Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕುಡಿದ ಮತ್ತಲ್ಲಿ, ಪೋಲಿಸ್ ಗೆ ಅವಾಜ್ ಹಾಕಿ ನಡು ರಸ್ತೆಯಲ್ಲೆ ರಂಪಾಟ ಮಾಡಿದ ನಟಿ ಆಶಿಕಾ‌ ರಂಗನಾಥ್ ವೈರಲ್ ವಿಡಿಯೋ.

Posted on November 18, 2022November 18, 2022 By Kannada Trend News No Comments on ಕುಡಿದ ಮತ್ತಲ್ಲಿ, ಪೋಲಿಸ್ ಗೆ ಅವಾಜ್ ಹಾಕಿ ನಡು ರಸ್ತೆಯಲ್ಲೆ ರಂಪಾಟ ಮಾಡಿದ ನಟಿ ಆಶಿಕಾ‌ ರಂಗನಾಥ್ ವೈರಲ್ ವಿಡಿಯೋ.

 

ಕನ್ನಡದ ನಟ ಹಾಗೂ ನಟಿಮಣಿಯರು ಹೇಗೆ ತಮ್ಮ ಸಿನಿಮಾಗಳ ಮೂಲಕ ದೇಶದಾದ್ಯಂತ ಹೆಸರು ಮಾಡುತ್ತಿದ್ದಾರೋ ಅದೇ ರೀತಿ ವಿವಾದಗಳಿಂದ ಕೂಡ ಗಳಿಸಿಕೊಂಡಿದ್ದ ಹೆಸರಿನ ಮೇಲೆ ಕಪ್ಪು ಚುಕ್ಕೆ ಬರೆಸಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹಗಳನ್ನು ಬೀದಿಗೆ ತಂದು ಆದಿ ಬೀದಿ ರಾಂಪಾಟ ಮಾಡಿಕೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದು.

ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಮೀಡಿಯಾ ಮುಂದೆ ಬರುವ ಹಾಗೆ ಮಾಡಿಕೊಳ್ಳುವುದು, ನಿರ್ದೇಶಕರೊಂದಿಗೆ ಜಗಳ, ಸಹ ಕಲಾವಿದರಾಗಳ ಜೊತೆಗೆ ಮನಸ್ತಾಪ, ನಿರ್ಮಾಪಕರಿಗೆ ಕೊಡುತ್ತಿರುವ ಕಾಟಗಳು ಹೀಗೆ ಹೆಸರು ಬಂದ ಬಳಿಕ ಅದನ್ನು ಉಳಿಸಿಕೊಂಡು ಹೋಗುವ ಬದಲು ಮಿತಿಮೀರಿದ ದುರ್ವರ್ತನೆಯಿಂದ ಗಳಿಸಿದ ಖ್ಯಾತಿಯನ್ನು ಮಣ್ಣು ಪಾಲು ಮಾಡಿಕೊಳ್ಳುತ್ತಿದ್ದಾರೆ.

ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕನ್ನಡದ ಸಿನಿಮಾಗಳ ಖ್ಯಾತಿ ಹೆಚ್ಚುತ್ತಿದ್ದರೆ ಈ ರೀತಿ ಗಲಾಟೆಗಳ ವಿಷಯದಿಂದ ಚಂದನವನದ ಹೆಸರು ಹಾಳಾಗುತ್ತಿರುವುದು ಬೇಸರ ಪಡುವ ರೀತಿ ಆಗಿದೆ. ಸ್ಟಾರ್ ನಟರುಗಳು ಕೂಡ ಈ ವಿವಾದ ಆಗುವ ಸಾಲಿನಲ್ಲಿ ಸೇರಿದ್ದಾರೆ. ದರ್ಶನ್ ಅಂತಹ ದೊಡ್ಡ ಕಲಾವಿದರು ಕೂಡ ಹೆಂಡತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮತ್ತು ರೆಸ್ಟೋರೆಂಟ್ ಅಲ್ಲಿ ಕೆಲಸಗಾರರಿಗೆ ಹೊಡೆದು ಗಲಾಟೆ ಮಾಡಿಕೊಂಡು ಕುಡಿದ ಮತ್ತಿನಲ್ಲಿ ಅವಾಂತರ ಮಾಡಿಕೊಂಡರು ಎಂದು ಸುದ್ದಿ ಆಗುವಂತೆ ಮಾಡಿಕೊಂಡಿದ್ದಾರ.

ಒರಟ ಸಿನಿಮಾ ಖ್ಯಾತಿಯ ಪ್ರಶಾಂತ್ ಅವರು ಕೂಡ ಈ ಹಿಂದೆ ಕೌಟುಂಬಿಕ ಕಲಹದ ವಿಚಾರದಲ್ಲಿ ಸುದ್ದಿಯಾಗಿದ್ದರು. ನಟ ದುನಿಯಾ ವಿಜಯ್ ಅವರ ಸಂಸಾರದ ಕಥೆಯಂತೂ ಕನ್ನಡದ ಜನತೆಗೆ ಮೀಡಿಯಾದಲ್ಲಿ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ರಾಂಬೊ ಸಿನಿಮಾ ಕಥೆಯ ನಾಯಕಿ ಮಾಧುರಿ ಅವರು ಸಹ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗಿ ಗಲಾಟೆ ಮಾಡಿದ್ದರು.

ಈ ಸಾಲು ಇಷ್ಟಕ್ಕೆ ನಿಲ್ಲುವುದಿಲ್ಲ. ಹೀಗೆ ಪಾರ್ಟಿಗಳಲ್ಲಿ ಕುಡಿದ ಮತ್ತಿನಲ್ಲಿ ಮಾಡಿಕೊಳ್ಳುವ ಅವಾಂತರಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಹಾಕಿ ಎಷ್ಟೋ ನಟ ನಟಿಯರು ತಲೆತಗ್ಗಿಸುವಂತೆ ಆಗಿದೆ. ಇನ್ನು ಕೆಲವರು ಕಲಾವಿದರು ಎನ್ನುವ ಗರ್ವದಿಂದ ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾನ್ಸೆನ್ಸ್ ಕ್ರಿಯೇಟ್ ಮಾಡುವವರು ಇದ್ದಾರೆ. ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ಹಾಗೂ ಗಟ್ಟಿಮೇಳ ಧಾರಾವಾಹಿ ಇತರ ಕಲಾವಿದರಲ್ಲ ಸೇರಿ ಕೆಂಗೇರಿಯ ಹೋಟೆಲ್ ಒಂದರಲ್ಲಿ ಗಲಾಟೆ ಮಾಡಿ ಬಂದಿದ್ದರು.

ನಂತರ ವಿವರಣೆ ಕೊಟ್ಟರು ಸಹ ಅವರು ಮಾಡಿದ ಗಲಾಟೆ ಮುಚ್ಚಿ ಹೋಗುವುದಿಲ್ಲ. ಇದೇ ಮೊದಲಲ್ಲ ರಕ್ಷ್ ಅವರು ಈ ಹಿಂದೆ ಪುಟ್ಟಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಮಯದಲ್ಲೂ ಕುಡಿದು ಕಾರು ಚಲಾವಣೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಂತರ ಪೊಲೀಸ್ ಕಸ್ಟಡಿಕೆ ಒಳಗಾಗಿದ್ದರು. ನಂತರ ಧಾರಾವಾಹಿ ನಿರ್ದೇಶಕರೇ ಬಿಡಿಸಿಕೊಂಡು ಬಂದಿದ್ದ ಸುದ್ದಿಯು ಕೂಡ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.

ಈಗ ಮತ್ತೊಬ್ಬ ಕನ್ನಡದ ಫೇಮಸ್ ನಟಿ ಕೂಡ ಹೀಗೆ ಗಲಾಟೆ ಮಾಡಿದ್ದಾರೆ. ಅವರು ಬೇರಾರು ಅಲ್ಲ ಚುಟು ಚುಟು ಹಾಡು ಖ್ಯಾತಿಯ ಆಶಿಕಾ ರಂಗನಾಥ್ ಅವರು. ಆಶಿಕಾ ಈಗ ಕನ್ನಡದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಕುಡಿದು ಎಲ್ಲರಿಗೂ ಬೈಯುತ್ತಾ ಕೆಟ್ಟದಾಗಿ ಸನ್ನೆ ಮಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಕ್ಷಣವೇ ಅನಿಸುತ್ತದೆ ಇದು ಸಿನಿಮಾ ಶೂಟಿಂಗ್ ಇರಬಹುದು ಎಂದು. ಹಲವರ ಊಹೆ ಪ್ರಕಾರ ಇದು ರೆಮೋ ಸಿನಿಮಾದ ಶೂಟಿಂಗ್ ಅಲ್ಲಿ ಸಿನಿಮಾದ ಕಥೆಯ ಸನ್ನಿವೇಷಕ್ಕಾಗಿ ಅಭಿನಯ ಮಾಡಿರುವ ವಿಡಿಯೋ ಆಗಿದೆ.

Entertainment Tags:Ashika ranganath
WhatsApp Group Join Now
Telegram Group Join Now

Post navigation

Previous Post: ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!
Next Post: Kiccha Sudeep: ಇಲ್ಲ ಅಂದಿದ್ರೆ ಇಂದು ಕನ್ನಡ ಚಿತ್ರರಂಗದಲ್ಲಿ ಈ ಸೆಲೆಬ್ರಿಟಿಗಳೇ ಇರುತ್ತಿರಲಿಲ್ಲ ಬದುಕು ಕಟ್ಟಿಕೊಟ್ಟ ಕಿಚ್ಚನ ಬಗ್ಗೆ ಈ ಸೆಲೆಬ್ರಿಟಿಗಳು ಹೇಳಿದ್ದೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore