತಿಗೆ ಆಟೋಗೆ ಬೆಳಗ್ಗೆ ದುಡ್ಡು ಕೊಡಲು ಹಿಂದೆ ಮುಂದೆ ನೋಡುವಂತಾಗಿದೆ.

ಈಗ ನನ್ನ ಅಕೌಂಟ್ ಅಲ್ಲಿ ಕೇವಲ ಹತ್ತು ಸಾವಿರ ರೂಗಳು ಮಾತ್ರ ಇದೆ. ಇದನ್ನು ಕೂಡ ನಾನು ಬೇರೆಯವರಿಂದ ಕಾಡಿ ಬೇಡಿ ಹಾಕಿಸಿಕೊಂಡಿರುವುದು ಎಂದೆಲ್ಲ ಹೇಳಿಕೊಂಡಿದ್ದಾರೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾನು ಎಲ್ಲಾ ವಿಷಯದಲ್ಲೂ ಮುಂದೆ ಇದ್ದೆ ಪ್ರತಿ ಬಾರಿ ಅಡುಗೆ ಮನೆ ವಿಚಾರಕ್ಕೆ ಜಗಳ ನಡೆಯುತಿತ್ತು. ಆದರೆ ಈ ಬಾರಿ ನನ್ನಿಂದ ಅದು ತಪ್ಪಿದೆ. ಆಹಾರ ಸಾಮಾಗ್ರಿಗಳಲ್ಲಿ ಲೆಕ್ಕಾಚಾರ ತಪ್ಪಿಸಿಕೊಂಡು ಕೆಲವರು ಕೆಲ ದಿನ ಮಲಗಿದ್ದಾರೆ.

ಆದರೆ ನಾನು ಇರುವುದರಲ್ಲೇ ಯಾವ ಫೈವ್ ಸ್ಟಾರ್ ಹೋಟೆಲ್ಗಿಂತ ಕಡಿಮೆ ಇಲ್ಲದ ರೀತಿ ಅಡುಗೆ ಮಾಡಿ ಬಡಿಸಿದ್ದೇನೆ ಆ ತಾಯಿ ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ಏನು ಇಲ್ಲದಿದ್ದರೂ ಅಡಿಕೆ ಬಹಳ ರುಚಿಯಾಗಿ ಇರುತ್ತಿತ್ತು. ಈಗ ಹೊರ ಬಂದ ಮೇಲೆ ನನಗೆ ಏನು ಕೊಟ್ಟರು ಇಷ್ಟ ಆಗುತ್ತಿಲ್ಲ ಬಿಗ್ ಬಾಸ್ ಮನೆಗೆ ತುಂಬಾ ಚೆನ್ನಾಗಿ ಅಡ್ಜಸ್ಟ್ ಆಗಿ ಹೋಗಿದ್ದೆ ಈಗ ಹೊರ ಬಂದು ಬದುಕು ಸಾಗಿಸುವುದೇ ಕಷ್ಟ ಆಗಿದೆ. ಜ್ಯೋತಿಷ್ಯದ ಮೇಲೆ ನಂಬಿಕೆ ಇದೆ, ಕ್ಲೈಂಟ್ಸ್ ಈಗಲೂ ಕೂಡ ನನ್ನ ಕೈ ಹಿಡಿಯುತ್ತಾರೆ ಎನ್ನುವ ಭರವಸೆ ಇದೆ ಆದರೆ ಕೂಡ ವಿಚಿತ್ರವಾದ ಭಯ ನನ್ನನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Entertainment Tags:Arya Vardhan Guruji, Big Boss Season 9
WhatsApp Group Join Now
Telegram Group Join Now

Post navigation

Previous Post: ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ
Next Post: ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore