Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.

Posted on December 29, 2022 By Kannada Trend News No Comments on ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.

ಬಿಗ್ ಬಾಸ್ ಮನೆಯಿಂದ ಹೊರಬಂದ ಆರ್ಯವರ್ಧನ್ ಕಿಚ್ಚನ ಕುರಿತು ಹೇಳಿದ ಮಾತು ವೈರಲ್

ನಾನು ಎಂದರೆ ನಂಬರ್ ಎಂದರೆ ನಾನು ಎಂದು ಹೇಳುವ ನಂಬರ್ ಗುರೂಜಿ ಎಂದೇ ಖ್ಯಾತ ಆಗಿರುವ ಆರ್ಯ ವರ್ಧನ್(Aryavardhan Guruji) ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್. ಹಲವಾರು ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಇವರು ಬಿಗ್ ಬಾಸ್ ಗೆ ಹೋದ ಬಳಿಕ ಬಿಗ್ ಬಾಸ್(Big boss season 9) ಆರ್ಯವರ್ಧನ್ ಎಂದೆ ಫೇಮಸ್ ಆಗಿದ್ದಾರೆ. ಈ ಬಾರಿ 9ನೇ ಸೀಸನ್ ಗು ಮುನ್ನ ಓ.ಟಿ.ಟಿ ಸೀಸನ್ ಅಲ್ಲಿ ಮನೆ ಒಳಗೆ ಹೋಗಿ ಕಡೆಯ ನಾಲ್ಕು ಜನರಲ್ಲಿ ಒಬ್ಬರಾಗಿ ಗೆದ್ದು ಅಧಿಕೃತ 9ನೇ ಆವೃತ್ತಿಯ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಸೇರಿದ್ದರು. ಒಟಿಟಿ ದಿನಗಳಿಂದಲೂ ಸಹ ಆರ್ಯವರ್ಧನ್ ಅವರು ಟಾಸ್ಕಳಲ್ಲಿ ಸಾಧ್ಯವಾದಷ್ಟು ಪಾಲ್ಗೊಳ್ಳುತ್ತಿದ್ದಾರೆ.

ಅದರಲ್ಲೂ ಅಡುಗೆ ಮನೆಯ ಮಹಾರಾಜರ ಆಗಿಬಿಟ್ಟದ್ದಾರೆ ಎನ್ನಬಹುದು. ಇಡೀ ಮನೆಗೆ ಇರುವಷ್ಟು ದಿನ ಹೊಟ್ಟೆ ತುಂಬಾ ಊಟ ರುಚಿ ರುಚಿಯಾಗಿ ಮಾಡಿ ಬಡಿಸಿದ ಕ್ರೆಡಿಟ್ ಇವರಿಗೆ ಸಲ್ಲಬೇಕು. ಅಡುಗೆ ಮನೆ ಇತರ ಚಟುವಟಿಕೆಗಳ ಜೊತೆಗೆ ಅವರು ಎಂಟರ್ಟೈನ್ ವಿಷಯದಲ್ಲಿ ಕೂಡ ಎತ್ತಿದ ಕೈ ವಾರಂತ್ಯದಲ್ಲಿ ಕಿಚ್ಚನ ಪಂಚಾಯಿತಿ ಕಟ್ಟೆಯಲ್ಲಿ ಸಪ್ಪೆ ಮೊರೆ ಹಾಕಿ ಮುಗ್ದನಂತೆ ಕುಳಿತುಕೊಳ್ಳುತ್ತಿದ್ದ ಇವರು ಇನ್ನುಳಿದ ವಾರದ ಐದು ದಿನಗಳಲ್ಲಿ ಮನೆ ತುಂಬಾ ಬಹಳ ಸೌಂಡ್ ಮಾಡುತ್ತಿದ್ದರು. ಅತಿಯಾಗಿ ಯಾರೊಂದಿಗೂ ಜಗಳಕ್ಕೆ ಹೋಗದೇ ಹೋದರು ಸಹ ಆಗಾಗ ಅವರ ವಿಷಯ ಬಂದಾಗ ಬಹಳ ಜೋರಾಗಿ ಜಗಳ ಆಡುತ್ತಿದ್ದರು.

ಆದಷ್ಟು ಬಿಟ್ಟು ಮನೆಯವರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಇವರೇ ಮೊದಲಿಗರು ಇವರು ಆಡುವ ಮಾತುಗಳು ಕೊಡುವ ಕಂಟೆಂಟ್ ಗಳು ಹಾಗೂ ಪಂಚಿಂಗ್ ಡೈಲಾಗ್ ಗಳು ಬಿಗ್ ಬಾಸ್ ಮನೆ ತುಂಬಾ ಬಹಳ ಫೇಮಸ್ ಆಗಿವೆ. ಅಲ್ಲಿರುವ ಕಂಟೆಸ್ಟೆಂಟ್ಗಳಲ್ಲಿ ಬಹುತೇಕ ಎಲ್ಲರೂ ಇವರನ್ನು ಮಗುವಿನಂತ ಮನಸಿನವರು ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಇನ್ನೇನು ಫಿನಾಲೆಗೆ ಕ್ಷಣಗಣನೆ ಆಗುವ ಸಂದರ್ಭದಲ್ಲಿ ಔಟ್ ಆಗಿ ಮನೆಯಿಂದ ಹೊರ ಬಿದ್ದಿರುವ ಆರ್ಯವರ್ಧನ್ ಅವರು ನ್ಯೂಸ್ ಚಾನೆಲ್ ಒಂದಕ್ಕೆ ಸಂದರ್ಶನಕ್ಕೆ ಸಿಲುಕಿದ್ದು ಇಷ್ಟು ದಿನದ ಬಿಗ್ ಬಾಸ್ ಕಾರ್ಯಕ್ರಮ ಅಲ್ಲಿದ್ದ ಕಂಟೆಸ್ಟ್ ಗಳು ಜೊತೆಗೆ ಕಿಚ್ಚ ಸುದೀಪ್ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆ ಒಳಗೆ ಹೋಗುವ ಮುನ್ನವೆ ನನಗೆ ಲೆಕ್ಕಚಾರ ತಿಳಿದಿತ್ತು, ಕಳೆದ ಸೀಸನ್ ಗಳಲ್ಲಿ ನಾನು ಹೇಳಿದವರೆ ವಿನ್ ಆಗಿದ್ದಾರೆ ಈ ಬಗ್ಗೆ ನಾನು ಚಾನಲ್ ಜೊತೆ ಕೂಡ ಹಲವು ಬಾರಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಔಟ್ ಆಗುತ್ತೇನೆ ಎಂದು ನನಗೂ ಗೊತ್ತಿತ್ತು, ಈ ಬಾರಿ ಸೀಸನ್ 9 ಕ್ಕೆ ನಾಲ್ಕನೇ ಅವನಾಗಿ ಎಂಟ್ರಿ ಕೊಟ್ಟಿದ್ದೆ ತಪ್ಪಾಯ್ತು ಎಂದಿದ್ದಾರೆ. ಸುದೀಪ್ ಅವರ ಬಗ್ಗೆಯೂ ಕೂಡ ಮಾತನಾಡಿ ಈ ಒಂಬತ್ತನೇ ಸೀಸನ್ ಅವರಿಗೆ ಆಗಿ ಬರುವುದಿಲ್ಲ.

ಯಾಕೆಂದರೆ ಅವರು ಎರಡರ ಕಾಂಬಿನೇಷನ್ ಅವರು ಎರಡು ಮತ್ತು ಒಂಬತ್ತು ಆಗುವುದಿಲ್ಲ ಹಾಗೂ ಎರಡು ನಾಲ್ಕು ಇವೆರಡಕ್ಕೂ ಆಗುವುದಿಲ್ಲ ಎಂದು ಹೇಳುತ್ತಾ ಮಾತಿನ ಬರದಲ್ಲಿ ಕಿಚ್ಚ ಸುದೀಪ್(Kiccha Sudeep) ಅವರ ಜಾತಕ ನನ್ನ ಕೈಲಿ ಇದೆ ಕರ್ನಾಟಕದಲ್ಲಿ ನನ್ನ ಹತ್ತಿರ ಮಾತ್ರ ಅವರ ಹುಟ್ಟಿದ ಸಮಯದ ಸಮೇತವಾಗಿ ಜಾತಕ ಇರುವುದು ಎಂದು ನುಡಿಯುತ್ತಿದ್ದಾರೆ. ವಿಷಯದ ಕುರಿತು ಇನ್ನು ಮುಂದುವರೆದು ಸುದೀಪ್ ಅವರ ಬಗ್ಗೆ ಮತ್ತು ನಂಬರ್ ಗಳ ಬಗ್ಗೆ ಏನೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Entertainment Tags:Arya Vardhan Guruji, Big Boss Season 9, Kiccha sudeep
WhatsApp Group Join Now
Telegram Group Join Now

Post navigation

Previous Post: ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
Next Post: ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore